ಸೆಖೆ ತಡೆಯಲಾಗದೆ ಎಸಿ ಕೊಡಿಸಿ ಎಂದ ಪತ್ನಿಗೆ ನೋ ಎಂದ ಗಂಡ; ಆಮೇಲಾಗಿದ್ದು ದುರಂತ!

ತಮಿಳುನಾಡಿನ ತಿರುವಳ್ಳೂರು ಬಳಿ ಆಘಾತಕಾರಿ ಘಟನೆಯೊಂದು ನಡೆದಿದೆ. ದೇಶಾದ್ಯಂತ ಉಷ್ಣ ಅಲೆ ಹೆಚ್ಚಾಗಿದ್ದು, ತಮಿಳುನಾಡಿನಲ್ಲಿಯೂ ಬಿಸಿಲಿನ ತಾಪ ತಾಳಲಾರದಂತಾಗಿದೆ. ಸೆಖೆ ತಡೆಯಲಾಗದೆ ಹೆಂಡತಿಯೊಬ್ಬಳು ತನ್ನ ಗಂಡನ ಬಳಿ ಮನೆಗೆ ಎಸಿ ತನ್ನಿ ಎಂದಿದ್ದಳು. ಆದರೆ, ಅದಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ ಎಂದು ಗಂಡ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಹೆಂಡತಿ ಆತುರದ ನಿರ್ಧಾರ ತೆಗೆದುಕೊಂಡಿದ್ದಾಳೆ.

ಸೆಖೆ ತಡೆಯಲಾಗದೆ ಎಸಿ ಕೊಡಿಸಿ ಎಂದ ಪತ್ನಿಗೆ ನೋ ಎಂದ ಗಂಡ; ಆಮೇಲಾಗಿದ್ದು ದುರಂತ!
Husband Wife Fighting
Image Credit source: AI

Updated on: Apr 25, 2026 | 10:41 PM

ತಿರುವಳ್ಳೂರು, ಏಪ್ರಿಲ್ 25: ತಮಿಳುನಾಡಿನ ತಿರುವಳ್ಳೂರಿನ 26 ವರ್ಷದ ಆಕಾಶ್ ಮತ್ತು 25 ವರ್ಷದ ಮೋನಿಕಾ ಕೇವಲ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಶಾಲೆಯಿಂದ ಕಾಲೇಜಿನವರೆಗೆ ಒಟ್ಟಿಗೇ ಓದಿದ್ದ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರೂ ಒಪ್ಪಿ ಮದುವೆ ಮಾಡಿಸಿದ್ದರು. ಆದರೆ, ಅವರ ಪ್ರೀತಿಯ ದಾಂಪತ್ಯ ಎರಡೇ ವರ್ಷದಲ್ಲಿ ಅಂತ್ಯವಾಗಿದೆ. ತಮಿಳುನಾಡಿನ ಸೆಖೆ ತಡೆಯಲಾರದೆ ಮೋನಿಕಾ ಆಕಾಶ್ ಬಳಿ ಮನೆಗೆ ಎಸಿ ಹಾಕಿಸು ಎಂದು ಹೇಳಿದ್ದಳು. ಆದರೆ, ಆಕಾಶ್ ಈಗ ಬೇಡವೆಂದು ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಮೋನಿಕಾ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ!

ಆಕಾಶ್ ತಿರುವಳ್ಳೂರಿನ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಮೋನಿಕಾ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದಳು. ಸೆಖೆಯಿಂದ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಮೋನಿಕಾ ತನ್ನ ಪತಿ ಆಕಾಶ್‌ಗೆ ಮನೆಗೆ ಎಸಿ ಖರೀದಿಸಲು ಕೇಳಿಕೊಂಡಿದ್ದಳು. ಆದರೆ, ಹೆಚ್ಚಿನ ಸಂಬಳವಿಲ್ಲದ ಆಕಾಶ್ ಅದಕ್ಕೆ ನಿರಾಕರಿಸಿದ್ದ . ಇದರಿಂದಾಗಿ, ಇಬ್ಬರ ನಡುವೆ ಜಗಳ ಉಂಟಾಗಿತ್ತು. ಆಕಾಶ್​ನ ಮನೆಯವರೂ ಸೊಸೆಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಗುರುಕುಲದಲ್ಲಿ 11 ವರ್ಷದ ವಿದ್ಯಾರ್ಥಿಯ ಬರ್ಬರ ಹತ್ಯೆ; ಮೈಮೇಲಿತ್ತು 42 ಗಾಯ

ಸೆಖೆ ತಡೆಯಲಾಗದೆ ನಿನ್ನೆ ರಾತ್ರಿ ಆಕಾಶ್​ ತನ್ನ ತಮ್ಮಂದಿರು ಮತ್ತು ಅಪ್ಪ-ಅಮ್ಮನ ಜೊತೆ ಟೆರೇಸಿನಲ್ಲಿ ಮಲಗಲು ಹೋಗಿದ್ದ. ಆಗ ಮೋನಿಕಾ ಮಾತ್ರ ಮನೆಯಲ್ಲಿ ಒಬ್ಬಂಟಿಯಾಗಿ ಮಲಗಿದ್ದಳು. ಬೆಳಿಗ್ಗೆ ಮುಂಜಾನೆ ಆಕಾಶ್ ರೂಂಗೆ ಬಂದಾಗ ತನ್ನ ಪತ್ನಿ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಕ್ಕೊಳಗಾದನು.

ಮನೆಯಲ್ಲಿ ತನ್ನ ಪತ್ನಿ ಮೋನಿಕಾ ತನ್ನ ಸೀರೆಯಿಂದ ನೇಣು ಬಿಗಿದುಕೊಂಡಿರುವುದನ್ನು ನೋಡಿ ಆಕಾಶ್ ಕಿರುಚಿದನು. ಆ ಸಮಯದಲ್ಲಿ, ಮಹಡಿಯ ಮೇಲೆ ಮಲಗಿದ್ದ ಅವರ ತಂದೆ, ತಾಯಿ ಮತ್ತು ಸಹೋದರ ಅವರ ಕಿರುಚಾಟ ಕೇಳಿ ಕೆಳಗೆ ಬಂದರು. ನಂತರ, ಅವರು ಈ ಘಟನೆಯ ಬಗ್ಗೆ ಪುಲ್ಲರಂಬಕ್ಕಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಈ ವಿಷಯ ತಿಳಿದ ಪುಲ್ಲರಂಬಕ್ಕಂ ಪೊಲೀಸರು ಮೋನಿಕಾಳ ಶವವನ್ನು ವಶಪಡಿಸಿಕೊಂಡು ತಿರುವಲ್ಲೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಈ ಬಗ್ಗೆ ಅವರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪೊಲೀಸಪ್ಪನ ಪ್ರೇಮ ಪುರಾಣ; ಕಾನ್​ಸ್ಟೆಬಲ್​ನ​ ಹೆಂಡತಿ, ಮಗುವಿಗೆ ಚಾಕುವಿನಿಂದ ಇರಿದು ಕೊಂದ ಪ್ರೇಯಸಿ

ಅವರು ಮದುವೆಯಾಗಿ ಕೇವಲ ಎರಡು ವರ್ಷಗಳಾಗಿವೆ. ಹೀಗಾಗಿ, ಈ ಆತ್ಮಹತ್ಯೆಗೆ ಬೇರೆ ಯಾವುದೇ ಕಾರಣಗಳಿವೆಯೇ ಎಂದು ಅವರು ತನಿಖೆ ನಡೆಸುತ್ತಿದ್ದಾರೆ. ಮೋನಿಕಾಳ ಶವವನ್ನು ಹೊರತೆಗೆದು ಶವಪರೀಕ್ಷೆಗಾಗಿ ತಿರುವಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Sat, 25 April 26

Follow Us