ಮುಂಬೈ ಬಳಿ ಸಿಗ್ನಲಿಂಗ್ ಸಮಸ್ಯೆ ಸರಿಪಡಿಸುವಾಗ ಲೋಕಲ್ ರೈಲಿಗೆ ಸಿಲುಕಿ 3 ಸಿಬ್ಬಂದಿ ದುರ್ಮರಣ

ವಸೈ ರಸ್ತೆ ಮತ್ತು ನೈಗಾಂವ್ ನಿಲ್ದಾಣಗಳ ನಡುವೆ ಸೋಮವಾರ ರಾತ್ರಿ 8.55 ಕ್ಕೆ ಸ್ಥಳೀಯ ಚರ್ಚ್‌ಗೇಟ್ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸಿಗ್ನಲ್ ಸಮಸ್ಯೆಯನ್ನು ಸರಿಪಡಿಸುತ್ತಿದ್ದಾಗ ಸ್ಥಳೀಯ ರೈಲಿಗೆ ಸಿಲುಕಿ ಸಿಬ್ಬಂದಿ ಸಾವಿಗೀಡಾಗಿದ್ದಾರೆ.

ಮುಂಬೈ ಬಳಿ ಸಿಗ್ನಲಿಂಗ್ ಸಮಸ್ಯೆ ಸರಿಪಡಿಸುವಾಗ ಲೋಕಲ್ ರೈಲಿಗೆ ಸಿಲುಕಿ 3 ಸಿಬ್ಬಂದಿ ದುರ್ಮರಣ
ರೈಲ್ವೆ ಇಲಾಖೆಯ ಮೃತ ಸಿಬ್ಬಂದಿ
ರಶ್ಮಿ ಕಲ್ಲಕಟ್ಟ

Updated on: Jan 23, 2024 | 5:34 PM

ಮುಂಬೈ ಜನವರಿ 23 : ಮುಂಬೈ (Mumbai) ಬಳಿ ಸಿಗ್ನಲಿಂಗ್ ಕೆಲಸದ ವೇಳೆ ಲೋಕಲ್ ರೈಲಿಗೆ ಸಿಲುಕಿ ಮೂವರು ರೈಲ್ವೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಪಾಲ್ಘರ್ (Palghar)ಜಿಲ್ಲೆಯ ವಸೈ ಬಳಿ ಸೋಮವಾರ ಈ ಘಟನೆ ನಡೆದಿದೆ. ಮೃತರ ಕುಟುಂಬಗಳಿಗೆ ರೈಲ್ವೆ ಇಲಾಖೆ ಆರ್ಥಿಕ ಪರಿಹಾರ ಘೋಷಿಸಿದೆ. ಪಶ್ಚಿಮ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿ ಸಿಗ್ನಲಿಂಗ್ ಪಾಯಿಂಟ್ ಸಮಸ್ಯೆ (signalling work) ಸರಿಪಡಿಸಲು ವಸೈಗೆ ತೆರಳಿದ್ದರು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ವಸೈ ರಸ್ತೆ ಮತ್ತು ನೈಗಾಂವ್ ನಿಲ್ದಾಣಗಳ ನಡುವೆ ಸೋಮವಾರ ರಾತ್ರಿ 8.55 ಕ್ಕೆ ಸ್ಥಳೀಯ ಚರ್ಚ್‌ಗೇಟ್ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸಿಗ್ನಲ್ ಸಮಸ್ಯೆಯನ್ನು ಸರಿಪಡಿಸುತ್ತಿದ್ದಾಗ ಸ್ಥಳೀಯ ರೈಲಿಗೆ ಸಿಲುಕಿ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರು ಸಿಗ್ನಲಿಂಗ್ ವಿಭಾಗದವರು

ಮೃತರನ್ನು ವಾಸು ಮಿತ್ರ, ಸೋಮನಾಥ್ ಉತ್ತಮ್ ಲಾಂಬುಟ್ರೆ ಮತ್ತು ಸಚಿನ್ ವಾಂಖೆಡೆ ಎಂದು ಗುರುತಿಸಲಾಗಿದೆ. ಮೂವರು ಪಶ್ಚಿಮ ರೈಲ್ವೆಯ ಮುಂಬೈ ವಿಭಾಗದ ಸಿಗ್ನಲಿಂಗ್ ವಿಭಾಗದವರು. ಮಿತ್ರ ಮುಖ್ಯ ಸಿಗ್ನಲಿಂಗ್ ಇನ್ಸ್‌ಪೆಕ್ಟರ್ (ಭಯಂದರ್), ಸೋಮನಾಥ್ ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಾಹಕ (ವಸೈ ರಸ್ತೆ) ಮತ್ತು ವಾಂಖಡೆ ಸಹಾಯಕರಾಗಿದ್ದರು. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ರೈಲ್ವೇ ಅಧಿಕಾರಿಗಳು ಮೃತ ಮೂವರ ಕುಟುಂಬ ಸದಸ್ಯರಿಗೆ ತಲಾ 55,000 ರೂ.ಗಳನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿ ಸನಾತನ ಯಾತ್ರೆ ಮೇಲೆ ದುಷ್ಕರ್ಮಿಗಳಿಂದ ದಾಳಿ, ಧಾರ್ಮಿಕ ಧ್ವಜ ಹರಿದು ಗಲಾಟೆ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಇಟಾವಾದಲ್ಲಿ ಹಳಿ ದಾಟಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರು ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು. ಇಟಾವಾ ರೈಲು ನಿಲ್ದಾಣದಲ್ಲಿ ದೆಹಲಿ-ವಾರಣಾಸಿ ಶಿವಗಂಗಾ ಎಕ್ಸ್‌ಪ್ರೆಸ್‌ನಡಿಗೆ ಈ ವ್ಯಕ್ತಿ ಸಿಲುಕಿದ್ದು, ಆತನನ್ನು ರಕ್ಷಿಸುವ ಪ್ರಯತ್ನದಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದರು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಂಧ ಮಹಿಳೆಯೊಬ್ಬರು ಲೋಕಲ್ ರೈಲಿನ ಎರಡು ಬೋಗಿಗಳ ನಡುವಿನ ಅಂತರಕ್ಕೆ ಬಿದ್ದು ಮುಂಬೈನ ಸೆವ್ರಿ ನಿಲ್ದಾಣದಲ್ಲಿ ಸಾವಿಗೀಡಾಗಿದ್ದರು.

ಆಗಸ್ಟ್‌ನಲ್ಲಿ, ಮುಂಬೈನ ಸಿಯೋನ್ ನಿಲ್ದಾಣದಲ್ಲಿ ದಂಪತಿಗಳ ಮೇಲೆ ಹಲ್ಲೆ ನಡೆಸಿದ ನಂತರ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿದ್ದನು. 26 ವರ್ಷದ ದಿನೇಶ್ ರಾಥೋಡ್ ಎಂಬ ಯುವಕ ಅವಿನಾಶ್ ಮಾನೆ ಮತ್ತು ಅವರ ಪತ್ನಿ ಶೀತಲ್ ಮಾನೆ ಅವರೊಂದಿಗೆ ವಾಗ್ವಾದದ ನಂತರ ಸಮತೋಲನ ಕಳೆದುಕೊಂಡು ಹಳಿಗಳ ಮೇಲೆ ಬಿದ್ದಿದ್ದಾನೆ. ಆಗ ಬರುತ್ತಿದ್ದ ರೈಲು ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Tue, 23 January 24

Loading...
Unable to load recommendations.
Follow Us