AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯುಷ್​ ಇಲಾಖೆ ತಡೆ ನೀಡಿದ್ದರೂ ಆನಂದಯ್ಯನವರ ಆಯುರ್ವೇದ ಔಷಧಿ ವಿತರಣೆಗೆ ಮುಂದಾದ ಟಿಟಿಡಿ..

ಆನಂದಯ್ಯನವರ ಶಿಷ್ಯಂದಿರು ತಿರುಪತಿಗೆ ಭೇಟಿ ನೀಡಲಿದ್ದಾರೆ. ಚೆವಿರೆಡ್ಡಿ ಭಾಸ್ಕರ್​ರೆಡ್ಡಿ ನೇತೃತ್ವದಲ್ಲಿ ಟಿಟಿಯ ಆಯುರ್ವೇದಿಕ್​ ಫಾರ್ಮಾಗೆ ಹೋಗಿ ಔಷಧೀಯ ಸಸ್ಯ, ಗಿಡಮೂಲಿಕೆಗಳನ್ನು ಪರಿಶೀಲನೆ ಮಾಡಲಿದ್ದಾರೆ.

ಆಯುಷ್​ ಇಲಾಖೆ ತಡೆ ನೀಡಿದ್ದರೂ ಆನಂದಯ್ಯನವರ ಆಯುರ್ವೇದ ಔಷಧಿ ವಿತರಣೆಗೆ ಮುಂದಾದ ಟಿಟಿಡಿ..
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: May 26, 2021 | 6:09 PM

Share

ತಿರುಪತಿ: ಆಂಧ್ರಪ್ರದೇಶದ ಕೃಷ್ಣಾಪಟ್ಟಣಂನಲ್ಲಿ ಆನಂದಯ್ಯ ಎಂಬುವರು ಕೊವಿಡ್​ 19 ಸೋಂಕಿಗೆ ನೀಡುತ್ತಿದ್ದ ಆಯುರ್ವೇದ ಔಷಧಿಗೆ ತಾತ್ಕಾಲಿಕ ತಡೆನೀಡಲಾಗಿದೆ. ಈಗಾಗಲೇ ಆಯುಷ್​ ಇಲಾಖೆಯ ತಜ್ಞರ ತಂಡ ಔಷಧಿ ತಯಾರಿಕೆಯನ್ನು ಪರಿಶೀಲನೆ ನಡೆಸಿದ್ದು, ಈ ಔಷಧಿ ಕೊವಿಡ್​ 19 ಸೋಂಕನ್ನು ಕಡಿಮೆ ಮಾಡುತ್ತದೆ, ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತು ಆಗುವವರೆಗೂ ಅದನ್ನು ಕೊವಿಡ್​ 19 ಔಷಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.

ಹೀಗಿದ್ದಾಗ್ಯೂ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್​ ಬೋರ್ಡ್, ಬೋನಿಗಿ​ ಆನಂದಯ್ಯ ಅವರ ಔಷಧಿಯನ್ನು ಉತ್ಪಾದಿಸಿ, ವಿತರಿಸುವುದಾಗಿ ಹೇಳಿದೆ. ಇದಕ್ಕೆ ಚಂದ್ರಗಿರಿ ಶಾಸಕ ಚೆವಿರೆಡ್ಡಿ ಭಾಸ್ಕರ್​ ರೆಡ್ಡಿಯವರೂ ಸಾಥ್​ ನೀಡಿದ್ದಾರೆ. ಬೋನಿಗಿ ಆನಂದಯ್ಯ ಅವರ ಆಯುರ್ವೇದ ಔಷಧಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಅದು ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಹೀಗಾಗಿ ನಾವು ಆ ಔಷಧಿಯನ್ನು ತಯಾರಿಸಿ, ವಿತರಣೆ ಮಾಡುತ್ತೇವೆ ಎಂದು ಟಿಟಿಡಿ ಹೇಳಿಕೊಂಡಿದೆ.

ಹೀಗಾಗಿ ಆನಂದಯ್ಯನವರ ಶಿಷ್ಯಂದಿರು ತಿರುಪತಿಗೆ ಭೇಟಿ ನೀಡಲಿದ್ದಾರೆ. ಚೆವಿರೆಡ್ಡಿ ಭಾಸ್ಕರ್​ರೆಡ್ಡಿ ನೇತೃತ್ವದಲ್ಲಿ ಟಿಟಿಯ ಆಯುರ್ವೇದಿಕ್​ ಫಾರ್ಮಾಗೆ ಹೋಗಿ ಔಷಧೀಯ ಸಸ್ಯ, ಗಿಡಮೂಲಿಕೆಗಳನ್ನು ಪರಿಶೀಲನೆ ಮಾಡಲಿದ್ದಾರೆ. ಹಾಗೇ, ಟಿಟಿಡಿಯ ಆಯುರ್ವೇದಿಕ್​ ಕಾಲೇಜಿನ ಪ್ರಾಧ್ಯಾಪಕರನ್ನೂ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಇನ್ನು ಸರ್ಕಾರದ ಅನುಮತಿ ದೊರೆತರೆ ಟಿಟಿಡಿ ಆಯುರ್ವೇದಿಕ್​ ಫಾರ್ಮ್​​ನಲ್ಲಿ ಔಷಧಿ ತಯಾರಿಕೆ ಶೀಘ್ರವೇ ಶುರುವಾಗಲಿದೆ.

ಇದನ್ನೂ ಓದಿ: ಕ್ರಿಕೆಟ್ ದುನಿಯಾದಲ್ಲಿ ಯಾರಿಂದಲೂ ಮುರಿಯಲಾಗದ 10 ವಿಶಿಷ್ಟ ದಾಖಲೆಗಳಿವು; ಈ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ