AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tirupati Railway Station: ದ್ರಾವಿಡ ಶೈಲಿಯ ವಾಸ್ತುಶಿಲ್ಪದೊಂದಿಗೆ ತಿರುಪತಿ ರೇಲ್ವೇ ನಿಲ್ದಾಣ ಭವ್ಯವಾಗಿ ಮರುನಿರ್ಮಾಣಗೊಳ್ಳುತ್ತಿದೆ

ಭಾರತದ ಸ್ಮಾರ್ಟ್ ಸಿಟಿಗಳಲ್ಲಿ ಒಂದಾಗಿ ಅಭಿವೃದ್ಧಿಗೊಳ್ಳುತ್ತಿರುವ ತಿರುಪತಿ ನಗರದ ಹೃದಯಭಾಗದಲ್ಲಿ ಒಂದು ಮೈಲಿಗಲ್ಲನ್ನು ಸೃಷ್ಟಿಸುವುದು ಕಟ್ಟಡ ನಿರ್ಮಾಣದಲ್ಲಿ ಸಾಂಪ್ರದಾಯಿಕ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸುವುದು ಇದರ ಹಿಂದಿನ ಉದ್ದೇಶವಾಗಿದೆ.

Tirupati Railway Station: ದ್ರಾವಿಡ ಶೈಲಿಯ ವಾಸ್ತುಶಿಲ್ಪದೊಂದಿಗೆ ತಿರುಪತಿ ರೇಲ್ವೇ ನಿಲ್ದಾಣ ಭವ್ಯವಾಗಿ ಮರುನಿರ್ಮಾಣಗೊಳ್ಳುತ್ತಿದೆ
ಹೀಗಾಗಲಿದೆ ತಿರುಪತಿ ರೇಲ್ವೆ ನಿಲ್ಧಾಣ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 01, 2022 | 1:21 AM

ತಿರುಪತಿ: ದಕ್ಷಿಣ ಭಾರತದಲ್ಲಿ ವಾಸವಾಗಿರುವ ಹಿಂದೂ ಕುಟುಂಬಗಳಿಗೆ ಕನಿಷ್ಟ ಒಮ್ಮೆಯಾದರೂ ಇಡೀ ಭಾರತದಲ್ಲೇ ಅತ್ಯಂತ ಪವಿತ್ರ ಪುಣ್ಯಸ್ಥಳಗಳಲ್ಲಿ (pilgrimage) ಒಂದೆನಿಸಿಕೊಂಡಿರುವ ಮತ್ತು ತಿರುಮಲ ಬೆಟ್ಟದ (Tirumala Hills) ಶಿಖರದಲ್ಲಿರುವ ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕು ಬಾಲಾಜಿಯ ದರ್ಶನ ಪಡೆಯಬೇಕೆಂಬ ಅದಮ್ಯ ಆಸೆಯಿರುತ್ತದೆ. ಈ ಸ್ಥಳದ ಮಹತ್ವ ಮತ್ತು ಸಾಂಸ್ಕೃತಿಕ ಇತಿಹಾಸಕ್ಕೆ (cultural history) ಅನುಗುಣವಾಗಿಯೇ ಇಲ್ಲಿನ ರೇಲ್ವೇ ನಿಲ್ದಾಣದ ಮರುನಿರ್ಮಾಣ ಯೋಜನೆಯು ದ್ರಾವಿಡ ಶೈಲಿಯ ದೇವಸ್ಥಾನ ನಿರ್ಮಾಣದಿಂದ ಪ್ರೇರಿತಗೊಂಡಿದೆ.

ನಾವು ನಮ್ಮದು ಎಂಬ ಭಾವನೆಯನ್ನು ಹುಟ್ಟಿಸುವ ಉದ್ದೇಶದಿಂದ ನಿಲ್ದಾಣವನ್ನು ಗೋಪುರದಂತೆ ಗೋಚರಿಸುವ ಭವ್ಯ ಗೇಟ್ ಹೌಸ್ ನ ಹಾಗೆ ಮೊನಚಾದ ಆಯತಾಕಾರದ ರೂಪದಲ್ಲಿ ನಿರ್ಮಿಸಲಾಗುತ್ತದೆ.

ನೆಲಮಟ್ಟದಲ್ಲಿ ಅದ್ಭುತವಾದ ಕೆತ್ತನೆಯ ಮೂಲಕ ಗಮನ ಸೆಳೆಯುವ ದ್ವಾರಗಳಿವೆ

ಭಾರತದ ಸ್ಮಾರ್ಟ್ ಸಿಟಿಗಳಲ್ಲಿ ಒಂದಾಗಿ ಅಭಿವೃದ್ಧಿಗೊಳ್ಳುತ್ತಿರುವ ತಿರುಪತಿ ನಗರದ ಹೃದಯಭಾಗದಲ್ಲಿ ಒಂದು ಮೈಲಿಗಲ್ಲನ್ನು ಸೃಷ್ಟಿಸುವುದು ಕಟ್ಟಡ ನಿರ್ಮಾಣದಲ್ಲಿ ಸಾಂಪ್ರದಾಯಿಕ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸುವುದು ಇದರ ಹಿಂದಿನ ಉದ್ದೇಶವಾಗಿದೆ.

ದೇವಾಲಯದ ಕಲೆಯಿಂದ ಪ್ರೇರಿತವಾಗಿರುವ ಈ ಸುಂದರ ಮತ್ತು ನಯನ ಮನೋಹರ ಸ್ಥಳದ ನೋಟಕ್ಕೆ ಅನುಗುಣವಾಗಿ ನಿಲ್ದಾಣದ ಆವರಣದಲ್ಲಿ ಮತ್ತು ಸುತ್ತಲೂ ವೇದಭಾಗಗಳನ್ನು ಕೆತ್ತಿಸಿ ಜೋಡಿಸುವ ಯೋಜನೆಯೂ ಇದೆ . ಈ ಯೋಜನೆಯು ಅತ್ಯಾಧುನಿಕ ವಾಸ್ತುಶಿಲ್ಪವನ್ನು ಮಾತ್ರ ಒಳಗೊಂಡಿರದೆ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ ಮತ್ತು ಗಾಳಿ-ಉತ್ಪಾದಿತ ವಿದ್ಯುತ್ ಶಕ್ತಿ ಮತ್ತು ಬೆಳಕಿನ ಅವಶ್ಯಕತೆಗಳಿಗಾಗಿ ಸೌರ ಕೋಶ ಪ್ಯಾನೆಲ್ ಗಳ ವ್ಯವಸ್ಥೆಯನ್ನೂ ಮಾಡುತ್ತದೆ.

ಸೌರ ಶಕ್ತಿ ಸದ್ವಿನಿಯೋಗ ಮಾಡಿಕೊಳ್ಳಲು ಸೌರ ಫಲಕಗಳನ್ನು ಆರ್ಕೇಡ್ ನಲ್ಲಿ ಅಳವಡಿಸಲಾಗುವುದು. ಇವು ತಾಪಮಾನ ಹೀರಿಕೊಳ್ಳುವುದರಿಂದ, ಕಟ್ಟಡವು ತಂಪಾಗಿ ಆಹ್ಲಾದಕರ ವಾತಾವರಣವನ್ನು ಉಂಟು ಮಾಡುತ್ತದೆ ಮತ್ತು ಸಹಜವಾಗಿ ಶಕ್ತಿಯ ಕ್ಷಮತೆಯನ್ನು ಒದಗಿಸುವುದರ ಜೊತೆಗೆ ಸಾಂಪ್ರದಾಯಿಕತೆಯನ್ನು ಆಧುನಿಕತೆಯೊಂದಿಗೆ ಅದ್ಭುತವಾಗಿ ವಿಲೀನಗೊಳಿಸುತ್ತದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ಮುತ್ತೊಂದ ಕೊಡವೆ ಹತ್ತಿರ..ಹತ್ತಿರ.. ಬಾ: ವ್ಯಕ್ತಿಗೆ ಕಿಸ್ ಕೊಟ್ಟ ಜಮೀರ್!
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದ ಮೈಸೂರಿನ ಬಾಲಕಿ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಮಿನಿಸ್ಟರ್ ಪಿಎ ಸರ್ಫ್ರಾಜ್​ರನ್ನು ರೂಪೇಶ್ ಬ್ಲ್ಯಾಕ್​ಮೇಲ್ ಮಾಡಿರುವ ಆರೋಪ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಯಾವ ಇಲಾಖೆ ಮೇಲೂ ಸರ್ಕಾರಕ್ಕೆ ನಿಯಂತ್ರಣವಿಲ್ಲ, ಅದೇ ನೋವು: ರಾಜು ಕಾಗೆ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗುವುದು ಯಾಕೆ? ವಿಜಯೇಂದ್ರ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ರೈಲಿನಡಿ ಬೀಳುತ್ತಿದ್ದವನ ದೇವರಂತೆ ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ
ರೈಲಿನಡಿ ಬೀಳುತ್ತಿದ್ದವನ ದೇವರಂತೆ ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ
ಹಂಸಲೇಖ ಮತ್ತು ನಾನು ದೂರ ಆಗಲು ಕಾರಣ ಏನೆಂದರೆ.. ವಿವರಿಸಿದ ರವಿಚಂದ್ರನ್
ಹಂಸಲೇಖ ಮತ್ತು ನಾನು ದೂರ ಆಗಲು ಕಾರಣ ಏನೆಂದರೆ.. ವಿವರಿಸಿದ ರವಿಚಂದ್ರನ್
ನಮ್ಮತ್ರ ದುಡ್ಡಿಲ್ಲ, ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ
ನಮ್ಮತ್ರ ದುಡ್ಡಿಲ್ಲ, ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ
ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ, ಬಾಲಕಿಯ ಮನವಿಗೆ ಸ್ಪಂದಿಸಿದ ಯೋಗಿ
ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ, ಬಾಲಕಿಯ ಮನವಿಗೆ ಸ್ಪಂದಿಸಿದ ಯೋಗಿ