ಕೋವಿಡ್​​ನಿಂದ ಬಳಲಿದವರು ಕಠಿಣ ವ್ಯಾಯಾಮ, ಕೆಲಸ ಮಾಡಬೇಡಿ: ಮನ್ಸುಖ್ ಮಾಂಡವಿಯಾ

| Updated By: ರಶ್ಮಿ ಕಲ್ಲಕಟ್ಟ

Updated on: Oct 30, 2023 | 7:40 PM

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಇತ್ತೀಚೆಗೆ ಒಂದು ವಿವರವಾದ ಅಧ್ಯಯನವನ್ನು ಮಾಡಿದೆ. ಆ ವಿವರವಾದ ಅಧ್ಯಯನವು ತೀವ್ರವಾದ ಕೋವಿಡ್ ಹೊಂದಿರುವವರು ಹೆಚ್ಚುವರಿ ಚಟುವಟಿಕೆಗಳಿಂದ ದೂರವಿರಬೇಕು ಎಂದು ಶಿಫಾರಸು ಮಾಡಿದೆ. ನಿರ್ದಿಷ್ಟಪಡಿಸಿದ ಅಲ್ಪಾವಧಿಗೆ, ಅಂದರೆ ಒಂದು ವರ್ಷ ಅಥವಾ ಎರಡು ವರ್ಷ ನಿರಂತರ ಶ್ರಮ, ಶ್ರಮದಾಯಕ ಓಡುವುದು, ವ್ಯಾಯಾಮ ಇತ್ಯಾದಿಗಳಿಂದ ದೂರವಿರಬೇಕು.

ಕೋವಿಡ್​​ನಿಂದ ಬಳಲಿದವರು ಕಠಿಣ ವ್ಯಾಯಾಮ, ಕೆಲಸ ಮಾಡಬೇಡಿ: ಮನ್ಸುಖ್ ಮಾಂಡವಿಯಾ
ಮನ್ಸುಖ್ ಮಾಂಡವಿಯಾ
Follow us on

ದೆಹಲಿ ಅಕ್ಟೋಬರ್ 30: ಇತ್ತೀಚಿನ ತಿಂಗಳುಗಳಲ್ಲಿ ಯುವಕ/ಯುವತಿಯರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಮಧ್ಯೆ,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ತೀವ್ರವಾದ ಕೋವಿಡ್ -19 (Covid-19) ಸೋಂಕಿನಿಂದ ಬಳಲುತ್ತಿರುವವರಿಗೆ ವ್ಯಾಯಾಮ ಮಾಡುವಾಗ ಹೆಚ್ಚು ಶ್ರಮಪಡಬೇಡಿ ಮತ್ತು ಸ್ವಲ್ಪ ಸಮಯದವರೆಗೆ ಕಠಿಣ ಕೆಲಸದಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ. ಗುಜರಾತ್‌ನ (Gujarat)ಭಾವನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಂಡವಿಯಾ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿಎಂಆರ್) ಈ ವಿಷಯದ ಬಗ್ಗೆ ವಿವರವಾದ ಅಧ್ಯಯನ ನಡೆಸಿದ್ದು ಚೇತರಿಸಿಕೊಂಡವರಿಗೆ ಸಲಹೆ ನೀಡಿದೆ ಎಂದು ಹೇಳಿದ್ದಾರೆ.

“ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಇತ್ತೀಚೆಗೆ ಒಂದು ವಿವರವಾದ ಅಧ್ಯಯನವನ್ನು ಮಾಡಿದೆ. ಆ ವಿವರವಾದ ಅಧ್ಯಯನವು ತೀವ್ರವಾದ ಕೋವಿಡ್ ಹೊಂದಿರುವವರು ಹೆಚ್ಚುವರಿ ಚಟುವಟಿಕೆಗಳಿಂದ ದೂರವಿರಬೇಕು ಎಂದು ಶಿಫಾರಸು ಮಾಡಿದೆ. ನಿರ್ದಿಷ್ಟಪಡಿಸಿದ ಅಲ್ಪಾವಧಿಗೆ, ಅಂದರೆ ಒಂದು ವರ್ಷ ಅಥವಾ ಎರಡು ವರ್ಷ ನಿರಂತರ ಶ್ರಮ, ಶ್ರಮದಾಯಕ ಓಡುವುದು, ವ್ಯಾಯಾಮ ಇತ್ಯಾದಿಗಳಿಂದ ದೂರವಿರಬೇಕು.ಇದರಿಂದ ಹೃದಯಾಘಾತವನ್ನು ತಡೆಯಬಹುದು ಎಂದು ಹೇಳಿದ್ದಾರೆ.

ಗುಜರಾತ್‌ನ ಭಾವನಗರ ಮತ್ತು ಬೊಟಾಡ್ ಜಿಲ್ಲೆಗಳನ್ನು ಒಳಗೊಂಡಿರುವ ಭಾವನಗರ ಲೋಕಸಭೆ ಕ್ಷೇತ್ರದ ಯುವಕರಿಗಾಗಿ ಆಯೋಜಿಸಲಾದ ಕ್ರೀಡಾ ಕಾರ್ನೀವಲ್ 2023 ರ ಸಂಸದ್ ಖೇಲ್ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಸಚಿವರು ಭಾವನಗರಕ್ಕೆ ಬಂದಿದ್ದರು. 2022 ರ ಕೊನೆಯಲ್ಲಿ ಹೃದಯಾಘಾತದಿಂದ 20 ಮತ್ತು 30 ರ ಹರೆಯದ ಜನರು ಸಾಯುತ್ತಿರುವ ಪ್ರಕರಣಗಳು ವರದಿಯಾಗಿವೆ ಅನೇಕ ಜನರು ಈ ಸಾವು ಕೋವಿಡ್ ಅಥವಾ ಅದರ ಚಿಕಿತ್ಸೆಗೆ ಸಂಬಂಧಿಸಿದ್ದು ಅಂತಾರೆ.

ಇದನ್ನೂ ಓದಿ: ವಾಲ್ಮೀಕಿ ಜಯಂತಿ ಹಿನ್ನೆಲೆ ಪ್ರಾರ್ಥನೆ: ಹೃದಯಾಘಾತದಿಂದ ವಿಚಾರಣಾಧೀನ ಕೈದಿ ಸಾವು

ಹೆಚ್ಚುತ್ತಿರುವ ಪ್ರಕರಣಗಳ ಕಾರಣದಿಂದಾಗಿ, ಗುಜರಾತ್‌ನ ಅನೇಕ ಗರ್ಬಾ (ಸಾಂಪ್ರದಾಯಿಕ ಗುಜರಾತಿ ನೃತ್ಯ) ಸಂಘಟಕರು ಒಂಬತ್ತು ದಿನಗಳ ಕಾಲ ನಡೆಯುವ ವಾರ್ಷಿಕ ಹಿಂದೂ ಹಬ್ಬವಾದ ನವರಾತ್ರಿಯ ಸಮಯದಲ್ಲಿ ವೈದ್ಯಕೀಯ ತಂಡಗಳನ್ನು ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು ಆದಾಗ್ಯೂ, ಈ ವರ್ಷವೂ ಗಾರ್ಬಾ ರಾತ್ರಿಗಳಲ್ಲಿ ಹೃದಯಾಘಾತದ ಸಾವುಗಳು ವರದಿಯಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ