AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays in April 2021: ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ಏಪ್ರಿಲ್​ನಲ್ಲಿ 9 ದಿನ ರಜಾ; ಯಾವ್ಯಾವಾಗ?.. ಪಟ್ಟಿ ಇಲ್ಲಿದೆ ನೋಡಿ

ಕರ್ನಾಟಕದಲ್ಲಿ ಇಂದೂ ಕೂಡ ಬ್ಯಾಂಕ್​ಗಳಿಗೆ ವಾರ್ಷಿಕ ವ್ಯವಹಾರ ಕ್ಲೋಸ್​ ದಿನದ ನಿಮಿತ್ತ ರಜಾ ಇತ್ತು. ಇನ್ನು ನಾಲ್ಕು ಭಾನುವಾರಗಳಿವೆ. ಉಳಿದಂತೆ ಯುಗಾದಿ ಹಬ್ಬ, ಅಂಬೇಡ್ಕರ್ ಜಯಂತಿ, ಮಹಾವೀರ್ ಜಯಂತಿಗಳ ನಿಮಿತ್ತ ರಜಾ ಇರಲಿದೆ.

Bank Holidays in April 2021: ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ಏಪ್ರಿಲ್​ನಲ್ಲಿ 9 ದಿನ ರಜಾ; ಯಾವ್ಯಾವಾಗ?.. ಪಟ್ಟಿ ಇಲ್ಲಿದೆ ನೋಡಿ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Apr 01, 2021 | 12:59 PM

Share

ವಿವಿಧ ಹಬ್ಬ-ಆಚರಣೆಗಳ ನಿಮಿತ್ತ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್​ಗಳಿಗೆ ಭರ್ಜರಿ ರಜಾದಿನಗಳಿವೆ. ಒಟ್ಟು 15ದಿನ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ ಈ ಹದಿನೈದೂ ದಿನಗಳು ದೇಶದ ಎಲ್ಲ ಭಾಗಗಳಲ್ಲೂ ಅನ್ವಯ ಆಗುವುದಿಲ್ಲ. ಇನ್ನು ಕರ್ನಾಟಕದಲ್ಲಿ ಏಪ್ರಿಲ್​ನಲ್ಲಿ ಒಟ್ಟು 9 ರಜಾದಿನಗಳಿವೆ. ಇಂದೂ ಕೂಡ ವಾರ್ಷಿಕ ವ್ಯವಹಾರ ಕ್ಲೋಸ್​ ದಿನದ ನಿಮಿತ್ತ ರಜಾ ಇತ್ತು. ಇನ್ನು ನಾಲ್ಕು ಭಾನುವಾರಗಳಿವೆ. ಉಳಿದಂತೆ ಯುಗಾದಿ ಹಬ್ಬ, ಅಂಬೇಡ್ಕರ್ ಜಯಂತಿ, ಮಹಾವೀರ್ ಜಯಂತಿಗಳ ನಿಮಿತ್ತ ರಜಾ ಇರಲಿದೆ. ಇಲ್ಲಿದೆ ನೋಡಿ, ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ಏಪ್ರಿಲ್​ನಲ್ಲಿ ಇರುವ ರಜಾದಿನಗಳ ಸಮಗ್ರ ವಿವರ..

  • ಏಪ್ರಿಲ್​ 2, ಶುಕ್ರವಾರ- ಗುಡ್​ ಫ್ರೈಡೇ: ಯೇಸುಕ್ರಿಸ್ತ ಶಿಲುಬೆಗೆ ಏರಿದ ದಿನದ ಸ್ಮರಣಾರ್ಥ ಈ ಹಬ್ಬವನ್ನು ಕ್ರಿಶ್ಚಿಯನ್ ಸಮುದಾಯದವರು ಆಚರಿಸುತ್ತಾರೆ. ಪ್ರತಿವರ್ಷವೂ ಗುಡ್​ ಫ್ರೈಡೇ ದಿನ ರಾಷ್ಟ್ರಾದ್ಯಂತ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ಕರ್ನಾಟಕದಲ್ಲೂ ಸಹ ನಾಳೆ (ಏಪ್ರಿಲ್​ 2) ಬ್ಯಾಂಕ್​ಗಳಿಗೆ ರಜಾ ಇರುತ್ತದೆ.
  • ಏಪ್ರಿಲ್​ 4, ಭಾನುವಾರ
  • ಏಪ್ರಿಲ್​ 10, ಎರಡನೇ ಶನಿವಾರದ ರಜಾ
  • ಏಪ್ರಿಲ್​ 11, ಭಾನುವಾರ
  • ಏಪ್ರಿಲ್ 13, ಮಂಗಳವಾರ-ಯುಗಾದಿ: ಏಪ್ರಿಲ್​ 13ರಂದು ಯುಗಾದಿ ನಿಮಿತ್ತ ರಾಜ್ಯದಲ್ಲಿ ಯಾವ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ಹಿಂದುಗಳ ಹೊಸವರ್ಷದ ಹಬ್ಬ ಇದಾಗಿದ್ದು, ಚೈತ್ರ ಮಾಸದ ಮೊದಲ ದಿನವಾಗಿದೆ. ಈ ಹಬ್ಬದಂದು ಜನರು ಬೇಗ ಎದ್ದು ಸ್ನಾನ ಮಾಡಿ ಪೂಜೆ ಮಾಡುತ್ತಾರೆ. ಮನೆಗೆಲ್ಲ ತೋರಣ ಕಟ್ಟಿ, ಹೊಸ ಬಟ್ಟೆ ತೊಟ್ಟು, ಸಿಹಿ ಹೋಳಿಗೆ ಮಾಡಿ ಹಬ್ಬದೂಟ ಮಾಡುತ್ತಾರೆ.
  • ಏಪ್ರಿಲ್ 14, ಬುಧವಾರ-ಅಂಬೇಡ್ಕರ್ ಜಯಂತಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್​ ಹುಟ್ಟಿದ ದಿನದ ನಿಮಿತ್ತ ರಾಷ್ಟ್ರಾದ್ಯಂತ ಬ್ಯಾಂಕ್​ಗಳಿಗೆ ರಜೆ ಇರುತ್ತದೆ. ಕರ್ನಾಟಕದಲ್ಲೂ ಸಹ ಎಲ್ಲ ಬ್ಯಾಂಕ್​ಗಳಿಗೂ ರಜಾ.
  • ಏಪ್ರಿಲ್​ 18, ಭಾನುವಾರ
  • ಏಪ್ರಿಲ್​ 24, ನಾಲ್ಕನೇ ಶನಿವಾರದ ರಜಾ
  • ಏಪ್ರಿಲ್​ 25, ಭಾನುವಾರ: ಈ ದಿನ ಭಾನುವಾರದ ರಜಾವೂ ಹೌದು, ಮಹಾವೀರ ಜಯಂತಿ ನಿಮಿತ್ತದ ರಜೆಯೂ ಹೌದು.

ಇದನ್ನೂ ಓದಿ:  Bank Holidays In April 2021: ವ್ಯವಹಾರಕ್ಕೆ ಹೋಗುವ ಮುನ್ನ ಗ್ರಾಹಕರೇ ಗಮನಿಸಿ- ಏಪ್ರಿಲ್​ನಲ್ಲಿ ಬ್ಯಾಂಕ್​ಗಳಿಗೆ 15 ದಿನ ರಜಾ..

ಆಟೊ ಪೇಮೆಂಟ್​ ಗಡುವು ವಿಸ್ತರಿಸಿದ ರಿಸರ್ವ್​ ಬ್ಯಾಂಕ್​: ಕ್ರೆಡಿಟ್ ಕಾರ್ಡ್​, ಮೊಬೈಲ್ ವ್ಯಾಲೆಟ್​ ಕಂಪನಿಗಳು ಸದ್ಯಕ್ಕೆ ನಿರಾಳ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ