AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಆಕ್ಸಿಜನ್​ ಘಟಕವನ್ನು ನಾಲ್ಕೇ ದಿನಗಳಲ್ಲಿ ದುರಸ್ತಿ ಮಾಡಿದ ಇಂಡಿಯನ್ ಆರ್ಮಿ..

ಆಕ್ಸಿಜನ್​ ಘಟಕ ಕಳೆದ ನಾಲ್ಕು ವರ್ಷಗಳಿಂದಲೂ ನಿಷ್ಕ್ರಿಯಗೊಂಡಿತ್ತು. ಅದನ್ನೀಗ ಪ್ರತಿದಿನಕ್ಕೆ 700 ಸಿಲಿಂಡರ್​​ಗಳನ್ನು ಮರುಪೂರಣ ಮಾಡುವಷ್ಟು ಸರಿಪಡಿಸಲಾಗಿದೆ. ಕೊವಿಡ್​ 19 ಉಲ್ಬಣಗೊಂಡಿದ್ದರಿಂದ ಆಕ್ಸಿಜನ್​ ಬೇಡಿಕೆ ಹೆಚ್ಚಾಯಿತು. ಹೀಗಾಗಿ ಈ ಆಕ್ಸಿಜನ್ ಘಟಕ ಮರುಪ್ರಾರಂಭ ಮಾಡುವ ಅಗತ್ಯತೆಯೂ ಇತ್ತು.

ನಾಲ್ಕು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಆಕ್ಸಿಜನ್​ ಘಟಕವನ್ನು ನಾಲ್ಕೇ ದಿನಗಳಲ್ಲಿ ದುರಸ್ತಿ ಮಾಡಿದ ಇಂಡಿಯನ್ ಆರ್ಮಿ..
ಆಕ್ಸಿಜನ್​ ಘಟಕ
Lakshmi Hegde
|

Updated on: May 20, 2021 | 6:00 PM

Share

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಸಿಕ್ಕಾಪಟೆ ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೇ ಕಾಶ್ಮೀರದ ಆಸ್ಪತ್ರೆಗಳಲ್ಲಿ ಆಕ್ಸಿಜನ್​ಗೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಆಮ್ಲಜನಕ ಕೊರತೆ ಉಂಟಾದ ಆಸ್ಪತ್ರೆಗಳ ಸಹಾಯಕ್ಕೆ ಭಾರತೀಯ ಸೇನೆ ನಿಂತಿದೆ. ಅಗತ್ಯ ಇರುವ ಆಕ್ಸಿಜನ್​ನ್ನು ಪೂರೈಸುವ ಮೂಲಕ ಸ್ಥಳೀಯ ಆಡಳಿತದ ನೆರವಿಗೆ ನಿಂತಿದೆ.

ಶ್ರೀನಗರದ ರಂಗ್ರೆತ್​ ಪ್ರದೇಶದಲ್ಲಿರುವ ಆಮ್ಲಜನಕದ ಘಟಕ ನಿಷ್ಕ್ರಿಯಗೊಂಡಿತ್ತು. ಅದನ್ನೀಗ ಭಾರತೀಯ ಸೇನೆಯ ಸಹಾಯದಿಂದ ಮರು ಆರಂಭಿಸಲಾಗಿದೆ. ಪ್ರತಿದಿನವೂ ಸುಮಾರು 700 ಸಿಲಿಂಡರ್​​ಗಳನ್ನು ತುಂಬುವಷ್ಟು ಸಾಮರ್ಥ್ಯವನ್ನು ಈ ಆಕ್ಸಿಜನ್​ ಘಟಕ ಹೊಂದಿದೆ.

ಆಕ್ಸಿಜನ್​ ಘಟಕ ಕಳೆದ ನಾಲ್ಕು ವರ್ಷಗಳಿಂದಲೂ ನಿಷ್ಕ್ರಿಯಗೊಂಡಿತ್ತು. ಅದನ್ನೀಗ ಪ್ರತಿದಿನಕ್ಕೆ 700 ಸಿಲಿಂಡರ್​​ಗಳನ್ನು ಮರುಪೂರಣ ಮಾಡುವಷ್ಟು ಸರಿಪಡಿಸಲಾಗಿದೆ. ಕೊವಿಡ್​ 19 ಉಲ್ಬಣಗೊಂಡಿದ್ದರಿಂದ ಆಕ್ಸಿಜನ್​ ಬೇಡಿಕೆ ಹೆಚ್ಚಾಯಿತು. ಹೀಗಾಗಿ ಈ ಆಕ್ಸಿಜನ್ ಘಟಕ ಮರುಪ್ರಾರಂಭ ಮಾಡುವ ಅಗತ್ಯತೆಯೂ ಇತ್ತು. ಹೀಗಾಗಿ ಸ್ಥಳೀಯ ಆಡಳಿತದಿಂದ ಭಾರತೀಯ ಸೇನೆಯ ಚಿನಾರ್​ ಕಾರ್ಪ್​​​ನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚಿಸಲಾಯಿತು. ಆಮ್ಲಜನಕ ಘಟಕ ದುರಸ್ತಿಯಾಗಬೇಕಾದರೆ ಅಗತ್ಯವಾಗಿ ಬೇಕಾದ ಅದರ ಬಿಡಿಭಾಗಗಳನ್ನೆಲ್ಲ ಮುಂಬೈನಿಂದ ತರಲಾಗಿದ್ದು, ಇದಕ್ಕಾಗಿ ಭಾರತೀಯ ವಾಯುಸೇನೆಯ ಸಹಾಯ ಪಡೆಯಲಾಗಿದೆ. ನಂತರ ಎಂಜಿನಿಯರ್​ಗಳ ಸಹಾಯದಿಂದ ಕೇವಲ ನಾಲ್ಕೇ ದಿನಗಳಲ್ಲಿ ದುರಸ್ತಿಗೊಳಿಸಲಾಯಿತು ಎಂದು ಇಂಡಿಯನ್ ಆರ್ಮಿ ಲೆಫ್ಟಿನೆಂಟ್ ಕರ್ನಲ್​ ನೀಲದಿರಿ ರಾಯ್​ ತಿಳಿಸಿದ್ದಾರೆ.

ಆಮ್ಲಜನಕ ಘಟಕ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಅದರಲ್ಲಿ ಅನೇಕ ಸಮಸ್ಯೆಗಳು ಇದ್ದವು. ಆದರೆ ಭಾರತೀಯ ಸೇನೆಯ ಎಂಜಿನಿಯರ್​​ಗಳು ಹಗಲು-ರಾತ್ರಿ ಕೆಲಸ ಮಾಡಿ ಕೇವಲ ನಾಲ್ಕೇ ದಿನಗಳಲ್ಲಿ ಇದನ್ನು ಸರಿಪಡಿಸಿದ್ದಾರೆ. ಇತ್ತೀಚೆಗಷ್ಟೇ ಶ್ರೀನಗರದ ರಂಗ್ರೀತ್​ ಪ್ರದೇಶದಲ್ಲಿ 200 ಬೆಡ್​ಗಳಿರುವ ಕೊವಿಡ್ ಆಸ್ಪತ್ರೆಯನ್ನು ಭಾರತೀಯ ಸೇನೆ ಸಿದ್ಧಪಡಿಸಿತ್ತು. ಹಾಗೇ ಗಡಿ ನಿಯಂತ್ರಣ ರೇಖೆ ಬಳಿ ಉರಿ ವಲಯದಲ್ಲೂ ಒಂದು ಕೊವಿಡ್​ 19 ಆಸ್ಪತ್ರೆಯನ್ನು ಸೇನೆ ಸಿದ್ಧಗೊಳಿಸಿದೆ.

ಇದನ್ನೂ ಓದಿ: ದೇಶದಲ್ಲಿ ಈಗಲೂ ಶೇ.50ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ, ಜೂನ್ ಅಂತ್ಯದೊಳಗೆ ಪ್ರತಿದಿನ 45 ಲಕ್ಷ ಕೊವಿಡ್ ಟೆಸ್ಟ್

ನಾರದ ಲಂಚ ಪ್ರಕರಣ: ‘ಅನಿವಾರ್ಯ ಕಾರಣ’ ಹಿನ್ನೆಲೆಯಲ್ಲಿ ಬಂಧಿತ ಟಿಎಮ್​ಸಿ ನಾಯಕರ ಜಾಮೀನು ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿತು!

Indian army restored a defunct oxygen plant in Shrinagar to fight agains oxygen shortage

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್