AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬಾ ರಾಮ್​ದೇವ್​ ವಿರುದ್ಧ ಕಾನೂನು ಕ್ರಮಕ್ಕೆ ಐಎಂಎ ಆಗ್ರಹ; ‘ಅವರು ವಾಟ್ಸ್​ಆ್ಯಪ್ ಮೆಸೇಜ್ ಓದುತ್ತಿದ್ದರು’ ಎಂದ ಪತಂಜಲಿ ಟ್ರಸ್ಟ್​

ಅಲೋಪಥಿಕ್​ ಎಂಬುದು ಒಂದು ಮೂರ್ಖತನದ ವಿಜ್ಞಾನ ಎಂದು ಬಾಬಾ ರಾಮ್​ದೇವ್​ ಅವರು ಹೇಳಿತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿತ್ತು.

ಬಾಬಾ ರಾಮ್​ದೇವ್​ ವಿರುದ್ಧ ಕಾನೂನು ಕ್ರಮಕ್ಕೆ ಐಎಂಎ ಆಗ್ರಹ; ‘ಅವರು ವಾಟ್ಸ್​ಆ್ಯಪ್ ಮೆಸೇಜ್ ಓದುತ್ತಿದ್ದರು’ ಎಂದ ಪತಂಜಲಿ ಟ್ರಸ್ಟ್​
ಯೋಗ ಗುರು ಬಾಬಾ ರಾಮ್​ದೇವ್​
Lakshmi Hegde
|

Updated on: May 22, 2021 | 9:24 PM

Share

ದೆಹಲಿ: ಯೋಗಗುರು ಬಾಬಾ ರಾಮದೇವ್​ ಅವರು ಆಧುನಿಕ ವಿಜ್ಞಾನ, ಅಲೋಪಥಿ ಔಷಧದ ದ್ವೇಷಿಯಲ್ಲ. ಹಾಗೇ ಅದನ್ನು ಅಭ್ಯಾಸ ಮಾಡುವವರ ಬಗ್ಗೆಯೂ ಯಾವುದೇ ಕೆಟ್ಟ ಭಾವನೆ ಹೊಂದಿಲ್ಲ ಎಂದು ಪತಂಜಲಿ ಯೋಗ ಟ್ರಸ್ಟ್​ ಇಂದು ತಿಳಿಸಿದೆ. ಬಾಬಾ ರಾಮದೇವ್​ ಅವರು ಅಲೋಪಥಿ ಔಷಧಗಳ ಬಗ್ಗೆ ಅಶಿಕ್ಷಿತ ಹೇಳಿಕೆಗಳನ್ನು ನೀಡುತ್ತ, ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಆಧುನಿಕ ವೈಜ್ಞಾನಿಕ ಔಷಧಿಗಳಿಗೆ ಅಪಕೀರ್ತಿ ತರುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ರೀತ್ಯಾ ಪ್ರಕರಣ ದಾಖಲು ಮಾಡಬೇಕು ಎಂದು ಇಂದು ಭಾರತೀಯ ವೈದ್ಯಕೀಯ ಸಂಘ ಕೇಂದ್ರ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿತ್ತು.

ಅಲೋಪಥಿಕ್​ ಎಂಬುದು ಒಂದು ಮೂರ್ಖತನದ ವಿಜ್ಞಾನ ಎಂದು ಬಾಬಾ ರಾಮ್​ದೇವ್​ ಅವರು ಹೇಳಿತ್ತಿರುವ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಯೋಗಗುರುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಭಾರತೀಯ ವೈದ್ಯಕೀಯ ಸಂಘ, ಬಾಬಾ ರಾಮ್​ದೇವ್​ ವಿರುದ್ಧ ಅಲೋಪಥಿ ಎಪಿಡೆಮಿಕ್​ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು. ಅವರು ಹೀಗೆ ಅಶಿಕ್ಷಿತರಂತೆ ನೀಡುವ ಹೇಳಿಕೆಗಳು ದೇಶದ ಬಡವರು, ಸಾಕ್ಷರ ಜನರಿಗೆ ಅಪಾಯ ತಂದೊಡ್ಡಬಹುದು ಎಂದು ವೈದ್ಯಕೀಯ ಸಂಘ ಹೇಳಿತ್ತು.

ಇದೀಗ ಪತಂಜಲಿ ಯೋಗ ಟ್ರಸ್ಟ್​ ಐಎಂಎಯ ಈ ಆರೋಪಗಳನ್ನು ಅಲ್ಲಗಳೆದಿದೆ. ಸಾಂಕ್ರಾಮಿಕ ರೋಗದ ಸವಾಲು ಎದುರಾಗಿರುವ ಈ ಸಂದರ್ಭದಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿರುವ ಅಲೋಪಥಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಬಗ್ಗೆ ಯೋಗ ಗುರು ಬಾಬಾ ರಾಮ್​ದೇವ್​ ಅವರಿಗೆ ಅಪಾರ ಗೌರವ ಇದೆ. ಅವರು ವಾಟ್ಸ್​ಆ್ಯಪ್​ನಲ್ಲಿ ಬಂದಿದ್ದ ಸಂದೇಶವೊಂದನ್ನು ಓದುತ್ತಿದ್ದರು. ಇದೆಲ್ಲ ಅವರ ಸ್ವಂತ ಹೇಳಿಕೆಗಳಲ್ಲ ಎಂದು ಹೇಳಿದೆ.

ವಿಡಿಯೋದಲ್ಲಿ ಏನಿತ್ತು? ಅಲೋಪಥಿ ವೈದ್ಯಕೀಯ ಮೂರ್ಖತನದ್ದು ಎಂದು ಹೇಳಿದ್ದ ಬಾಬಾ ರಾಮ್​ದೇವ್​, ಈ ಅಲೋಪಥಿಕ್​ ಔಷಧಿ ತೆಗೆದುಕೊಂಡೇ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ ಎಂದೂ ಹೇಳಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಭಾರತೀಯ ವೈದ್ಯಕೀಯ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಬೆಡ್​ಗಳ ವ್ಯವಸ್ಥೆ ಏಕೆ ಕಡಿಮೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಗರಂ

Yoga guru Ramdev has no ill will against modern science statement released By Patanjali trust

ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ