ಗುಜರಾತ್​ನಲ್ಲಿ ಗಾರ್ಬಾ ನೃತ್ಯದ ವೇಳೆ 10 ಮಂದಿ ಹೃದಯಾಘಾತದಿಂದ ಸಾವು, ವೈದ್ಯರು ಕೊಟ್ಟ ಕಾರಣಗಳಿವು

ಗುಜರಾತ್​ನಲ್ಲಿ ಗಾರ್ಬಾ ನೃತ್ಯ ಮಾಡುವ ವೇಳೆ 10 ಮಂದಿ ಹೃದಯಾಘಾತ(Heart Attack)ದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕಾರಣ ಏನಿರಬಹುದೆಂಬುದು ಸಧ್ಯದ ಕುತೂಹಲವಾಗಿದೆ. ಮೊದಲೇ ಅವರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು, ದೀರ್ಘ ಉಪವಾಸ, ಅನಾರೋಗ್ಯಕರ ಆಹಾರ ಹಾಗೆಯೇ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಕುರಿತು ತಿಳಿವಳಿಕೆ ಇಲ್ಲದಿರುವುದೇ ಈ ಸಾವಿಗೆ ಕಾರಣವಾಗಿದೆ. ಗುಜರಾತ್​ನಲ್ಲಿ ಗಾರ್ಬಾ ನೃತ್ಯದ ವೇಳೆ 10 ಮಂದಿ ಸಾವನ್ನಪ್ಪಿದ್ದಾರೆ, ಅದರಲ್ಲಿ 17 ವರ್ಷ ವಿದ್ಯಾರ್ಥಿ ಕೂಡ ಸೇರಿದ್ದಾರೆ.

ಗುಜರಾತ್​ನಲ್ಲಿ ಗಾರ್ಬಾ ನೃತ್ಯದ ವೇಳೆ 10 ಮಂದಿ ಹೃದಯಾಘಾತದಿಂದ ಸಾವು, ವೈದ್ಯರು ಕೊಟ್ಟ ಕಾರಣಗಳಿವು
ಗಾರ್ಬಾImage Credit source: Times Of India
Follow us
|

Updated on: Oct 23, 2023 | 10:14 AM

ಗುಜರಾತ್​ನಲ್ಲಿ ಗಾರ್ಬಾ ನೃತ್ಯ ಮಾಡುವ ವೇಳೆ 10 ಮಂದಿ ಹೃದಯಾಘಾತ(Heart Attack)ದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕಾರಣ ಏನಿರಬಹುದೆಂಬುದು ಸಧ್ಯದ ಕುತೂಹಲವಾಗಿದೆ. ಮೊದಲೇ ಅವರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳು, ದೀರ್ಘ ಉಪವಾಸ, ಅನಾರೋಗ್ಯಕರ ಆಹಾರ ಹಾಗೆಯೇ ಈಗಾಗಲೇ ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಕುರಿತು ತಿಳಿವಳಿಕೆ ಇಲ್ಲದಿರುವುದೇ ಈ ಸಾವಿಗೆ ಕಾರಣವಾಗಿದೆ. ಗುಜರಾತ್​ನಲ್ಲಿ ಗಾರ್ಬಾ ನೃತ್ಯದ ವೇಳೆ 10 ಮಂದಿ ಸಾವನ್ನಪ್ಪಿದ್ದಾರೆ, ಅದರಲ್ಲಿ 17 ವರ್ಷ ವಿದ್ಯಾರ್ಥಿ ಕೂಡ ಸೇರಿದ್ದಾರೆ.

ವಿರಾಮವನ್ನು ಪಡೆಯದೆ ದೀರ್ಘ ಕಾಲದವರೆಗೆ ಗಾರ್ಬಾ ಆಡಬೇಡಿ ಎಂದು ಅವರ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ. ಇಂದು ನಾನು ಅದೇ ರೀತಿ ಮಗನನ್ನು ಕಳೆದುಕೊಂಡಿದ್ದೇನೆ, ಬೇರೆ ಯಾರಿಗೂ ನನ್ನ ಸ್ಥಿತಿ ಬರಬಾರದು ಎಂದು ಪೋಷಕರು ಮನವಿ ಮಾಡಿದ್ದಾರೆ. ಅಹಮದಾಬಾದ್, ರಾಜ್‌ಕೋಟ್ ಮತ್ತು ನವಸಾರಿಯಲ್ಲಿ ಕೂಡ ಪ್ರಕರಣಗಳು ವರದಿಯಾಗಿವೆ.

ಯುವಕರಲ್ಲೂ ಹೆಚ್ಚಾದ ಹೃದಯ ಸಮಸ್ಯೆ

ಭಾರತದಲ್ಲಿ ಹೃದ್ರೋಗಗಳು ಹೆಚ್ಚುತ್ತಿವೆ, ಕೋವಿಡ್ ನಂತರದ ತೊಡಕುಗಳು, ವಾಯು ಮಾಲಿನ್ಯ ಮತ್ತು ಅನಾರೋಗ್ಯಕರ ಜೀವನಶೈಲಿ ಸೇರಿದಂತೆ ವಿವಿಧ ಅಂಶಗಳಿಗೆ ಕಾರಣವಾಗಿದೆ. ಹೃದಯ ಸಂಬಂಧಿ ಕಾಯಿಲೆಗೆ ಇಂತಹ ವಯಸ್ಸೇ ಇರಬೇಕು ಎಂದೇನಿಲ್ಲ. ಅಹಮದಾಬಾದ್​ನ ನಾರಾಯಣ ಆಸ್ಪತ್ರೆಯ ಡಾ. ಜಿಶಾನಿ ಮನ್ಸೂರಿ ನ್ಯೂಸ್​18ಗೆ ನೀಡಿದ್ದ ಸಂದರ್ಶನವೊಂದರಲ್ಲಿ, ಯುವಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ, ಈ ಹಿಂದೆ 10ರಲ್ಲಿ 1 ರೋಗಿ 30 ವರ್ಷಕ್ಕಿಂತ ಕಡಿಮೆ ಇರುವವರು ಇರುತ್ತಿದ್ದರು ಆದರೆ ಈಗ 10 ರಲ್ಲಿ 3 ರೋಗಿಗಳನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಹೃದಯಾಘಾತಕ್ಕೆ ಕಾರಣಗಳು

ಗಾರ್ಬಾದಂತಹ ದೈಹಿಕ ಚಟುವಟಿಕೆಗಳ ಸಮಯದಲ್ಲಿ ಹಠಾತ್ ಹೃದಯಾಘಾತವಾಗುವುದು ಈ ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳು, ದೈಹಿಕ ಪರಿಶ್ರಮ ಮತ್ತು ಪರಿಸರದ ಅಂಶಗಳು ಸೇರಿದಂತೆ ವಿವಿಧ ಕಾರಣಗಳನ್ನು ಹೊಂದಿರಬಹುದು. ಕ್ರೀಡೆ ಹಾಗೂ ನೃತ್ಯದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಆರೋಗ್ಯ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು. ಹೃದಯಾಘಾತ ಮತ್ತು ವೈಫಲ್ಯ ಸೇರಿದಂತೆ ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಮತ್ತಷ್ಟು ಓದಿ:  Heart Attack: ನವರಾತ್ರಿ ಗರ್ಭಾ ಆಚರಣೆ, 24 ಗಂಟೆಗಳಲ್ಲಿ ಹೃದಯಾಘಾತಕ್ಕೆ 10 ಸಾವು

ಯುವಕರು ಸೇರಿದಂತೆ ಅನೇಕರಿಗೆ ಅರಿವಿಲ್ಲದೆ ಅಧಿಕ ರಕ್ತದೊತ್ತಡ ಅಥವಾ ಮಧುಮೇಹದಂತಹ ಅಪಾಯಕಾರಿ ಅಂಶಗಳನ್ನು ಹೊಂದಿರಬಹುದು. ಪ್ರತಿಯೊಬ್ಬರೂ ಕೂಡ ತಮ್ಮ ಆರೋಗ್ಯದ ಬಗ್ಗೆ ತಿಳಿದಿರುವುದು, ದೇಹವನ್ನು ಹೈಡ್ರೇಟ್​ ಆಗಿರುವಂತೆ ನೋಡಿಕೊಳ್ಳುವುದು ಮುಖ್ಯ.

ಆರೋಗ್ಯದ ಮೇಲೆ ಹೆಚ್ಚು ಕಾಳಜಿವಹಿಸಿ

ದೇಹದ ಎಲೆಕ್ಟ್ರೋಲೈಟ್‌ಗಳಲ್ಲಿ ಅಸಮತೋಲನ ಉಂಟಾದಾಗ ಈ ಸಮಸ್ಯೆಯು ಉಲ್ಬಣಗೊಳ್ಳಬಹುದು, ಇದು ನೃತ್ಯ ಅಥವಾ ವ್ಯಾಯಾಮದಂತಹ ಚಟುವಟಿಕೆಗಳ ಸಮಯದಲ್ಲಿ ಸಂಭವಿಸಬಹುದು. ಇವುಗಳು ಯಾವುದೇ ಸಮಸ್ಯೆಗಳು ಅಥವಾ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ನಿರ್ಜಲೀಕರಣ, ಕಳಪೆ ಆಹಾರ ಪದ್ಧತಿಗಳು ಮತ್ತು ಅತಿಯಾದ ದೈಹಿಕ ಚಟುವಟಿಕೆಯು ಕೆಲವು ಕೊಡುಗೆ ಅಂಶಗಳಾಗಿವೆ.

ರಕ್ತದ ಒತ್ತಡ

ಈ ಹಬ್ಬಗಳ ಸಮಯದಲ್ಲಿ, ಶಾಖ ಮತ್ತು ಅತಿಯಾದ ಚಟುವಟಿಕೆಯು ಹೃದಯದ ಒತ್ತಡವನ್ನು ಉಂಟುಮಾಡಬಹುದು. ಅಂತಹ ಆಚರಣೆಗಳ ಸಮಯದಲ್ಲಿ ಅತಿಯಾದ ಪರಿಶ್ರಮ ಮತ್ತು ಒತ್ತಡದಿಂದ ಉಂಟಾಗುವ ಸಂಭಾವ್ಯ ಅಪಾಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದರು. ಎದೆ ನೋವು ಅಥವಾ ಉಸಿರಾಟದ ತೊಂದರೆಯಂತಹ ಹೃದಯ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸುವುದು ಸಹ ಮುಖ್ಯವಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ