ಮಮತಾ ಬ್ಯಾನರ್ಜಿಯವರ ಚಿ-ಚಿ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್​​​ನ್ನು ತರಾಟೆಗೆ ತೆಗೆದುಕೊಂಡ ನಿರ್ಮಲಾ ಸೀತಾರಾಮನ್

|

Updated on: Feb 10, 2023 | 10:26 PM

"ನೆಲ್ಲಿ ಚಿ, ಚಿ, ಚಿ... ನೆಲ್ಲಿಯಲ್ಲಿ ಏನಾಯಿತು, ಅದನ್ನು ಮಮತಾ ಬ್ಯಾನರ್ಜಿಯವರ ಕವಿತೆಯಂತೆಯೇ ಚಿ, ಚಿ, ಚಿ ಎಂದು ಖಂಡಿಸಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ

ಮಮತಾ ಬ್ಯಾನರ್ಜಿಯವರ ಚಿ-ಚಿ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್​​​ನ್ನು ತರಾಟೆಗೆ ತೆಗೆದುಕೊಂಡ ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Follow us on

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ(Mamata Banerjee) ‘ಚಿ-ಚಿ’ ಹೇಳಿಕೆ ಉಲ್ಲೇಖಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) 1983ರಲ್ಲಿ ನಡೆದ ನೆಲ್ಲಿ ಹತ್ಯಾಕಾಂಡಕ್ಕಾಗಿ(1983 Nellie massacre) ಕಾಂಗ್ರೆಸ್ ಅನ್ನು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜ್ಯಸಭೆಯ ಭಾಷಣದಲ್ಲಿ ಇಂದಿರಾಗಾಂಧಿಯನ್ನು ಉಲ್ಲೇಖಿಸಿದ್ದರು. ಶುಕ್ರವಾರ ಲೋಕಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡಾ ತಮ್ಮ ಭಾಷಣದಲ್ಲಿ ಇಂದಿರಾ ಗಾಂಧಿಯವರನ್ನು ಉಲ್ಲೇಖಿಸಿದ್ದಾರೆ. 1983ರ ವಿಧಾನಸಭಾ ಚುನಾವಣೆಗೆ ಮುನ್ನ ಅಸ್ಸಾಂನಲ್ಲಿ ನಡೆದ ಹಿಂಸಾಚಾರಕ್ಕೆ  ವಿತ್ತ ಸಚಿವೆ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿಯನ್ನು ಟೀಕಿಸಿದ್ದಾರೆ.

ಆ ಸಮಯದಲ್ಲಿ ಬಜೆಟ್‌ನಲ್ಲಿ ಹೆಚ್ಚಿನ ಸಂಖ್ಯೆಗಳನ್ನು ಮಾಡಲಾಗಿತ್ತು. ಆದರೆ ಅಸ್ಸಾಂನ ನೆಲ್ಲಿಯಲ್ಲಿ ಹತ್ಯಾಕಾಂಡವು ಇನ್ನೂ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಸಂಭವಿಸಿದೆ. ಇದು ಹೇಗಾಯಿತು? ಅವರು (ಕಾಂಗ್ರೆಸ್) ಅದರ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುತ್ತಾರೆಯೇ? ಎಂದು 1984 ರ ಸಿಖ್ ದಂಗೆಗಳ ಉಲ್ಲೇಖ ಮಾಡಿ ನಿರ್ಮಲಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಯಾರು ಅಮ್ಮನ ಅಜ್ಜನ ಸರ್​​ನೇಮ್​​ ಬಳಸುತ್ತಾರೆ?: ನೆಹರು ಉಪನಾಮ ಬಗ್ಗೆ ಮೋದಿ ಪ್ರಶ್ನೆಗೆ ಕಾಂಗ್ರೆಸ್ ಪ್ರತಿಕ್ರಿಯೆ

“ನೆಲ್ಲಿ ಚಿ, ಚಿ, ಚಿ… ನೆಲ್ಲಿಯಲ್ಲಿ ಏನಾಯಿತು, ಅದನ್ನು ಮಮತಾ ಬ್ಯಾನರ್ಜಿಯವರ ಕವಿತೆಯಂತೆಯೇ ಚಿ, ಚಿ, ಚಿ ಎಂದು ಖಂಡಿಸಬೇಕು” ಎಂದು ವಿತ್ತ ಸಚಿವೆ ಹೇಳಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯಿದೆ, 2019 ಹೊತ್ತಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಿಸುವಾಗ ಮಮತಾ ಬ್ಯಾನರ್ಜಿ ‘ಚಿ-ಚಿ’ ಎಂದು ಹೇಳಿದ್ದರು.

ಪ್ರಸಕ್ತ ಬಜೆಟ್‌ನಲ್ಲಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಾಯಸ್’ ನಿರೂಪಣೆಯನ್ನು ಪುನರುಚ್ಚರಿಸಿದ ನಿರ್ಮಲಾ, 1966 ರಲ್ಲಿ ಎಂಟು ಸಾಧುಗಳ ಸಾವಿಗೆ ಕಾರಣವಾದ ಗೋಹತ್ಯೆಯ ವಿರುದ್ಧದ ಆಂದೋಲನದ ಸಮಯದಲ್ಲಿ ಕಾಂಗ್ರೆಸ್ ಸರ್ಕಾರದ ಪಾತ್ರವನ್ನು ಟೀಕಿಸಿದ್ದಾರೆ.”1966 ರಲ್ಲಿ ಸಂಸತ್ತಿನ ಹೊರಗೆ ಗೋಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಕೊಂದದ್ದು ಕಾಂಗ್ರೆಸ್” ಎಂದು ನಿರ್ಮಲಾ ಗುಡುಗಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ