AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಹೈದರಾಬಾದ್ ಎಕ್ಸ್​ಪ್ರೆಸ್ ಸೇರಿದಂತೆ ಇಂದು ಹೊಸ 9 ವಂದೇಭಾರತ್ ರೈಲುಗಳಿಗೆ ಚಾಲನೆ

New Vande Bharat Trains: ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಸಂಚರಿಸುವ ಒಂದು ರೈಲು ಸೇರಿದಂತೆ ಇಂದು 9 ವಂದೇ ಭಾರತ್ ರೈಲುಗಳು ಲೋಕಾರ್ಪಣೆಗೊಳ್ಳಲಿವೆ. ಪ್ರಧಾನಿ ನರೇಂದ್ರ ಮೋದಿ ಭಾನುವಾರ ಈ ರೈಲುಗಳಿಗೆ ಚಾಲನೆ ಕೊಡುತ್ತಿದ್ದಾರೆ. ಈ 9 ರೈಲುಗಳೊಂದಿಗೆ ಭಾರತದಲ್ಲಿ ವಂದೇ ಭಾರತ್ ಟ್ರೈನುಗಳ ಸಂಖ್ಯೆ 34 ಕ್ಕೆ ಏರಲಿದೆ. ಈ 34 ರೈಲುಗಳಲ್ಲಿ ಕರ್ನಾಟದಲ್ಲಿ 3 ರೈಲುಗಳು ಸಂಚರಿಸಲಿವೆ. ಈ ಪೈಕಿ ಕರ್ನಾಟಕಕ್ಕೆ ಸೀಮಿತವಾಗಿರುವುದು ಒಂದು ರೈಲು ಮಾತ್ರ. ಇವತ್ತು ಬಿಡುಗಡೆ ಆಗುತ್ತಿರುವ 9 ರೈಲುಗಳಲ್ಲಿ ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಪಾಲು ಸಿಕ್ಕಿವೆ.

ಬೆಂಗಳೂರು ಹೈದರಾಬಾದ್ ಎಕ್ಸ್​ಪ್ರೆಸ್ ಸೇರಿದಂತೆ ಇಂದು ಹೊಸ 9 ವಂದೇಭಾರತ್ ರೈಲುಗಳಿಗೆ ಚಾಲನೆ
ವಂದೇ ಭಾರತ್ ರೈಲು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2023 | 10:21 AM

Share

ನವದೆಹಲಿ, ಸೆಪ್ಟೆಂಬರ್ 24: ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ 9 ಹೊಸ ವಂದೇ ಭಾರತ್ ರೈಲುಗಳಿಗೆ (Vande Bharat express Train) ಚಾಲನೆ ಕೊಡಲಿದ್ದಾರೆ. ಇದರೊಂದಿಗೆ ದೇಶಾದ್ಯಂತ ಚಾಲನೆಯಲ್ಲಿರುವ ವಂದೇ ಭಾರತ್ ರೈಲುಗಳ ಸಂಖ್ಯೆ 34ಕ್ಕೆ ಏರಲಿದೆ. ಈಗಾಗಲೇ 25 ವಂದೇ ಭಾರತ್ ರೈಲುಗಳು ಸೇವೆಯಲ್ಲಿವೆ. ಈಗ ಬಿಡುಗಡೆ ಆಗುತ್ತಿರುವ 9 ರೈಲುಗಳಲ್ಲಿ ಮಧ್ಯಪ್ರದೇಶಕ್ಕೆ 3 ರೈಲುಗಳು ಸಿಕ್ಕಿದೆ. ಇದರಲ್ಲಿ ಎರಡು ರೈಲುಗಳು ಮಧ್ಯಪ್ರದೇಶ ರಾಜ್ಯದೊಳಗೆ ಮಾತ್ರ ಸಂಚರಿಸುವಂಥವಾಗಿವೆ. ತಮಿಳುನಾಡಿಗೆ ಎರಡು ರೈಲುಗಳು ಸಿಕ್ಕಿವೆ. ಇನ್ನು, ಈ ಹೊಸ 9 ರೈಲುಗಳಲ್ಲಿ ಕರ್ನಾಟಕಕ್ಕೆ ಒಂದು ಸಿಕ್ಕಿದೆ. ಬೆಂಗಳೂರು ಮತ್ತು ಹೈದರಾಬಾದ್ ನಡುವೆ (Hyderabad Bengaluru Express) ಈ ರೈಲು ಸಂಚರಿಸಲುತ್ತದೆ.

ಈ ವಂದೇ ಭಾರತ್ ರೈಲುಗಳೆಲ್ಲವೂ ಎಕ್ಸ್​ಪ್ರೆಸ್ ಟ್ರೈನುಗಳಾಗಿದ್ದು, 8 ಬೋಗಿಗಳನ್ನು ಹೊಂದಿರುತ್ತವೆ. ಭಾನುವಾರ ಚಾಲನೆಗೊಳ್ಳಲಿರುವ ಈ 9 ರೈಲುಗಳ ಪಟ್ಟಿ ಇಂತಿದೆ:

  1. ರೂರ್ಕೆಲಾ – ಪುರಿ
  2. ಉದಯಪುರ್ – ಜೈಪುರ್
  3. ಕಾಸರಗೋಡು – ತಿರುವನಂತಪುರಂ
  4. ರಾಂಚಿ – ಹೌರಾ
  5. ಪಾಟ್ನಾ – ಹೌರಾ
  6. ತಿರುನೆಲ್ವೇಲಿ – ಚೆನ್ನೈ
  7. ಹೈದರಾಬಾದ್ – ಬೆಂಗಳೂರು
  8. ವಿಜಯವಾಡ – ಚೆನ್ನೈ
  9. ಜಾಮನಗರ್ – ಅಹ್ಮದಾಬಾದ್

ಇದನ್ನೂ ಓದಿ: ಅದಾನಿ ಭೇಟಿ ಮಾಡಿದ ಶರದ್ ಪವಾರ್; ರಾಹುಲ್ ಗಾಂಧಿಯವರ ಮಾತು ಯಾರೂ ಕೇಳುವುದಿಲ್ಲ ಎಂದು ಕಾಲೆಳೆದ ಬಿಜೆಪಿ

ಈಗಾಗಲೇ ಇರುವ 25 ವಂದೇ ಭಾರತ್ ರೈಲುಗಳ ಪಟ್ಟಿ

  1. ನವದೆಹಲಿ – ವಾರಾಣಸಿ
  2. ನವದೆಹಲಿ – ಶ್ರೀ ಮಾತಾ ವೈಷ್ಣೋದೇವಿ ಕಾತ್ರ
  3. ಮುಂಬೈ ಸೆಂಟ್ರಲ್ – ಗಾಂಧಿನಗರ್ ಕ್ಯಾಪಿಟಲ್
  4. ನವದೆಹಲಿ – ಅಂಬ್ ಅಂದೋರಾ
  5. ಚೆನ್ನೈ – ಮೈಸೂರು
  6. ಬಿಸಾಲಸಪುರ್ – ನಾಗಪುರ್
  7. ಹೌರಾ – ನ್ಯೂ ಜಲಪೈಗುರಿ
  8. ವಿಶಾಖಪಟ್ಟಣಂ – ಸಿಕಂದರಾಬಾದ್
  9. ಮುಂಬೈ – ಸೋಲಾಪುರ್
  10. ಮುಂಬೈನ – ಸಾಯಿನಗರ್ ಶಿರಡಿ
  11. ರಾಣಿ ಕಮಲಾಪತಿ – ಹಜ್ರತ್ ನಿಜಾಮುದ್ದೀನ್
  12. ಸಿಕಂದರಾಬಾದ್ – ತಿರುಪತಿ
  13. ಚೆನ್ನೈ – ಕೊಯಮತ್ತೂರು
  14. ದೆಹಲಿ – ಅಜ್ಮೆರ್
  15. ಕಾಸರಗೋಡು – ತಿರುವನಂತಪುರಂ
  16. ಹೌರಾ – ಪುರಿ
  17. ಆನಂದ್ ವಿಹಾರ್ – ಡೆಹ್ರಾಡೂನ್
  18. ನ್ಯೂ ಜಲಪೈಪುರಿ – ಗುವಾಹಟಿ
  19. ಮುಂಬೈ – ಮಡಗಾಂವ್
  20. ಪಟ್ನಾ – ರಾಂಚಿ
  21. ಬೆಂಗಳೂರು – ಧಾರವಾಡ
  22. ರಾಣಿ ಕಮಲಾಪತಿ – ಜಬಲಪುರ್
  23. ಇಂದೋರ್ – ಭೋಪಾಲ್
  24. ಜೋಧಪುರ್ – ಸಬರಮತಿ
  25. ಗೋರಖಪುರ್ – ಲಕ್ನೋ ಚಾರ್​ಬಾಗ್

ಇದನ್ನೂ ಓದಿ: ಜಿ20ಗೆ ಹೇಗೆ ನಡೆದಿತ್ತು ತಯಾರಿ? ಎಡಬದಿಯ ಸ್ಟೇರಿಂಗ್​​ನಲ್ಲಿ ಚಾಲನೆ ಬಗ್ಗೆ ಮೋದಿ ಜತೆ ಅನುಭವ ಹಂಚಿಕೊಂಡ ಸಿಆರ್​​ಪಿಎಫ್ ಚಾಲಕ

ಕರ್ನಾಟಕದಲ್ಲಿ ಸಾಗಿಹೋಗುವ ವಂದೇ ಭಾರತ್ ರೈಲುಗಳಿವು:

  1. ಮೈಸೂರು – ಚೆನ್ನೈ
  2. ಬೆಂಗಳೂರು – ಧಾರವಾಡ
  3. ಹೈದರಾಬಾದ್ – ಬೆಂಗಳೂರು

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ