AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಮೀನು ಪಡೆದು ಕಾನೂನು ಅಧ್ಯಯನ ಮಾಡಿ ತನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸಿದ ಕೊಲೆ ಆರೋಪಿ

ಅಪರಾಧ ಮಾಡಿದವರು ಶಿಕ್ಷೆ ಅನುಭವಿಸುವುದೇನೋ ಸರಿ ಆದರೆ ಹಲವು ಮಂದಿ ತಮ್ಮದಲ್ಲದ ತಪ್ಪಿನಲ್ಲಿ ಸಿಲುಕಿಬಿಡುತ್ತಾರೆ. ಹಾಗೆಯೇ ಅಮಿತ್ ಚೌಧರಿ ಕೂಡ ತಾವು ತಪ್ಪು ಮಾಡದಿದ್ದರೂ ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಪಟ್ಟ ಕಟ್ಟಲಾಯಿತು.   18 ವರ್ಷ ವಯಸ್ಸಿನಲ್ಲಿಯೇ ಮಾಡದ ಪ್ರಕರಣದಲ್ಲಿ ಜೈಲು ಸೇರಿದ್ದರು.

ಜಾಮೀನು ಪಡೆದು ಕಾನೂನು ಅಧ್ಯಯನ ಮಾಡಿ ತನ್ನನ್ನು ನಿರಪರಾಧಿ ಎಂದು ಸಾಬೀತುಪಡಿಸಿದ ಕೊಲೆ ಆರೋಪಿ
ನಯನಾ ರಾಜೀವ್
|

Updated on: Dec 10, 2023 | 9:03 AM

Share

ಮೀರತ್​, ಡಿಸೆಂಬರ್ 10:   ಅಪರಾಧ ಮಾಡಿದವರು ಶಿಕ್ಷೆ ಅನುಭವಿಸುವುದೇನೋ ಸರಿ ಆದರೆ ಹಲವು ಮಂದಿ ತಮ್ಮದಲ್ಲದ ತಪ್ಪಿನಲ್ಲಿ ಸಿಲುಕಿಬಿಡುತ್ತಾರೆ. ಹಾಗೆಯೇ ಅಮಿತ್ ಚೌಧರಿ(Amit Chaudhary) ಕೂಡ ತಾವು ತಪ್ಪು ಮಾಡದಿದ್ದರೂ ಕೊಲೆ ಪ್ರಕರಣವೊಂದರಲ್ಲಿ ಆರೋಪಿ ಪಟ್ಟ ಕಟ್ಟಲಾಯಿತು.   18 ವರ್ಷ ವಯಸ್ಸಿನಲ್ಲಿಯೇ ಮಾಡದ ಪ್ರಕರಣದಲ್ಲಿ ಜೈಲು ಸೇರಿದ್ದರು.

2011ರಲ್ಲಿ ಇಬ್ಬರು ಕಾನ್​ಸ್ಟೆಬಲ್​ಗಳನ್ನು ಕೊಂದು ಶಸ್ತ್ರಾಸ್ತ್ರಗಳನ್ನು ಕದ್ದ ಆರೋಪಿದಲ್ಲಿ ಚೌಧರಿಗೆ ಕೊಲೆ ಆರೋಪಿ ಹಾಗೂ ಗ್ಯಾಂಗ್​ಸ್ಟರ್ ಪಟ್ಟ ಕಟ್ಟಿದ್ದರು. ಅವರ ಭವಿಷ್ಯ ಅಲ್ಲಿಯೇ ನಿಂತುಬಿಟ್ಟಿತ್ತು.ಆಗಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ಅಪರಾಧಿಯನ್ನು ತಕ್ಷಣ ಬಂಧಿಸುವಂತೆ ಆದೇಶಿಸಿದರು ಮತ್ತು ಘಟನೆ ನಡೆದಾಗ ಶಾಮ್ಲಿ ಜಿಲ್ಲೆಯಲ್ಲಿ ತನ್ನ ಸಹೋದರಿಯೊಂದಿಗೆ ಇದ್ದ ಅಮಿತ್ ನನ್ನು ಪ್ರಕರಣದ 17 ಆರೋಪಿಗಳಲ್ಲಿ ಒಬ್ಬನನ್ನಾಗಿ ಮಾಡಲಾಯಿತು.

ಕೊಲೆಯ ಸಂಚು ರೂಪಿಸಿದ ಕುಖ್ಯಾತ ಕೈಲ್ ಗ್ಯಾಂಗ್‌ನ ಭಾಗವೆಂದು ಆರೋಪಿಸಿ ಅವರನ್ನು ಜೈಲಿಗಟ್ಟಲಾಯಿತು. ಆದರೂ ಈ ಪರಿಸ್ಥಿತಿಯನ್ನು ಅಮಿತ್ ಪ್ರತಿಕೂಲ ಪರಿಸ್ಥಿತಿಯಾಗಿ ಬದಲಾಯಿಸಿಕೊಂಡರು. ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಕಾನೂನು ಅಧ್ಯಯನ ಮಾಡಿದರು.

ಅಮಿತ್ ಬಾಗ್​ಪ್​ನ ಕಿರ್ತಾಲ್​ ಗ್ರಾಮದ ರೈತರೊಬ್ಬರ ಮಗ, ಮುಜಾಫರ್​ನಗರದ ಜೈಲಿನಲ್ಲಿರುವಾಗ ಗ್ಯಾಂಗ್​ಸ್ಟರ್​​ಗಳು ಗ್ಯಾಂಗ್​ಗೆ ನನ್ನನ್ನು ಸೇರಿಸಿಕೊಳ್ಳಲು ಬಯಸಿದರು. ಆದರೆ ಜೈಲರ್ ಒಳ್ಳೆಯ ಸ್ವಭಾವದವರಾಗಿದ್ದ ಕಾರಣ ನನ್ನನ್ನು ಬೇರೊಂದು ಕಡೆ ಇರಿಸಿದ್ದರು.

ಮತ್ತಷ್ಟು ಓದಿ:  ಕೇರಳ: ಕೈಗಳಿಲ್ಲದಿದ್ದರೂ ಛಲಬಿಡದೆ, ಅಡೆತಡೆಗಳ ಮೀರಿ ಚಾಲನಾ ಪರವಾನಗಿ ಪಡೆದ ದಿಟ್ಟ ಮಹಿಳೆ

2013 ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಚೌಧರಿ ತನ್ನನ್ನು ತಾನು ನಿರಪರಾಧಿ ಎಂದು ಘೋಷಿಸಲು ಬೇಕಾದ ಸಾಕ್ಷ್ಯಗಳನ್ನು ಕಲೆಹಾಕಲು ಶುರು ಮಾಡಿದರು. ಸಮಾಜದಲ್ಲಿ ಅವರ ಕುಟುಂಬವು ತಲೆ ಎತ್ತಿ ನಡೆಯುವಂತೆ ಮಾಡುವುದು ಅಮಿತ್ ಉದ್ದೇಶವಾಗಿತ್ತು. ಕಾನೂನು ಅಧ್ಯಯನ ಮಾಡಿದರು,ಬಿಎ, ಎಲ್​ಎಲ್​ಬಿ, ಎಲ್​ಎಲ್​ಎಂ ಮಾಡಿದರು, ಅಂತಿಮವಾಗಿ ಬಾರ್​ ಕೌನ್ಸಿಲ್​ನ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಬಳಿಕ ನ್ಯಾಯಾಲಯದಲ್ಲಿ ಅಮಿತ್ ತನ್ನ ಪರವಾಗಿಯೇ ವಾದ ಮಂಡಿಸಿದರು ಅಂತಿಮವಾಗಿ ಚೌಧರಿ ಸೇರಿದಂತೆ 13 ಆರೋಪಿಗಳನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಕಾನ್​ಸ್ಟೆಬಲ್​ಗಳಾದ ಕಿಶನ್​ಪಾಲ್ ಹಾಗೂ ಅಮಿತ್ ಕುಮಾರ್ ಅವರನ್ನು ಕೊಂದು ಅವರ ರೈಫಲ್​ಗಳನ್ನು ಲೂಟಿ ಮಾಡುವ ಅಪರಾಧವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿತ್ತು.

ಸುಮಿತ್ ಕೈಲ್, ನೀತು ಮತ್ತು ಧರ್ಮೇಂದ್ರ ಅವರು ನಿಜವಾದ ಅಪರಾಧಿಗಳು ಎಂದು ಸಾಬೀತಾದ ಪರಿಣಾಮ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಅಮಿತ್​ ಚೌಧರಿ ಸೈನ್ಯಕ್ಕೆ ಸೇರುವ ಕನಸ್ಸನ್ನು ಹೊತ್ತಿದ್ದರು, ಆದರೆ ಈ ಕೊಲೆ ಪ್ರಕರಣದಲ್ಲಿ ಸಿಲುಕಿ ಅವರ ಆಸೆ ಭಗ್ನಗೊಂಡಿತ್ತು.

ಮುಂದೆಯೂ ಕೂಡ ನ್ಯಾಯದ ಪರ ನಿಲ್ಲುತ್ತೇನೆ ನನ್ನಂತೆಯೇ ಅನ್ಯಾಯಕ್ಕೊಳಗಾದ ವ್ಯಕ್ತಿಯ ಜತೆಗೆ ನಿಂತು ಅವರಿಗೆ ಸಹಾಯ ಮಾಡುತ್ತೇನೆ ಎಂದು ಪಣ ತೊಟ್ಟಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?