AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸಪ್ಪನ ಪ್ರೇಮ ಪುರಾಣ; ಕಾನ್​ಸ್ಟೆಬಲ್​ನ​ ಹೆಂಡತಿ, ಮಗುವಿಗೆ ಚಾಕುವಿನಿಂದ ಇರಿದು ಕೊಂದ ಪ್ರೇಯಸಿ

ಆತ ಪೊಲೀಸ್ ಕಾನ್​ಸ್ಟೆಬಲ್. ತಪ್ಪು ಮಾಡಿದವರನ್ನು ಹಿಡಿದು ಶಿಕ್ಷೆ ನೀಡುವ ಸ್ಥಾನದಲ್ಲಿದ್ದ ಆತನೇ ತಪ್ಪು ದಾರಿ ತುಳಿದಿದ್ದ. ಮನೆಯಲ್ಲಿ ಹೆಂಡತಿ, ಮೂವರು ಮಕ್ಕಳಿದ್ದರೂ ಇನ್ನೊಬ್ಬಳ ಪ್ರೀತಿಯ ಬಲೆಗೆ ಸಿಲುಕಿದ್ದ ಆತ ಆಕೆಯ ಪ್ರೀತಿಗಾಗಿ ಕುಟುಂಬವನ್ನು ಬೇಕಾದರೂ ಬಿಟ್ಟು ಹೋಗಲು ತಯಾರಿದ್ದ. ಆತನ ಪ್ರೇಯಸಿಗೆ ಆತನ ಹೆಂಡತಿ, ಮಕ್ಕಳ ಮೇಲೆ ಅಸೂಯೆಯಿತ್ತು. ಆತನನ್ನು ಸದಾ ತನ್ನ ಬಳಿಯೇ ಇಟ್ಟುಕೊಳ್ಳಲು ಅವರೆಲ್ಲರನ್ನೂ ಕೊಲ್ಲುವ ನಿರ್ಧಾರ ತೆಗೆದುಕೊಂಡಿದ್ದಳು. ಆಮೇಲೇನಾಯ್ತು?

ಪೊಲೀಸಪ್ಪನ ಪ್ರೇಮ ಪುರಾಣ; ಕಾನ್​ಸ್ಟೆಬಲ್​ನ​ ಹೆಂಡತಿ, ಮಗುವಿಗೆ ಚಾಕುವಿನಿಂದ ಇರಿದು ಕೊಂದ ಪ್ರೇಯಸಿ
Stabs To DeathImage Credit source: AI
ಸುಷ್ಮಾ ಚಕ್ರೆ
|

Updated on: Apr 25, 2026 | 6:31 PM

Share

ರಾಯ್ಪುರ, ಏಪ್ರಿಲ್ 25: ಛತ್ತೀಸ್​​ಗಢದಲ್ಲಿ ಪೊಲೀಸ್ ಕಾನ್​ಸ್ಟೆಬಲ್​ನ ಲವ್ ಸ್ಟೋರಿಗೆ (Love Story) ಆತನ ಇಡೀ ಕುಟುಂಬವೇ ಛಿದ್ರವಾಗಿದೆ. ಮದುವೆಯಾಗಿ, ಹೆಂಡತಿಗೆ ಮೂರು ಮಕ್ಕಳನ್ನು ಕರುಣಿಸಿದ್ದರೂ ಇನ್ನೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದ ಕಾನ್​ಸ್ಟೆಬಲ್ ಆಕೆಯ ಮನೆಯಲ್ಲೇ ಇರುತ್ತಿದ್ದ. ಇದು ಆತನ ಹೆಂಡತಿಗೂ ಗೊತ್ತಿತ್ತು. ಆದರೆ, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ಆಕೆ ಅಸಹಾಯಕಳಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಆತ ತನ್ನ ಮನೆಯಲ್ಲಿದ್ದಾಗಲೂ ಆ ಪ್ರೇಯಸಿ ಆಗಾಗ ಬಂದು ಆತನ ಹೆಂಡತಿ, ಮಕ್ಕಳ ಮುಂದೆಯೇ ಆತನೊಂದಿಗೆ ಸಲ್ಲಾಪ ನಡೆಸುತ್ತಿದ್ದಳು.

ಮದುವೆಯಾಗಿ 3 ಮಕ್ಕಳಿದ್ದ ಪೊಲೀಸ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ 25 ವರ್ಷದ ಯುವತಿ ಈ ಬಾರಿ ಆತನಿಂದ ಆತನ ಕುಟುಂಬವನ್ನು ಸಂಪೂರ್ಣವಾಗಿ ದೂರ ಮಾಡಲೆಂದೇ ಬಂದಿದ್ದಳು. ಕಾನ್ಸ್‌ಟೇಬಲ್‌ನ ಮನೆಗೆ ಬಲವಂತವಾಗಿ ನುಗ್ಗಿದ ಆಕೆ ಆತನ ಪತ್ನಿ ಮತ್ತು ಮೂವರು ಮಕ್ಕಳನ್ನು ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ತೀವ್ರವಾಗಿ ಗಾಯಗೊಂಡ ಕಾನ್​ಸ್ಟೆಬಲ್​ನ ಹೆಂಡತಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಡಬಾರದ ತಪ್ಪು ಮಾಡಿದ್ದು ಪೊಲೀಸ್ ಆದರೂ ಶಿಕ್ಷೆ ಅನುಭವಿಸಿದ್ದು ಮಾತ್ರ ಆತನ ಹೆಂಡತಿ ಮತ್ತು ಮಕ್ಕಳು.

ಇದನ್ನೂ ಓದಿ: ಶಾಲೆಗೆ ಹೋಗುತ್ತಿದ್ದಾಗ ರಾಜಸ್ಥಾನದ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಇಂದು ಬೆಳಿಗ್ಗೆ ಆರೋಪಿ ಸರೋಜಿನಿ ಭಾರದ್ವಾಜ್ ತಮ್ಮ ಊರಿಗೆ ಹೋಗಲು ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾಗ ದುರ್ಗದಲ್ಲಿರುವ ಕಾನ್ಸ್‌ಟೇಬಲ್ ಲಲಿತೇಶ್ ಯಾದವ್ ಮನೆಗೆ ನುಗ್ಗಿದ್ದಳು. ಮನೆಯೊಳಗೆ ನುಗ್ಗಿದ ಸರೋಜಿನಿ ಲಲಿತೇಶ್ ಯಾದವ್​​ನ ಹೆಂಡತಿ ರೀನಾ ಯಾದವ್ ಜೊತೆ ಜಗಳವಾಡಿದಳು. ಈ ಜಗಳದ ನಡುವೆ ಆಕೆ ರೀನಾಳಿಗೆ ಚಾಕುವಿನಿಂದ ಚುಚ್ಚಿದಳು. ನಂತರ ಆಕೆಯ ಮೂವರು ಮಕ್ಕಳ ಮೇಲೂ ಹಲ್ಲೆ ನಡೆಸಿದಳು. ರೂಂಗೆ ಹೋಗಿ ಅಲ್ಲಿ ಹಾಸಿಗೆಯ ಮೇಲೆ ನಿದ್ರೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಮಗುವಿಗೆ ಪದೇಪದೇ ಚಾಕುವಿನಿಂದ ಇರಿದ ಹಿನ್ನೆಲೆಯಲ್ಲಿ ಆತ ಅಲ್ಲೇ ಸಾವನ್ನಪ್ಪಿದ್ದಾನೆ. ರೀನಾಳಿಗೂ ಮನಸೋಇಚ್ಛೆ ಇರಿದಿದ್ದರಿಂದ ಆಕೆಯೂ ಮೃತಪಟ್ಟಿದ್ದಾಳೆ. ಇನ್ನಿಬ್ಬರು ಹೆಣ್ಣುಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ವಿಪರ್ಯಾಸವೆಂದರೆ ಸರೋಜಿನಿ ಈ ರೀತಿ ದಾಳಿ ಮಾಡುವಾಗ ಲಲಿತೇಶ್ ಕೂಡ ಅಲ್ಲಿಯೇ ಇದ್ದ. ತನ್ನ ಮಕ್ಕಳ ಮೇಲೆ ಚಾಕುವಿನಿಂದ ಇರಿಯುವಾಗಲೂ ಆತ ಆಕೆಯನ್ನು ತಡೆಯಲಿಲ್ಲ. ಮಕ್ಕಳಿಗೆ ಇರಿಯುವುದನ್ನು ನೋಡಿದ ರೀನಾ ತನ್ನ ಗಂಡನ ಬಳಿ ಮಕ್ಕಳನ್ನು ಕಾಪಾಡುವಂತೆ ಗೋಗರೆದಿದ್ದಾಳೆ. ತನ್ನ ನೋವಿನ ನಡುವೆಯೂ ರೀನಾ ತನ್ನ ಮಕ್ಕಳಾದ ನೈನಾ ಮತ್ತು ತಾನಿಯಾರನ್ನು ಬಾತ್​​ರೂಂನಲ್ಲಿ ಲಾಕ್ ಮಾಡಿ ಸರೋಜಿನಿಯಿಂದ ಕಾಪಾಡಲು ಪ್ರಯತ್ನಿಸಿದ್ದಾಳೆ. ಮಕ್ಕಳನ್ನು ಏನೂ ಮಾಡಬೇಡ ಎಂದು ಸರೋಜಿನಿಯ ಕಾಲು ಹಿಡಿದು ಬೇಡಿಕೊಂಡಿದ್ದಾಳೆ.

ಇದನ್ನೂ ಓದಿ: ಗುರುಕುಲದಲ್ಲಿ 11 ವರ್ಷದ ವಿದ್ಯಾರ್ಥಿಯ ಬರ್ಬರ ಹತ್ಯೆ; ಮೈಮೇಲಿತ್ತು 42 ಗಾಯ

ಅಷ್ಟರಲ್ಲಿ ಗಲಾಟೆ ಕೇಳಿ ಅಕ್ಕಪಕ್ಕದ ಫ್ಲಾಟ್​ನವರು ಬಂದ ಕಾರಣದಿಂದ ಆ ಇಬ್ಬರು ಹೆಣ್ಣುಮಕ್ಕಳ ಜೀವ ಉಳಿದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ ಅಕ್ಕಪಕ್ಕದವರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರು ಲಲಿತೇಶ್ ಯಾದವ್ ಮತ್ತು ಸರೋಜಿನಿಯನ್ನು ಬಂಧಿಸಿದ್ದಾರೆ. ರೀನಾ ಯಾದವ್ ಮತ್ತು ಅವರ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ರೀನಾ ಮತ್ತು ಅವರ ಮಗ ಮೃತಪಟ್ಟಿದ್ದರು. ಪೊಲೀಸರ ಮನೆಯಲ್ಲಿಯೇ ನಡೆದ ಈ ಕೊಲೆ ಆತಂಕ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
3 ತಿಂಗಳ ಕಂದನನ್ನ ತನ್ನದೇ ಮಗು ಎಂಬಂತೆ ಅಪ್ಪಿಕೊಂಡು ಮುದ್ದಾಡಿದ ಮಂಗ
ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್
ಪಂದ್ಯ ಶ್ರೇಷ್ಠ ಕಿಂಗ್ ಕೊಹ್ಲಿಗೆ ಟಿವಿ, ಮೊಬೈಲ್ ಗಿಫ್ಟ್
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ