AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಗಂಭೀರ ಕಾಳಜಿಯ ವಿಷಯ: ರಹಸ್ಯ ವರದಿಗಳನ್ನು ಬಹಿರಂಗ ಮಾಡಿದ ಸುಪ್ರೀಂಕೋರ್ಟ್ ಬಗ್ಗೆ ಕಿರಣ್ ರಿಜಿಜು ಕಿಡಿ

ಸಾರ್ವಜನಿಕ ಡೊಮೇನ್‌ನಲ್ಲಿ RAW ಅಥವಾ IB ಯ ರಹಸ್ಯ ಮತ್ತು ಸೂಕ್ಷ್ಮ ವರದಿಗಳನ್ನು ಹಾಕುವುದು ಗಂಭೀರ ಕಾಳಜಿಯ ವಿಷಯವಾಗಿದೆ, ಅದಕ್ಕೆ ನಾನು ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸುತ್ತೇನೆ. ಇಂದು ಸೂಕ್ತ ಸಮಯವಲ್ಲ" ಎಂದು ಕಾನೂನು ಸಚಿವರು ಸುದ್ದಿಗಾರರಿಗೆ ಹೇಳಿದ್ದಾರೆ.

ಇದು ಗಂಭೀರ ಕಾಳಜಿಯ ವಿಷಯ: ರಹಸ್ಯ ವರದಿಗಳನ್ನು ಬಹಿರಂಗ ಮಾಡಿದ ಸುಪ್ರೀಂಕೋರ್ಟ್ ಬಗ್ಗೆ ಕಿರಣ್ ರಿಜಿಜು ಕಿಡಿ
ಕಿರಣ್ ರಿಜಿಜು
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jan 24, 2023 | 5:30 PM

Share

ದೆಹಲಿ: ನ್ಯಾಯಾಂಗ ನೇಮಕಾತಿಯ ವಿವಾದದ  ನಡುವೆಯೇ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (Kiren Rijiju) ಮಂಗಳವಾರ ನ್ಯಾಯಾಧೀಶರಿಗೆ ಶಿಫಾರಸು ಮಾಡಲಾದ ಅಭ್ಯರ್ಥಿಗಳ ಬಗ್ಗೆ ಸರ್ಕಾರದ ಆಕ್ಷೇಪಣೆಗಳನ್ನು ಸುಪ್ರೀಂಕೋರ್ಟ್ (Supreme Court) ಬಹಿರಂಗಗೊಳಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳೆದ ವಾರ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ನ್ಯಾಯಾಧೀಶರ ಸ್ಥಾನಕ್ಕಿರುವ ಮೂವರು ಅಭ್ಯರ್ಥಿಗಳ ಬಗ್ಗೆ ಸರ್ಕಾರದ ಆಕ್ಷೇಪಣೆಗಳನ್ನು ಪ್ರಕಟಿಸಿತ್ತು.ಸರ್ಕಾರದೊಂದಿಗಿನ ಜಗಳದ ನಡುವೆಯೇಗುಪ್ತಚರ ಸಂಸ್ಥೆಗಳಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಮತ್ತು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಸಾರ್ವಜನಿಕ ದಾಖಲೆಗಳನ್ನೂ ಸುಪ್ರೀಂ ಪ್ರಕಟಿಸಿತ್ತು. ಈ ಬಗ್ಗೆ “ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸುವೆ” ಎಂದು ಹೇಳಿದ ರಿಜಿಜು, ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

“ಸಾರ್ವಜನಿಕ ಡೊಮೇನ್‌ನಲ್ಲಿ RAW ಅಥವಾ IB ಯ ರಹಸ್ಯ ಮತ್ತು ಸೂಕ್ಷ್ಮ ವರದಿಗಳನ್ನು ಹಾಕುವುದು ಗಂಭೀರ ಕಾಳಜಿಯ ವಿಷಯವಾಗಿದೆ, ಅದಕ್ಕೆ ನಾನು ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸುತ್ತೇನೆ. ಇಂದು ಸೂಕ್ತ ಸಮಯವಲ್ಲ” ಎಂದು ಕಾನೂನು ಸಚಿವರು ಸುದ್ದಿಗಾರರಿಗೆ ಹೇಳಿದ್ದಾರೆ.

ಸಂಬಂಧಪಟ್ಟ ಅಧಿಕಾರಿಯು ದೇಶಕ್ಕಾಗಿ ಮಾರುವೇಷದಲ್ಲಿ ಅಥವಾ ರಹಸ್ಯವಾಗಿ ಅತ್ಯಂತ ರಹಸ್ಯವಾದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರೆ, ನಾಳೆ ತನ್ನ ವರದಿಯನ್ನು ಸಾರ್ವಜನಿಕ ಡೊಮೇನ್‌ಗೆ ಹಾಕಿದರೆ ಅವನು ಎರಡು ಬಾರಿ ಯೋಚಿಸುತ್ತಾನೆ. ಇದು ಪರಿಣಾಮ ಬೀರುತ್ತದೆ. ಆದ್ದರಿಂದ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ ರಿಜಿಜು.

ಇದನ್ನು ಮುಖ್ಯ ನ್ಯಾಯಮೂರ್ತಿಗಳ ಬಳಿ ಹೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಖ್ಯ ನ್ಯಾಯಮೂರ್ತಿಗಳು ಮತ್ತು ನಾನು ಆಗಾಗ ಭೇಟಿಯಾಗುತ್ತೇವೆ. ನಾವು ಯಾವಾಗಲೂ ಸಂಪರ್ಕದಲ್ಲಿದ್ದೇವೆ. ಅವರು ನ್ಯಾಯಾಂಗದ ಮುಖ್ಯಸ್ಥರು, ನಾನು ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಸೇತುವೆಯಾಗಿದ್ದೇನೆ. . ನಾವು ಒಟ್ಟಿಗೆ ಕೆಲಸ ಮಾಡಬೇಕು ನಾವು ಪ್ರತ್ಯೇಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇದು ವಿವಾದಾತ್ಮಕ ವಿಷಯವಾಗಿದೆ. ಅದನ್ನು ಇನ್ನೊಮ್ಮೆ ಮಾತಾಡೋಣ ಎಂದಿದ್ದಾರೆ.

ಇದನ್ನೂ ಓದಿ:Republic Day 2023 Dressing Ideas: ಗಣರಾಜ್ಯೋತ್ಸವದ ದಿನ ಸ್ಪೆಷಲ್ ಆಗಿ ಕಾಣಬೇಕಾ?; ಇಲ್ಲಿವೆ ಕೆಲವು ಡ್ರೆಸಿಂಗ್ ಐಡಿಯಾ

ಜನವರಿ 19 ರಂದು, ಸಲಿಂಗಕಾಮಿ ವಕೀಲರೊಬ್ಬರು ಸೇರಿದಂತೆ ಮೂವರು ಅಭ್ಯರ್ಥಿಗಳನ್ನು ನ್ಯಾಯಾಧೀಶರನ್ನಾಗಿ ಬಡ್ತಿ ಮಾಡುವ ಬಗ್ಗೆ ಸರ್ಕಾರದ ಆಕ್ಷೇಪಣೆಗಳನ್ನು ಸುಪ್ರೀಂಕೋರ್ಟ್ ಸಾರ್ವಜನಿಕವಾಗಿ ಅಪ್ಲೋಡ್ ಮಾಡಿತ್ತು.

ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವಿನ ತೀವ್ರ ತಿಕ್ಕಾಟ ನಡೆಯುತ್ತಿದೆ. 1993 ರಿಂದ ಸುಪ್ರೀಂಕೋರ್ಟ್ ಕೊಲಿಜಿಯಂ ಅಥವಾ ಹಿರಿಯ ನ್ಯಾಯಾಧೀಶರ ಸಮಿತಿಯ ಡೊಮೇನ್ ಆಗಿರುವ ನ್ಯಾಯಾಧೀಶರ ನೇಮಕಾತಿಯಲ್ಲಿ ಹೆಚ್ಚಿನ ಪಾತ್ರಕ್ಕಾಗಿ ಸರ್ಕಾರವು ಒತ್ತಾಯಿಸುತ್ತಿದೆ.

ಶಾಸಕಾಂಗವು ಜನರ ಇಚ್ಛೆಯನ್ನು ಪ್ರತಿನಿಧಿಸುವುದರಿಂದ ಅದು ಸರ್ವೋಚ್ಚವಾಗಿದೆ ಎಂದು ಸರ್ಕಾರ ವಾದಿಸುತ್ತದೆ. ಕೊಲಿಜಿಯಂ ವ್ಯವಸ್ಥೆ ನೆಲದ ಕಾನೂನು ಎಂದು ಸುಪ್ರೀಂಕೋರ್ಟ್ ಹೇಳಿದೆ, ಅದನ್ನು ಅನುಸರಿಸಬೇಕು.

ನ್ಯಾಯಾಧೀಶರ ನೇಮಕಾತಿಯಲ್ಲಿ ಪಾರದರ್ಶಕತೆಯ ಕೊರತೆಯ ಬಗ್ಗೆ ರಿಜಿಜು ಆಗಾಗ್ಗೆ ಮಾತನಾಡುತ್ತಿದ್ದರು. ನಿನ್ನೆ, ನ್ಯಾಯಾಧೀಶರು ಸಾರ್ವಜನಿಕ ಪರಿಶೀಲನೆಯನ್ನು ಎದುರಿಸುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಗತ್ಯವಿಲ್ಲ ಎಂದು ಹೇಳಿದರು.  ಜನರು ನಿಮ್ಮನ್ನು ನೋಡುತ್ತಿದ್ದಾರೆ. ನಿಮ್ಮನ್ನು ನಿರ್ಣಯಿಸುತ್ತಿದ್ದಾರೆ. ನಿಮ್ಮ ತೀರ್ಪುಗಳು, ನಿಮ್ಮ ಕೆಲಸದ ಪ್ರಕ್ರಿಯೆ, ನೀವು ಹೇಗೆ ನ್ಯಾಯ ನೀಡುತ್ತೀರಿ ಎಂಬುದನ್ನು ಜನರು ನೋಡಬಹುದು ಮತ್ತು ನಿರ್ಣಯಿಸಬಹುದು. ಅವರು ಅಭಿಪ್ರಾಯ ಹೇಳುತ್ತಾರೆ ಎಂದು ಕಾನೂನು ಸಚಿವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ