AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Supreme Court: ಪಿಐಎಲ್​ ಸಲ್ಲಿಸುವವರಿಗೆ ಕಿವಿಮಾತು ಹೇಳಿದ ಸುಪ್ರೀಂಕೋರ್ಟ್​; ವಕೀಲರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಅಸಮಾಧಾನ

ಕೇಂದ್ರದ ಕೊವಿಡ್​ 19 (Covid 19) ಲಸಿಕೆ ನೀತಿಯನ್ನು ಪ್ರಶ್ನಿಸಿದ ಹಲವರ ಬಗ್ಗೆ ಎಫ್​ಐಆರ್ ದಾಖಲಿಸಲಾಗಿದ್ದು, ಅದನ್ನೆಲ್ಲ ರದ್ದುಗೊಳಿಸುವಂತೆ ಸಲ್ಲಿಸಲಾದ ಪಿಐಎಲ್​ಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ಡಿ.ವೈ.ಚಂದ್ರಚೂಡ್​ ಮತ್ತು ಎಂ.ಆರ್​.ಶಾರನ್ನೊಳಗೊಂಡ ವಿಭಾಗೀಯ ಪೀಠ​, ಬಹುತೇಕ ಪಿಐಎಲ್​​ಗಳಲ್ಲಿ ಸತ್ಯ ಶೋಧನೆಯ ಹೊಣೆಯನ್ನು ನ್ಯಾಯಾಲಯದ ಮೇಲೆ ಹಾಕಬಹುದು ಎಂದು ವಕೀಲರೂ ಭಾವಿಸುತ್ತಾರೆ ಎಂದು ಹೇಳಿದೆ.

Supreme Court: ಪಿಐಎಲ್​ ಸಲ್ಲಿಸುವವರಿಗೆ ಕಿವಿಮಾತು ಹೇಳಿದ ಸುಪ್ರೀಂಕೋರ್ಟ್​; ವಕೀಲರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಅಸಮಾಧಾನ
ಸುಪ್ರೀಂ​ ಕೋರ್ಟ್
Follow us
TV9 Web
| Updated By: Lakshmi Hegde

Updated on:Jul 21, 2021 | 5:00 PM

ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸುವವರು, ದಾವೆ ಹೂಡುವವರು ಕೋರ್ಟ್​ನಲ್ಲಿ ಮನವಿ ಮಾಡುವುದಕ್ಕೆ ಸಂಬಂಧಪಟ್ಟು ಇರುವ ಎಲ್ಲ ನಿಯಮಗಳನ್ನೂ ಸಂಪೂರ್ಣವಾಗಿ ಪಾಲಿಸಬೇಕು ಮತ್ತು ಸತ್ಯ ಶೋಧನೆಯ ಸಂಪೂರ್ಣ ಹೊಣೆಯನ್ನೂ ನ್ಯಾಯಾಲಯಗಳ ಮೇಲೆ ಬಿಡುವಂತಿಲ್ಲ ಎಂದು ಸುಪ್ರೀಂಕೋರ್ಟ್ (Supreme Court) ತಿಳಿಸಿದೆ.

ಕೇಂದ್ರದ ಕೊವಿಡ್​ 19 (Covid 19) ಲಸಿಕೆ ನೀತಿಯನ್ನು ಪ್ರಶ್ನಿಸಿದ ಹಲವರ ಬಗ್ಗೆ ಎಫ್​ಐಆರ್ ದಾಖಲಿಸಲಾಗಿದ್ದು, ಅದನ್ನೆಲ್ಲ ರದ್ದುಗೊಳಿಸುವಂತೆ ಸಲ್ಲಿಸಲಾದ ಪಿಐಎಲ್​ಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ಡಿ.ವೈ.ಚಂದ್ರಚೂಡ್​ ಮತ್ತು ಎಂ.ಆರ್​.ಶಾರನ್ನೊಳಗೊಂಡ ವಿಭಾಗೀಯ ಪೀಠ​, ಬಹುತೇಕ ಪಿಐಎಲ್​​ಗಳಲ್ಲಿ ಸತ್ಯ ಶೋಧನೆಯ ಹೊಣೆಯನ್ನು ನ್ಯಾಯಾಲಯದ ಮೇಲೆ ಹಾಕಬಹುದು ಎಂದು ವಕೀಲರೂ ಭಾವಿಸುತ್ತಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಕೂಡ ಉಳಿದ ರಿಟ್​ ಅರ್ಜಿಗಳಂತೆ. ಕೋರ್ಟ್​ಗೆ ಮನವಿ ಮಾಡುವಾಗ ಪಾಲಿಸಬೇಕಾದ ಒಂದಷ್ಟು ನಿಯಮಗಳು ಇರುತ್ತವೆ. ಅದನ್ನು ಪ್ರತಿಯೊಬ್ಬರ ಪಿಐಎಲ್​, ದಾವೆ ಹೂಡುವವರೂ ಪಾಲಿಸಬೇಕು ಎಂದು ಹೇಳಿದೆ.

ಏನಿದು ಕೇಸ್​? ಇತ್ತೀಚೆಗೆ ಅನೇಕರು ಕೇಂದ್ರದ ಕೊವಿಡ್ 19 ಲಸಿಕೆಯ ಬಗ್ಗೆ ವ್ಯಂಗ್ಯ ಮಾಡಿ, ತಪ್ಪು ಮಾಹಿತಿ ನೀಡಿ ಜಾಹೀರಾತು, ಪೋಸ್ಟರ್​ಗಳನ್ನು ಪ್ರದರ್ಶಿಸುತ್ತಿದ್ದರು. ಕೆಲವು ಸೋಷಿಯಲ್ ಮೀಡಿಯಾಗಳಲ್ಲೂ ಇದನ್ನು ಹರಿಬಿಡುತ್ತಿದ್ದರು. ಅದರ ನಿಯಂತ್ರಣಕ್ಕೆ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು ಅನೇಕರ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದಾರೆ. ಆದರೆ ಇನ್ನು ಮುಂದೆ ಕೂಡ ಕೊವಿಡ್ 19 ಲಸಿಕೆ ನೀತಿಯನ್ನು ಪ್ರಶ್ನಿಸಿದವರ ವಿರುದ್ಧ ಎಫ್​ಐಆರ್​ ದಾಖಲು ಮಾಡದಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ವಕೀಲ ಯಾದವ್​ ಎಂಬುವರು ಸುಪ್ರೀಂಕೋರ್ಟ್​ಗೆ ಪಿಐಎಲ್ ಸಲ್ಲಿಸಿದ್ದರು. ಅದರ ವಿಚಾರಣೆ ವೇಳೆ ಹೀಗೊಂದು ವಿಷಯವನ್ನು ಸುಪ್ರೀಂಕೋರ್ಟ್ ಹೇಳಿದೆ. ಯಾದವ್​ ಅವರೇ ನೀವು ಒಂದು ಸಾಮಾನ್ಯವಾದ, ಹೆಚ್ಚೇನೂ ವಿವರವೇ ಇಲ್ಲದ ಪಿಐಎಲ್​ನ್ನು ಸಲ್ಲಿಸಿದ್ದೀರಿ. ದೆಹಲಿ ಪೊಲೀಸರು ದಾಖಲಿಸಿರುವ ಎಫ್​ಐಆರ್​ನ  ದಾಖಲೆಗಳ ಪ್ರತಿಯನ್ನಾದರೂ ನಮಗೆ ನೀಡಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: Pegasus row ಭಾರತವನ್ನು ಕಣ್ಗಾವಲು ರಾಜ್ಯವನ್ನಾಗಿ ಮಾಡಲು ಬಿಜೆಪಿ ಬಯಸಿದೆ: ಮಮತಾ ಬ್ಯಾನರ್ಜಿ

While filing PILs and litigants have to comply with rules of pleadings directed By Supreme Court

Published On - 4:57 pm, Wed, 21 July 21

ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷ ಅನ್ನೋದೇ ಇಲ್ಲ: ಮುಸ್ಲಿಂ ಯುವಕ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ನನ್ನನ್ನು ತಮಿಳರು ಕೆಣಕಬಹುದು: ವಸಿಷ್ಠ ಸಿಂಹ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕಮಲ್ ಹಾಸನ್ ಮೇಲೆ ಕನ್ನಡಿಗರ ಋಣ ಇದೆ, ಕ್ಷಮೆ ಕೇಳಬೇಕು: ಸಾಧುಕೋಕಿಲ
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು