AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡ: ಟ್ರೆಕ್ಕಿಂಗ್​​ಗೆ ಹೋದ 22 ಸದಸ್ಯರ ಗುಂಪಿನ 9 ಚಾರಣಿಗರು ಸಾವು, 13 ಮಂದಿಯ ರಕ್ಷಣೆ

ಒಂಬತ್ತು ಮಂದಿ ಸಾವಿಗೀಡಾಗಿದ್ದು, 13 ಮಂದಿಯನ್ನು ರಕ್ಷಿಸಲಾಗಿದೆ. ನಾವು 5 ಮೃತದೇಹಗಳನ್ನು ಕೆಳಗೆ ತಂದಿದ್ದೇವೆ. ಉಳಿದ 4 ಶವಗಳನ್ನು ನಾಳೆ ತರಲಾಗುವುದು. ಇಂದು ಪ್ರತಿಕೂಲ ಹವಾಮಾನದಿಂದಾಗಿ ನಾವು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಗಿ ಬಂದಿದೆ ದು ಹೆಸರು ಹೇಳಲು ಇಚ್ಛಿಸದ ಹಿರಿಯ ಎಸ್‌ಡಿಆರ್‌ಎಫ್ ಅಧಿಕಾರಿ ತಿಳಿಸಿದ್ದಾರೆ.

ಉತ್ತರಾಖಂಡ: ಟ್ರೆಕ್ಕಿಂಗ್​​ಗೆ ಹೋದ 22 ಸದಸ್ಯರ ಗುಂಪಿನ 9 ಚಾರಣಿಗರು ಸಾವು, 13 ಮಂದಿಯ ರಕ್ಷಣೆ
ರಕ್ಷಣಾ ಕಾರ್ಯಾಚರಣೆ
ರಶ್ಮಿ ಕಲ್ಲಕಟ್ಟ
|

Updated on:Jun 05, 2024 | 8:55 PM

Share

ಉತ್ತರಾಖಂಡ ಜೂನ್ 05: ಉತ್ತರಾಖಂಡದ (Uttarakhand) ಉತ್ತರಕಾಶಿ ಜಿಲ್ಲೆಯ ಮೇಲಿನ ಹಿಮಾಲಯದಲ್ಲಿ ಸಹಸ್ತ್ರ ತಾಲ್ ಟ್ರೆಕ್ಕಿಂಗ್ (trekking) ಸಮಯದಲ್ಲಿ ಕೆಟ್ಟ ಹವಾಮಾನದಿಂದಾಗಿ ದಾರಿ ತಪ್ಪಿದ 22 ಸದಸ್ಯರ ಟ್ರೆಕ್ಕಿಂಗ್ ತಂಡದ ಒಂಬತ್ತು ಸದಸ್ಯರು ಸಾವಿಗೀಡಾಗಿದ್ದಾರೆ. ಉಳಿದ 13 ಚಾರಣಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಭಾರತೀಯ ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಸ್ಥಳೀಯ ಅಧಿಕಾರಿಗಳು ಜಂಟಿ ವಾಯು-ನೆಲ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಕಾಶಿ-ತೆಹ್ರಿ ಗಡಿಯಲ್ಲಿ ಟ್ರೆಕ್ಕಿಂಗ್‌ ಹೋಗಿ ರಕ್ಷಿಸಲ್ಪಟ್ಟ 13 ಚಾರಣಿಗರಲ್ಲಿ ಎಂಟು ಮಂದಿಯನ್ನು ಬುಧವಾರ ಡೆಹ್ರಾಡೂನ್‌ಗೆ ವಿಮಾನದ ಮೂಲಕ ಕಳುಹಿಸಲಾಗಿದೆ

ಒಂಬತ್ತು ಮಂದಿ ಸಾವಿಗೀಡಾಗಿದ್ದು, 13 ಮಂದಿಯನ್ನು ರಕ್ಷಿಸಲಾಗಿದೆ. ನಾವು 5 ಮೃತದೇಹಗಳನ್ನು ಕೆಳಗೆ ತಂದಿದ್ದೇವೆ. ಉಳಿದ 4 ಶವಗಳನ್ನು ನಾಳೆ ತರಲಾಗುವುದು. ಇಂದು ಪ್ರತಿಕೂಲ ಹವಾಮಾನದಿಂದಾಗಿ ನಾವು ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಗಿ ಬಂದಿದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಎಸ್‌ಡಿಆರ್‌ಎಫ್ ಅಧಿಕಾರಿ ತಿಳಿಸಿರುವುದಾಗಿ  ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕರ್ನಾಟಕದ 18 ಚಾರಣಿಗರು ಮತ್ತು ಮಹಾರಾಷ್ಟ್ರದ ಮೂವರು ಸ್ಥಳೀಯ ಮಾರ್ಗದರ್ಶಕರು ಸೇರಿದಂತೆ 22 ಸದಸ್ಯರ ಟ್ರೆಕ್ಕಿಂಗ್ ತಂಡವನ್ನು ಹಿಮಾಲಯನ್ ವ್ಯೂ ಟ್ರೆಕಿಂಗ್ ಏಜೆನ್ಸಿ, ಮನೇರಿ, ಮೇ 29 ರಂದು ಸಿಲ್ಲಾ-ಕುಷ್ಕಲ್ಯಾಣ-ಸಹಸ್ತ್ರ ತಾಲ್‌ಗೆ 35 ಕಿಮೀ ದೂರದ ಚಾರಣಕ್ಕೆ ಕಳುಹಿಸಲಾಗಿದೆ. ಮಧ್ಯಮ ಗಾತ್ರದ ಎತ್ತರದ ಸರೋವರವು ಉತ್ತರಕಾಶಿಯಿಂದ ಸುಮಾರು 4,600 ಮೀಟರ್ ಎತ್ತರದಲ್ಲಿದೆ.

ತಂಡವು ಜೂನ್ 7 ರೊಳಗೆ ಹಿಂತಿರುಗಲು ನಿರ್ಧರಿಸಲಾಗಿತ್ತು, ಆದರೆ ಸಹಸ್ತ್ರ ತಾಲ್‌ನಿಂದ ಬೇಸ್ ಕ್ಯಾಂಪ್‌ಗೆ ಚಾರಣ ಮಾಡುವಾಗ ಕೆಟ್ಟ ಹವಾಮಾನದಿಂದಾಗಿ ದಾರಿ ತಪ್ಪಿತು ಎಂದು ಉತ್ತರಕಾಶಿ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ (ಡಿಡಿಎಂಒ) ದೇವೇಂದ್ರ ಪಟ್ವಾಲ್ ಹೇಳಿದ್ದಾರೆ.

ಮಾಹಿತಿ ಪಡೆದ ನಂತರ, ಡಿಎಂ ತಕ್ಷಣವೇ ರಕ್ಷಣಾ ತಂಡಗಳನ್ನು ಕಳುಹಿಸಲು ಎಸ್ ಡಿಆರ್ ಎಫ್ ಪ್ರಧಾನ ಕಚೇರಿಗೆ ಹೇಳಿದ್ದು, ಸ್ಥಳವನ್ನು ತಲುಪಲು ಸ್ಥಳೀಯ ರಕ್ಷಣಾ ತಂಡಗಳನ್ನು ಕೇಳಿದರು. ಸಿಲುಕಿರುವ ಚಾರಣಿಗರನ್ನು ರಕ್ಷಿಸಲು ಭಾರತೀಯ ವಾಯುಪಡೆಯ ಮೂಲಕ ಹೆಲಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಿದೆ.

ಬುಧವಾರ, ಭಾರತೀಯ ವಾಯುಪಡೆಯ (ಐಎಎಫ್) ಎರಡು ಚೇತಕ್ ಹೆಲಿಕಾಪ್ಟರ್‌ಗಳು ಮತ್ತು ಖಾಸಗಿ ಹೆಲಿಕಾಪ್ಟರ್‌ಗಳನ್ನು ಚಾರಣ ಮಾರ್ಗದಲ್ಲಿ ಸಿಲುಕಿರುವ ಚಾರಣಿಗರನ್ನು ರಕ್ಷಿಸಲು ನಿಯೋಜಿಸಲಾಗಿದೆ.

“ಮೂರು ಮಾರ್ಗದರ್ಶಕರು ಸೇರಿದಂತೆ 22 ಸದಸ್ಯರ ಟ್ರೆಕ್ಕಿಂಗ್ ಗುಂಪು ಮೇ 29 ರಂದು ಸಹಸ್ತ್ರ ತಾಲ್‌ಗೆ ಹೊರಡುವುದಿತ್ತು. ಅವರಲ್ಲಿ ಇಬ್ಬರು ಕೆಟ್ಟ ಆರೋಗ್ಯದ ಕಾರಣ ಮೂಲ ಶಿಬಿರದಲ್ಲಿಯೇ ಇದ್ದರು. ಅವರಲ್ಲಿ ಇಪ್ಪತ್ತು ಮಂದಿ ಶಿಖರವನ್ನು ತಲುಪಿದರು. ಕೆಳಗೆ ಚಾರಣ ಮಾಡುವಾಗ, ಗುಂಪು ಕೆಟ್ಟ ಹವಾಮಾನವನ್ನು ಎದುರಿಸಿತು ಮತ್ತು ದಾರಿ ತಪ್ಪಿತು ಎಂದು ಎಸ್‌ಡಿಆರ್‌ಎಫ್ ಕಮಾಂಡೆಂಟ್ ಮಣಿಕಾಂತ್ ಮಿಶ್ರಾ ಹೇಳಿದ್ದಾರೆ.

ಬೇಸ್ ಕ್ಯಾಂಪ್‌ನಿಂದ ಇಬ್ಬರು ಸೇರಿದಂತೆ 13 ಸದಸ್ಯರನ್ನು ರಕ್ಷಿಸಿದರೆ, ಇತರ ಐವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಟ್ರೆಕ್ಕಿಂಗ್​ ಹೋಗಿದ್ದ ಕರ್ನಾಟಕದ 18 ಮಂದಿ ಸೇರಿ ಒಟ್ಟು 22 ಜನ ನಾಪತ್ತೆ, ನಾಲ್ವರ ಶವ ಪತ್ತೆ

“ನಾವು ಇತರ ರಕ್ಷಣಾ ತಂಡಗಳೊಂದಿಗೆ ಚಾಪರ್‌ಗಳನ್ನು ಬಳಸಿ 11 ಚಾರಣಿಗರನ್ನು ರಕ್ಷಿಸಿದ್ದೇವೆ. 11 ಚಾರಣಿಗರಲ್ಲಿ ಎಂಟು ಜನರನ್ನು ಚಾಪರ್‌ನಲ್ಲಿ ಡೆಹ್ರಾಡೂನ್‌ಗೆ ಕಳುಹಿಸಲಾಯಿತು, ಮೂವರನ್ನು ಭಟ್ವಾರಿಗೆ ಕರೆತರಲಾಯಿತು. ಸ್ಥಳೀಯ ಮಾರ್ಗದರ್ಶಕರ ಮಾರ್ಗದರ್ಶನದಲ್ಲಿ ಇನ್ನೂ ಇಬ್ಬರು ಸಿಲ್ಲಾ ಗ್ರಾಮಕ್ಕೆ ಹಿಂತಿರುಗುತ್ತಿದ್ದರು ಎಂದು ಮಿಶ್ರಾ ಹೇಳಿದರು.

ಮೃತ ಚಾರಣಿಗರನ್ನು ಸಿಂಧು ವಕೇಕಲಂ (45), ಆಶಾ ಸುಧಾಕರ್ (71), ಸುಜಾತಾ ಮುಂಗುರವಾಡಿ (51), ವಿನಾಯಕ್ ಮುಂಗುರವಾಡಿ (54), ಚಿತ್ರಾ ಪ್ರಣೀತ್ (48), ಪದ್ಮನಾಭ ಕುಂದಾಪುರ ಕೃಷ್ಣಮೂರ್ತಿ (50), ವೆಂಕಟೇಶ ಪ್ರಸಾದ್ ಕೆಎನ್ (53) , ಅನಿತಾ ರಂಗಪ್ಪ (60) ಮತ್ತು ಪದ್ಮಿನಿ ಹೆಗಡೆ (34) ಕರ್ನಾಟಕದ ಬೆಂಗಳೂರಿನ ನಿವಾಸಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಣಾ ಕಾರ್ಯಾಚರಣೆಗಾಗಿ ಹಿರಿಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:51 pm, Wed, 5 June 24