AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajeev Chandrasekhar: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್ ಖಾತೆಯ ಬ್ಲ್ಯೂಟಿಕ್​ ಬ್ಯಾಡ್ಜ್​ ಮಾಯ..; ಕಾರಣ ಸ್ಪಷ್ಟಪಡಿಸಿದ ಟ್ವಿಟರ್​

ಸದ್ಯ ಭಾರತದಲ್ಲಿ ಕೇಂದ್ರ ಸರ್ಕಾರದ ಐಟಿ ನಿಯಮಗಳ ಪಾಲನೆ ಸಂಬಂಧಪಟ್ಟು ಟ್ವಿಟರ್​ ಮತ್ತು ಕೇಂದ್ರದ ನಡುವೆ ಕೆಲವು ತಿಕ್ಕಾಟಗಳು ನಡೆಯುತ್ತಿವೆ. ಟ್ವಿಟರ್ ಇಂಡಿಯಾದ ಕುಂದುಕೊರತೆ ಸ್ಥಾನಿಕ ಅಧಿಕಾರಿಯನ್ನಾಗಿ ಟ್ವಿಟರ್​ ವಿನಯ್​ ಪ್ರಕಾಶ್​ ಅವರನ್ನು ನಿನ್ನೆಯಷ್ಟೇ ನೇಮಕ ಮಾಡಿದೆ.

Rajeev Chandrasekhar: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್ ಖಾತೆಯ ಬ್ಲ್ಯೂಟಿಕ್​ ಬ್ಯಾಡ್ಜ್​ ಮಾಯ..; ಕಾರಣ ಸ್ಪಷ್ಟಪಡಿಸಿದ ಟ್ವಿಟರ್​
ರಾಜೀವ್ ಚಂದ್ರಶೇಖರ್
TV9 Web
| Edited By: |

Updated on: Jul 12, 2021 | 3:14 PM

Share

ಇತ್ತೀಚೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಆರ್​ಎಸ್​ಎಸ್​ನ ಕೆಲವು ಮುಖಂಡರ ಟ್ವಿಟರ್ (Twitter) ಖಾತೆಯ ದೃಢೀಕರಣ ಬ್ಯಾಡ್ಜ್​ ಬ್ಲ್ಯೂಟಿಕ್​ನ್ನು ತೆಗೆದು ಹಾಕುವ ಮೂಲಕ ಟ್ವಿಟರ್​ ವಿವಾದ ಸೃಷ್ಟಿಸಿತ್ತು. ಇದೀಗ ನೂತನ ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​​ ( Rajeev Chandrasekhar) ಅವರ ಖಾತೆಯ ಬ್ಲ್ಯೂಟಿಕ್ (blue tick) ​ನ್ನು ಟ್ವಿಟರ್​ ತೆಗೆದು ಹಾಕಿದೆ. ವಿದ್ಯುತ್​ – ತಂತ್ರಜ್ಞಾನ ಮತ್ತು ಕೌಶಲ ಅಭಿವೃದ್ಧಿ ರಾಜ್ಯ ಖಾತೆ ಸಚಿವ ರಾಜೀವ್​ ಚಂದ್ರಶೇಖರ್​ ಅವರ ಟ್ವಿಟರ್​ ಅಕೌಂಟ್​ನಲ್ಲಿ ಹೆಸರು ಬದಲಾವಣೆ ಆಗಿರುವ ಕಾರಣಕ್ಕೆ ನೀಲಿ ಟಿಕ್​​ನ್ನು ತೆಗೆದಿದ್ದಾಗಿ ಟ್ವಿಟರ್​ ಸ್ಪಷ್ಟನೆ ನೀಡಿದೆ.

ಇಷ್ಟುದಿನ ರಾಜ್ಯ ಸಭಾ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್​ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್​​ನಲ್ಲಿ ಸ್ಥಾನ ಪಡೆದು ಕೇಂದ್ರ ಮಂತ್ರಿಯಾಗಿದ್ದಾರೆ. ಈ ಹಿಂದೆ ಅವರು Rajeev MP ಹೆಸರಿನಲ್ಲಿ ಟ್ವಿಟರ್​ ಅಕೌಂಟ್​ ಹೊಂದಿದ್ದರು. ಆದರೀಗ Rajeev_GOI ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ಟ್ವಿಟರ್​ನ ದೃಢೀಕರಣ ನೀತಿ ಅನ್ವಯ ಯಾವುದೇ ಬಳಕೆದಾರ ಬ್ಲ್ಯೂಟಿಕ್​ ಪಡೆಯುವಾಗ ಇರುವ ಹೆಸರನ್ನು ಮಧ್ಯದಲ್ಲಿ ಯಾವಾಗಲಾದರೂ ಬದಲಿಸಿದರೆ ಕೂಡಲೇ ಟ್ವಿಟರ್​ ಅವರಿಗೆ ನೀಡಲಾದ ಬ್ಲ್ಯೂಟಿಕ್​ ಬ್ಯಾಡ್ಜ್​​ನ್ನು ತೆಗೆದುಹಾಕುತ್ತದೆ. ಅಷ್ಟೇ ಅಲ್ಲ, ಬ್ಲ್ಯೂಟಿಕ್​ ಬ್ಯಾಡ್ಜ್​ ಪಡೆದ ಬಳಕೆದಾರರ ಖಾತೆಗಳು ಸದಾ ಸಕ್ರಿಯವಾಗಿ ಇರಬೇಕಾಗುತ್ತದೆ. ಹಾಗೊಮ್ಮೆ ಆರು ತಿಂಗಳ ಕಾಲ ನಿಷ್ಕ್ರಿಯವಾದರೆ ಅವರ ಅಕೌಂಟ್​​ಗೆ ನೀಡಲಾಗಿದ್ದ ಬ್ಲ್ಯೂಟಿಕ್​​ನ್ನು ತೆಗೆದುಹಾಕುತ್ತದೆ.

ಸದ್ಯ ಭಾರತದಲ್ಲಿ ಕೇಂದ್ರ ಸರ್ಕಾರದ ಐಟಿ ನಿಯಮಗಳ ಪಾಲನೆ ಸಂಬಂಧಪಟ್ಟು ಟ್ವಿಟರ್​ ಮತ್ತು ಕೇಂದ್ರದ ನಡುವೆ ಕೆಲವು ತಿಕ್ಕಾಟಗಳು ನಡೆಯುತ್ತಿವೆ. ಟ್ವಿಟರ್ ಇಂಡಿಯಾದ ಕುಂದುಕೊರತೆ ಸ್ಥಾನಿಕ ಅಧಿಕಾರಿಯನ್ನಾಗಿ ಟ್ವಿಟರ್​ ವಿನಯ್​ ಪ್ರಕಾಶ್​ ಅವರನ್ನು ನಿನ್ನೆಯಷ್ಟೇ ನೇಮಕ ಮಾಡಿದ್ದು, ಸದ್ಯದಲ್ಲಿ ಭಾರತದಲ್ಲಿ ಟ್ವಿಟರ್ ಸಂಪರ್ಕ ಕಚೇರಿಯೊಂದು ನಿರ್ಮಾಣವಾಗಲಿದೆ ಎಂದೂ ತಿಳಿಸಿದೆ.

ಇದನ್ನೂ ಓದಿ: Twitter India: ಭಾರತದಲ್ಲಿ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ವಿನಯ್ ಪ್ರಕಾಶ್​ರನ್ನು ನೇಮಕ ಮಾಡಿದ ಟ್ವಿಟರ್​

Union Minister Rajeev Chandrasekhar loses blue tick Of his Twitter Account

Follow Us
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ ಯುವಕ; ಊರ ಜನರಿಗೆ ಹೋಳಿಗೆ ಊಟ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
ಬಿಜೆಪಿ ಪಾದಯಾತ್ರೆಗೆ ಅಸಲಿ ಕಾರಣ ಬಿಚ್ಚಿಟ್ಟ ವಿಜಯೇಂದ್ರ!
Live: ಬಿಜೆಪಿ ಪಾದಯಾತ್ರೆಗೆ ಚಾಲನೆ ನೇರಪ್ರಸಾರ
Live: ಬಿಜೆಪಿ ಪಾದಯಾತ್ರೆಗೆ ಚಾಲನೆ ನೇರಪ್ರಸಾರ
ನಾಗೇಂದ್ರ ಆಯ್ತು, ಇನ್ನೊಂದು ವಿಕೆಟ್ ಪತನವಾಗುತ್ತೆ: ಆರ್ ಅಶೋಕ್
ನಾಗೇಂದ್ರ ಆಯ್ತು, ಇನ್ನೊಂದು ವಿಕೆಟ್ ಪತನವಾಗುತ್ತೆ: ಆರ್ ಅಶೋಕ್