AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಈ ಫೋಟೋ ಹಿಮಾಚಲ ಪ್ರದೇಶದ ಮನಾಲಿಯದ್ದೇ ಆದರೂ..ಕೊವಿಡ್​ 19 2ನೇ ಅಲೆ ಸಂದರ್ಭದಲ್ಲ..!

Amigosblink ಸ್ಟುಡಿಯೋದ ಫೇಸ್​ಬುಕ್​ ಪೇಜ್​ನ ಅಡ್ಮಿನಿಸ್ಟ್ರೇಟರ್ ಆಗಿರುವ ಅಜಯ್​ ಕುಮಾರ್​ ಅವರನ್ನು ಬೂಮ್​ ಸಂಪರ್ಕಿಸಿ ಈ ಬಗ್ಗೆ ಪ್ರಶ್ನೆ ಮಾಡಿದೆ. ಈ ಫೋಟೋವನ್ನು ತೆಗೆದಿದ್ದು 2020ರ ಡಿಸೆಂಬರ್​ನಲ್ಲಿ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

Fact Check: ಈ ಫೋಟೋ ಹಿಮಾಚಲ ಪ್ರದೇಶದ ಮನಾಲಿಯದ್ದೇ ಆದರೂ..ಕೊವಿಡ್​ 19 2ನೇ ಅಲೆ ಸಂದರ್ಭದಲ್ಲ..!
ವೈರಲ್​ ಆದ ಫೋಟ)
TV9 Web
| Edited By: |

Updated on: Jul 13, 2021 | 6:43 PM

Share

ಇತ್ತೀಚೆಗೆ ಅಂದರೆ ಜುಲೈ ಪ್ರಾರಂಭದಲ್ಲಿ ಮನಾಲಿ(Manali) ಯ ಮಾಲ್​ ರಸ್ತೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ವಿಪರೀತ ಜನಸಂದಣಿ ಇರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದ ಕೆಲವು ಫೇಸ್​ಬುಕ್​, ಟ್ವಿಟರ್​ ಬಳಕೆದಾರರು ಕೊವಿಡ್​ 2ನೇ ಅಲೆಯ ಹೊತ್ತಲ್ಲಿ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಇಷ್ಟೊಂದು ಪ್ರವಾಸಿಗರು ನೆರೆದಿದ್ದಾರೆ. ಇಲ್ಲಿ ಯಾವುದೇ ಸಾಮಾಜಿಕ ಅಂತರ ನಿಯಮ ಪಾಲನೆಯಾಗುತ್ತಿಲ್ಲ ಎಂದು ಕ್ಯಾಪ್ಷನ್​ಗಳನ್ನು ಬರೆದಿದ್ದರು. ಅಲ್ಲಿ ಪ್ರವಾಸಿಗರು ನೆರೆದಿದ್ದನ್ನು ನೋಡಿದವರೆಲ್ಲ ಹುಬ್ಬೇರಿಸಿದ್ದರು.

ಆದರೆ ಈ ಫೋಟೋ ಹಳೇಯದಾಗಿದ್ದು, ಕೊವಿಡ್​ 19 ಎರಡನೇ ಅಲೆ ಬರುವುದಕ್ಕೂ ಮೊದಲೇ Amigosblink ಎಂಬ ಸ್ಟುಡಿಯೋ ತೆಗೆದಿದ್ದು ಎಂಬುದು ಫ್ಯಾಕ್ಟ್​ಚೆಕ್ (FactCheck) ​ನಿಂದ ಗೊತ್ತಾಗಿದೆ. ಆಲ್ಟ್​ ನ್ಯೂಸ್​ ಈ ಫೋಟೋವನ್ನು ರಿವರ್ಸ್​ ಸರ್ಚ್​ ಇಮೇಜ್​​ಗೆ ಹಾಕಿತ್ತು. ಆಗ ಇದೇ ಫೋಟೋ 2021ರ ಜನವರಿ 24ರಂದೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈ ಫೋಟೋ ತೆಗೆಯಲ್ಪಟ್ಟಿದೆ ಎಂದೂ ಗೊತ್ತಾಗಿದೆ. ಹಾಗೇ, ಇದು ಹಿಮಾಚಲ ಪ್ರದೇಶ ಮನಾಲಿಯದ್ದೇ ಫೋಟೋ ಆದರೂ 2020ರ ಡಿಸೆಂಬರ್​​ 31ರಂದೇ ಕ್ಲಿಕ್ಕಿಸಿದ್ದು ಎಂದು ಬೂಮ್​ ಫ್ಯಾಕ್ಟ್​ಚೆಕ್​ ಕೂಡ ಸ್ಪಷ್ಟಪಡಿಸಿದೆ.

ಹಳೇ ಫೋಟೋವನ್ನು ಜುಲೈ 4ರಂದು ಅಮರ್​ಪ್ರೀತ್​ ಸಿಂಗ್​ ಎಂಬುವರು ಶೇರ್​ ಮಾಡಿಕೊಂಡಿದ್ದರು. ಈ ಫೋಟೋ ಮಾತನಾಡುತ್ತದೆ. ಆಸ್ಪತ್ರೆಯಲ್ಲಿ ರೂಂ ಇಲ್ಲ..ಹಾಗೇ ಮನಾಲಿಯ ಹೋಟೆಲ್​ಗಳಲ್ಲೂ ರೂಂ ಇಲ್ಲ ಎಂದು ಕ್ಯಾಪ್ಷನ್​ ಬರೆದಿದ್ದರು.

Amigosblink ಸ್ಟುಡಿಯೋದ ಫೇಸ್​ಬುಕ್​ ಪೇಜ್​ನ ಅಡ್ಮಿನಿಸ್ಟ್ರೇಟರ್ ಆಗಿರುವ ಅಜಯ್​ ಕುಮಾರ್​ ಅವರನ್ನು ಬೂಮ್​ ಸಂಪರ್ಕಿಸಿ ಈ ಬಗ್ಗೆ ಪ್ರಶ್ನೆ ಮಾಡಿದೆ. ಈ ಫೋಟೋವನ್ನು ತೆಗೆದಿದ್ದು 2020ರ ಡಿಸೆಂಬರ್​ನಲ್ಲಿ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅದರ ಫೇಸ್​ಬುಕ್ ಪೇಜ್​​ನಲ್ಲಿ ಕಳೆದ ಡಿಸೆಂಬರ್​​ನಲ್ಲಿ ನೀಡಲಾದ ಲೈವ್​​ನಲ್ಲಿಯೂ ಈ ಸನ್ನಿವೇಶ ಕಂಡುಬಂದಿದೆ. ಹಾಗಾಗಿ ಇತ್ತೀಚೆಗೆ ತೆಗೆಯಲಾದ ಫೋಟೋ ಇದಲ್ಲ ಎಂದು ಆಲ್ಟ್​ ಮತ್ತು ಬೂಮ್​ ಮಾದ್ಯಮಗಳು ವರದಿ ಮಾಡಿವೆ.

ಆರು ತಿಂಗಳ ಹಿಂದೆಯೇ ವೈರಲ್​ ಆಗಿತ್ತು ಈ ಫೋಟೋ

ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ