ಗ್ಲೋಬಲ್ ಸೌತ್: ಭಾರತ ಕೇಂದ್ರಿತ ದೃಷ್ಟಿಯೊಡನೆ ಸವಾಲುಗಳು, ಅವಕಾಶಗಳು ಮತ್ತು ಬದಲಾಗುತ್ತಿರುವ ಆಯಾಮಗಳು

Global South; ‘ಗ್ಲೋಬಲ್ ಸೌತ್' ಎಂಬ ಪದ ಶೀತಲ ಸಮರದ ಅವಧಿಯಲ್ಲಿ ಬಳಕೆಗೆ ಬಂತು. ಗ್ಲೋಬಲ್ ಸೌತ್ ಎನ್ನುವುದು ಔದ್ಯಮೀಕರಣಗೊಂಡ, ಉತ್ತರಾರ್ಧ ಗೋಳದ ರಾಷ್ಟ್ರಗಳು ಮತ್ತು ದಕ್ಷಿಣಾರ್ಧ ಗೋಳದ ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಸೂಚಿಸುತ್ತಿತ್ತು. ಇನ್ನಷ್ಟು ವಿವರಗಳಿಗೆ ಲೇಖನ ಓದಿ.

ಗ್ಲೋಬಲ್ ಸೌತ್: ಭಾರತ ಕೇಂದ್ರಿತ ದೃಷ್ಟಿಯೊಡನೆ ಸವಾಲುಗಳು, ಅವಕಾಶಗಳು ಮತ್ತು ಬದಲಾಗುತ್ತಿರುವ ಆಯಾಮಗಳು
ಸಾಂದರ್ಭಿಕ ಚಿತ್ರImage Credit source: tfipost.com
Follow us
| Updated By: ಗಣಪತಿ ಶರ್ಮ

Updated on: Sep 06, 2023 | 4:04 PM

ಅಪಾರ ಪ್ರಮಾಣದ ಜನಸಂಖ್ಯೆ ಹೊಂದಿರುವ, ಬೆಳೆಯುತ್ತಿರುವ ಆರ್ಥಿಕ ಶಕ್ತಿಗಳನ್ನು ಒಳಗೊಂಡಿರುವ ಗ್ಲೋಬಲ್ ಸೌತ್ (Global South), ಪ್ರಸ್ತುತ ಪಾಶ್ಚಾತ್ಯ ಜಗತ್ತಿನ ನೇತೃತ್ವದ ಜಾಗತಿಕ ವ್ಯವಸ್ಥೆಗೆ ಸವಾಲಾಗುವ ಮಟ್ಟಿನ ಸಾಮರ್ಥ್ಯ ಗಳಿಸಿಕೊಂಡಿದೆ. ಸೋವಿಯತ್ ಒಕ್ಕೂಟದ ನೇತೃತ್ವದ ಬ್ಲಾಕ್ (Bloc) 1991ರಲ್ಲಿ ವಿಸರ್ಜನೆಯಾದ ಬಳಿಕ, 2000ನೇ ದಶಕದ ಕೊನೆಯ ಭಾಗದಲ್ಲಿ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ರಾಷ್ಟ್ರಗಳ ಉದಯ ಪ್ರಸ್ತುತ ಜಾಗತಿಕ ಚಿತ್ರಣದಲ್ಲಿ ಗ್ಲೋಬಲ್ ಸೌತ್ ಮಹತ್ವದ ಕುರಿತ ಚರ್ಚೆಗಳನ್ನು ಹುಟ್ಟುಹಾಕಿತು.

ಆದರೆ, ಇತ್ತೀಚಿನ ಉಕ್ರೇನ್ ಸಮರದಂತಹ ಘಟನೆಗಳು ಗ್ಲೋಬಲ್ ಸೌತ್ ಮಹತ್ವವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಸಾರಿವೆ. ಈ ರಾಷ್ಟ್ರಗಳು ರಷ್ಯಾ ಜೊತೆಗಿನ ಆರ್ಥಿಕ ಬಂಧಗಳನ್ನು ಕತ್ತರಿಸಲು ಹಿಂದೇಟು ಹಾಕಿದ್ದು, ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಲೂ ನಿರಾಕರಿಸಿವೆ. ಆ ಮೂಲಕ ಜಾಗತಿಕ ವಿಚಾರಗಳಲ್ಲಿ ತಮ್ಮದು ಸ್ವಾಯತ್ತ ನಿಲುವು ಎಂದು ಸ್ಪಷ್ಟಪಡಿಸಿವೆ.

ಏನಿದು ಗ್ಲೋಬಲ್ ಸೌತ್?

‘ಗ್ಲೋಬಲ್ ಸೌತ್’ ಎಂಬ ಪದ ಶೀತಲ ಸಮರದ ಅವಧಿಯಲ್ಲಿ ಬಳಕೆಗೆ ಬಂತು. ಗ್ಲೋಬಲ್ ಸೌತ್ ಎನ್ನುವುದು ಔದ್ಯಮೀಕರಣಗೊಂಡ, ಉತ್ತರಾರ್ಧ ಗೋಳದ ರಾಷ್ಟ್ರಗಳು ಮತ್ತು ದಕ್ಷಿಣಾರ್ಧ ಗೋಳದ ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಸೂಚಿಸುತ್ತಿತ್ತು.

1969ರಲ್ಲಿ, ಕಾರ್ಲ್ ಒಗ್ಲೆಸ್ಬಿ ಎಂಬಾತ ‘ಗ್ಲೋಬಲ್ ಸೌತ್’ ಎಂಬ ಪದವನ್ನು ಬಳಸಿ, ವಿಯೆಟ್ನಾಂ ಯುದ್ಧ ಮತ್ತು ಶತಮಾನಗಳ ಕಾಲ ಉತ್ತರ ಗೋಳಾರ್ಧದ ರಾಷ್ಟ್ರಗಳು ನಡೆಸಿದ ಶೋಷಣೆಯನ್ನು ವಿವರಿಸಿದ್ದ.

ಗ್ಲೋಬಲ್ ಸೌತ್ ರಾಷ್ಟ್ರ ಎನಿಸಿಕೊಳ್ಳುವುದರ ಕಾರಣಗಳು:

1. ಹೆಚ್ಚಿನ ನವಜಾತ ಶಿಶು ಮರಣ ದರ. 2. ಕಡಿಮೆ ಜೀವಿತಾವಧಿ. 3. ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆ.

ಬಡತನ ಇಂದಿಗೂ ಒಂದು ದೊಡ್ಡ ಅಡ್ಡಿಯಾಗಿದ್ದು, ಉತ್ತಮ ಜೀವನದ ಹುಡುಕಾಟ ನಡೆಸುತ್ತಾ ಜನರು ವಲಸೆ ಹೋಗುವುದು ಹೆಚ್ಚಾಗಿದೆ. ಅದಲ್ಲದೆ, ಗ್ಲೋಬಲ್ ಸೌತ್ ರಾಷ್ಟ್ರಗಳು ತ್ಯಾಜ್ಯ ಮತ್ತು ಮಾಲಿನ್ಯದಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ದುರದೃಷ್ಟವಶಾತ್, ಈ ಸಮಸ್ಯೆಗಳ ಮೂಲ ಶ್ರೀಮಂತ ರಾಷ್ಟ್ರಗಳೇ ಆಗಿವೆ.

ಗ್ಲೋಬಲ್ ಸೌತ್ ನಕಾಶೆ

ಗ್ಲೋಬಲ್ ಸೌತ್ ಎನ್ನುವುದು ದೊಡ್ಡ ಪ್ರಮಾಣದ ಭೂ ಪ್ರದೇಶವನ್ನು ಒಳಗೊಂಡಿದ್ದು, ಮೆಕ್ಸಿಕೊ, ಕೆರಿಬಿಯನ್, ದಕ್ಷಿಣ ಅಮೆರಿಕಾ, ಆಪ್ರಿಕಾ, ಮಧ್ಯಪೂರ್ವ, ಹಾಗೂ ಏಷ್ಯಾದ ಭೂಭಾಗಗಳನ್ನು ಒಳಗೊಂಡಿದೆ.

ಗ್ಲೋಬಲ್ ಸೌತ್ ಜಾಗತಿಕ ಜನಸಂಖ್ಯೆಯ 85%ಕ್ಕೂ ಹೆಚ್ಚಿನ ಪಾಲು ಹೊಂದಿದ್ದರೂ, ಜಾಗತಿಕ ಜಿಡಿಪಿಗೆ ಇದರ ಕೊಡುಗೆ ಬಹುತೇಕ 40% ಅಷ್ಟೇ ಆಗಿದೆ.

ಚೀನಾ ಮತ್ತು ಟರ್ಕಿಯಂತಹ ರಾಷ್ಟ್ರಗಳು ಇಂದು ಆರ್ಥಿಕವಾಗಿ ಪ್ರಬಲವಾದರೂ, ತಮ್ಮನ್ನು ತಾವು ಗ್ಲೋಬಲ್ ಸೌತ್ ಭಾಗ ಎಂದೇ ಪರಿಗಣಿಸುತ್ತವೆ. ಅವುಗಳು ಪಾಶ್ಚಾತ್ಯ ರಾಷ್ಟ್ರಗಳ ವಸಾಹತುಶಾಹಿ ಇತಿಹಾಸದೊಡನೆ ತಮ್ಮನ್ನು ತಾವು ಗುರುತಿಸಿಕೊಳ್ಳದಿರಲು, ಜೊತೆಯಾಗಿ ಕಾರ್ಯಾಚರಿಸುವ ಮೂಲಕ ನೂತನ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಲು ಈ ಕ್ರಮ ಕೈಗೊಂಡಿವೆ.

ಗ್ಲೋಬಲ್ ಸೌತ್ ಸಮಾವೇಶ – ವಾಯ್ಸ್ ಆಫ್ ದ ಗ್ಲೋಬಲ್ ಸೌತ್ ಸಮ್ಮಿಟ್

ಜನವರಿ 2023ರಲ್ಲಿ, ಭಾರತ ಮೊತ್ತಮೊದಲ ‘ವಾಯ್ಸ್ ಆಫ್ ದ ಗ್ಲೋಬಲ್ ಸೌತ್ ಸಮ್ಮಿಟ್’ ಎಂಬ ಸಮಾವೇಶವನ್ನು ಆಯೋಜಿಸಿ, ಅಭಿವೃದ್ಧಿಶೀಲ ದೇಶಗಳಿಗೆ ಅವುಗಳ ಸಾಮಾನ್ಯ ಸಮಸ್ಯೆಗಳು ಮತ್ತು ಆದ್ಯತೆಗಳನ್ನು ಚರ್ಚಿಸಲು ಅವಕಾಶ ಮಾಡಿಕೊಟ್ಟಿತು. 125ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಆನ್‌ಲೈನ್ ಸಮಾವೇಶ, ಅಭಿವೃದ್ಧಿಶೀಲ ಜಗತ್ತಿನ ನಾಯಕರು, ಸಚಿವರು ಭಾಗವಹಿಸಿದ ಅತಿದೊಡ್ಡ ಡಿಜಿಟಲ್ ಸಮಾವೇಶವಾಗಿತ್ತು.

ವಾಯ್ಸ್ ಆಫ್ ದ ಗ್ಲೋಬಲ್ ಸೌತ್ ಸಮಾವೇಶ 1961ರ ಅಲಿಪ್ತ ಚಳುವಳಿಯ ರೀತಿಯಲ್ಲೇ ದಕ್ಷಿಣ ಗೋಳಾರ್ಧದ ರಾಷ್ಟ್ರಗಳನ್ನು ಜೊತೆಯಾಗಿಸುವ ಉದ್ದೇಶ ಹೊಂದಿದೆ. ಇದು ಗ್ಲೋಬಲ್ ಸೌತ್ ದೇಶಗಳನ್ನು ಜೊತೆಯಾಗಿಸಿ, ಆ ಮೂಲಕ ಅಧಿಕಾರವನ್ನು ಹಲವು ರಾಷ್ಟ್ರಗಳು ಹಂಚಿಕೊಳ್ಳುವಂತೆ ಮಾಡುವ ಗುರಿ ಹೊಂದಿದೆ.

ಗ್ಲೋಬಲ್ ಸೌತ್ ಭವಿಷ್ಯವೇನು?

ರಷ್ಯಾದೊಡನೆ, ಗ್ಲೋಬಲ್ ಸೌತ್‌ನ ನಾಲ್ಕು ರಾಷ್ಟ್ರಗಳಾದ ಬ್ರೆಜಿಲ್, ಚೀನಾ, ಭಾರತ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡ ಗ್ಲೋಬಲ್ ಸೌತ್, ಗ್ಲೋಬಲ್ ನಾರ್ತ್ ಮತ್ತು ಗ್ಲೋಬಲ್ ಸೌತ್ ನಡುವಿನ ಸಮಾಜೋ ಆರ್ಥಿಕ ಅಸಮಾನತೆಗಳನ್ನು ಎದುರಿಸುವ ಆಶಾಭಾವನೆ ಮೂಡಿಸಿದೆ. ಈ ರಾಷ್ಟ್ರಗಳು ಪಾಶ್ಚಾತ್ಯ ಮೇಲುಗೈ ಹೊಂದಿರುವ ಸಂಸ್ಥೆಗಳು ಮತ್ತು ಒಕ್ಕೂಟಗಳ ಹೊರಗಿನ ಆಯ್ಕೆಗಳನ್ನು ಎದುರು ನೋಡುತ್ತಿದ್ದು, ಇದರ ಪರಿಣಾಮವಾಗಿ ದಕ್ಷಿಣ ಗೋಳಾರ್ಧದಲ್ಲಿ ಹೆಚ್ಚಿನ ಅಭಿವೃದ್ಧಿ ಮತ್ತು ಸ್ವಾಯತ್ತತೆ ಸಾಧಿಸಲು ಸಾಧ್ಯವಾಗಬಹುದು.

ಹಾಗೆಂದು ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಹಿಂದಿನ ವಸಾಹತುಗಳನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ಸಿದ್ಧರಿಲ್ಲ. ಅಭಿವೃದ್ಧಿಶೀಲ ಜಗತ್ತಿನಲ್ಲಿ ಅಧಿಕಾರದ ಬದಲಿ ಮೂಲಗಳು ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿರುವಾಗ, ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಪ್ರಭಾವವನ್ನು ಉಳಿಸಿಕೊಳ್ಳಲು ವಿವಿಧ ಮಾರ್ಗೋಪಾಯಗಳನ್ನು ಬಳಸಬಹುದು.

ಹವಾಮಾನ ಬದಲಾವಣೆ ಗ್ಲೋಬಲ್ ಸೌತ್ ಪಾಲಿನ ದೊಡ್ಡ ತೊಂದರೆಯಾಗಿದೆ. ಈ ದೇಶಗಳು ಹವಾಮಾನದ ವೈಪರೀತ್ಯದ ಅತ್ಯಂತ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮುದ್ರ ಮಟ್ಟದ ಏರಿಕೆ, ಕೃಷಿ ನಾಶಗಳೂ ಇದರಲ್ಲಿ ಪ್ರಮುಖವಾಗಿವೆ. ಈ ಪರಿಣಾಮಗಳು ಈಗಾಗಲೇ ತಲೆದೋರಿರುವ ಸಾಮಾಜಿಕ ಮತ್ತು ಆರ್ಥಿಕ ಅಂತರಗಳನ್ನು ಇನ್ನಷ್ಟು ಹೆಚ್ಚಿಸಿ, ಗ್ಲೋಬಲ್ ಸೌತ್ ರಾಷ್ಟ್ರಗಳು ಸಾಧಿಸಿರುವ ಅಭಿವೃದ್ಧಿಗೆ ಹಿನ್ನಡೆ ಉಂಟುಮಾಡಲಿವೆ.

ಇದನ್ನೂ ಓದಿ: ಜಿ20 ಶೃಂಗಸಭೆಗೆ ಭಾರತ ಸನ್ನದ್ಧ: ಪ್ರಮುಖ ವಿಚಾರಗಳು, ರಾಜತಾಂತ್ರಿಕ ಸವಾಲುಗಳೇನು?

ಈ ಸಮಸ್ಯೆಯನ್ನು ಎದುರಿಸಲು, ಗ್ಲೋಬಲ್ ಸೌತ್ ಒಂದಾಗಿ ಕಾರ್ಯಾಚರಿಸಿ, ಹವಾಮಾನ ನ್ಯಾಯಕ್ಕಾಗಿ ಆಗ್ರಹಿಸಬೇಕು. ಸಮಾನ ಪರಿಹಾರಗಳನ್ನು ಆಗ್ರಹಿಸುವುದರಿಂದ ಈ ರಾಷ್ಟ್ರಗಳು ಅವುಗಳಿಗೆ ಮತ್ತು ಭೂಮಿಗೆ ಸುಸ್ಥಿರ ಭವಿಷ್ಯವನ್ನು ಹೊಂದಲು ಸಾಧ್ಯವಿದೆ.

ಗ್ಲೋಬಲ್ ಸೌತ್‌ನಲ್ಲಿ ರಷ್ಯಾದ ಪಾತ್ರ

ರಷ್ಯಾ ನಿರಂತರವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳೊಡನೆ ಸಹಕರಿಸುತ್ತಾ ಬಂದಿದ್ದು, ಅವುಗಳ ಅಭಿವೃದ್ಧಿಗೆ ಪೂರಕವಾಗುವಂತೆ ಸಹಯೋಗಗಳು ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಿದೆ. ಬ್ರಿಕ್ಸ್ ರೀತಿಯ ಪ್ರಯತ್ನಗಳ ಮೂಲಕ ಗ್ಲೋಬಲ್ ಸೌತ್ ಜೊತೆ ರಷ್ಯಾ ಹೊಂದಿರುವ ಸಂಬಂಧ, ಅಧಿಕಾರ ಮತ್ತು ಪ್ರಭಾವ ಕೇವಲ ಪಾಶ್ಚಾತ್ಯ ದೇಶಗಳದ್ದು ಮಾತ್ರವಲ್ಲದೆ, ಹಲವು ಪ್ರಮುಖ ರಾಷ್ಟ್ರಗಳ ನಡುವೆ ಹಂಚಿಕೆಯಾಗುವಂತಹ ಜಾಗತಿಕ ಚಿತ್ರಣ ಸೃಷ್ಟಿಯಾಗಬೇಕು ಎಂಬ ದೃಢ ನಿರ್ಧಾರ, ಪ್ರಯತ್ನಗಳನ್ನು ಸಾಬೀತುಪಡಿಸುತ್ತದೆ.

ಗಿರೀಶ್ ಲಿಂಗಣ್ಣ

(ಲೇಖಕರು; ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ