
ಉತ್ತರ ಪ್ರದೇಶದ ಗಾಜಿಯಾಬಾದ್ನ ಮನೆಯೊಂದರ ಶೌಚಾಲಯದ ಪೈಪ್ನಲ್ಲಿ 6 ತಿಂಗಳ ಭ್ರೂಣ ಸಿಲುಕಿರುವ ಘಟನೆ ವರದಿಯಾಗಿದೆ. ಮನೆಯ ಮಾಲೀಕ ದೇವೇಂದ್ರ ಅಲಿಯಾಸ್ ದೇವ ಎಂಬಾತ ಪೈಪ್ ಒಡೆದು ಭ್ರೂಣವನ್ನು ಹೊರತೆಗೆದಿದ್ದಾನೆ.
ಮಾಹಿತಿ ಪಡೆದ ಇಂದಿರಾಪುರಂ ಪೊಲೀಸರು ಸ್ಥಳಕ್ಕಾಗಮಿಸಿ ಜಮೀನು ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ್ದು, ಬೆಳಗ್ಗೆ ಪೈಪ್ನಲ್ಲಿ ನೀರು ನಿಂತಿದ್ದರಿಂದ ಪೈಪ್ ಕಟ್ ಆಗಿದ್ದು, ಪೈಪ್ನಲ್ಲಿ ಭ್ರೂಣ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಅವರ ಮನೆಯಲ್ಲಿ ಒಂಬತ್ತು ಬಾಡಿಗೆದಾರರು ವಾಸಿಸುತ್ತಿದ್ದಾರೆ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಯಾರು ಅಪರಾಧ ಮಾಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಾಡಿಗೆದಾರರ ಡಿಎನ್ಎಯನ್ನು ಭ್ರೂಣದ ಡಿಎನ್ಎಯೊಂದಿಗೆ ಹೊಂದಿಸಲಾಗುವುದು ಎಂದು ಇಂದಿರಾಪುರಂ ಸಹಾಯಕ ಪೊಲೀಸ್ ಕಮಿಷನರ್ ಸ್ವತಂತ್ರ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ನಂತರ ಪೊಲೀಸರು ಮನೆ ಮಾಲೀಕರು ಮತ್ತು ಮನೆಯಲ್ಲಿ ವಾಸಿಸುತ್ತಿದ್ದ ಬಾಡಿಗೆದಾರರನ್ನು ವಿಚಾರಣೆಗೆ ಒಳಪಡಿಸಿದರು. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಭ್ರೂಣವನ್ನು ಸುರಕ್ಷಿತವಾಗಿ ಇರಿಸಲಾಗಿದೆ.
ಮತ್ತಷ್ಟು ಓದಿ: ಭ್ರೂಣ ಲಿಂಗ ಪತ್ತೆ: ಸ್ಕ್ಯಾನಿಂಗ್ ಸೆಂಟರ್ ಮಾಹಿತಿ ಸಂಗ್ರಹಕ್ಕೆ ಡೆಡ್ಲೈನ್ ನಿಗದಿ
ಶೌಚಾಲಯದ ಪೈಪ್ನಲ್ಲಿ 6 ತಿಂಗಳ ಭ್ರೂಣವು ಸಿಲುಕಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಪೈಪ್ ಒಡೆದು ನೀರು ಹೊರ ಬೀಳಲಾರಂಭಿಸಿತ್ತು.
ಇಂದಿರಾಪುರಂ ಸಹಾಯಕ ಪೊಲೀಸ್ ಆಯುಕ್ತ ಸ್ವತಂತ್ರ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ