ತ್ರಿವೇಣಿ ಕಾದಂಬರಿ ಆಧಾರಿತ ‘ಸರಳ ಸುಬ್ಬರಾವ್’ ಸಿನಿಮಾ ಫೆ.20ಕ್ಕೆ ರಿಲೀಸ್

Updated on: Feb 16, 2026 | 9:26 PM

ಕಾದಂಬರಿ ಆಧಾರಿತ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಆ ಕೊರತೆ ನೀಗಿಸಲು ‘ಸರಳ ಸುಬ್ಬರಾವ್’ ಸಿನಿಮಾ ಬರುತ್ತಿದೆ. ಅನುಭವಿ ನಿರ್ದೇಶಕ ಮಂಜು ಸ್ವರಾಜ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಫೆಬ್ರವರಿ 20ರಂದು ತೆರೆಕಾಣಲಿರುವ ಈ ಸಿನಿಮಾದ ಚಂದದ ಪೋಸ್ಟರ್​​ಗಳು ಮತ್ತು ಮಾಹಿತಿ ಇಲ್ಲಿವೆ..

1 / 5
1971ರ ಕಾಲಘಟ್ಟದ ಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ಸಿನಿಮಾ ‘ಸರಳ ಸುಬ್ಬರಾವ್’. ಇದು ಖ್ಯಾತ ಲೇಖಕಿ ತ್ರಿವೇಣಿ ಅವರ ಕಾದಂಬರಿ ಆಧರಿತ ಸಿನಿಮಾ ಎಂಬುದು ವಿಶೇಷ.

1971ರ ಕಾಲಘಟ್ಟದ ಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ಸಿನಿಮಾ ‘ಸರಳ ಸುಬ್ಬರಾವ್’. ಇದು ಖ್ಯಾತ ಲೇಖಕಿ ತ್ರಿವೇಣಿ ಅವರ ಕಾದಂಬರಿ ಆಧರಿತ ಸಿನಿಮಾ ಎಂಬುದು ವಿಶೇಷ.

2 / 5
‘ಸರಳ ಸುಬ್ಬರಾವ್’ ಸಿನಿಮಾವನ್ನು ‘ರಿಯಾನ್ ಕ್ರಿಯೇಷನ್ಸ್’ ಲಾಂಛನದ ಮೂಲಕ ಲೋಹಿತ್ ನಂಜುಂಡಯ್ಯ ಅವರು ನಿರ್ಮಿಸಿದ್ದಾರೆ. ಮಂಜು ಸ್ವರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

‘ಸರಳ ಸುಬ್ಬರಾವ್’ ಸಿನಿಮಾವನ್ನು ‘ರಿಯಾನ್ ಕ್ರಿಯೇಷನ್ಸ್’ ಲಾಂಛನದ ಮೂಲಕ ಲೋಹಿತ್ ನಂಜುಂಡಯ್ಯ ಅವರು ನಿರ್ಮಿಸಿದ್ದಾರೆ. ಮಂಜು ಸ್ವರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

3 / 5
ಅಜಯ್ ರಾವ್, ಮಿಶಾ ನಾರಂಗ್ ನಟಿಸಿರುವ ‘ಸರಳ ಸುಬ್ಬರಾವ್’ ಸಿನಿಮಾ ಫೆಬ್ರವರಿ 20ರಂದು ತೆರೆಗೆ ಬರುತ್ತಿದೆ. ಈಗಾಗಲೇ ಈ ಸಿನಿಮಾದ ಟೀಸರ್, ಟ್ರೇಲರ್ ಮತ್ತು ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಜಯ್ ರಾವ್, ಮಿಶಾ ನಾರಂಗ್ ನಟಿಸಿರುವ ‘ಸರಳ ಸುಬ್ಬರಾವ್’ ಸಿನಿಮಾ ಫೆಬ್ರವರಿ 20ರಂದು ತೆರೆಗೆ ಬರುತ್ತಿದೆ. ಈಗಾಗಲೇ ಈ ಸಿನಿಮಾದ ಟೀಸರ್, ಟ್ರೇಲರ್ ಮತ್ತು ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.

4 / 5
ಪಾತ್ರವರ್ಗದಲ್ಲಿ ಅಜಯ್ ರಾವ್, ಮಿಶಾ ನಾರಂಗ್ ಮಾತ್ರವಲ್ಲದೇ ರಂಗಾಯಣ ರಘು, ನಟಶ್ರೀ, ವಿಜಯ್ ಚಂಡೂರ್, ಚಿತ್ಕಲಾ ಬಿರಾದಾರ್, ರಘು ರಾಮನಕೊಪ್ಪ ಮುಂತಾದವರು ಕೂಡ ಇದ್ದಾರೆ.

ಪಾತ್ರವರ್ಗದಲ್ಲಿ ಅಜಯ್ ರಾವ್, ಮಿಶಾ ನಾರಂಗ್ ಮಾತ್ರವಲ್ಲದೇ ರಂಗಾಯಣ ರಘು, ನಟಶ್ರೀ, ವಿಜಯ್ ಚಂಡೂರ್, ಚಿತ್ಕಲಾ ಬಿರಾದಾರ್, ರಘು ರಾಮನಕೊಪ್ಪ ಮುಂತಾದವರು ಕೂಡ ಇದ್ದಾರೆ.

5 / 5
ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಬಸವರಾಜ ಅರಸ್ ಸಂಕಲನ, ಅಮರ್ ಕಲಾ ನಿರ್ದೇಶನ, ಮದನ್-ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಬಸವರಾಜ ಅರಸ್ ಸಂಕಲನ, ಅಮರ್ ಕಲಾ ನಿರ್ದೇಶನ, ಮದನ್-ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ.