AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಆಕ್ಸಿಜನ್​ ಘಟಕವನ್ನು ನಾಲ್ಕೇ ದಿನಗಳಲ್ಲಿ ದುರಸ್ತಿ ಮಾಡಿದ ಇಂಡಿಯನ್ ಆರ್ಮಿ..

ಆಕ್ಸಿಜನ್​ ಘಟಕ ಕಳೆದ ನಾಲ್ಕು ವರ್ಷಗಳಿಂದಲೂ ನಿಷ್ಕ್ರಿಯಗೊಂಡಿತ್ತು. ಅದನ್ನೀಗ ಪ್ರತಿದಿನಕ್ಕೆ 700 ಸಿಲಿಂಡರ್​​ಗಳನ್ನು ಮರುಪೂರಣ ಮಾಡುವಷ್ಟು ಸರಿಪಡಿಸಲಾಗಿದೆ. ಕೊವಿಡ್​ 19 ಉಲ್ಬಣಗೊಂಡಿದ್ದರಿಂದ ಆಕ್ಸಿಜನ್​ ಬೇಡಿಕೆ ಹೆಚ್ಚಾಯಿತು. ಹೀಗಾಗಿ ಈ ಆಕ್ಸಿಜನ್ ಘಟಕ ಮರುಪ್ರಾರಂಭ ಮಾಡುವ ಅಗತ್ಯತೆಯೂ ಇತ್ತು.

ನಾಲ್ಕು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಆಕ್ಸಿಜನ್​ ಘಟಕವನ್ನು ನಾಲ್ಕೇ ದಿನಗಳಲ್ಲಿ ದುರಸ್ತಿ ಮಾಡಿದ ಇಂಡಿಯನ್ ಆರ್ಮಿ..
ಆಕ್ಸಿಜನ್​ ಘಟಕ
Lakshmi Hegde
|

Updated on: May 20, 2021 | 6:00 PM

Share

ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಸಿಕ್ಕಾಪಟೆ ಹೆಚ್ಚಾಗುತ್ತಿವೆ. ಇದರ ಬೆನ್ನಲ್ಲೇ ಕಾಶ್ಮೀರದ ಆಸ್ಪತ್ರೆಗಳಲ್ಲಿ ಆಕ್ಸಿಜನ್​ಗೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಆಮ್ಲಜನಕ ಕೊರತೆ ಉಂಟಾದ ಆಸ್ಪತ್ರೆಗಳ ಸಹಾಯಕ್ಕೆ ಭಾರತೀಯ ಸೇನೆ ನಿಂತಿದೆ. ಅಗತ್ಯ ಇರುವ ಆಕ್ಸಿಜನ್​ನ್ನು ಪೂರೈಸುವ ಮೂಲಕ ಸ್ಥಳೀಯ ಆಡಳಿತದ ನೆರವಿಗೆ ನಿಂತಿದೆ.

ಶ್ರೀನಗರದ ರಂಗ್ರೆತ್​ ಪ್ರದೇಶದಲ್ಲಿರುವ ಆಮ್ಲಜನಕದ ಘಟಕ ನಿಷ್ಕ್ರಿಯಗೊಂಡಿತ್ತು. ಅದನ್ನೀಗ ಭಾರತೀಯ ಸೇನೆಯ ಸಹಾಯದಿಂದ ಮರು ಆರಂಭಿಸಲಾಗಿದೆ. ಪ್ರತಿದಿನವೂ ಸುಮಾರು 700 ಸಿಲಿಂಡರ್​​ಗಳನ್ನು ತುಂಬುವಷ್ಟು ಸಾಮರ್ಥ್ಯವನ್ನು ಈ ಆಕ್ಸಿಜನ್​ ಘಟಕ ಹೊಂದಿದೆ.

ಆಕ್ಸಿಜನ್​ ಘಟಕ ಕಳೆದ ನಾಲ್ಕು ವರ್ಷಗಳಿಂದಲೂ ನಿಷ್ಕ್ರಿಯಗೊಂಡಿತ್ತು. ಅದನ್ನೀಗ ಪ್ರತಿದಿನಕ್ಕೆ 700 ಸಿಲಿಂಡರ್​​ಗಳನ್ನು ಮರುಪೂರಣ ಮಾಡುವಷ್ಟು ಸರಿಪಡಿಸಲಾಗಿದೆ. ಕೊವಿಡ್​ 19 ಉಲ್ಬಣಗೊಂಡಿದ್ದರಿಂದ ಆಕ್ಸಿಜನ್​ ಬೇಡಿಕೆ ಹೆಚ್ಚಾಯಿತು. ಹೀಗಾಗಿ ಈ ಆಕ್ಸಿಜನ್ ಘಟಕ ಮರುಪ್ರಾರಂಭ ಮಾಡುವ ಅಗತ್ಯತೆಯೂ ಇತ್ತು. ಹೀಗಾಗಿ ಸ್ಥಳೀಯ ಆಡಳಿತದಿಂದ ಭಾರತೀಯ ಸೇನೆಯ ಚಿನಾರ್​ ಕಾರ್ಪ್​​​ನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚಿಸಲಾಯಿತು. ಆಮ್ಲಜನಕ ಘಟಕ ದುರಸ್ತಿಯಾಗಬೇಕಾದರೆ ಅಗತ್ಯವಾಗಿ ಬೇಕಾದ ಅದರ ಬಿಡಿಭಾಗಗಳನ್ನೆಲ್ಲ ಮುಂಬೈನಿಂದ ತರಲಾಗಿದ್ದು, ಇದಕ್ಕಾಗಿ ಭಾರತೀಯ ವಾಯುಸೇನೆಯ ಸಹಾಯ ಪಡೆಯಲಾಗಿದೆ. ನಂತರ ಎಂಜಿನಿಯರ್​ಗಳ ಸಹಾಯದಿಂದ ಕೇವಲ ನಾಲ್ಕೇ ದಿನಗಳಲ್ಲಿ ದುರಸ್ತಿಗೊಳಿಸಲಾಯಿತು ಎಂದು ಇಂಡಿಯನ್ ಆರ್ಮಿ ಲೆಫ್ಟಿನೆಂಟ್ ಕರ್ನಲ್​ ನೀಲದಿರಿ ರಾಯ್​ ತಿಳಿಸಿದ್ದಾರೆ.

ಆಮ್ಲಜನಕ ಘಟಕ ಕಳೆದ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರಲಿಲ್ಲ. ಅದರಲ್ಲಿ ಅನೇಕ ಸಮಸ್ಯೆಗಳು ಇದ್ದವು. ಆದರೆ ಭಾರತೀಯ ಸೇನೆಯ ಎಂಜಿನಿಯರ್​​ಗಳು ಹಗಲು-ರಾತ್ರಿ ಕೆಲಸ ಮಾಡಿ ಕೇವಲ ನಾಲ್ಕೇ ದಿನಗಳಲ್ಲಿ ಇದನ್ನು ಸರಿಪಡಿಸಿದ್ದಾರೆ. ಇತ್ತೀಚೆಗಷ್ಟೇ ಶ್ರೀನಗರದ ರಂಗ್ರೀತ್​ ಪ್ರದೇಶದಲ್ಲಿ 200 ಬೆಡ್​ಗಳಿರುವ ಕೊವಿಡ್ ಆಸ್ಪತ್ರೆಯನ್ನು ಭಾರತೀಯ ಸೇನೆ ಸಿದ್ಧಪಡಿಸಿತ್ತು. ಹಾಗೇ ಗಡಿ ನಿಯಂತ್ರಣ ರೇಖೆ ಬಳಿ ಉರಿ ವಲಯದಲ್ಲೂ ಒಂದು ಕೊವಿಡ್​ 19 ಆಸ್ಪತ್ರೆಯನ್ನು ಸೇನೆ ಸಿದ್ಧಗೊಳಿಸಿದೆ.

ಇದನ್ನೂ ಓದಿ: ದೇಶದಲ್ಲಿ ಈಗಲೂ ಶೇ.50ರಷ್ಟು ಜನರು ಮಾಸ್ಕ್ ಧರಿಸುತ್ತಿಲ್ಲ, ಜೂನ್ ಅಂತ್ಯದೊಳಗೆ ಪ್ರತಿದಿನ 45 ಲಕ್ಷ ಕೊವಿಡ್ ಟೆಸ್ಟ್

ನಾರದ ಲಂಚ ಪ್ರಕರಣ: ‘ಅನಿವಾರ್ಯ ಕಾರಣ’ ಹಿನ್ನೆಲೆಯಲ್ಲಿ ಬಂಧಿತ ಟಿಎಮ್​ಸಿ ನಾಯಕರ ಜಾಮೀನು ಅರ್ಜಿ ವಿಚಾರಣೆ ಮುಂದೂಡಲ್ಪಟ್ಟಿತು!

Indian army restored a defunct oxygen plant in Shrinagar to fight agains oxygen shortage

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!