AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಹೆಮ್ಮೆಯ ಹಿಂದೂ, ನಾನು ಬೆಳೆದದ್ದು ಹೀಗೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್

ಯುನೈಟೆಡ್ ಕಿಂಗ್‌ಡಂನಲ್ಲಿ ಖಲಿಸ್ತಾನ್ ಪರ ಅಂಶಗಳನ್ನು ಒಳಗೊಂಡ ಘಟನೆಗಳ ಬಗ್ಗೆಯೂ ಸುನಕ್ ಮಾತನಾಡಿದ್ದಾರೆ. ಇದು ನಿಜವಾಗಿಯೂ ಪ್ರಮುಖ ಪ್ರಶ್ನೆಯಾಗಿದೆ. ಯುಕೆಯಲ್ಲಿ ಯಾವುದೇ ರೀತಿಯ ಉಗ್ರವಾದ ಅಥವಾ ಹಿಂಸಾಚಾರವು ಸ್ವೀಕಾರಾರ್ಹವಲ್ಲ ಎಂದು ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ.ಅದಕ್ಕಾಗಿಯೇ ನಾವು ವಿಶೇಷವಾಗಿ 'PKE' ಎಂಬ ಖಲಿಸ್ತಾನ್ ಉಗ್ರವಾದವನ್ನು ನಿಭಾಯಿಸಲು ಭಾರತ ಸರ್ಕಾರದೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ನಾನು ಹೆಮ್ಮೆಯ ಹಿಂದೂ, ನಾನು ಬೆಳೆದದ್ದು ಹೀಗೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್
ರಿಷಿ ಸುನಕ್
ರಶ್ಮಿ ಕಲ್ಲಕಟ್ಟ
|

Updated on:Sep 08, 2023 | 7:39 PM

Share

ದೆಹಲಿ ಸೆಪ್ಟೆಂಬರ್ 08: G20 ಶೃಂಗಸಭೆಯನ್ನು (G20 Summit) ಆಯೋಜಿಸಲು ಭಾರತ ಸರಿಯಾದ ಸಮಯದಲ್ಲಿ ಸರಿಯಾದ ದೇಶ ಎಂದು ಯುಕೆ ಪ್ರಧಾನಿ ರಿಷಿ ಸುನಕ್ (Rishi Sunak) ಶುಕ್ರವಾರ ಹೇಳಿದ್ದಾರೆ. ನಾವು ಎರಡು ದಿನಗಳು ಉತ್ತಮ ಚರ್ಚೆಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭಾವಿಸುತ್ತೇವೆ ಎಂದು ಜಿ 20 ಶೃಂಗಸಭೆಗಾಗಿ ನವದೆಹಲಿಗೆ ಆಗಮಿಸಿದ ನಂತರ ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ರಿಷಿ ಸುನಕ್ ಹೇಳಿದ್ದಾರೆ. ನಮ್ಮ ಎರಡು ದೇಶಗಳ ನಡುವೆ ಸಮಗ್ರ ಮತ್ತು ಮಹತ್ವಾಕಾಂಕ್ಷೆಯ ವ್ಯಾಪಾರ ಒಪ್ಪಂದವನ್ನು ನೋಡಲು ಮೋದಿ ಜಿ (Narendra Modi) ಮತ್ತು ನಾನು ಉತ್ಸುಕರಾಗಿದ್ದೇವೆ. ವ್ಯಾಪಾರ ಒಪ್ಪಂದಗಳು ಯಾವಾಗಲೂ ಸಮಯ ತೆಗೆದುಕೊಳ್ಳುತ್ತವೆ, ಅವರು ಎರಡೂ ದೇಶಗಳಿಗೆ ಕೆಲಸ ಮಾಡಬೇಕಾಗುತ್ತದೆ. ನಾವು ಅಗಾಧವಾದ ಪ್ರಗತಿಯನ್ನು ಸಾಧಿಸಿದ್ದರೂ ಇನ್ನೂ ಕಠಿಣ ಕೆಲಸವಿದ ಎಂದು ಸುನಕ್ ಭಾರತ-ಯುಕೆ ವ್ಯಾಪಾರ ಒಪ್ಪಂದದ ವಿಷಯದ ಬಗ್ಗೆ ಹೇಳಿದರು.

‘ಯುಕೆಯಲ್ಲಿ ಯಾವುದೇ ರೀತಿಯ ಉಗ್ರವಾದವನ್ನು ಒಪ್ಪಿಕೊಳ್ಳುವುದಿಲ್ಲ’

ಯುನೈಟೆಡ್ ಕಿಂಗ್‌ಡಂನಲ್ಲಿ ಖಲಿಸ್ತಾನ್ ಪರ ಅಂಶಗಳನ್ನು ಒಳಗೊಂಡ ಘಟನೆಗಳ ಬಗ್ಗೆಯೂ ಸುನಕ್ ಮಾತನಾಡಿದ್ದಾರೆ. ಇದು ನಿಜವಾಗಿಯೂ ಪ್ರಮುಖ ಪ್ರಶ್ನೆಯಾಗಿದೆ. ಯುಕೆಯಲ್ಲಿ ಯಾವುದೇ ರೀತಿಯ ಉಗ್ರವಾದ ಅಥವಾ ಹಿಂಸಾಚಾರವು ಸ್ವೀಕಾರಾರ್ಹವಲ್ಲ ಎಂದು ನಾನು ನಿಸ್ಸಂದಿಗ್ಧವಾಗಿ ಹೇಳುತ್ತೇನೆ. ಅದಕ್ಕಾಗಿಯೇ ನಾವು ವಿಶೇಷವಾಗಿ ‘PKE’ ಎಂಬ ಖಲಿಸ್ತಾನ್ ಉಗ್ರವಾದವನ್ನು ನಿಭಾಯಿಸಲು ಭಾರತ ಸರ್ಕಾರದೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಉಗ್ರವಾದ ಸರಿಯಲ್ಲ, ಅದನ್ನು ನಾವು ಒಪ್ಪಿಕೊಳ್ಳಲ್ಲ ಎಂದು ಅವರು ಹೇಳಿದರು.

ನಮ್ಮ ಭದ್ರತಾ ಸಚಿವರು ಇತ್ತೀಚೆಗೆ ಭಾರತದಲ್ಲಿ ತಮ್ಮ ಸಹವರ್ತಿಗಳೊಂದಿಗೆ ಮಾತನಾಡುತ್ತಿದ್ದರು. ನಾವು ಗುಪ್ತಚರ ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವ ಗುಂಪುಗಳನ್ನು ಹೊಂದಿದ್ದೇವೆ ಇದರಿಂದ ನಾವು ಈ ರೀತಿಯ ಹಿಂಸಾತ್ಮಕ ಉಗ್ರವಾದವನ್ನು ಬೇರುಸಹಿತ ಕಿತ್ತೊಗೆಯಬಹುದು ಎಂದಿದ್ದಾರೆ ರಿಷಿ ಸುನಕ್.

ಯುನೈಟೆಡ್ ಕಿಂಗ್‌ಡಂನಲ್ಲಿ ಖಲಿಸ್ತಾನಿ ಪರ ಉಗ್ರಗಾಮಿಗಳ ಹೆಚ್ಚುತ್ತಿರುವ ಚಟುವಟಿಕೆಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಈ ವರ್ಷದ ಮಾರ್ಚ್‌ನಲ್ಲಿ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ದಾಳಿ ನಡೆದಿತ್ತು.

ಮೋದಿ ಬಗ್ಗೆ ಅಪಾರ ಗೌರವ

ಯುಕೆ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು. ಅವರು ವೈಯಕ್ತಿಕವಾಗಿ ತುಂಬಾ ಆತ್ಮೀಯರು ಎಂದು ಹೇಳಿದ್ದಾರೆ. ನಾವು ಭಾರತ ಮತ್ತು ಯುಕೆ ನಡುವೆ ಮಹತ್ವಾಕಾಂಕ್ಷೆಯ ಮತ್ತು ಸಮಗ್ರ ವ್ಯಾಪಾರ ಒಪ್ಪಂದ ಬಗ್ಗೆ ನಮ್ಮಿಬ್ಬರ ಮಹತ್ವಾಕಾಂಕ್ಷೆಯ ಮೇಲೆ ನಾನು ಹೇಳಿದಂತೆ ತುಂಬಾ ಶ್ರಮಿಸುತ್ತಿದ್ದೇವೆ, ಏಕೆಂದರೆ ನಾವಿಬ್ಬರೂ ಅದು ಒಳ್ಳೆಯದು ಎಂದು ಭಾವಿಸುತ್ತೇವೆ ಮತ್ತು ನಾವಿಬ್ಬರೂ ಖಚಿತಪಡಿಸಿಕೊಳ್ಳಬೇಕು. ಇದು ನಮ್ಮ ಎರಡು ದೇಶಗಳಿಗೆ ಕೆಲಸ ಮಾಡುತ್ತದೆ. ಈ ರೀತಿಯ ವೇದಿಕೆಗಳಲ್ಲಿ, ಈ ಜಿ 20 ಭಾರತಕ್ಕೆ ಅಗಾಧವಾದ ಯಶಸ್ಸು ಎಂದು ಖಚಿತಪಡಿಸಿಕೊಳ್ಳುವಲ್ಲಿ ಪ್ರಧಾನಿ ಮೋದಿಯನ್ನು ಬೆಂಬಲಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಅವರು ಹೇಳಿದರು.

‘ಭಾರತವು ಅಂತರರಾಷ್ಟ್ರೀಯ ಕಾನೂನಿನ ನಿಯಮದ ಬಗ್ಗೆ ಸರಿಯಾಗಿ ಕಾಳಜಿ ವಹಿಸುತ್ತದೆ’

ರಷ್ಯಾ-ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವಿನ ವಿಷಯದ ಕುರಿತು ಮಾತನಾಡಿದ ಸುನಕ್, ಅಂತರರಾಷ್ಟ್ರೀಯ ವಿಷಯಗಳಲ್ಲಿ ಯಾವ ನಿಲುವುಗಳನ್ನು ತೆಗೆದುಕೊಳ್ಳಬೇಕೆಂದು ಭಾರತಕ್ಕೆ ನಾನು ಹೇಳಬೇಕಾಗಿಲ್ಲ. ಆದರೆ ಭಾರತವು ಅಂತರರಾಷ್ಟ್ರೀಯ ಕಾನೂನಿನ ನಿಯಮ, ಯುಎನ್ ಚಾರ್ಟರ್ ಬಗ್ಗೆ ಸರಿಯಾಗಿ ಕಾಳಜಿ ವಹಿಸುತ್ತದೆ ಎಂದು ನನಗೆ ತಿಳಿದಿದೆ. ಪ್ರಾದೇಶಿಕ ಸಮಗ್ರತೆಗೆ ಗೌರವ ಅದು ನಾವೆಲ್ಲರೂ ಹಂಚಿಕೊಳ್ಳುವ ಸಾರ್ವತ್ರಿಕ ಮೌಲ್ಯಗಳು ಎಂದು ನಾನು ಭಾವಿಸುತ್ತೇನೆ. ನಾನು ನಂಬುವ ವಿಷಯಗಳಿವೆ, ಭಾರತವು ಸಹ ಆ ವಿಷಯಗಳನ್ನು ನಂಬುತ್ತದೆ ಎಂದು ರಿಷಿ ಹೇಳಿದ್ದಾರೆ.

‘ನಾನು ಹೆಮ್ಮೆಯ ಹಿಂದೂ’

ಹಿಂದೂ ಮೂಲದ ಮೊದಲ ಬ್ರಿಟಿಷ್ ಪ್ರಧಾನಿ ಸುನಕ್ ಕ ಹಿಂದೂ ಧರ್ಮದ ಬಗ್ಗೆ ಮಾತನಾಡಿದರು. “ನಾನು ಹೆಮ್ಮೆಯ ಹಿಂದೂ, ನಾನು ಬೆಳೆದದ್ದು ಹೀಗೆ. ನಾನು ಹೀಗೇ ಇದ್ದೇನೆ. ಮುಂದಿನ ಒಂದೆರಡು ದಿನಗಳಲ್ಲಿ ಇಲ್ಲಿರುವಾಗ ಮಂದಿರಕ್ಕೆ ಭೇಟಿ ನೀಡಬಹುದು. ನಾವು ರಕ್ಷಾ ಬಂಧನ ಆಚರಿಸುತ್ತೇನೆ. ಆದ್ದರಿಂದ ನನ್ನ ಸಹೋದರಿ ಮತ್ತು ನನ್ನ ಸೋದರಸಂಬಂಧಿಗಳಿಂದ ಕಟ್ಟಿದ ಎಲ್ಲಾ ರಾಖಿಗಳಿವೆ. ಜನ್ಮಾಷ್ಟಮಿಯನ್ನು ಆಚರಿಸಲು ನನಗೆ ಸಮಯವಿರಲಿಲ್ಲ.

ನಾವು ಈ ಬಾರಿ ಮಂದಿರಕ್ಕೆ ಭೇಟಿ ನೀಡಿದರೆ ನಾನು ಅದನ್ನು ಸರಿದೂಗಿಸಬಹುದು ಎಂದು ನಾನು ಹೇಳಿದೆ. ಆದರೆ ಇದು ನನಗೆ ಮುಖ್ಯವಾದ ವಿಷಯ. ನಂಬಿಕೆಯು ತಮ್ಮ ಜೀವನದಲ್ಲಿ ನಂಬಿಕೆಯನ್ನು ಹೊಂದಿರುವ ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ, ವಿಶೇಷವಾಗಿ ನನ್ನಂತೆ ನೀವು ಈ ಒತ್ತಡದ ಕೆಲಸಗಳನ್ನು ಹೊಂದಿರುವಾಗ. ನಿಮಗೆ ಸ್ಟೆಬಿಲಿಟಿ ನೀಡಲು, ನಿಮಗೆ ಶಕ್ತಿಯನ್ನು ನೀಡಲು ನಂಬಿಕೆ ಮುಖ್ಯ ಎಂದಿದ್ದಾರೆ ಅವರು,.

“ನಾನು ಭಾರತಕ್ಕೆ ಹಿಂತಿರುಗಿರುವುದು ವೈಯಕ್ತಿಕವಾಗಿ ನಂಬಲಾಗದಷ್ಟು ವಿಶೇಷವಾಗಿದೆ. ಇದು ನಾನು ತುಂಬಾ ಪ್ರೀತಿಸುವ ದೇಶ, ನನ್ನ ಕುಟುಂಬದಿಂದ ಬಂದ ದೇಶ. ಆದರೆ ನಾನು ಯುಕೆ ಪ್ರತಿನಿಧಿಸಲು ಇಲ್ಲಿಗೆ ಬಂದಿದ್ದೇನೆ. ಭಾರತದೊಂದಿಗೆ ನಿಕಟ ಸಂಪರ್ಕಗಳನ್ನು ಬೆಸೆಯುವ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ಭಾರತದಲ್ಲಿ G20 ಯಶಸ್ವಿಗಾಗಿ ಇಲ್ಲಿಗೆ ಬಂದಿದ್ದೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:36 pm, Fri, 8 September 23

Follow Us
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
PM Modi Speech in WITT Live: ಟಿವಿ9​​ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಬಾಗಲಕೋಟೆ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಸೀಕ್ರೆಟ್ ಬಿಚ್ಚಿಟ್ಟ ಸಿಎಂ
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್:
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ: ದಾವಣಗೆರೆ ಅಖಾಡಕ್ಕಿಳಿದ ಪೈಲ್ವಾನ್!
ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!
ಎಸ್‌ಪಿ ಅಸ್ಲಾಂ ಸಾವಿನ ದೃಶ್ಯದ ಹಿಂದೆ ಅಡಗಿದೆ 2014ರ ಭೀಕರ ನೈಜ ಘಟನೆ!