AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Supreme Court: ಪಿಐಎಲ್​ ಸಲ್ಲಿಸುವವರಿಗೆ ಕಿವಿಮಾತು ಹೇಳಿದ ಸುಪ್ರೀಂಕೋರ್ಟ್​; ವಕೀಲರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಅಸಮಾಧಾನ

ಕೇಂದ್ರದ ಕೊವಿಡ್​ 19 (Covid 19) ಲಸಿಕೆ ನೀತಿಯನ್ನು ಪ್ರಶ್ನಿಸಿದ ಹಲವರ ಬಗ್ಗೆ ಎಫ್​ಐಆರ್ ದಾಖಲಿಸಲಾಗಿದ್ದು, ಅದನ್ನೆಲ್ಲ ರದ್ದುಗೊಳಿಸುವಂತೆ ಸಲ್ಲಿಸಲಾದ ಪಿಐಎಲ್​ಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ಡಿ.ವೈ.ಚಂದ್ರಚೂಡ್​ ಮತ್ತು ಎಂ.ಆರ್​.ಶಾರನ್ನೊಳಗೊಂಡ ವಿಭಾಗೀಯ ಪೀಠ​, ಬಹುತೇಕ ಪಿಐಎಲ್​​ಗಳಲ್ಲಿ ಸತ್ಯ ಶೋಧನೆಯ ಹೊಣೆಯನ್ನು ನ್ಯಾಯಾಲಯದ ಮೇಲೆ ಹಾಕಬಹುದು ಎಂದು ವಕೀಲರೂ ಭಾವಿಸುತ್ತಾರೆ ಎಂದು ಹೇಳಿದೆ.

Supreme Court: ಪಿಐಎಲ್​ ಸಲ್ಲಿಸುವವರಿಗೆ ಕಿವಿಮಾತು ಹೇಳಿದ ಸುಪ್ರೀಂಕೋರ್ಟ್​; ವಕೀಲರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಅಸಮಾಧಾನ
ಸುಪ್ರೀಂ​ ಕೋರ್ಟ್
TV9 Web
| Updated By: Lakshmi Hegde|

Updated on:Jul 21, 2021 | 5:00 PM

Share

ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸುವವರು, ದಾವೆ ಹೂಡುವವರು ಕೋರ್ಟ್​ನಲ್ಲಿ ಮನವಿ ಮಾಡುವುದಕ್ಕೆ ಸಂಬಂಧಪಟ್ಟು ಇರುವ ಎಲ್ಲ ನಿಯಮಗಳನ್ನೂ ಸಂಪೂರ್ಣವಾಗಿ ಪಾಲಿಸಬೇಕು ಮತ್ತು ಸತ್ಯ ಶೋಧನೆಯ ಸಂಪೂರ್ಣ ಹೊಣೆಯನ್ನೂ ನ್ಯಾಯಾಲಯಗಳ ಮೇಲೆ ಬಿಡುವಂತಿಲ್ಲ ಎಂದು ಸುಪ್ರೀಂಕೋರ್ಟ್ (Supreme Court) ತಿಳಿಸಿದೆ.

ಕೇಂದ್ರದ ಕೊವಿಡ್​ 19 (Covid 19) ಲಸಿಕೆ ನೀತಿಯನ್ನು ಪ್ರಶ್ನಿಸಿದ ಹಲವರ ಬಗ್ಗೆ ಎಫ್​ಐಆರ್ ದಾಖಲಿಸಲಾಗಿದ್ದು, ಅದನ್ನೆಲ್ಲ ರದ್ದುಗೊಳಿಸುವಂತೆ ಸಲ್ಲಿಸಲಾದ ಪಿಐಎಲ್​ಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ಡಿ.ವೈ.ಚಂದ್ರಚೂಡ್​ ಮತ್ತು ಎಂ.ಆರ್​.ಶಾರನ್ನೊಳಗೊಂಡ ವಿಭಾಗೀಯ ಪೀಠ​, ಬಹುತೇಕ ಪಿಐಎಲ್​​ಗಳಲ್ಲಿ ಸತ್ಯ ಶೋಧನೆಯ ಹೊಣೆಯನ್ನು ನ್ಯಾಯಾಲಯದ ಮೇಲೆ ಹಾಕಬಹುದು ಎಂದು ವಕೀಲರೂ ಭಾವಿಸುತ್ತಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಕೂಡ ಉಳಿದ ರಿಟ್​ ಅರ್ಜಿಗಳಂತೆ. ಕೋರ್ಟ್​ಗೆ ಮನವಿ ಮಾಡುವಾಗ ಪಾಲಿಸಬೇಕಾದ ಒಂದಷ್ಟು ನಿಯಮಗಳು ಇರುತ್ತವೆ. ಅದನ್ನು ಪ್ರತಿಯೊಬ್ಬರ ಪಿಐಎಲ್​, ದಾವೆ ಹೂಡುವವರೂ ಪಾಲಿಸಬೇಕು ಎಂದು ಹೇಳಿದೆ.

ಏನಿದು ಕೇಸ್​? ಇತ್ತೀಚೆಗೆ ಅನೇಕರು ಕೇಂದ್ರದ ಕೊವಿಡ್ 19 ಲಸಿಕೆಯ ಬಗ್ಗೆ ವ್ಯಂಗ್ಯ ಮಾಡಿ, ತಪ್ಪು ಮಾಹಿತಿ ನೀಡಿ ಜಾಹೀರಾತು, ಪೋಸ್ಟರ್​ಗಳನ್ನು ಪ್ರದರ್ಶಿಸುತ್ತಿದ್ದರು. ಕೆಲವು ಸೋಷಿಯಲ್ ಮೀಡಿಯಾಗಳಲ್ಲೂ ಇದನ್ನು ಹರಿಬಿಡುತ್ತಿದ್ದರು. ಅದರ ನಿಯಂತ್ರಣಕ್ಕೆ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರು ಅನೇಕರ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದಾರೆ. ಆದರೆ ಇನ್ನು ಮುಂದೆ ಕೂಡ ಕೊವಿಡ್ 19 ಲಸಿಕೆ ನೀತಿಯನ್ನು ಪ್ರಶ್ನಿಸಿದವರ ವಿರುದ್ಧ ಎಫ್​ಐಆರ್​ ದಾಖಲು ಮಾಡದಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ವಕೀಲ ಯಾದವ್​ ಎಂಬುವರು ಸುಪ್ರೀಂಕೋರ್ಟ್​ಗೆ ಪಿಐಎಲ್ ಸಲ್ಲಿಸಿದ್ದರು. ಅದರ ವಿಚಾರಣೆ ವೇಳೆ ಹೀಗೊಂದು ವಿಷಯವನ್ನು ಸುಪ್ರೀಂಕೋರ್ಟ್ ಹೇಳಿದೆ. ಯಾದವ್​ ಅವರೇ ನೀವು ಒಂದು ಸಾಮಾನ್ಯವಾದ, ಹೆಚ್ಚೇನೂ ವಿವರವೇ ಇಲ್ಲದ ಪಿಐಎಲ್​ನ್ನು ಸಲ್ಲಿಸಿದ್ದೀರಿ. ದೆಹಲಿ ಪೊಲೀಸರು ದಾಖಲಿಸಿರುವ ಎಫ್​ಐಆರ್​ನ  ದಾಖಲೆಗಳ ಪ್ರತಿಯನ್ನಾದರೂ ನಮಗೆ ನೀಡಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: Pegasus row ಭಾರತವನ್ನು ಕಣ್ಗಾವಲು ರಾಜ್ಯವನ್ನಾಗಿ ಮಾಡಲು ಬಿಜೆಪಿ ಬಯಸಿದೆ: ಮಮತಾ ಬ್ಯಾನರ್ಜಿ

While filing PILs and litigants have to comply with rules of pleadings directed By Supreme Court

Published On - 4:57 pm, Wed, 21 July 21

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ