Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಈ ಫೋಟೋ ಹಿಮಾಚಲ ಪ್ರದೇಶದ ಮನಾಲಿಯದ್ದೇ ಆದರೂ..ಕೊವಿಡ್​ 19 2ನೇ ಅಲೆ ಸಂದರ್ಭದಲ್ಲ..!

Amigosblink ಸ್ಟುಡಿಯೋದ ಫೇಸ್​ಬುಕ್​ ಪೇಜ್​ನ ಅಡ್ಮಿನಿಸ್ಟ್ರೇಟರ್ ಆಗಿರುವ ಅಜಯ್​ ಕುಮಾರ್​ ಅವರನ್ನು ಬೂಮ್​ ಸಂಪರ್ಕಿಸಿ ಈ ಬಗ್ಗೆ ಪ್ರಶ್ನೆ ಮಾಡಿದೆ. ಈ ಫೋಟೋವನ್ನು ತೆಗೆದಿದ್ದು 2020ರ ಡಿಸೆಂಬರ್​ನಲ್ಲಿ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

Fact Check: ಈ ಫೋಟೋ ಹಿಮಾಚಲ ಪ್ರದೇಶದ ಮನಾಲಿಯದ್ದೇ ಆದರೂ..ಕೊವಿಡ್​ 19 2ನೇ ಅಲೆ ಸಂದರ್ಭದಲ್ಲ..!
ವೈರಲ್​ ಆದ ಫೋಟ)
Follow us
TV9 Web
| Updated By: Lakshmi Hegde

Updated on: Jul 13, 2021 | 6:43 PM

ಇತ್ತೀಚೆಗೆ ಅಂದರೆ ಜುಲೈ ಪ್ರಾರಂಭದಲ್ಲಿ ಮನಾಲಿ(Manali) ಯ ಮಾಲ್​ ರಸ್ತೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ವಿಪರೀತ ಜನಸಂದಣಿ ಇರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದ ಕೆಲವು ಫೇಸ್​ಬುಕ್​, ಟ್ವಿಟರ್​ ಬಳಕೆದಾರರು ಕೊವಿಡ್​ 2ನೇ ಅಲೆಯ ಹೊತ್ತಲ್ಲಿ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಇಷ್ಟೊಂದು ಪ್ರವಾಸಿಗರು ನೆರೆದಿದ್ದಾರೆ. ಇಲ್ಲಿ ಯಾವುದೇ ಸಾಮಾಜಿಕ ಅಂತರ ನಿಯಮ ಪಾಲನೆಯಾಗುತ್ತಿಲ್ಲ ಎಂದು ಕ್ಯಾಪ್ಷನ್​ಗಳನ್ನು ಬರೆದಿದ್ದರು. ಅಲ್ಲಿ ಪ್ರವಾಸಿಗರು ನೆರೆದಿದ್ದನ್ನು ನೋಡಿದವರೆಲ್ಲ ಹುಬ್ಬೇರಿಸಿದ್ದರು.

ಆದರೆ ಈ ಫೋಟೋ ಹಳೇಯದಾಗಿದ್ದು, ಕೊವಿಡ್​ 19 ಎರಡನೇ ಅಲೆ ಬರುವುದಕ್ಕೂ ಮೊದಲೇ Amigosblink ಎಂಬ ಸ್ಟುಡಿಯೋ ತೆಗೆದಿದ್ದು ಎಂಬುದು ಫ್ಯಾಕ್ಟ್​ಚೆಕ್ (FactCheck) ​ನಿಂದ ಗೊತ್ತಾಗಿದೆ. ಆಲ್ಟ್​ ನ್ಯೂಸ್​ ಈ ಫೋಟೋವನ್ನು ರಿವರ್ಸ್​ ಸರ್ಚ್​ ಇಮೇಜ್​​ಗೆ ಹಾಕಿತ್ತು. ಆಗ ಇದೇ ಫೋಟೋ 2021ರ ಜನವರಿ 24ರಂದೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈ ಫೋಟೋ ತೆಗೆಯಲ್ಪಟ್ಟಿದೆ ಎಂದೂ ಗೊತ್ತಾಗಿದೆ. ಹಾಗೇ, ಇದು ಹಿಮಾಚಲ ಪ್ರದೇಶ ಮನಾಲಿಯದ್ದೇ ಫೋಟೋ ಆದರೂ 2020ರ ಡಿಸೆಂಬರ್​​ 31ರಂದೇ ಕ್ಲಿಕ್ಕಿಸಿದ್ದು ಎಂದು ಬೂಮ್​ ಫ್ಯಾಕ್ಟ್​ಚೆಕ್​ ಕೂಡ ಸ್ಪಷ್ಟಪಡಿಸಿದೆ.

ಹಳೇ ಫೋಟೋವನ್ನು ಜುಲೈ 4ರಂದು ಅಮರ್​ಪ್ರೀತ್​ ಸಿಂಗ್​ ಎಂಬುವರು ಶೇರ್​ ಮಾಡಿಕೊಂಡಿದ್ದರು. ಈ ಫೋಟೋ ಮಾತನಾಡುತ್ತದೆ. ಆಸ್ಪತ್ರೆಯಲ್ಲಿ ರೂಂ ಇಲ್ಲ..ಹಾಗೇ ಮನಾಲಿಯ ಹೋಟೆಲ್​ಗಳಲ್ಲೂ ರೂಂ ಇಲ್ಲ ಎಂದು ಕ್ಯಾಪ್ಷನ್​ ಬರೆದಿದ್ದರು.

Amigosblink ಸ್ಟುಡಿಯೋದ ಫೇಸ್​ಬುಕ್​ ಪೇಜ್​ನ ಅಡ್ಮಿನಿಸ್ಟ್ರೇಟರ್ ಆಗಿರುವ ಅಜಯ್​ ಕುಮಾರ್​ ಅವರನ್ನು ಬೂಮ್​ ಸಂಪರ್ಕಿಸಿ ಈ ಬಗ್ಗೆ ಪ್ರಶ್ನೆ ಮಾಡಿದೆ. ಈ ಫೋಟೋವನ್ನು ತೆಗೆದಿದ್ದು 2020ರ ಡಿಸೆಂಬರ್​ನಲ್ಲಿ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅದರ ಫೇಸ್​ಬುಕ್ ಪೇಜ್​​ನಲ್ಲಿ ಕಳೆದ ಡಿಸೆಂಬರ್​​ನಲ್ಲಿ ನೀಡಲಾದ ಲೈವ್​​ನಲ್ಲಿಯೂ ಈ ಸನ್ನಿವೇಶ ಕಂಡುಬಂದಿದೆ. ಹಾಗಾಗಿ ಇತ್ತೀಚೆಗೆ ತೆಗೆಯಲಾದ ಫೋಟೋ ಇದಲ್ಲ ಎಂದು ಆಲ್ಟ್​ ಮತ್ತು ಬೂಮ್​ ಮಾದ್ಯಮಗಳು ವರದಿ ಮಾಡಿವೆ.

ಆರು ತಿಂಗಳ ಹಿಂದೆಯೇ ವೈರಲ್​ ಆಗಿತ್ತು ಈ ಫೋಟೋ

ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್

ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ