AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಯಾಂಗನೆಯ ಮೆಸೇಜ್​ಗೆ ಮಾರು ಹೋದವನು ಕಳಕೊಂಡ ಹಣವೆಷ್ಟು ಗೊತ್ತಾ?

ಮಹಾ ವಂಚಕಿಯೊಬ್ಬಳು 60 ವರ್ಷದ ವ್ಯಕ್ತಿಯನ್ನು ಯಾಮಾರಿಸಿದ್ದಾಳೆ. ಅದೂ ತಾಮು ಅಮೆರಿಕ ಸೈನ್ಯದ ಭಯೋತ್ಪಾದನಾ ವಿರೋಧಿ ವಿಭಾಗದ ಅಧಿಕಾರಿಯೆಂದು ನಂಬಿಸಿ. ಈ ಬಾಬತ್ತಿನಲ್ಲಿ ಬರೋಬ್ಬರಿ 1.24 ಕೋಟಿ ರೂಗಳನ್ನು ಮಹಿಳೆ ವಂಚಿಸಿರುವ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ! ಚಕ್ಕರ್‌ಪುರ ಗ್ರಾಮದ ಮಾರುತಿ ವಿಹಾರ್​ನ ನಿವಾಸಿಯಾಗಿರುವ ಧೀರೇಂದ್ರ ಕುಮಾರ್ ಮೋಸ ಹೋಗಿರುವ ವ್ಯಕ್ತಿ. ತಾನು US Army ಭಯೋತ್ಪಾದನಾ ನಿಗ್ರಹ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆ ಧಿರೇಂದ್ರ ಕುಮಾರ್​ನನ್ನು ಪರಿಚಯ ಮಾಡಿಕೊಂಡಿದ್ದಾಳೆ. ಭಾರತದಲ್ಲಿ ಔಷಧ ಕಂಪನಿಯನ್ನು ತೆರೆಯಲು ಬಯಸಿರುವುದಾಗಿ […]

ಮಾಯಾಂಗನೆಯ ಮೆಸೇಜ್​ಗೆ ಮಾರು ಹೋದವನು ಕಳಕೊಂಡ ಹಣವೆಷ್ಟು ಗೊತ್ತಾ?
ಶೇ 16,000ದಷ್ಟು ಏರಿಕೆ
ಸಾಧು ಶ್ರೀನಾಥ್​
|

Updated on:Sep 16, 2020 | 5:13 PM

Share

ಮಹಾ ವಂಚಕಿಯೊಬ್ಬಳು 60 ವರ್ಷದ ವ್ಯಕ್ತಿಯನ್ನು ಯಾಮಾರಿಸಿದ್ದಾಳೆ. ಅದೂ ತಾಮು ಅಮೆರಿಕ ಸೈನ್ಯದ ಭಯೋತ್ಪಾದನಾ ವಿರೋಧಿ ವಿಭಾಗದ ಅಧಿಕಾರಿಯೆಂದು ನಂಬಿಸಿ. ಈ ಬಾಬತ್ತಿನಲ್ಲಿ ಬರೋಬ್ಬರಿ 1.24 ಕೋಟಿ ರೂಗಳನ್ನು ಮಹಿಳೆ ವಂಚಿಸಿರುವ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ!

ಚಕ್ಕರ್‌ಪುರ ಗ್ರಾಮದ ಮಾರುತಿ ವಿಹಾರ್​ನ ನಿವಾಸಿಯಾಗಿರುವ ಧೀರೇಂದ್ರ ಕುಮಾರ್ ಮೋಸ ಹೋಗಿರುವ ವ್ಯಕ್ತಿ. ತಾನು US Army ಭಯೋತ್ಪಾದನಾ ನಿಗ್ರಹ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಮಹಿಳೆ ಧಿರೇಂದ್ರ ಕುಮಾರ್​ನನ್ನು ಪರಿಚಯ ಮಾಡಿಕೊಂಡಿದ್ದಾಳೆ.

ಭಾರತದಲ್ಲಿ ಔಷಧ ಕಂಪನಿಯನ್ನು ತೆರೆಯಲು ಬಯಸಿರುವುದಾಗಿ ಮಹಿಳೆ ಧೀರೇಂದ್ರ ಕುಮಾರ್ ಬಳಿ ಹೇಳಿದ್ದಾಳೆ. ಜೊತೆಗೆ ಕಂಪನಿ ತೆರೆಯಲು ಸುಮಾರು 7.8 ಮಿಲಿಯನ್ ಡಾಲರ್​ಗಳನ್ನು ನನಗೆ ಕಳುಹಿಸುವುದಾಗಿ ಹೇಳಿದ್ದಳು ಎಂದು ಧಿರೇಂದ್ರ ಕುಮಾರ್ ತಿಳಿಸಿದ್ದಾರೆ.

ನಂತರ, ಜೂನ್ 19 ರಿಂದ ಜುಲೈ 17 ರವರೆಗೆ ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಧಿರೇಂದ್ರ ಕುಮಾರ್​ಗೆ ಕರೆ ಮಾಡಿ ನಾನು ಅಮೆರಿಕದಿಂದ ಪಾರ್ಸಲ್ ಬಾಕ್ಸ್​ ಒಂದನ್ನು ಪಡೆದುಕೊಂಡಿದ್ದೇನೆ ಮತ್ತು ಅದನ್ನು ಪಡೆಯಲು ನೀವು ಹಣವನ್ನು ಠೇವಣಿ ಇಡಬೇಕು ಎಂದು ಹೇಳಿದ್ದಾನೆ.

ತಾನು ಮೋಸ ಹೋಗುತ್ತಿರುವುದನ್ನು ಅರಿಯದ ಧಿರೇಂದ್ರ ಕುಮಾರ್ ನಂತರ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಅಷ್ಟೂ ಹಣವನ್ನು ಜಮಾ ಮಾಡಿದ್ದಾರೆ. ಹಣ ತಲುಪಿದ ನಂತರ ಸಂಬಂಧಪಟ್ಟವರಿಂದ ಯಾವುದೆ ಕರೆ ಬಾರದಿದ್ದಾಗ ಧೀರೇಂದ್ರ ಕುಮಾರ್​ಗೆ ತಾನು ಮೋಸ ಹೋಗಿರುವುದು ಅರಿವಿಗೆ ಬಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Published On - 4:57 pm, Wed, 16 September 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!