Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮಬಂಗಾಳದಲ್ಲಿ ಗಮನಸೆಳೆಯುತ್ತಿದೆ ಎರಡು ತಲೆ ಹಾವು

ಪಶ್ಚಿಮಬಂಗಾಳದ ಪಶ್ಚಿಮ ಮಿಡ್ನಾಪೂರ್‌ನಲ್ಲಿ ಎರಡು ತಲೆಯ ಹಾವು ಸಾಕಷ್ಟು ಗಮನಸೆಳೆಯುತ್ತಿದೆ. ಒಂದೇ ಕಡೆ ಎರಡು ತಲೆಯಿದ್ದು ಕಪ್ಪು ಬಣ್ಣದ ಹಾವು ಇದಾಗಿದೆ. ಉಗರ ತಜ್ಞಾರೊಬ್ಬರು ಈ ಹಾವು ಸೆರೆ ಸಿಕ್ಕಿದ್ದು, ಇದನ್ನ ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಬಿಜೆಪಿ ವಿರುದ್ಧ ಉದ್ಧವ್ ಗುಡುಗು: ಯಾರೇ ಒಬ್ಬ ವ್ಯಕ್ತಿ ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಎಂದರೆ ಆತ ‘ದೇಶದ್ರೋಹಿ’ ಎಂಬುದು ಬಿಜೆಪಿಯವರ ಭ್ರಮೆ ಅಂತ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಜೊತೆಗೆ ದೇಶದ ಬಗ್ಗೆ ಕೇವಲ […]

ಪಶ್ಚಿಮಬಂಗಾಳದಲ್ಲಿ ಗಮನಸೆಳೆಯುತ್ತಿದೆ ಎರಡು ತಲೆ ಹಾವು
Follow us
ಸಾಧು ಶ್ರೀನಾಥ್​
|

Updated on: Dec 11, 2019 | 8:56 AM

ಪಶ್ಚಿಮಬಂಗಾಳದ ಪಶ್ಚಿಮ ಮಿಡ್ನಾಪೂರ್‌ನಲ್ಲಿ ಎರಡು ತಲೆಯ ಹಾವು ಸಾಕಷ್ಟು ಗಮನಸೆಳೆಯುತ್ತಿದೆ. ಒಂದೇ ಕಡೆ ಎರಡು ತಲೆಯಿದ್ದು ಕಪ್ಪು ಬಣ್ಣದ ಹಾವು ಇದಾಗಿದೆ. ಉಗರ ತಜ್ಞಾರೊಬ್ಬರು ಈ ಹಾವು ಸೆರೆ ಸಿಕ್ಕಿದ್ದು, ಇದನ್ನ ನೋಡಲು ಜನ ಮುಗಿ ಬೀಳುತ್ತಿದ್ದಾರೆ.

ಬಿಜೆಪಿ ವಿರುದ್ಧ ಉದ್ಧವ್ ಗುಡುಗು: ಯಾರೇ ಒಬ್ಬ ವ್ಯಕ್ತಿ ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಎಂದರೆ ಆತ ‘ದೇಶದ್ರೋಹಿ’ ಎಂಬುದು ಬಿಜೆಪಿಯವರ ಭ್ರಮೆ ಅಂತ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಜೊತೆಗೆ ದೇಶದ ಬಗ್ಗೆ ಕೇವಲ ಬಿಜೆಪಿ ಮಾತ್ರವೇ ಕಾಳಜಿ ಹೊಂದಿದೆ ಎಂಬುದೂ ಸಹ ಭ್ರಮೆ ಎಂದಿದ್ದಾರೆ.

ನೋಡು ನೋಡುತ್ತಿದ್ದಂತೆ ಪ್ರಾಣ ಬಿಟ್ಟ..! ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ರೈಲಿನ ಮೇಲಿರುವ ವಿದ್ಯುತ್​ ತಂತಿ ಸ್ಪರ್ಶಿಸಿ ಯುವಕ ಸಾವನ್ನಪ್ಪಿದ್ದಾನೆ. ಕುಟುಂಬದ ವಿರೋಧದ ನಡುವೆ ವಿಹಾಹವಾದ ಪ್ರೇಮಿಗಳು ಊರಿಗೆ ಮರಳಲು ಹಣವಿಲ್ಲದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಲ್ಲಿ ಯುವತಿಯನ್ನ ರಕ್ಷಣೆ ಮಾಡಲಾಗಿದ್ದು, ಯುವಕ ವಿದ್ಯುತ್‌ ತಂತಿ ಹಿಡಿದ ಸಾವನ್ನಪ್ಪಿದ್ದಾನೆ. ರಕ್ಷಿಸಲು ಹೋದ ರೈಲ್ವೆ ಸಿಬ್ಬಂದಿ ಸಲ್ಪದರಲ್ಲಿ ಪಾರಾಗಿದ್ದಾರೆ.

ಕಾರ್ತಿಕ ಲಕ್ಷದೀಪತೋತ್ಸವದ ಸಂಭ್ರಮ: ಮದುರೈನ ಮೀನಾಕ್ಷಿ ಅಮ್ಮನ ದೇವಸ್ಥಾನದಲ್ಲಿ ಅದ್ಧೂರಿ ಕಾರ್ತಿಕ ಲಕ್ಷದೀಪತೋತ್ಸವ ನಡೆಯಿತು.. ಸಾವಿರಾರು ಭಕ್ತರು ಅಮ್ಮನ ದೇಗುಲದ ಆವರಣದಲ್ಲಿ ದೀಪ ಬೆಳಗಿಸಿ, ದೇವಿಯ ಕೃಪೆಗೆ ಪಾತ್ರರಾದ್ರು.

‘₹2000 ನೋಟು ರದ್ದು ಇಲ್ಲ’ ಕೇಂದ್ರ ಸರ್ಕಾರ 2 ಸಾವಿರ ಮುಖಬೆಲೆಯ ನೋಟುಗಳನ್ನ ಹಿಂಪಡೆಯಲಿದೆ ಅನ್ನೋ ವರದಿಗಳನ್ನ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ನಿರಾಕರಿಸಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 2 ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಲಾಗುತ್ತೆ ಅನ್ನೋ ಬಗ್ಗೆ ಚಿಂತಿಸಬೇಕಿಲ್ಲ ಎಂದಿದ್ದಾರೆ.

ಕಿಸಾನ್​ ಸಮ್ಮಾನ್​ಗೆ ಆಧಾರ್ ಕಡ್ಡಾಯ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿಯ ಪ್ರಯೋಜನ ಪಡೆಯಲು ಆಧಾರ್‌ ಸಂಖ್ಯೆ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ಹೊಂದಿರುವುದು ಕಡ್ಡಾಯ ಅಂತ ಕೇಂದ್ರ ಸರ್ಕಾರ ಹೇಳಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರವು ರೈತರ ಖಾತೆಗಳಿಗೆ ವರ್ಷದಲ್ಲಿ ತಲಾ 6,000 ರೂಪಾಯಿ ವರ್ಗಾವಣೆ ಮಾಡುತ್ತದೆ.