AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಮೀನು ಪಡೆದು ಕಾನೂನು ಅಧ್ಯಯನ ಮಾಡಿ ತನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸಿದ ಕೊಲೆ ಆರೋಪಿ

ಅಪರಾಧ ಮಾಡಿದವರು ಶಿಕ್ಷೆ ಅನುಭವಿಸುವುದೇನೋ ಸರಿ ಆದರೆ ಹಲವು ಮಂದಿ ತಮ್ಮದಲ್ಲದ ತಪ್ಪಿನಲ್ಲಿ ಸಿಲುಕಿಬಿಡುತ್ತಾರೆ. ಹಾಗೆಯೇ ಅಮಿತ್ ಚೌಧರಿ ಕೂಡ ತಾವು ತಪ್ಪು ಮಾಡದಿದ್ದರೂ ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಪಟ್ಟ ಕಟ್ಟಲಾಯಿತು.   18 ವರ್ಷ ವಯಸ್ಸಿನಲ್ಲಿಯೇ ಮಾಡದ ಪ್ರಕರಣದಲ್ಲಿ ಜೈಲು ಸೇರಿದ್ದರು.

ಜಾಮೀನು ಪಡೆದು ಕಾನೂನು ಅಧ್ಯಯನ ಮಾಡಿ ತನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸಿದ ಕೊಲೆ ಆರೋಪಿ
ನಯನಾ ರಾಜೀವ್
|

Updated on: Dec 10, 2023 | 9:03 AM

Share

ಮೀರತ್​, ಡಿಸೆಂಬರ್ 10:   ಅಪರಾಧ ಮಾಡಿದವರು ಶಿಕ್ಷೆ ಅನುಭವಿಸುವುದೇನೋ ಸರಿ ಆದರೆ ಹಲವು ಮಂದಿ ತಮ್ಮದಲ್ಲದ ತಪ್ಪಿನಲ್ಲಿ ಸಿಲುಕಿಬಿಡುತ್ತಾರೆ. ಹಾಗೆಯೇ ಅಮಿತ್ ಚೌಧರಿ(Amit Chaudhary) ಕೂಡ ತಾವು ತಪ್ಪು ಮಾಡದಿದ್ದರೂ ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಪಟ್ಟ ಕಟ್ಟಲಾಯಿತು.   18 ವರ್ಷ ವಯಸ್ಸಿನಲ್ಲಿಯೇ ಮಾಡದ ಪ್ರಕರಣದಲ್ಲಿ ಜೈಲು ಸೇರಿದ್ದರು.

2011ರಲ್ಲಿ ಇಬ್ಬರು ಕಾನ್​ಸ್ಟೆಬಲ್​ಗಳನ್ನು ಕೊಂದು ಶಸ್ತ್ರಾಸ್ತ್ರಗಳನ್ನು ಕದ್ದ ಆರೋಪಿದಲ್ಲಿ ಚೌಧರಿಗೆ ಕೊಲೆ ಆರೋಪಿ ಹಾಗೂ ಗ್ಯಾಂಗ್​ಸ್ಟರ್ ಪಟ್ಟ ಕಟ್ಟಿದ್ದರು. ಅವರ ಭವಿಷ್ಯ ಅಲ್ಲಿಯೇ ನಿಂತುಬಿಟ್ಟಿತ್ತು.ಆಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಅಪರಾಧಿಯನ್ನು ತಕ್ಷಣ ಬಂಧಿಸುವಂತೆ ಆದೇಶಿಸಿದರು ಮತ್ತು ಘಟನೆ ನಡೆದಾಗ ಶಾಮ್ಲಿ ಜಿಲ್ಲೆಯಲ್ಲಿ ತನ್ನ ಸಹೋದರಿಯೊಂದಿಗೆ ಇದ್ದ ಅಮಿತ್ ನನ್ನು ಪ್ರಕರಣದ 17 ಆರೋಪಿಗಳಲ್ಲಿ ಒಬ್ಬನನ್ನಾಗಿ ಮಾಡಲಾಯಿತು.

ಕೊಲೆಯ ಸಂಚು ರೂಪಿಸಿದ ಕುಖ್ಯಾತ ಕೈಲ್ ಗ್ಯಾಂಗ್‌ನ ಭಾಗವೆಂದು ಆರೋಪಿಸಿ ಅವರನ್ನು ಜೈಲಿಗಟ್ಟಲಾಯಿತು. ಆದರೂ ಈ ಪರಿಸ್ಥಿತಿಯನ್ನು ಅಮಿತ್ ಪ್ರತಿಕೂಲ ಪರಿಸ್ಥಿತಿಯಾಗಿ ಬದಲಾಯಿಸಿಕೊಂಡರು. ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಕಾನೂನು ಅಧ್ಯಯನ ಮಾಡಿದರು.

ಅಮಿತ್ ಬಾಗ್​ಪ್​ನ ಕಿರ್ತಾಲ್​ ಗ್ರಾಮದ ರೈತರೊಬ್ಬರ ಮಗ, ಮುಜಾಫರ್​ನಗರದ ಜೈಲಿನಲ್ಲಿರುವಾಗ ಗ್ಯಾಂಗ್​ಸ್ಟರ್​​ಗಳು ಗ್ಯಾಂಗ್​ಗೆ ನನ್ನನ್ನು ಸೇರಿಸಿಕೊಳ್ಳಲು ಬಯಸಿದರು. ಆದರೆ ಜೈಲರ್ ಒಳ್ಳೆಯ ಸ್ವಭಾವದವರಾಗಿದ್ದ ಕಾರಣ ನನ್ನನ್ನು ಬೇರೊಂದು ಕಡೆ ಇರಿಸಿದ್ದರು.

ಮತ್ತಷ್ಟು ಓದಿ:  ಕೇರಳ: ಕೈಗಳಿಲ್ಲದಿದ್ದರೂ ಛಲಬಿಡದೆ, ಅಡೆತಡೆಗಳ ಮೀರಿ ಚಾಲನಾ ಪರವಾನಗಿ ಪಡೆದ ದಿಟ್ಟ ಮಹಿಳೆ

2013 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಚೌಧರಿ ತನ್ನನ್ನು ತಾನು ನಿರಪರಾಧಿ ಎಂದು ಘೋಷಿಸಲು ಬೇಕಾದ ಸಾಕ್ಷ್ಯಗಳನ್ನು ಕಲೆಹಾಕಲು ಶುರು ಮಾಡಿದರು. ಸಮಾಜದಲ್ಲಿ ಅವರ ಕುಟುಂಬವು ತಲೆ ಎತ್ತಿ ನಡೆಯುವಂತೆ ಮಾಡುವುದು ಅಮಿತ್ ಉದ್ದೇಶವಾಗಿತ್ತು. ಕಾನೂನು ಅಧ್ಯಯನ ಮಾಡಿದರು,ಬಿಎ, ಎಲ್​ಎಲ್​ಬಿ, ಎಲ್​ಎಲ್​ಎಂ ಮಾಡಿದರು, ಅಂತಿಮವಾಗಿ ಬಾರ್​ ಕೌನ್ಸಿಲ್​ನ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಬಳಿಕ ನ್ಯಾಯಾಲಯದಲ್ಲಿ ಅಮಿತ್ ತನ್ನ ಪರವಾಗಿಯೇ ವಾದ ಮಂಡಿಸಿದರು ಅಂತಿಮವಾಗಿ ಚೌಧರಿ ಸೇರಿದಂತೆ 13 ಆರೋಪಿಗಳನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಕಾನ್​ಸ್ಟೆಬಲ್​ಗಳಾದ ಕಿಶನ್​ಪಾಲ್ ಹಾಗೂ ಅಮಿತ್ ಕುಮಾರ್ ಅವರನ್ನು ಕೊಂದು ಅವರ ರೈಫಲ್​ಗಳನ್ನು ಲೂಟಿ ಮಾಡುವ ಅಪರಾಧವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿತ್ತು.

ಸುಮಿತ್ ಕೈಲ್, ನೀತು ಮತ್ತು ಧರ್ಮೇಂದ್ರ ಅವರು ನಿಜವಾದ ಅಪರಾಧಿಗಳು ಎಂದು ಸಾಬೀತಾದ ಪರಿಣಾಮ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಅಮಿತ್​ ಚೌಧರಿ ಸೈನ್ಯಕ್ಕೆ ಸೇರುವ ಕನಸ್ಸನ್ನು ಹೊತ್ತಿದ್ದರು, ಆದರೆ ಈ ಕೊಲೆ ಪ್ರಕರಣದಲ್ಲಿ ಸಿಲುಕಿ ಅವರ ಆಸೆ ಭಗ್ನಗೊಂಡಿತ್ತು.

ಮುಂದೆಯೂ ಕೂಡ ನ್ಯಾಯದ ಪರ ನಿಲ್ಲುತ್ತೇನೆ ನನ್ನಂತೆಯೇ ಅನ್ಯಾಯಕ್ಕೊಳಗಾದ ವ್ಯಕ್ತಿಯ ಜತೆಗೆ ನಿಂತು ಅವರಿಗೆ ಸಹಾಯ ಮಾಡುತ್ತೇನೆ ಎಂದು ಪಣ ತೊಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ