AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಣಕ್ಕಂ! ನಾನು ಜಫೀರಾ.. ಕೊರೊನಾದಿಂದ ಬಚಾವ್​ ಮಾಡಲು ಬಂತು ರೋಬೋ

ಚೆನ್ನೈ: ತಮಿಳುನಾಡಿನ ತಿರುಚಿನಾಪಳ್ಳಿಯ ಪ್ರತಿಷ್ಠಿತ ಜವಳಿ ಮಳಿಗೆಯೊಂದಕ್ಕೆ ಭೇಟಿ ಕೊಡುವ ಗ್ರಾಹಕರ ಆರೋಗ್ಯದ ಹಿತಾಸಕ್ತಿಗಾಗಿ ಅಂಗಡಿ ಮಾಲೀಕರು ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ತಮ್ಮ ಮಳಿಗೆಯಲ್ಲಿ ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಕೊವಿಡ್​ ನಿಯಮಗಳ ಪಾಲೆನೆಗಾಗಿ ಜಫೀರಾ ಎಂಬಾ ಮಹಿಳಾ ಆಕಾರದ ರೋಬೋವೊಂದನ್ನು ನಿಯೋಜಿಸಿದ್ದಾರೆ. ಜಫೀರಾ ಮಳಿಗೆಗೆ ಬರುವ ಎಲ್ಲಾ ಗ್ರಾಹಕರ ಥರ್ಮಲ್​ ಸ್ಕ್ರೀನಿಂಗ್​ ಮಾಡುವುದರ ಜೊತೆ ಅವರಿಗೆ ಸ್ಯಾನಿಟೈಸರ್​ ಸಹ ನೀಡುತ್ತಾಳೆ. ಅಷ್ಟೇ ಅಲ್ಲ, ಅಂಗಡಿಗೆ ಬಂದಿರುವ ಎಲ್ಲಾ ಗ್ರಾಹಕರ ಮೇಲೆ ನಿಗಾ ವಹಿಸುವುದರ ಜೊತೆಗೆ […]

ವಣಕ್ಕಂ! ನಾನು ಜಫೀರಾ.. ಕೊರೊನಾದಿಂದ ಬಚಾವ್​ ಮಾಡಲು ಬಂತು ರೋಬೋ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Aug 27, 2020 | 12:02 PM

ಚೆನ್ನೈ: ತಮಿಳುನಾಡಿನ ತಿರುಚಿನಾಪಳ್ಳಿಯ ಪ್ರತಿಷ್ಠಿತ ಜವಳಿ ಮಳಿಗೆಯೊಂದಕ್ಕೆ ಭೇಟಿ ಕೊಡುವ ಗ್ರಾಹಕರ ಆರೋಗ್ಯದ ಹಿತಾಸಕ್ತಿಗಾಗಿ ಅಂಗಡಿ ಮಾಲೀಕರು ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ತಮ್ಮ ಮಳಿಗೆಯಲ್ಲಿ ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಕೊವಿಡ್​ ನಿಯಮಗಳ ಪಾಲೆನೆಗಾಗಿ ಜಫೀರಾ ಎಂಬಾ ಮಹಿಳಾ ಆಕಾರದ ರೋಬೋವೊಂದನ್ನು ನಿಯೋಜಿಸಿದ್ದಾರೆ.

ಜಫೀರಾ ಮಳಿಗೆಗೆ ಬರುವ ಎಲ್ಲಾ ಗ್ರಾಹಕರ ಥರ್ಮಲ್​ ಸ್ಕ್ರೀನಿಂಗ್​ ಮಾಡುವುದರ ಜೊತೆ ಅವರಿಗೆ ಸ್ಯಾನಿಟೈಸರ್​ ಸಹ ನೀಡುತ್ತಾಳೆ. ಅಷ್ಟೇ ಅಲ್ಲ, ಅಂಗಡಿಗೆ ಬಂದಿರುವ ಎಲ್ಲಾ ಗ್ರಾಹಕರ ಮೇಲೆ ನಿಗಾ ವಹಿಸುವುದರ ಜೊತೆಗೆ ಅವರು ಮಾಸ್ಕ್​ ಧರಿಸಿದ್ದಾರಾ ಎಂದು ಚೆಕ್​ ಸಹ ಮಾಡುತ್ತಾಳೆ.

ಲಾಕ್​ಡೌನ್​ ಪ್ರಾರಂಭವಾದ ಸಮಯದಿಂದ ಕೊರೊನಾ ವಾರಿಯರ್ಸ್​ರ ಸಹಾಯಕ್ಕಾಗಿ ನಾವು ಇಂಥ ರೋಬೋಗಳನ್ನು ತಯಾರಿಸುತ್ತಿದ್ದೇವೆ. ಅದರಲ್ಲೆ ಜಫೀರಾ ಸಹ ಒಂದು.

ಇದು ಎಲ್ಲಾ ಕಾರ್ಯಗಳ ಜೊತೆಗೆ, ಅಂಗಡಿ ಮಾಲೀಕರಿಗೆ ಪ್ರತಿದಿನ ಮಳಿಗೆಗೆ ಭೇಟಿ ಕೊಟ್ಟ ಗ್ರಾಹಕರ ಸಂಖ್ಯೆ ಮತ್ತ ಇನ್ನಿತ್ತರ ಮಾಹಿತಿಯನ್ನು ಈ-ಮೇಲ್ ಮುಖಾಂತರ ರವಾನಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಜಫೀರಾ ರೋಬೋವನ್ನು ವಿನ್ಯಾಸಗೊಳಿಸಿರುವ ಆಶಿಕ್​ ರಹಮಾನ್​ ತಿಳಿಸಿದ್ದಾರೆ.

Published On - 12:01 pm, Thu, 27 August 20

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ