AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾನ್​ ಫ್ರಾನ್ಸಿಸ್ಕೋ ಟು ಬೆಂಗಳೂರು; 17 ಗಂಟೆಗಳ ನಾನ್​ಸ್ಟಾಪ್ ವಿಮಾನಯಾನದ ನೇತೃತ್ವ ವಹಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ

ಬೆಂಗಳೂರು: ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಏರ್ ಇಂಡಿಯಾದ ಮೊದಲ ನಾನ್​ಸ್ಟಾಪ್ ವಿಮಾನ ಜನವರಿ 9ರಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ಹಾರಾಟ ಆರಂಭಿಸಿದೆ. ಆ ಮೂಲಕ, ಜಗತ್ತಿನ ಎರಡು ತಂತ್ರಜ್ಞಾನ ಕೇಂದ್ರಗಳನ್ನು ವಿಮಾನ ಸಂಧಿಸಲಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರವನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂಬ ಅನ್ವರ್ಥನಾಮ ಪಡೆದುಕೊಂಡಿದೆ. ಈ ಎರಡೂ ಟೆಕ್ ಹಬ್​ಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಯಾನ ನಾಳೆ (ಜ.11) ಮಧ್ಯಾಹ್ನ 3.45ಕ್ಕೆ ಬೆಂಗಳೂರು ತಲುಪಲಿದೆ. ಇದಷ್ಟೇ ಅಲ್ಲ, […]

ಸ್ಯಾನ್​ ಫ್ರಾನ್ಸಿಸ್ಕೋ ಟು ಬೆಂಗಳೂರು; 17 ಗಂಟೆಗಳ ನಾನ್​ಸ್ಟಾಪ್ ವಿಮಾನಯಾನದ ನೇತೃತ್ವ ವಹಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ
ಏರ್​ ಇಂಡಿಯಾದ ಮಹಿಳಾ ಪೈಲಟ್ ತಂಡ
TV9 Web
| Edited By: |

Updated on:Apr 06, 2022 | 9:14 PM

Share

ಬೆಂಗಳೂರು: ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಏರ್ ಇಂಡಿಯಾದ ಮೊದಲ ನಾನ್​ಸ್ಟಾಪ್ ವಿಮಾನ ಜನವರಿ 9ರಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ಹಾರಾಟ ಆರಂಭಿಸಿದೆ. ಆ ಮೂಲಕ, ಜಗತ್ತಿನ ಎರಡು ತಂತ್ರಜ್ಞಾನ ಕೇಂದ್ರಗಳನ್ನು ವಿಮಾನ ಸಂಧಿಸಲಿದೆ. ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ನಗರವನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂಬ ಅನ್ವರ್ಥನಾಮ ಪಡೆದುಕೊಂಡಿದೆ. ಈ ಎರಡೂ ಟೆಕ್ ಹಬ್​ಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಯಾನ ನಾಳೆ (ಜ.11) ಮಧ್ಯಾಹ್ನ 3.45ಕ್ಕೆ ಬೆಂಗಳೂರು ತಲುಪಲಿದೆ. ಇದಷ್ಟೇ ಅಲ್ಲ, ಈ ಕಠಿಣ ಪ್ರಯಾಣವನ್ನು ಸಂಪೂರ್ಣ ಮಹಿಳಾ ಪೈಲೆಟ್​ಗಳೇ ನಿರ್ವಹಿಸುತ್ತಿರುವುದು ವಿಶೇಷ.

ಸ್ಯಾನ್ ಫ್ರಾನ್ಸಿಸ್ಕೋ-ಬೆಂಗಳೂರು ನಡುವಿನ ವಿಮಾನ AI 176 ಶನಿವಾರ ಹಾಗೂ ಮಂಗಳವಾರ ಕಾರ್ಯನಿರ್ವಹಿಸಲಿದೆ. ಬೋಯೆಂಗ್ 777-200LR VT ALG ವಿಮಾನವು 238 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಪ್ರಥಮ ದರ್ಜೆಯ 8, ಬ್ಯುಸಿನೆಸ್ ದರ್ಜೆಯ 35, ಎಕನಮಿ ದರ್ಜೆಯ 195 ಸೀಟುಗಳ ವ್ಯವಸ್ಥೆಯನ್ನು ವಿಮಾನ ಹೊಂದಿದೆ. ಜೊತೆಗೆ, ವಿಮಾನದಲ್ಲಿ 4 ಕಾಕ್ ಪಿಟ್​ಗಳು, 12 ಕ್ಯಾಬಿನ್​ಗಳು ಇರಲಿವೆ.

ವಿಮಾನವನ್ನು ಮಹಿಳಾ ಪೈಲಟ್​ಗಳೇ ಚಲಾಯಿಸುತ್ತಿರುವುದು ಮತ್ತೊಂದು ವಿಶೇಷ. ಕ್ಯಾಪ್ಟನ್ ಜೋಯಾ ಅಗರ್​ವಾಲ್ (P1), ಕ್ಯಾಪ್ಟನ್ ಪಾಪಗರಿ ತನ್ಮಯಿ (P1), ಕ್ಯಾಪ್ಟನ್ ಆಕಾಂಶಾ ಸೋನಾವರೆ (P2) ಹಾಗೂ ಕ್ಯಾಪ್ಟನ್ ಶಿವಾನಿ ಮನ್ಹಾಸ್ (P2) ಈ ವಿಮಾನದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಕ್ಯಾಪ್ಟನ್ ಜೋಯಾ ಅಗರ್​ವಾಲ್ 8,000 ಗಂಟೆಗಳ ವಿಮಾನ ಹಾರಾಟ ಅವಧಿ ಅನುಭವವನ್ನು ಹೊಂದಿದ್ದಾರೆ. ಹತ್ತು ವರ್ಷಗಳಿಗೂ ಅಧಿಕ, 2,500 ಗಂಟೆಗಳಿಗೂ ಹೆಚ್ಚು ಕಾಲ B-777 ವಿಮಾನ ಚಲಾವಣೆಯಲ್ಲಿ ತೊಡಗಿಸಿಕೊಂಡ ಅನುಭವ ಪಡೆದಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ಸುಮಾರು 13,993 ಕಿಲೋ ಮೀಟರ್​ಗಳಷ್ಟು ಅಂತರವಿದೆ. ಎರಡೂ ನಗರಗಳು ವಿಶ್ವದ ವಿರುದ್ಧ ದಿಕ್ಕುಗಳಲ್ಲಿದ್ದು, 13.5 ಗಂಟೆಗಳಷ್ಟು ಸಮಯ ವ್ಯತ್ಯಾಸವನ್ನು ಹೊಂದಿದೆ. ಈ ದಾರಿ ಕ್ರಮಿಸಲು, ಗಾಳಿಯ ವೇಗವನ್ನು ಹೊಂದಿಕೊಂಡು, ಸುಮಾರು 17 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಬೇಕಿದೆ.

ವಿಮಾನ ಹಾರಾಟದ ಈ ಮಾರ್ಗವು ಸುರಕ್ಷಿತವಾದ, ವೇಗದ ದಾರಿ ಎಂದು ಗುರುತಿಸಿಕೊಂಡಿದೆ. ಇದು ಜಗತ್ತಿಗೆ ಸುತ್ತುವರಿದು ಹಾರಾಡುವಂಥ ವಿಮಾನವಾಗಲಿದೆ. ಗಾಳಿಯ ವೇಗ, ಮತ್ತಿತರ ಮಾನದಂಡಗಳಿಗೆ ಅನುಗುಣವಾಗಿ, ವಿಮಾನವು ಭೂಮಿಯ ಧ್ರುವ ಮಾರ್ಗದ ಮೂಲಕವೂ ಹಾರಾಟ ನಡೆಸುವ ಸಾಧ್ಯತೆ ಇದೆ. ಹಾಗಾದರೆ, ಪ್ರಯಾಣದ ಅವಧಿ ಮತ್ತಷ್ಟು ಕಡಿಮೆಯಾಗಲಿದೆ. ಆ ಮೂಲಕ, ಇಂಧನ ಉಳಿತಾಯ, ಕಾರ್ಬನ್ ಹೊರಸೂಸುವಿಕೆಯ ಮಿತಗೊಳಿಸಲೂ ಸಹಕಾರಿಯಾಗಲಿದೆ. ಇದು ಭಾರತದಲ್ಲಿ ಕಾರ್ಯನಿರ್ವಹಿಸುವ ಅತಿ ದೂರದ ನಾನ್​ಸ್ಟಾಪ್ ವಾಣಿಜ್ಯ ವಿಮಾನ ಹಾರಾಟವಾಗಲಿದೆ.

ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಹಿಳಾ ಪೈಲೆಟ್ ತಂಡವನ್ನು ಶ್ಲಾಘಿಸಿದ್ದಾರೆ. ಜಗತ್ತಿನಲ್ಲೇ ಭಾರತದ ಮಹಿಳೆಯರು ಅತಿ ಎತ್ತರದಲ್ಲಿದ್ದಾರೆ ಎಂದು ಏರ್​ ಇಂಡಿಯಾ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದೆ.

ಏರ್ ಇಂಡಿಯಾ ಹರಾಜು ಪ್ರಕ್ರಿಯೆಗೆ EOI ಸಲ್ಲಿಸಿದ ಟಾಟಾ, ಅಮೆರಿಕಾ ಮೂಲದ ಇಂಟರಪ್ಸ್ ಇನ್ಕ್

Published On - 6:41 pm, Sun, 10 January 21

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?