Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays in April 2021: ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ಏಪ್ರಿಲ್​ನಲ್ಲಿ 9 ದಿನ ರಜಾ; ಯಾವ್ಯಾವಾಗ?.. ಪಟ್ಟಿ ಇಲ್ಲಿದೆ ನೋಡಿ

ಕರ್ನಾಟಕದಲ್ಲಿ ಇಂದೂ ಕೂಡ ಬ್ಯಾಂಕ್​ಗಳಿಗೆ ವಾರ್ಷಿಕ ವ್ಯವಹಾರ ಕ್ಲೋಸ್​ ದಿನದ ನಿಮಿತ್ತ ರಜಾ ಇತ್ತು. ಇನ್ನು ನಾಲ್ಕು ಭಾನುವಾರಗಳಿವೆ. ಉಳಿದಂತೆ ಯುಗಾದಿ ಹಬ್ಬ, ಅಂಬೇಡ್ಕರ್ ಜಯಂತಿ, ಮಹಾವೀರ್ ಜಯಂತಿಗಳ ನಿಮಿತ್ತ ರಜಾ ಇರಲಿದೆ.

Bank Holidays in April 2021: ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ಏಪ್ರಿಲ್​ನಲ್ಲಿ 9 ದಿನ ರಜಾ; ಯಾವ್ಯಾವಾಗ?.. ಪಟ್ಟಿ ಇಲ್ಲಿದೆ ನೋಡಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Apr 01, 2021 | 12:59 PM

ವಿವಿಧ ಹಬ್ಬ-ಆಚರಣೆಗಳ ನಿಮಿತ್ತ ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್​ಗಳಿಗೆ ಭರ್ಜರಿ ರಜಾದಿನಗಳಿವೆ. ಒಟ್ಟು 15ದಿನ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ಆದರೆ ಈ ಹದಿನೈದೂ ದಿನಗಳು ದೇಶದ ಎಲ್ಲ ಭಾಗಗಳಲ್ಲೂ ಅನ್ವಯ ಆಗುವುದಿಲ್ಲ. ಇನ್ನು ಕರ್ನಾಟಕದಲ್ಲಿ ಏಪ್ರಿಲ್​ನಲ್ಲಿ ಒಟ್ಟು 9 ರಜಾದಿನಗಳಿವೆ. ಇಂದೂ ಕೂಡ ವಾರ್ಷಿಕ ವ್ಯವಹಾರ ಕ್ಲೋಸ್​ ದಿನದ ನಿಮಿತ್ತ ರಜಾ ಇತ್ತು. ಇನ್ನು ನಾಲ್ಕು ಭಾನುವಾರಗಳಿವೆ. ಉಳಿದಂತೆ ಯುಗಾದಿ ಹಬ್ಬ, ಅಂಬೇಡ್ಕರ್ ಜಯಂತಿ, ಮಹಾವೀರ್ ಜಯಂತಿಗಳ ನಿಮಿತ್ತ ರಜಾ ಇರಲಿದೆ. ಇಲ್ಲಿದೆ ನೋಡಿ, ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ಏಪ್ರಿಲ್​ನಲ್ಲಿ ಇರುವ ರಜಾದಿನಗಳ ಸಮಗ್ರ ವಿವರ..

  • ಏಪ್ರಿಲ್​ 2, ಶುಕ್ರವಾರ- ಗುಡ್​ ಫ್ರೈಡೇ: ಯೇಸುಕ್ರಿಸ್ತ ಶಿಲುಬೆಗೆ ಏರಿದ ದಿನದ ಸ್ಮರಣಾರ್ಥ ಈ ಹಬ್ಬವನ್ನು ಕ್ರಿಶ್ಚಿಯನ್ ಸಮುದಾಯದವರು ಆಚರಿಸುತ್ತಾರೆ. ಪ್ರತಿವರ್ಷವೂ ಗುಡ್​ ಫ್ರೈಡೇ ದಿನ ರಾಷ್ಟ್ರಾದ್ಯಂತ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ಕರ್ನಾಟಕದಲ್ಲೂ ಸಹ ನಾಳೆ (ಏಪ್ರಿಲ್​ 2) ಬ್ಯಾಂಕ್​ಗಳಿಗೆ ರಜಾ ಇರುತ್ತದೆ.
  • ಏಪ್ರಿಲ್​ 4, ಭಾನುವಾರ
  • ಏಪ್ರಿಲ್​ 10, ಎರಡನೇ ಶನಿವಾರದ ರಜಾ
  • ಏಪ್ರಿಲ್​ 11, ಭಾನುವಾರ
  • ಏಪ್ರಿಲ್ 13, ಮಂಗಳವಾರ-ಯುಗಾದಿ: ಏಪ್ರಿಲ್​ 13ರಂದು ಯುಗಾದಿ ನಿಮಿತ್ತ ರಾಜ್ಯದಲ್ಲಿ ಯಾವ ಬ್ಯಾಂಕ್​ಗಳು ಕಾರ್ಯನಿರ್ವಹಿಸುವುದಿಲ್ಲ. ಹಿಂದುಗಳ ಹೊಸವರ್ಷದ ಹಬ್ಬ ಇದಾಗಿದ್ದು, ಚೈತ್ರ ಮಾಸದ ಮೊದಲ ದಿನವಾಗಿದೆ. ಈ ಹಬ್ಬದಂದು ಜನರು ಬೇಗ ಎದ್ದು ಸ್ನಾನ ಮಾಡಿ ಪೂಜೆ ಮಾಡುತ್ತಾರೆ. ಮನೆಗೆಲ್ಲ ತೋರಣ ಕಟ್ಟಿ, ಹೊಸ ಬಟ್ಟೆ ತೊಟ್ಟು, ಸಿಹಿ ಹೋಳಿಗೆ ಮಾಡಿ ಹಬ್ಬದೂಟ ಮಾಡುತ್ತಾರೆ.
  • ಏಪ್ರಿಲ್ 14, ಬುಧವಾರ-ಅಂಬೇಡ್ಕರ್ ಜಯಂತಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್​ ಹುಟ್ಟಿದ ದಿನದ ನಿಮಿತ್ತ ರಾಷ್ಟ್ರಾದ್ಯಂತ ಬ್ಯಾಂಕ್​ಗಳಿಗೆ ರಜೆ ಇರುತ್ತದೆ. ಕರ್ನಾಟಕದಲ್ಲೂ ಸಹ ಎಲ್ಲ ಬ್ಯಾಂಕ್​ಗಳಿಗೂ ರಜಾ.
  • ಏಪ್ರಿಲ್​ 18, ಭಾನುವಾರ
  • ಏಪ್ರಿಲ್​ 24, ನಾಲ್ಕನೇ ಶನಿವಾರದ ರಜಾ
  • ಏಪ್ರಿಲ್​ 25, ಭಾನುವಾರ: ಈ ದಿನ ಭಾನುವಾರದ ರಜಾವೂ ಹೌದು, ಮಹಾವೀರ ಜಯಂತಿ ನಿಮಿತ್ತದ ರಜೆಯೂ ಹೌದು.

ಇದನ್ನೂ ಓದಿ:  Bank Holidays In April 2021: ವ್ಯವಹಾರಕ್ಕೆ ಹೋಗುವ ಮುನ್ನ ಗ್ರಾಹಕರೇ ಗಮನಿಸಿ- ಏಪ್ರಿಲ್​ನಲ್ಲಿ ಬ್ಯಾಂಕ್​ಗಳಿಗೆ 15 ದಿನ ರಜಾ..

ಆಟೊ ಪೇಮೆಂಟ್​ ಗಡುವು ವಿಸ್ತರಿಸಿದ ರಿಸರ್ವ್​ ಬ್ಯಾಂಕ್​: ಕ್ರೆಡಿಟ್ ಕಾರ್ಡ್​, ಮೊಬೈಲ್ ವ್ಯಾಲೆಟ್​ ಕಂಪನಿಗಳು ಸದ್ಯಕ್ಕೆ ನಿರಾಳ

ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಲಾರಿಗೆ ಡಿಕ್ಕಿ ಹೊಡೆದ ಮುಂಬೈ- ಅಮರಾವತಿ ಎಕ್ಸ್​ಪ್ರೆಸ್​ ರೈಲು
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಮಹಿಳೆಯೊಂದಿಗೆ ಕಿರಿಕ್​:ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ಚಿಕ್ಕಬಳ್ಳಾಪುರ: ಹೊತ್ತಿ ಉರಿದ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರು
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ನಿಂತುಹೋಗಿರುವ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಕೋರಿದೆ: ರೇಣುಕಾಚಾರ್ಯ
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಶಿಕ್ಷಕರು
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಪ್ರಶ್ನೆಗೆ ಉತ್ತರ ಸಿಗದಿದ್ದರೆ ಆಯಾ ಇಲಾಖೆ ಅಧಿಕಾರಿಗಳು ಜವಾಬ್ದಾರರು:ಖಾದರ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್
ಸದನದಲ್ಲಿ ವಿಶ್ವನಾಥ್ ಎತ್ತಿದ ಆಕ್ಷೇಪಣೆಗೆ ಉತ್ತರ ನೀಡಿದ ಸುರೇಶ್