Atishi Marlena: ದೆಹಲಿಯ ನೂತನ ಮುಖ್ಯಮಂತ್ರಿಯಾಗಿರುವ ಅತಿಶಿ ಮಾರ್ಲೆನಾ ಯಾರು?

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 17, 2024 | 5:30 PM

ದೇಶದ ರಾಜಧಾನಿ ನವದೆಹಲಿಗೆ ನೂತನ ಮುಖ್ಯಮಂತ್ರಿ ಸಿಕ್ಕಿದ್ದಾರೆ. ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಶಿಕ್ಷಣ ಸಚಿವರ ಜವಾಬ್ದಾರಿ ಹೊತ್ತಿರುವ ಅತಿಶಿ ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಅತಿಶಿ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ. ಅತಿಶಿ ಅರವಿಂದ್ ಕೇಜ್ರಿವಾಲ್ ಸಂಪುಟದಲ್ಲಿ ಅತ್ಯಂತ ಶಕ್ತಿಶಾಲಿ ಸಚಿವರಾಗಿದ್ದಾರೆ. ಅತಿಶಿ ಅವರನ್ನು ಅರವಿಂದ್ ಕೇಜ್ರಿವಾಲ್ ಆಪ್ತೆ ಎಂದು ಪರಿಗಣಿಸಲಾಗಿದೆ.

Atishi Marlena: ದೆಹಲಿಯ ನೂತನ ಮುಖ್ಯಮಂತ್ರಿಯಾಗಿರುವ ಅತಿಶಿ ಮಾರ್ಲೆನಾ ಯಾರು?
ಅತಿಶಿ
Image Credit source: PTI
Follow us on

ದೆಹಲಿಯ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ. ಅರವಿಂದ್ ಕೇಜ್ರಿವಾಲ್ ಆಯ್ಕೆ ಮೇರೆಗೆ ಸಚಿವೆ ಅತಿಶಿ ಮಾರ್ಲೆನಾ(Atishi Marlena) ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಜಾಮೀನಿನ ಮೇಲೆ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದ ನಂತರ ಹಲವು ನಾಯಕರ ಹೆಸರು ಕೇಳಿಬಂದಿತ್ತು. ಆದರೆ ಕೊನೆಯದಾಗಿ ಕೇಜ್ರಿವಾಲ್ ಅತಿಶಿ ಅವರ ಹೆಸರನ್ನು ಘೋಷಿಸಿದರು.

ಅತಿಶಿಯನ್ನು ಮುಖ್ಯಮಂತ್ರಿ ಮಾಡಲು ಪ್ರಮುಖ ಕಾರಣ
ಮದ್ಯನೀತಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರು ಜೈಲು ಪಾಲಾದಾಗ ಅತಿಶಿ ಧೈರ್ಯಗುಂದದೆ ಸರ್ಕಾರವನ್ನು ನೋಡಿಕೊಂಡಿದ್ದರು. ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.  ಮನೀಶ್ ಸಿಸೋಡಿಯಾ ಕೂಡ ಜೈಲಿನಲ್ಲಿದ್ದ ಕಾರಣ, ಪಕ್ಷ ಮತ್ತು ಸರ್ಕಾರದಲ್ಲಿ ಎರಡನೇ ಕಮಾಂಡ್ ಕೂಡ ಇರಲಿಲ್ಲ.

ಸೌರಭ್ ಭಾರದ್ವಾಜ್ ಅವರೊಂದಿಗೆ ಸರ್ಕಾರವನ್ನು ಮುನ್ನಡೆಸಿದರು, ದೆಹಲಿ ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಸಮಯದಲ್ಲಿ 100 ಮಿಲಿಯನ್ ಗ್ಯಾಲನ್​ಗಳಷ್ಟು ನೀರನ್ನು ಬಿಡುಗಡೆ ಮಾಡದ ಹರ್ಯಾಣ ಸರ್ಕಾರದ ವಿರುದ್ಧ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಿದರು.

ಮತ್ತಷ್ಟು ಓದಿ: Atishi Marlena: ಅತಿಶಿ ಮಾರ್ಲೆನಾ ದೆಹಲಿಯ ನೂತನ ಮುಖ್ಯಮಂತ್ರಿ

ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಬಳಿಕ ಆಸ್ಪತ್ರೆಗೆ ಸೇರಿಸಲಾಯಿತು. ಕೇಜ್ರಿವಾಲ್ ಬಂಧನದ ನಂತರ ಅತಿಶಿ ಅವರನ್ನು ಮುಖ್ಯಮಂತ್ರಿ ಮಾಡಬಹುದು ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೆ ಕೇಜ್ರಿವಾಲ್ ಸರ್ಕಾರವನ್ನು ಜೈಲಿನಿಂದ ನಡೆಸಲು ನಿರ್ಧರಿಸಿದ್ದರು.

ಕಳೆದ ವರ್ಷ ಮಾರ್ಚ್ 9 ರಂದು ಎಎಪಿ ಶಾಸಕರಾದ ಅತಿಶಿ ಮತ್ತು ಸೌರಭ್ ಭಾರದ್ವಾಜ್ ಅವರು ದೆಹಲಿ ಕ್ಯಾಬಿನೆಟ್‌ನಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು ಭಾರದ್ವಾಜ್ ಅವರಿಗೆ ಆರೋಗ್ಯ, ನಗರಾಭಿವೃದ್ಧಿ, ನೀರು ಮತ್ತು ಕೈಗಾರಿಕೆ ಖಾತೆಗಳನ್ನು ನೀಡಿದರೆ, ಅತಿಶಿ 14 ಇಲಾಖೆಗಳ ಉಸ್ತುವಾರಿ ವಹಿಸಿಕೊಂಡರು.

ಶಿಕ್ಷಣ, ಹಣಕಾಸು, ಯೋಜನೆ, PWD, ನೀರು, ವಿದ್ಯುತ್ ಮತ್ತು ಸಾರ್ವಜನಿಕ ಸಂಪರ್ಕ ಖಾತೆಗಳನ್ನು ಅತಿಶಿ ನಿರ್ವಹಿಸಿದರು.
ಅತಿಶಿ ಅವರನ್ನು ಶಿಕ್ಷಣ ಸಚಿವಾಲಯದ ಉಸ್ತುವಾರಿಯನ್ನಾಗಿ ಮಾಡಲಾಗಿದ್ದು, ಪಕ್ಷದಲ್ಲಿ ಅವರ ಸ್ಥಾನಮಾನವನ್ನು ಗಣನೀಯವಾಗಿ ಹೆಚ್ಚಿಸಿದೆ. ಅವರು ಏಪ್ರಿಲ್ 2018 ರವರೆಗೆ ಮಾಜಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು, ಇದು ಅವರ ಪ್ರಕರಣಕ್ಕೆ ಮತ್ತಷ್ಟು ಸಹಾಯ ಮಾಡಿತು.

ಮತ್ತಷ್ಟು ಓದಿ: ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಸಂಭ್ಯಾವ್ಯ ಅಭ್ಯರ್ಥಿಗಳಿವರು

ಎಎಪಿ ಜೊತೆಗಿನ ಒಡನಾಟದ ಮೊದಲು, ಅತಿಶಿ ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ಏಳು ವರ್ಷಗಳನ್ನು ಕಳೆದರು, ಅಲ್ಲಿ ಅವರು ಸಾವಯವ ಕೃಷಿ ಮತ್ತು ಪ್ರಗತಿಶೀಲ ಶಿಕ್ಷಣ ವ್ಯವಸ್ಥೆಗಳಲ್ಲಿ ತೊಡಗಿಸಿಕೊಂಡರು. ಅವರು ಅಲ್ಲಿ ಹಲವಾರು ಲಾಭೋದ್ದೇಶವಿಲ್ಲದ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದರು.

ಆಕ್ಸ್‌ಫರ್ಡ್‌ನಿಂದ ಸ್ನಾತಕೋತ್ತರ ಪದವಿ
ದೆಹಲಿ ನೂತನ ಮುಖ್ಯಮಂತ್ರಿ ಮರ್ಲೆನಾ ಅವರು 8 ಜೂನ್ 1981 ರಂದು ದೆಹಲಿಯಲ್ಲಿ ಜನಿಸಿದರು. ಅತಿಶಿ ಅವರ ತಾಯಿಯ ಹೆಸರು ತ್ರಿಪ್ತ ವಹಿ ಮತ್ತು ತಂದೆಯ ಹೆಸರು ವಿಜಯ್ ಕುಮಾರ್ ಸಿಂಗ್, ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅತಿಶಿ ತನ್ನ ಶಾಲಾ ದಿನಗಳಲ್ಲಿ ತನ್ನ ಹೆಸರಿನೊಂದಿಗೆ ಮಾರ್ಕ್ಸ್ ಮತ್ತು ಲೆನಿನ್‌ನಿಂದ ಪಡೆದ ಮಾರ್ಲೆನಾ ಪದವನ್ನು ಸೇರಿಸಿದ್ದರು.

ಈ ಕಾರಣದಿಂದಾಗಿ, ಆಕೆಗೆ ಅತಿಶಿ ಮರ್ಲೆನಾ ಎಂದು ಹೆಸರಿಸಲಾಯಿತು. ಅವರು ಪಂಜಾಬಿ ರಜಪೂತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅತಿಶಿ ದೆಹಲಿಯ ಸ್ಪ್ರಿಂಗ್‌ಡೇಲ್ ಶಾಲೆಯಲ್ಲಿ ಅಧ್ಯಯನ ಮಾಡಿದರು, ನಂತರ ಅವರು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. DU ನಿಂದ ಅಧ್ಯಯನ ಮಾಡಿದ ನಂತರ, ಅವರು ರೋಡ್ಸ್ ವಿದ್ಯಾರ್ಥಿವೇತನವನ್ನು ಪಡೆದರು ಮತ್ತು ಲಂಡನ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.

ದೆಹಲಿಯ ಕಲ್ಕಾಜಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅತಿಶಿ ಮರ್ಲೆನಾ ಅವರು 1.41 ಕೋಟಿ ಆಸ್ತಿ ಹೊಂದಿದ್ದಾರೆ.
ಅತಿಶಿ ಬಳಿ 1 ಕೋಟಿ ರೂ.ಗೂ ಹೆಚ್ಚು ಆಸ್ತಿ ಇದ್ದರೂ ಸ್ವಂತ ಮನೆಯಾಗಲಿ, ಭೂಮಿ, ಆಭರಣವಾಗಲಿ ಇಲ್ಲ. 2013ರ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2014ರ ಲೋಕಸಭೆ ಚುನಾವಣೆಗೂ ಮುನ್ನ ಅವರನ್ನು ವಕ್ತಾರರನ್ನಾಗಿ ಮಾಡಲಾಗಿತ್ತು.

ನಂತರ 2019 ರಲ್ಲಿ ಅವರು ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಅವರು ಬಿಜೆಪಿಯ ಗೌತಮ್ ಗಂಭೀರ್ ವಿರುದ್ಧ 4.77 ಲಕ್ಷ ಮತಗಳಿಂದ ಸೋತು ಮೂರನೇ ಸ್ಥಾನ ಪಡೆದರು.

ನಂತರ, 2020 ರಲ್ಲಿ, ಅವರು ಕಲ್ಕಾಜಿ ವಿಧಾನಸಭೆಯಿಂದ ಚುನಾವಣೆಯಲ್ಲಿ ಗೆದ್ದರು. 2023 ರಲ್ಲಿ ಮೊದಲ ಬಾರಿಗೆ ಅವರು ದೆಹಲಿಯ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಈಗ ಅವರು 2024 ರಲ್ಲಿ ದೆಹಲಿಯ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ಹೊರಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ