ಶಿವಲಿಂಗದ ಬಳಿ ಕೈ ತೊಳೆದ ಉತ್ತರ ಪ್ರದೇಶ ಸಚಿವ ಸತೀಶ್ ಶರ್ಮಾ, ಟೀಕೆಗಳ ಸುರಿಮಳೆ

|

Updated on: Sep 04, 2023 | 12:16 PM

ಉತ್ತರ ಪ್ರದೇಶ ಸಚಿವ ಸತೀಶ್ ಶರ್ಮಾ ಶಿವಲಿಂಗದ ಬಳಿಯೇ ಕೈತೊಳೆದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಬಾರಾಬಂಕಿಯ ರಾಮ್‌ಪುರದಲ್ಲಿರುವ ಪೌರಾಣಿಕ ಲೋಧೇಶ್ವರ ಮಹಾದೇವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ. ಈ ವಿಡಿಯೋ ಕುರಿತು ವಿರೋಧ ಪಕ್ಷದ ನಾಯಕರು ಬಿಜೆಪಿ ಹಾಗೂ ಸಚಿವ ಸತೀಶ್ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿವಲಿಂಗದ ಬಳಿ ಕೈ ತೊಳೆದ ಉತ್ತರ ಪ್ರದೇಶ ಸಚಿವ ಸತೀಶ್ ಶರ್ಮಾ, ಟೀಕೆಗಳ ಸುರಿಮಳೆ
ಸತೀಶ್ ಶರ್ಮಾ
Follow us on

ಉತ್ತರ ಪ್ರದೇಶ ಸಚಿವ ಸತೀಶ್ ಶರ್ಮಾ ಶಿವಲಿಂಗದ ಬಳಿಯೇ ಕೈತೊಳೆದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಬಾರಾಬಂಕಿಯ ರಾಮ್‌ಪುರದಲ್ಲಿರುವ ಪೌರಾಣಿಕ ಲೋಧೇಶ್ವರ ಮಹಾದೇವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ. ಈ ವಿಡಿಯೋ ಕುರಿತು ವಿರೋಧ ಪಕ್ಷದ ನಾಯಕರು ಬಿಜೆಪಿ ಹಾಗೂ ಸಚಿವ ಸತೀಶ್ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮತ್ತೊಂದೆಡೆ, ಸಮಾಜವಾದಿ ಪಕ್ಷದ ನಾಯಕ ಸುನೀಲ್ ಸಿಂಗ್ ಯಾದವ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಬೇರೆ ಯಾವುದೇ ಜಾತಿಯ ನಾಯಕರು ಮಾಡಿದ್ದರೆ, ಬಿಜೆಪಿ ಅವರನ್ನು ಪಕ್ಷದಿಂದ ಹೊರಹಾಕುತ್ತಿತ್ತು, ಈ ವಿಚಾರದಲ್ಲಿ ಸಿಎಂ ಯೋಗಿ ಮೌನವೇಕೆ ಎಂದು ಪ್ರಶ್ನಿಸಿದರು.

ಸಚಿವ ಸತೀಶ್ ಶರ್ಮಾ ಶಿವಲಿಂಗದ ಬಳಿ ಕೈತೊಳೆದುಕೊಳ್ಳುತ್ತಿರುವ ವಿಡಿಯೋವನ್ನು ಶೇರ್ ಮಾಡುವ ಮೂಲಕ ಕಟುವಾಗಿ ವಾಗ್ದಾಳಿ ನಡೆಸಿದ ಎಸ್‌ಪಿ ನಾಯಕ ಸುನೀಲ್ ಸಿಂಗ್ ಯಾದವ್, ಲೋಧೇಶ್ವರ ಶಿವಲಿಂಗಕ್ಕೆ ಕೈತೊಳೆದುಕೊಳ್ಳುವ ಅನ್ಯಾಯದ ಸತೀಶ್ ಶರ್ಮಾ ಅವರು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದಾರೆ.

ವಾಸ್ತವವಾಗಿ, ಸಚಿವ ಸತೀಶ್ ಶರ್ಮಾ ಅವರು ಬಾರಾಬಂಕಿಯ ರಾಮ್‌ಪುರದಲ್ಲಿರುವ ಪೌರಾಣಿಕ ಲೋಧೇಶ್ವರ ಮಹಾದೇವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿರುವಾಗ ನಡೆದಿರುವ ಘಟನೆಯ ವಿಇಡಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೀಡಿಯೊದಲ್ಲಿ ಅವರು ಶಿವಲಿಂಗದ ಬಳಿ ಕೈ ತೊಳೆಯುತ್ತಿರುವುದನ್ನು ಕಾಣಬಹುದು. ಪಕ್ಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿತಿನ್ ಪ್ರಸಾದ್ ಕೂಡ ಕಾಣಿಸಿಕೊಂಡಿದ್ದಾರೆ.

ಮತ್ತಷ್ಟು ಓದಿ: ದೆಹಲಿಯಲ್ಲಿ ಜಿ20 ಶೃಂಗಸಭೆಗಾಗಿ ಸಿದ್ಧತೆ: ಧೌಲಾ ಕುವಾನ್‌ನಲ್ಲಿ ಶಿವಲಿಂಗ ಆಕಾರದ ಕಾರಂಜಿ ಸ್ಥಾಪಿಸಿದ್ದಕ್ಕೆ ಬಿಜೆಪಿ-ಎಎಪಿ ನಡುವೆ ವಾಕ್ಸಮರ

ಸತೀಶ್ ಶರ್ಮಾ ಅರ್ಚಕರಿಗೆ ಕೆಲವು ಸೂಚನೆಗಳನ್ನು ನೀಡುತ್ತಾರೆ. ಇದಾದ ನಂತರ, ಅರ್ಚಕರೊಬ್ಬರು ಒಂದು ಪಾತ್ರೆಯಲ್ಲಿ ನೀರು ಕೊಡುತ್ತಾರೆ ಮತ್ತು ಸತೀಶ್ ಶರ್ಮಾ ಶಿವಲಿಂಗದ ಬಳಿ ಕೈತೊಳೆಯುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಹಲವು ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.

ಈ ವೀಡಿಯೋಗೆ ಕಾಂಗ್ರೆಸ್‌ನಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಶಿವಲಿಂಗದ ಬಳಿ ಕೈತೊಳೆದುಕೊಳ್ಳಬಾರದು ಎನ್ನುವ ಸಾಮಾನ್ಯ ಜ್ಞಾನವಿಲ್ಲ ಎಂದು ಹೇಳಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ