AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

50ವರ್ಷದ ಮಹಿಳೆಗೆ ಒಟ್ಟಿಗೇ 2 ಡೋಸ್​ ಲಸಿಕೆ ನೀಡಿದ ನರ್ಸ್​; ಯಾಕೆ ಅಂತ ಕೇಳಿದ್ರೆ ತಿರುಗಿ ಬಯ್ಯೋದು ಬೇರೆ !

ವಿಷಯ ತಿಳಿದು ಸ್ಥಳಕ್ಕೆ ಬಂದ ಮಹಿಳೆಯ ಕುಟುಂಬದವರು ತುಂಬ ಗಲಾಟೆ ಮಾಡಿದ್ದಾರೆ. ನಂತರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಜಿಲ್ಲಾಧಿಕಾರಿಗೂ ವಿಷಯ ತಿಳಿಸಲಾಗಿದೆ. ಈ ಮಧ್ಯೆ ಕಮಲೇಶ್ವರಿ ಕೈಯಿ ಸ್ವಲ್ಪ ಪ್ರಮಾಣದಲ್ಲಿ ಊದಿಕೊಂಡಿದೆ.

50ವರ್ಷದ ಮಹಿಳೆಗೆ ಒಟ್ಟಿಗೇ 2 ಡೋಸ್​ ಲಸಿಕೆ ನೀಡಿದ ನರ್ಸ್​; ಯಾಕೆ ಅಂತ ಕೇಳಿದ್ರೆ ತಿರುಗಿ ಬಯ್ಯೋದು ಬೇರೆ !
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Apr 03, 2021 | 7:32 PM

Share

ಲಖನೌ: ಉತ್ತರ ಪ್ರದೇಶದಲ್ಲಿ ನರ್ಸ್​ ಒಬ್ಬರು ಮಹಿಳೆಗೆ ಲಸಿಕೆ ನೀಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. ಫೋನ್​ನಲ್ಲಿ ಮಾತನಾಡುತ್ತ ಇತ್ತ ಮಹಿಳೆಗೆ ಎರಡು ಡೋಸ್​ ಲಸಿಕೆ ನೀಡಿದ್ದಾಳೆ. ಅಷ್ಟೇ ಅಲ್ಲ, ಎರಡು ಬಾರಿ ಇಂಜೆಕ್ಷನ್ ಯಾಕೆ ಕೊಟ್ಟಿರಿ ಎಂದು ಪ್ರಶ್ನಿಸಿದ್ದಕ್ಕೆ, ಆ ಮಹಿಳೆ ವಿರುದ್ಧವೇ ತಿರುಗಿಬಿದ್ದಿದ್ದಾಳೆ. ಘಟನೆ ನಡೆದದ್ದು ಕಾನ್ಪುರ ದೇಹಟ್​ ಜಿಲ್ಲೆಯ ಅಕ್ಬರ್​ಪುರ ಏರಿಯಾದಲ್ಲಿ ಎಂದು ಪಿಟಿಐ ವರದಿ ಮಾಡಿದೆ.

ಇಂದು ಕಮಲೇಶ್ ಕುಮಾರಿ(50) ಲಸಿಕೆ ಪಡೆಯಲು ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ನಿಯಮದ ಪ್ರಕಾರ ಅವರಿಗೆ ಇಂದು ಒಂದು ಡೋಸ್​ ಲಸಿಕೆ ಕೊಟ್ಟು, 28ದಿನಗಳ ಬಳಿಕೆ ಇನ್ನೊಂದು ಡೋಸ್​ ನೀಡಬೇಕಿತ್ತು. ಆದರೆ ಇವರಿಗೆ ಲಸಿಕೆ ನೀಡುತ್ತಿದ್ದ ನರ್ಸ್ ನಿರ್ಲಕ್ಷ್ಯದಿಂದ ಒಂದೇ ಬಾರಿಗೆ ಎರಡು ಡೋಸ್ ಪಡೆಯುವಂತಾಗಿದೆ. ಫೋನ್​ನಲ್ಲಿ ಮಾತನಾಡುತ್ತಿದ್ದ ನರ್ಸ್ ಎರಡು ಬಾರಿ ಇಂಜೆಕ್ಟ್​ ಮಾಡಿದ್ದಾಳೆ.

ಗಲಾಟೆ ಮಾಡಿದ ಕುಟುಂಬದವರು ವಿಷಯ ತಿಳಿದು ಸ್ಥಳಕ್ಕೆ ಬಂದ ಮಹಿಳೆಯ ಕುಟುಂಬದವರು ತುಂಬ ಗಲಾಟೆ ಮಾಡಿದ್ದಾರೆ. ನಂತರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಜಿಲ್ಲಾಧಿಕಾರಿಗೂ ವಿಷಯ ತಿಳಿಸಲಾಗಿದೆ. ಈ ಮಧ್ಯೆ ಕಮಲೇಶ್ವರಿ ಕೈಯಿ ಸ್ವಲ್ಪ ಪ್ರಮಾಣದಲ್ಲಿ ಊದಿಕೊಂಡಿದೆ ಎಂದು ಮನೆಯವರು ಆರೋಪ ಮಾಡಿದ್ದಾರೆ. ಅದನ್ನು ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಯಾವುದೇ ರಿಯಾಕ್ಷನ್ ಆಗಿಲ್ಲ ಎಂದು ಹೇಳಲಾಗಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನರ್ಸ್ ಮಾಡಿದ್ದು ತಪ್ಪು. ಹಾಗಾಗಿ ಸ್ವಯಂ ಪ್ರೇರಿತವಾಗಿ ತನಿಖೆಗೆ ಎತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿತೇಂದ್ರ ಪ್ರತಾಪ್​ ಸಿಂಗ್ ಹೇಳಿದ್ದಾರೆ. ವಾಸ್ತವ ವರದಿಯನ್ನು ಸಲ್ಲಿಸುವಂತೆ ಮುಖ್ಯ ವೈದ್ಯಾಧಿಕಾರಿಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಸಿಡಿ ಪ್ರಕರಣಕ್ಕೆ ರೋಚಕ ತಿರುವು; ಸಿಡಿ ಬಿಡುಗಡೆಗೂ ಮುನ್ನ ಯುವತಿ ಜತೆ ಹಣಕಾಸು ವ್ಯವಹಾರ ನಡೆಸಿದ್ದ ಮಾಜಿ ಸಚಿವ ಡಿ.ಸುಧಾಕರ್​?

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ; ಯೋಜನೆಗಳು, ಅಸಮಾಧಾನ, ಸೋನಿಯಾ ಗಾಂಧಿ ಪತ್ರದ ಬಗ್ಗೆ ಚರ್ಚೆ

Follow Us
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಈ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ: ಪ್ರತಾಪಸಿಂಹ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
ಮೈಮೇಲೆ ಹರಿದು ಕಾರು, ಕೆಲವೇ ಕ್ಷಣಗಳಲ್ಲಿ ಪವಾಡವೆಂಬಂತೆ ಎದ್ದು ನಿಂತ ಬಾಲಕ
‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್ 
‘ರಾಶಿಕಾಗಿಂತ ನನಗೆ ಅವರೇ ಹೆಚ್ಚು ಇಷ್ಟ’; ಓಪನ್ ಆಗಿ ಹೇಳಿದ ಸೂರಜ್ 
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಮೈ ರೋಮಾಂಚನಗೊಳಿಸುವ ಕುಮಾರ - ಸಿರಿ ಭೇಟಿ
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
ತರಕಾರಿ ಮಾರುವ ಹುಡುಗನಿಗೆ ಹಾಡಲು ಅವಕಾಶ; ಟ್ರೋಲರ್​​ಗಳಿಗೆ ಸರಿಗಮಪ ಉತ್ತರ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ