ಇಂದಿರಾ ಗಾಂಧಿಯನ್ನು ಗಗನಯಾತ್ರಿ ಎಂದು ಕರೆದು ಮತ್ತೆ ನಗೆಪಾಟಲಿಗೀಡಾದ ಮಮತಾ ಬ್ಯಾನರ್ಜಿ

ಭಾರತದ ಮೊದಲ ಯಾತ್ರಿ ರಾಕೇಶ್ ಶರ್ಮಾ ಎನ್ನುವ ಬದಲು ರಾಕೇಶ್ ರೋಷನ್ ಎನ್ನುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಇತ್ತೀಚೆಗಷ್ಟೇ   ನಗೆಪಾಟಲಿಗೀಡಾಗಿದ್ದರು.. ಇದೀಗ ಇಂದಿರಾ ಗಾಂಧಿಯವರನ್ನು ಗಗನಯಾತ್ರಿ ಎಂದು ಹೇಳುವ ಮೂಲಕ ಮತ್ತೊಂದು ತಪ್ಪು ಮಾಡಿದ್ದಾರೆ. ರಾಕೇಶ್ ಶರ್ಮಾ ಚಂದ್ರನಲ್ಲಿಗೆ ಹೋಗಿದ್ದಾಗ ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು ಇಂದಿರಾ ಗಾಂಧಿ ಕೇಳಿದ್ದರು ಎನ್ನುವ ಬದಲು ಇಂದಿರಾ  ಗಾಂಧಿ ಗಗನಯಾತ್ರಿ ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿಯನ್ನು ಗಗನಯಾತ್ರಿ ಎಂದು ಕರೆದು ಮತ್ತೆ ನಗೆಪಾಟಲಿಗೀಡಾದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Image Credit source: Mint

Updated on: Aug 29, 2023 | 11:07 AM

ಭಾರತದ ಮೊದಲ ಯಾತ್ರಿ ರಾಕೇಶ್ ಶರ್ಮಾ ಎನ್ನುವ ಬದಲು ರಾಕೇಶ್ ರೋಷನ್ ಎನ್ನುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಇತ್ತೀಚೆಗಷ್ಟೇ   ನಗೆಪಾಟಲಿಗೀಡಾಗಿದ್ದರು.. ಇದೀಗ ಇಂದಿರಾ ಗಾಂಧಿಯವರನ್ನು ಗಗನಯಾತ್ರಿ ಎಂದು ಹೇಳುವ ಮೂಲಕ ಮತ್ತೊಂದು ತಪ್ಪು ಮಾಡಿದ್ದಾರೆ. ರಾಕೇಶ್ ಶರ್ಮಾ ಚಂದ್ರನಲ್ಲಿಗೆ ಹೋಗಿದ್ದಾಗ ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು ಇಂದಿರಾ ಗಾಂಧಿ ಕೇಳಿದ್ದರು ಎನ್ನುವ ಬದಲು ಇಂದಿರಾ  ಗಾಂಧಿ ಗಗನಯಾತ್ರಿ ಎಂದು ಹೇಳಿದ್ದಾರೆ.

ಇಂದಿರಾ ಗಾಂಧಿ ಚಂದ್ರನತ್ತ ಜನರನ್ನು ಕಳುಹಿಸಿದ್ದರು, ಆಗ ನಾನು ತುಂಬಾ ಚಿಕ್ಕವಳಿದ್ದೆ, ನಾಣು ದಿನ ಪತ್ರಿಕೆ ಓದುತ್ತಿದ್ದೆ, ಆಗ ಒಂದು ಕಥೆ ಬಂದಿತ್ತು, ಅದರಲ್ಲಿ ಇಂದಿರಾ ಗಾಂಧಿ ಚಂದ್ರನನ್ನು ತಲುಪಿದಾಗ ರಾಕೇಶ್​ನನ್ನು ಕೇಳಿದ್ದರು, ಭಾರತವು ಮೇಲಿನಿಂದ ಹೇಗೆ ಕಾಣುತ್ತದೆ ಎಂದು, ಆಗ ರಾಕೇಶ್ ಶರ್ಮಾ ಸಾರೆ ಜಹಾನ್​ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ ಎಂದಿದ್ದರು ಎಂದು ಭಾಷಣದಲ್ಲಿ ಹೇಳಿರುವುದು ಇದೀಗ ವೈರಲ್ ಆಗಿದೆ.

ಮಮತಾ ವಿಡಿಯೋ

ಚಂದ್ರಯಾನ 3 ರಲ್ಲಿ ಕೆಲಸ ಮಾಡಿದವರಲ್ಲಿ 28 ವಿಜ್ಞಾನಿಗಳು ಪಶ್ಚಿಮ ಬಂಗಾಳದವರಿದ್ದಾರೆ, ನನಗೆ ಅವಕಾಶ ಸಿಕ್ಕರೆ ಅವರನ್ನು ಗೌರವಿಸಲು ಬಯಸುತ್ತೇನೆ ಎಂದರು.

ಮತ್ತಷ್ಟು ಓದಿ: ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್​​ಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡ ಮಮತಾ ಬ್ಯಾನರ್ಜಿ

ಅಷ್ಟೇ ಅಲ್ಲ, ಚಂದ್ರಯಾನ 3 ರ ಸಾಫ್ಟ್​ ಲ್ಯಾಂಡಿಂಗ್​ನ್ನು ನಾನು ನೋಡಬೇಕೆಂದು ಬಯಸಿದ್ದೆ ಆದರೆ ಸರಿಯಾಗಿ ನೋಡಲು ಸಾಧ್ಯವಾಗಿಲ್ಲ, ಪರದೆಯ ಮೇಲೆ ಯಾರದ್ದೋ ಮುಖ ಕಾಣಿಸುತ್ತಿತ್ತು ಹಾಗಾಗಿ ಟಿವಿಯನ್ನು ಸ್ವಿಚ್ಡ್​ ಆಫ್ ಮಾಡಬೇಕಾಯಿತು ಎಂದರು. ವಾಸ್ತವವಾಗಿ ಮಮತಾ ಬ್ಯಾನರ್ಜಿ ಉಲ್ಲೇಖವು ಪ್ರಧಾನಿ ಮೋದಿಯವರ ಬಗ್ಗೆ ಆಗಿತ್ತು. ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆದ ಕೂಡಲೇ ಮೋದಿ ತ್ರಿವರ್ಣ ಧ್ವಜ ಬೀಸಿದ್ದರು. ಎಲ್ಲಾ ವಿಜ್ಞಾನಿಗಳು ಹಾಗೂ ದೇಶವಾಸಿಗಳಿಗೆ ಶುಭ ಕೋರಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us