AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Railways: ಈ ಬಾಕ್ಸ್‌ಗಳು ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿ ಏಕೆ ಇರುತ್ತವೆ ನಿಮಗೆ ತಿಳಿದಿದೆಯೇ? ಇವುಗಳಿಂದ ರೈಲ್ವೆಗೆ ಏನು ಉಪಯೋಗ?

Railway Track Axle Counter: ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಕೆಲವು ಅಲ್ಯೂಮಿನಿಯಂ ಬಾಕ್ಸ್‌ ನೋಡಿರುತ್ತೀರಿ. ಅವು ಯಾವುವು, ಯಾವುದಕ್ಕಾಗಿ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಅನೇಕ ಜನರು ಇದನ್ನು ವಿದ್ಯುತ್ ಪೆಟ್ಟಿಗೆಗಳು ಎಂದು ಭಾವಿಸುತ್ತಾರೆ. ಇದು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದರೆ ಅವು ವಿದ್ಯುತ್ ಪೆಟ್ಟಿಗೆಗಳಲ್ಲ ಎಂದು ತಿಳಿಯಬೇಕಾದರೆ ನೀವು ಈ ಲೇಖನ ಓದಲೇಬೇಕು.

Indian Railways: ಈ ಬಾಕ್ಸ್‌ಗಳು ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿ ಏಕೆ ಇರುತ್ತವೆ ನಿಮಗೆ ತಿಳಿದಿದೆಯೇ? ಇವುಗಳಿಂದ ರೈಲ್ವೆಗೆ ಏನು ಉಪಯೋಗ?
ಈ ಬಾಕ್ಸ್‌ಗಳು ರೈಲ್ವೆ ಟ್ರ್ಯಾಕ್‌ ಪಕ್ಕದಲ್ಲಿ ಏಕೆ ಇರುತ್ತವೆ ನಿಮಗೆ ಗೊತ್ತಾ
ಸಾಧು ಶ್ರೀನಾಥ್​
|

Updated on: Nov 19, 2023 | 6:06 AM

Share

ಭಾರತೀಯ ರೈಲ್ವೆ ಹಲವು ಆಸಕ್ತಿಕರ ಸಂಗತಿಗಳಿಗೆ ತವರು. ಭಾರತೀಯ ರೈಲ್ವೆ ( Indian Railways) ಪ್ರತಿದಿನ ದೇಶದ ಕೋಟಿಗಟ್ಟಲೆ ಜನರನ್ನು ಅವರವರ ಗಮ್ಯ ಸ್ಥಳಗಳಿಗೆ ತಲುಪಿಸುತ್ತಿದೆ. ನಾವು ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವನ್ನು ಹೊಂದಿದ್ದೇವೆ. ಭಾರತೀಯ ರೈಲ್ವೆಯು ದೇಶದ ಹೆಚ್ಚಿನ ಜನರಿಗೆ ಉದ್ಯೋಗಗಳನ್ನು ಒದಗಿಸುವ ಕಂಪನಿಯಾಗಿದೆ. ಮತ್ತು ಕೋಟ್ಯಂತರ ಜನರನ್ನು ಸುರಕ್ಷಿತವಾಗಿ ಕೊಂಡೊಯ್ಯುವ ಭಾರತೀಯ ರೈಲ್ವೆಯು ಸುರಕ್ಷತೆಯ ವಿಷಯದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ರೈಲು ಸುರಕ್ಷತೆಯ ಜೊತೆಗೆ, ಮೇಲ್ವಿಚಾರಣೆಗಾಗಿ ರೈಲಿನ ಒಳಗೆ ಮತ್ತು ಹೊರಗೆ ಅನೇಕ ರೀತಿಯ ಸಾಧನಗಳನ್ನು ಬಳಸಲಾಗುತ್ತದೆ. ರೈಲ್ವೆ ಹಳಿಗಳ ಪಕ್ಕದಲ್ಲಿ ಕಂಡುಬರುವ ಅಲ್ಯೂಮಿನಿಯಂ ಬಾಕ್ಸ್‌ಗಳು (Axle Counter Box) ಅಂತಹ ಸಾಧನಗಳ ಪೈಕಿ ಒಂದಾಗಿದೆ. ಸಾಮಾನ್ಯವಾಗಿ ನೀವು ರೈಲುಗಳಲ್ಲಿ ಪ್ರಯಾಣಿಸುವಾಗ, ಟ್ರ್ಯಾಕ್ ಪಕ್ಕದಲ್ಲಿ ನೀವು ಕೆಲವು ಅಲ್ಯೂಮಿನಿಯಂ ಬಾಕ್ಸ್‌ಗಳನ್ನು (Railway Track Axle Counter) ನೋಡಿರುತ್ತೀರಿ. ಅವು ಯಾವುವು ಮತ್ತು ಅವುಗಳನ್ನು ಯಾವುದಕ್ಕಾಗಿ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಅನೇಕ ಜನರು ಇದನ್ನು ವಿದ್ಯುತ್ ಪೆಟ್ಟಿಗೆಗಳು ಎಂದು ಭಾವಿಸುತ್ತಾರೆ. ಇದು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದರೆ ಅವು ವಿದ್ಯುತ್ ಪೆಟ್ಟಿಗೆಗಳಲ್ಲ ಎಂದು ತಿಳಿಯಬೇಕಾದರೆ ನೀವು ಈ ಲೇಖನ ಓದಲೇಬೇಕು.

ರೈಲ್ವೆ ಹಳಿಗಳ ಪಕ್ಕದಲ್ಲಿ ಅಲ್ಲಲ್ಲಿ ಕಂಡುಬರುವ ಈ ಅಲ್ಯೂಮಿನಿಯಂ ಬಾಕ್ಸ್ ಅನ್ನು ಆಕ್ಸಲ್ ಕೌಂಟರ್ ಬಾಕ್ಸ್ ಎಂದು ಕರೆಯಲಾಗುತ್ತದೆ. ಇದನ್ನು ರೈಲ್ವೆ ಕಣ್ಣು ಎಂದೂ ಕರೆಯುತ್ತಾರೆ. ಈ ಅಲ್ಯೂಮಿನಿಯಂ ಬಾಕ್ಸ್ ರೈಲಿನ ಕೋಚ್‌ಗಳ ಸಂಖ್ಯೆಯನ್ನು ಎಣಿಸುತ್ತದೆ. ಹಾಗೆಯೇ ರೈಲು ಯಾವ ದಿಕ್ಕಿನಲ್ಲಿ ಚಲಿಸುತ್ತದೆ? ಅದು ಎಷ್ಟು ವೇಗವಾಗಿ ಚಲಿಸುತ್ತಿದೆ? ಮುಂತಾದ ವಿವರಗಳನ್ನು ಮೌಲ್ಯಮಾಪನ ಮಾಡುತ್ತದೆ. ಅಪಘಾತಗಳನ್ನು ತಡೆಗಟ್ಟಲು ಈ ಆಕ್ಸಲ್ ಕೌಂಟರ್ ಬಾಕ್ಸ್‌ಗಳನ್ನು ಬಳಸಲಾಗುತ್ತದೆ. ಈ ಪೆಟ್ಟಿಗೆಗಳು ಪ್ರತಿ ಮೂರರಿಂದ ಐದು ಕಿ.ಮೀ. ಅಂತರದಲ್ಲಿ ಸ್ಥಾಪನೆಗೊಂಡಿರುತ್ತವೆ. ಈ ಪೆಟ್ಟಿಗೆಗಳು ರೈಲ್ವೆ ಹಳಿಗಳಿಗೆ ಸಂಪರ್ಕ ಹೊಂದಿವೆ.

ಮತ್ತಷ್ಟು ಓದಿ: ರೈಲ್ವೆ ಎಂಜಿನ್​ನಲ್ಲಿ ಕಾಣಿಸಿಕೊಂಡ ಬೆಂಕಿ, ಗೇಟ್​ಮ್ಯಾನ್ ಯಶ್​ಪಾಲ್​ ಸಮಯ ಪ್ರಜ್ಞೆಯಿಂದ ನಾರಾರು ಜೀವಗಳು ಅಪಾಯದಿಂದ ಪಾರು

ರೈಲು ಈ ಪೆಟ್ಟಿಗೆಯನ್ನು ದಾಟಿದಾಗಲೆಲ್ಲಾ, ಹಳಿಗಳ ಪಕ್ಕದಲ್ಲಿ ಇರಿಸಲಾದ ಪೆಟ್ಟಿಗೆಗಳು ರೈಲಿನ ಆಕ್ಸಲ್‌ಗಳನ್ನು (ಎರಡು ಚಕ್ರಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ರಾಡ್) ಎಣಿಕೆ ಮಾಡುತ್ತದೆ. ಅಪಘಾತ ಸಂಭವಿಸಿ ರೈಲಿನ ಹಿಂದಿನ ಕೋಚ್‌ಗಳು ಇಂಜಿನ್‌ನಿಂದ ಹೊರಬಿದ್ದರೆ… ಈ ಅಲ್ಯೂಮಿನಿಯಂ ಬಾಕ್ಸ್‌ಗಳು ತಕ್ಷಣ ಆ ಮಾಹಿತಿಯನ್ನು ಬಾಕ್ಸ್‌ಗಳಿಗೆ ತಲುಪಿಸುತ್ತವೆ. ಇದು ತಕ್ಷಣವೇ ಕೆಂಪು ದೀಪವನ್ನು ಆನ್ ಮಾಡುತ್ತದೆ. ಇದರಿಂದ ಲೊಕೊ ಪೈಲಟ್ ರೈಲು ತಕ್ಷಣವೇ ನಿಲ್ಲುತ್ತದೆ. ಅಲ್ಲದೆ, ಈ ಬಾಕ್ಸ್‌ಗಳು ಬೋಗಿಗಳು ಹಳಿತಪ್ಪಿದ ಬಗ್ಗೆ ಹತ್ತಿರದ ರೈಲು ನಿಲ್ದಾಣಕ್ಕೆ ತಿಳಿಸುತ್ತವೆ. ಒಂದು ವೇಳೆ ಕೆಲವು ಬೋಗಿಗಳು ರೈಲಿನಿಂದ ಬೇರ್ಪಟ್ಟರೆ, ಈ ಆಕ್ಸಲ್ ಕೌಂಟರ್ ಬಾಕ್ಸ್ ಸಹಾಯದಿಂದ ಆಯಾ ಬೋಗಿಗಳು ಯಾವ ಪ್ರದೇಶದಲ್ಲಿವೆ ಎಂಬುದನ್ನು ಕಂಡುಹಿಡಿಯಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್