AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರುಕಟ್ಟೆ ಏರುಪೇರು, ಚೀನಾದ ಸುಳ್ಳು ಸುದ್ದಿ ತಂತ್ರ; ರಫೇಲ್ ಮತ್ತು ಚೆಂಗ್ಡು ಅಸಲಿ ಷೇರು ಆಟ

India-Pakistan Conflict, effect on stock market: ಪಾಕಿಸ್ತಾನದ ಚೀನೀ ನಿರ್ಮಿತ ಜೆ-10 ಯುದ್ಧವಿಮಾನವು ಭಾರತದ ಫ್ರಾನ್ಸ್ ನಿರ್ಮಿತ ರಫೇಲ್ ಜೆಟ್​​ಗಳನ್ನು ಹೊಡೆದುಹಾಕಿದೆ ಎನ್ನುವ ಸುದ್ದಿ ಎಲ್ಲೆಡೆ ಇತ್ತು. ಇದರ ಪರಿಣಾಮವಾಗಿ ಡಸೋ ಏವಿಯೇಶನ್ ಷೇರುಬೇಲೆ ಕಡಿಮೆ ಆಗಿತ್ತು. ಚೀನೀ ಡಿಫೆನ್ಸ್ ಸ್ಟಾಕ್ ಬೆಲೆ ಹೆಚ್ಚಿತ್ತು. ಈಗ ವಾಸ್ತವ ಸಂಗತಿ ಗೊತ್ತಾದ ಬಳಿಕ, ಎಲ್ಲವೂ ತಿರುವುಮುರುವಾಗಿದೆ. ಭಾರತದ ಡಿಫೆನ್ಸ್ ಸ್ಟಾಕ್​​ಗಳೂ ಕೂಡ ಏರುತ್ತಿವೆ.

ಮಾರುಕಟ್ಟೆ ಏರುಪೇರು, ಚೀನಾದ ಸುಳ್ಳು ಸುದ್ದಿ ತಂತ್ರ; ರಫೇಲ್ ಮತ್ತು ಚೆಂಗ್ಡು ಅಸಲಿ ಷೇರು ಆಟ
ಷೇರುಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 13, 2025 | 5:18 PM

Share

ನವದೆಹಲಿ, ಮೇ 13: ಯುದ್ಧದಲ್ಲಿ ಯಾರಿಗೆ ಗೆಲುವು ಎಂಬುದು ಹೊರಗಿನ ಜಗತ್ತಿಗೆ ಸ್ಪಷ್ಟವಾಗಿ ಗೋಚರವಾಗದೇ ಇದ್ದಾಗ ಎರಡೂ ದೇಶಗಳು ತಮಗೇ ಗೆಲುವು ಎಂದು ಬಿಂಬಿಸಿಕೊಳ್ಳುವುದುಂಟು. ಹಾಗೆಯೇ, ಯುದ್ಧಕ್ಕೆ ಸಂಬಂಧಿಸಿದ ವ್ಯಕ್ತಿಗಳು, ಸಂಸ್ಥೆಗಳು, ಸಂಘಟನೆಗಳು ತಮಗೆ ಅನುಕೂಲವಾಗುವ ರೀತಿಯಲ್ಲಿ ಅಭಿಪ್ರಾಯಗಳನ್ನು ಹರಡುವುದುಂಟು. ಇದನ್ನೇ ನೆರೇಟಿವ್ ಎನ್ನುವುದು. ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್ ಸಿಂದೂರ (Operation Sindoor) ನಡೆಸಿದ ಬಳಿಕ ನಾನಾ ರೀತಿಯ ಊಹಾಪೋಹದ ಸುದ್ದಿಗಳು ಹರಡುತ್ತಿವೆ. ಹೆಚ್ಚಿನ ಪ್ರಮುಖ ಜಾಗತಿಕ ಮಾಧ್ಯಮಗಳು ಪಾಕಿಸ್ತಾನದ ಪರವಾದ ಅಂಶಗಳನ್ನು ಎತ್ತಿ ತೋರಿಸಿದವು. ಪಾಕಿಸ್ತಾನದ ಚೀನೀ ನಿರ್ಮಿತ ಜೆಟ್​​ಗಳು ಭಾರತದ ಫ್ರಾನ್ಸ್ ನಿರ್ಮಿತ 3 ರಫೇಲ್ ಜೆಟ್ಗಳನ್ನು ಹೊಡೆದುರುಳಿಸಿತು ಎನ್ನುವ ಸುದ್ದಿ ಈಗಲೂ ದಟ್ಟವಾಗಿದೆ. ಇದರ ಬೆನ್ನಲ್ಲೇ ಈ ಜೆಟ್​​ಗಳನ್ನು ತಯಾರಿಸುವ ಕಂಪನಿಗಳ ಷೇರುಗಳ ಮೇಲೂ ನೆರೇಟಿವ್ ಪ್ರಭಾವ ಬಿದ್ದಿದೆ.

ರಫೇಲ್ ಯುದ್ಧವಿಮಾನವನ್ನು ತಯಾರಿಸುವ ಫ್ರಾನ್ಸ್​​ನ ಡಸೋ ಏವಿಯೇಶನ್ ಸಂಸ್ಥೆಯ ಷೇರುಗಳು ಮೇ 9ರಿಂದ ಕುಸಿದಿವೆ. ಇನ್ನೊಂದೆಡೆ, ಪಿಎಲ್-15 ಕ್ಷಿಪಣಿ ತಯಾರಿಸುವ ಝುಝೋ ಹೊಂಗ್ಡಾ ಎಲೆಕ್ಟ್ರಾನಿಕ್ಸ್ ಹಾಗೂ ಜೆ-10 ಜೆಟ್ ತಯಾರಿಸುವ ಚೆಂಗ್ಡು ಏರ್​​ಕ್ರಾಫ್ಟ್ ಕಂಪನಿಯ ಷೇರುಗಳು ಏರಿಕೆ ಆಗತೊಡಗಿದವು. ಇದನ್ನೇ ಮುಂದಿಟ್ಟುಕೊಂಡು ಭಾರತದ ಕೆಲ ಮಾಧ್ಯಮಗಳು ಕೂಡ ರಫೇಲ್ ಜೆಟ್​​ಗಳನ್ನು ಚೀನಾದ ಅಗ್ಗದ ಜೆಟ್​​ಗಳು ಹೊಡೆದು ಹಾಕಿದವು ಎಂದು ವರದಿಗಳನ್ನು ಬರೆದದ್ದುಂಟು. ಆದರೆ, ವಾಸ್ತವ ಸಂಗತಿ ಬೇರೆಯೇ ಇದೆ.

ಇದನ್ನೂ ಓದಿ: 2,000 ಕೋಟಿ ರೂಗೆ ತನ್ನ ಪೇಟಿಎಂ ಷೇರು ಮಾರಲಿರುವ ಚೀನಾದ ಆ್ಯಂಟ್ ಗ್ರೂಪ್

ಇವತ್ತು ಮಾರುಕಟ್ಟೆಯಲ್ಲಿ ಚೀನಾದ ಡಿಫೆನ್ಸ್ ಕಂಪನಿಗಳ ಷೇರುಬೆಲೆ ಕುಸಿತ ಕಂಡಿವೆ. ಪಾಕಿಸ್ತಾನಕ್ಕೆ ಎಫ್-16 ಸರಬರಾಜು ಮಾಡಿದ ಅಮೆರಿಕದ ಲಾಕ್​​ಹೀಡ್ ಮಾರ್ಟಿನ್ ಸಂಸ್ಥೆಯ ಷೇರುಬೆಲೆಯೂ ಕುಸಿದಿದೆ. ಇನ್ನೊಂದೆಡೆ, ರಫೇಲ್ ತಯಾರಕ ಸಂಸ್ಥೆಯಾದ ಡೊಸೋ ಏವಿಯೇಶನ್ ಷೇರುಬೆಲೆ ಏರಿದೆ. ಭಾರತದ ಬಿಇಎಲ್, ಎಚ್​​​ಎಎಲ್ ಇತ್ಯಾದಿ ಡಿಫೆನ್ಸ್ ಕ್ಷೇತ್ರದ ಕಂಪನಿಗಳ ಷೇರುಗಳಿಗೂ ಬೇಡಿಕೆ ಹೆಚ್ಚಿದೆ.

ಕೆಲ ಮಾಧ್ಯಮಗಳಲ್ಲಿ ಚೀನೀ ಜೆಟ್​​​ಗಳು ರಫೇಲ್​​ಗಿಂತ ಹೆಚ್ಚು ಪರಿಣಾಮಕಾರಿ ಎಂದು ಬಿಂಬಿಸುವಂತಹ ವರದಿಗಳನ್ನು ಪ್ರಕಟಿಸಿದ್ದರ ಫಲವಾಗಿ ಚೀನೀ ಸ್ಟಾಕುಗಳ ಮೌಲ್ಯ ಏರಿಕೆ ಆಗಿತ್ತು. ಈಗ ಭಾರತದ ಸೇನಾಧಿಕಾರಿಗಳು ಚೀನೀ ಶಸ್ತ್ರಾಸ್ತ್ರಗಳ ದೌರ್ಬಲ್ಯವನ್ನು ಸಾಕ್ಷ್ಯ ಸಮೇತವಾಗಿ ತೋರಿಸಿದ ಬಳಿಕ ಹೂಡಿಕೆದಾರರಿಗೆ ವಾಸ್ತವ ಸಂಗತಿ ಗೊತ್ತಾಗಿರಬಹುದು.

ಇದನ್ನೂ ಓದಿ: ಬೆಂಗಳೂರಿನ ಕಂಪನಿಗಳಿಂದ ಸ್ಪೈ ಸೆಟಿಲೈಟ್​​ಗಳ ತಯಾರಿಕೆ; ಪಾಕಿಸ್ತಾನದ ಮೇಲೆ ಹದ್ದಿನಗಣ್ಣಿಡಲು ಬಳಕೆ

ಪಾಕಿಸ್ತಾನ ವಾಯುಪಡೆಯ ಪ್ರಮುಖ ಶಸ್ತ್ರಾಸ್ತ್ರಗಳನ್ನು ಚೀನಾ, ಅಮೆರಿಕ ಹಾಗು ಟರ್ಕಿ ದೇಶಗಳು ಸರಬರಾಜು ಮಾಡುತ್ತವೆ. ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಂ ಸಂಪೂರ್ಣವಾಗಿ ಚೀನಾ ನಿರ್ಮಿತವಾದುವು. ಪಾಕಿಸ್ತಾನದಲ್ಲಿರುವ ಜೆಟ್​​​ಗಳಲ್ಲಿ ಹೆಚ್ಚಿನವು ಅಮೆರಿಕ ಮತ್ತು ಚೀನಾದಿಂದ ನೀಡಲಾಗಿರುವಂಥವು. ಚೀನಾ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಂ ವಿಶ್ವದ ಅತ್ಯುತ್ತಮ ರಕ್ಷಣಾ ಕೋಟೆಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು. ಆದರೆ, ಭಾರತದ ಆಪರೇಷನ್ ಸಿಂದೂರದಲ್ಲಿ ಈ ರಕ್ಷಣಾ ಕೋಟೆ ಅಭೇದ್ಯ ಅಲ್ಲ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ.

ಇನ್ನೊಂದೆಡೆ, ರಷ್ಯಾ, ಇಸ್ರೇಲ್ ಹಾಗೂ ದೇಶೀಯ ನಿರ್ಮಿತ ರಕ್ಷಣಾ ವ್ಯವಸ್ಥೆ ಹೊಂದಿದ್ದ ಭಾರತವು ಪಾಕಿಸ್ತಾನದಿಂದ ಹಾರಿ ಬಂದ ನೂರಾರು ಡ್ರೋನ್​​ಗಳನ್ನು ತಡೆಯಲು ಯಶಸ್ವಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Tue, 13 May 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ