ಆಗುಂಬೆ ಘಾಟ್ನ 10ನೇ ತಿರುವು ಬಳಿ ಗುಡ್ಡ ಕುಸಿತ! ಸಂಚಾರ ಸ್ಥಗಿತ
TV9kannada Web Team | Edited By: sandhya thejappa
Updated on: Jul 10, 2022 | 2:45 PM
Agumbe Ghat: ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದಿದ್ದು, ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಹಲವೆಡೆ ನದಿ, ಹಳು ಉಕ್ಕಿ ಹರಿಯುತ್ತಿವೆ.
Jul 10, 2022 | 2:45 PM
ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ಆಗುಂಬೆ ಘಾಟ್ನ 10ನೇ ತಿರುವು ಬಳಿ ಗುಡ್ಡ ಕುಸಿದಿದೆ.
ಉಡುಪಿ-ಶಿವಮೊಗ್ಗ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿದೆ.
ರಸ್ತೆ ಮೇಲೆ ಬಿದ್ದಿರುವ ಮಣ್ಣು, ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜೆಸಿಬಿ ಮೂಲಕ ಮಣ್ಣು, ಮರ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.