AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ 19 ಚಿಕಿತ್ಸೆಗೆ ರೆಮ್​ಡಿಸಿವಿರ್​ ಪರಿಣಾಮಕಾರಿಯಲ್ಲ; ಚಿಕಿತ್ಸಾ ಔಷಧಿಗಳ ಪಟ್ಟಿಯಿಂದ ತೆಗೆದುಹಾಕಿದ ಡಬ್ಲ್ಯೂಎಚ್​ಒ

ಇತ್ತೀಚೆಗಂತೂ ರೆಮ್​ಡಿಸಿವರ್​ ಇಂಜೆಕ್ಷನ್​​ ಹೆಸರನ್ನು ಪ್ರತಿಯೊಬ್ಬರೂ ಕೇಳಿಯೇ ಇರುತ್ತಾರೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರಮುಖ ಔಷಧ ಎಂದೇ ಬಿಂಬಿತವಾಗಿತ್ತು. ಮನೆಯಲ್ಲೇ ಐಸೋಲೇಟ್​ ಆಗಿ ಕೊರೊನಾಕ್ಕೆ ಚಿಕಿತ್ಸೆ ಪಡೆಯುವವರೂ ಸಹ ಇದನ್ನು ಖರೀದಿಸಲು ಪ್ರಾರಂಭಿಸಿದ್ದರು. ಕೊರೊನಾ ಉಲ್ಬಣದ ಬೆನ್ನಲ್ಲೇ ರೆಮ್​ಡಿಸಿವಿರ್​ ಅಭಾವವೂ ಕಂಡುಬಂದಿತ್ತು. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ (WHO) ಕೊವಿಡ್​ 19 ಚಿಕಿತ್ಸೆ ಔಷಧ ಪಟ್ಟಿಯಿಂದ ಈ ರೆಮ್​ಡಿಸಿವಿರ್ ಇಂಜೆಕ್ಷನ್​ನ್ನು ತೆಗೆದುಹಾಕಿದೆ. ಒಂದು ಕಾಲದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಜೀವರಕ್ಷಕದಂತೆ ಬಿಂಬಿತವಾಗಿದ್ದ ರೆಮ್​ಡಿಸಿವಿರ್​​ನ್ನು ಇದೀಗ […]

ಕೊವಿಡ್​ 19 ಚಿಕಿತ್ಸೆಗೆ ರೆಮ್​ಡಿಸಿವಿರ್​ ಪರಿಣಾಮಕಾರಿಯಲ್ಲ; ಚಿಕಿತ್ಸಾ ಔಷಧಿಗಳ ಪಟ್ಟಿಯಿಂದ ತೆಗೆದುಹಾಕಿದ ಡಬ್ಲ್ಯೂಎಚ್​ಒ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: May 20, 2021 | 6:47 PM

Share

ಇತ್ತೀಚೆಗಂತೂ ರೆಮ್​ಡಿಸಿವರ್​ ಇಂಜೆಕ್ಷನ್​​ ಹೆಸರನ್ನು ಪ್ರತಿಯೊಬ್ಬರೂ ಕೇಳಿಯೇ ಇರುತ್ತಾರೆ. ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಪ್ರಮುಖ ಔಷಧ ಎಂದೇ ಬಿಂಬಿತವಾಗಿತ್ತು. ಮನೆಯಲ್ಲೇ ಐಸೋಲೇಟ್​ ಆಗಿ ಕೊರೊನಾಕ್ಕೆ ಚಿಕಿತ್ಸೆ ಪಡೆಯುವವರೂ ಸಹ ಇದನ್ನು ಖರೀದಿಸಲು ಪ್ರಾರಂಭಿಸಿದ್ದರು. ಕೊರೊನಾ ಉಲ್ಬಣದ ಬೆನ್ನಲ್ಲೇ ರೆಮ್​ಡಿಸಿವಿರ್​ ಅಭಾವವೂ ಕಂಡುಬಂದಿತ್ತು. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ (WHO) ಕೊವಿಡ್​ 19 ಚಿಕಿತ್ಸೆ ಔಷಧ ಪಟ್ಟಿಯಿಂದ ಈ ರೆಮ್​ಡಿಸಿವಿರ್ ಇಂಜೆಕ್ಷನ್​ನ್ನು ತೆಗೆದುಹಾಕಿದೆ.

ಒಂದು ಕಾಲದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಜೀವರಕ್ಷಕದಂತೆ ಬಿಂಬಿತವಾಗಿದ್ದ ರೆಮ್​ಡಿಸಿವಿರ್​​ನ್ನು ಇದೀಗ ಕೊವಿಡ್​ 19 ಚಿಕಿತ್ಸಾ ಪಟ್ಟಿಯಿಂದ ತೆಗೆದಿರುವ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ಚಿಕಿತ್ಸೆಗೆ ರೆಮ್​ಡಿಸಿವಿರ್​ ಪರಿಣಾಮಕಾರಿಯಲ್ಲ ಎಂದೂ ಹೇಳಿದೆ. ನಿನ್ನೆ ಅಂದರೆ ಮಂಗಳವಾರ ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ. ಡಿಎಸ್​ ರಾಣಾ ಈ ಬಗ್ಗೆ ಸುಳಿವು ನೀಡಿದ್ದರು. ಶೀಘ್ರದಲ್ಲೇ ರೆಮ್​ಡಿಸಿವಿರ್​​ನ್ನು ಕೊವಿಡ್​ 19 ಚಿಕಿತ್ಸೆ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಕೊವಿಡ್​ ಸೋಂಕಿತರಿಗೆ ಇದು ಪರಿಣಾಮಕಾರಿ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಹೇಳಿದ್ದರು.

ಕೊರೊನಾ ವಿರುದ್ಧ ಪ್ರಾಯೋಗಿಕವಾಗಿ ಬಳಸಲಾಗಿದ್ದ ಎಲ್ಲ ಔಷಧಿಗಳನ್ನೂ..ಪ್ಲಾಸ್ಮಾ ಥೆರಪಿಯನ್ನೂ ಸೇರಿ ಎಲ್ಲವನ್ನೂ ಚಿಕಿತ್ಸೆಯಿಂದ ಕೈಬಿಡಲಾಗಿದೆ. ಹಾಗೇ ಈ ರೆಮ್​ಡಿಸಿವಿರ್​ನ್ನು ಕೂಡ ಶೀಘ್ರದಲ್ಲೇ ಚಿಕಿತ್ಸಾ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಸದ್ಯದ ಮಟ್ಟಿಗೆ ಕೇವಲ ಮೂರು ರೀತಿಯ ಔಷಧಿಗಳು ಮಾತ್ರ ಕೊವಿಡ್​ 19 ಚಿಕಿತ್ಸೆಗಾಗಿ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ನಾವು ಇನ್ನೂ ಗಮನಿಸುತ್ತಿದ್ದೇವೆ..ಅಧ್ಯಯನ ನಡೆಯುತ್ತಿದೆ ಎಂದೂ ಡಾ. ಡಿ.ಎಸ್.ರಾಣಾ ಹೇಳಿದ್ದರು.

ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಅನುಷ್ಕಾ ಶರ್ಮಾ ನಟಿಸಿರುವ ಯಾವ ಸಿನಿಮಾ ಫೆವರೆಟ್ ಗೊತ್ತಾ?

ನಾಲ್ಕು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಆಕ್ಸಿಜನ್​ ಘಟಕವನ್ನು ನಾಲ್ಕೇ ದಿನಗಳಲ್ಲಿ ದುರಸ್ತಿ ಮಾಡಿದ ಇಂಡಿಯನ್ ಆರ್ಮಿ..

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್