AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ಆಯ್ತು ಬೀದಿಜಗಳದಲ್ಲಿ ನೆಲಕ್ಕೆ ಬಿದ್ದರೂ ಬಿಡದೆ ಬಾರಿಸಿದ ‘ಚಾಚಾ’ನ ವಿಡಿಯೊ

Baghpat Chacha: ಚಾಚಾ ಎಂದು ನೆಟ್ಟಿಗರು ಕರೆದಿರುವ ಈ ವ್ಯಕ್ತಿಯ ಹೆಸರು ಹರಿಂದರ್. ಇವರು ಬಾಗ್​ಪತ್​ನಲ್ಲಿ​ ಚಾಟ್ ಮಾರಾಟಗಾರರಾಗಿದ್ದಾರೆ.

ವೈರಲ್ ಆಯ್ತು ಬೀದಿಜಗಳದಲ್ಲಿ ನೆಲಕ್ಕೆ ಬಿದ್ದರೂ ಬಿಡದೆ ಬಾರಿಸಿದ ‘ಚಾಚಾ’ನ ವಿಡಿಯೊ
ಚಾಚಾ ಮೀಮ್
ರಶ್ಮಿ ಕಲ್ಲಕಟ್ಟ
| Edited By: |

Updated on: Feb 23, 2021 | 8:19 PM

Share

ಉತ್ತರ ಪ್ರದೇಶದ ಬಾಗ್​ಪತ್ ರಸ್ತೆಯಲ್ಲಿ ಚಾಟ್ ಮಾರುವವರ ನಡುವೆ ನಡೆದ ಮಾರಾಮಾರಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪರಸ್ಪರ ಕೋಲುಗಳಿಂದ ಬಾರಿಸುತ್ತಾ, ಕಾಲು ಹಿಡಿದು ಎಳೆದಾಡಿ ಹೊಡೆಯುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ. ಈ ವಿಡಿಯೊದಲ್ಲಿ ಕೆಂಪು ಬಣ್ಣದ ಕೂದಲಿರುವ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಬಡಿಗೆಯಿಂದ ಬಡಿಯುತ್ತಿರುವುದು ಕಾಣುತ್ತದೆ. ಸ್ಪಲ್ಪ ಹೊತ್ತಿನ ನಂತರ ಅವರು ನೆಲಕ್ಕೆ ಬಿದ್ದಾಗ ಅಲ್ಲಿಂದಲೇ ಇನ್ನೊಬ್ಬನಿಗೆ ಏಟು ನೀಡಿ ಮತ್ತೆ ಎದ್ದು ನಿಂತು ಜಗಳ ಮುಂದುವರಿಸುತ್ತಾರೆ. ಹಾಡಹಗಲೇ ನಡೆದ ಈ ಬೀದಿಜಗಳದ ವಿಡಿಯೊ ವೈರಲ್ ಆಗುತ್ತಿದ್ದಂತೆ ಕೆಂಪುಗೂದಲಿನ ಆ ವ್ಯಕ್ತಿ ಮೀಮ್ ಗೆ ಆಹಾರವಾಗಿದ್ದಾರೆ. ನೆಟ್ಟಿಗರು ಈ ವ್ಯಕ್ತಿಯನ್ನು ಚಾಚಾ (ಮಾವ) ಎಂದು ಕರೆದು ತರಹೇವಾರಿ ಮೀಮ್​ಗಳನ್ನು ಹರಿಬಿಟ್ಟಿದ್ದಾರೆ.

ಚಾಚಾ ಎಂದು ನೆಟ್ಟಿಗರು ಕರೆದಿರುವ ಈ ವ್ಯಕ್ತಿಯ ಹೆಸರು ಹರಿಂದರ್. ಇವರು ಬಾಗ್​ಪತ್​ನಲ್ಲಿ​ ಚಾಟ್ ಮಾರಾಟಗಾರರಾಗಿದ್ದಾರೆ. ಪೊಲೀಸರ ಪ್ರಕಾರ ಬಾಗ್​ಪತ್​ನ ಬರೂತ್ ಪ್ರದೇಶದಲ್ಲಿರುವ ಚಾಟ್ ಮಾರುವವರ ಎರಡು ಗುಂಪುಗಳ ನಡುವೆ ಈ ಜಗಳ ನಡೆದಿದೆ. ಈ ಬೀದಿ ಜಗಳದಲ್ಲಿ ಎಂಟು ಮಂದಿಯನ್ನು ಬಂಧಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇದರ ಬೆನ್ನಲ್ಲೇ ಈ ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಜನರ ಫೋಟೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಲ್ಲಿ ಚಾಚಾ ಮೀಮ್

ಯಾರು ಈ ಚಾಚಾ ? ಎಎನ್ಐ ಸುದ್ದಿಸಂಸ್ಥೆ ಪ್ರಕಾರ 40 ವರ್ಷಗಳಿಂದ ಹರಿಂದರ್ ಚಾಟ್ ಮಾರಾಟಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ವ್ಯಾಪಾರ ಕುಸಿದಿದೆ. ಇನ್ನೊಂದು ಕಡೆಯಲ್ಲಿರುವ ಚಾಟ್ ಮಾರಾಟಗಾರರು ತಮ್ಮ ಗ್ರಾಹಕರನ್ನು ಕಸಿದುಕೊಂಡಿದ್ದಾರೆ ಎಂದು ಚಾಟ್ ಮಾರಾಟಗಾರರು ಆರೋಪಿಸಿದ್ದರು. ಇನ್ನೊಂದು ತಂಡದವರು ನಮ್ಮ ಚಾಟ್ ಮಾರಾಟವಾಗದಂತೆ ಮಾಡಿ ಗ್ರಾಹಕರನ್ನು ತಮ್ಮಿಂದ ದೂರ ಮಾಡಿದ್ದಾರೆ ಎಂದು ಹರಿಂದರ್ ಹೇಳಿದ್ದಾರೆ.

ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಸವದತ್ತಿ ಯಲ್ಲಮ್ಮನ ಜಾತ್ರೆಗೆ ಜನಸ್ತೋಮ!
ಸವದತ್ತಿ ಯಲ್ಲಮ್ಮನ ಜಾತ್ರೆಗೆ ಜನಸ್ತೋಮ!
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ