ಟ್ರೇಲರ್​ನಿಂದ ನಿರೀಕ್ಷೆ ಮೂಡಿಸಿದ ‘ಮನಸ್ಮಿತ’ ಸಿನಿಮಾ; ಅತುಲ್​ ಕುಲಕರ್ಣಿ ಜೊತೆ ಹೊಸ ಕಲಾವಿದರ ಸಂಗಮ

| Updated By: ಮದನ್​ ಕುಮಾರ್​

Updated on: May 23, 2022 | 3:54 PM

ಚಂದನವನದಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ರಿಲೀಸ್​ಗೆ ರೆಡಿ ಆಗಿವೆ. ಆ ಪೈಕಿ ‘ಮನಸ್ಮಿತ’ ಚಿತ್ರ ಕೂಡ ಗಮನ ಸೆಳೆಯುತ್ತಿದೆ.

1 / 5
ಸಂಗೀತ ಪ್ರಧಾನ ಕಥಾಹಂದರ ಹೊಂದಿರುವ ‘ಮನಸ್ಮಿತ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಹೊಸ ಕಲಾವಿದರು ನಟಿಸಿದ್ದಾರೆ. ನಾಯಕನಾಗಿ ಚರಣ್​ ವಿ.ಎಸ್​. ಅಭಿನಯಿಸಿದ್ದು, ಪಲ್ಲವಿ ಪುರೋಹಿತ್​ ಹಾಗೂ ಸಂಜನಾ ದಾಸ್​ ನಾಯಕಿಯರಾಗಿದ್ದಾರೆ. ಸಂಗೀತದ ಕುರಿತಾದ ಕಥೆ ಮಾತ್ರವಲ್ಲದೇ ಇದರಲ್ಲಿ ಹಾರರ್​ ಅಂಶಗಳು ಕೂಡ ಇವೆ.

ಸಂಗೀತ ಪ್ರಧಾನ ಕಥಾಹಂದರ ಹೊಂದಿರುವ ‘ಮನಸ್ಮಿತ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಹೊಸ ಕಲಾವಿದರು ನಟಿಸಿದ್ದಾರೆ. ನಾಯಕನಾಗಿ ಚರಣ್​ ವಿ.ಎಸ್​. ಅಭಿನಯಿಸಿದ್ದು, ಪಲ್ಲವಿ ಪುರೋಹಿತ್​ ಹಾಗೂ ಸಂಜನಾ ದಾಸ್​ ನಾಯಕಿಯರಾಗಿದ್ದಾರೆ. ಸಂಗೀತದ ಕುರಿತಾದ ಕಥೆ ಮಾತ್ರವಲ್ಲದೇ ಇದರಲ್ಲಿ ಹಾರರ್​ ಅಂಶಗಳು ಕೂಡ ಇವೆ.

2 / 5
ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಹಿರಿಯ ಕಲಾವಿದ ಅತುಲ್​ ಕುಲಕರ್ಣಿ ಅವರು ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್​ ಅವರಂತಹ ಅನುಭವಿ ನಟರು ಕೂಡ ‘ಮನಸ್ಮಿತ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಕಿರಿಯ ಕಲಾವಿದರ ಜೊತೆಗೆ ಹೊಸ ನಟರ ಸಂಗಮ ಆಗಿದೆ.

ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಹಿರಿಯ ಕಲಾವಿದ ಅತುಲ್​ ಕುಲಕರ್ಣಿ ಅವರು ನಟಿಸಿದ್ದಾರೆ. ಸುಚೇಂದ್ರ ಪ್ರಸಾದ್​ ಅವರಂತಹ ಅನುಭವಿ ನಟರು ಕೂಡ ‘ಮನಸ್ಮಿತ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಕಿರಿಯ ಕಲಾವಿದರ ಜೊತೆಗೆ ಹೊಸ ನಟರ ಸಂಗಮ ಆಗಿದೆ.

3 / 5
‘ಮನಸ್ಮಿತ’ ಚಿತ್ರಕ್ಕೆ ಅಪ್ಪಣ್ಣ ಸಂತೋಷ್​ ನಿರ್ದೇಶನ ಮಾಡಿದ್ದಾರೆ. ಎರಡು ಕಾಲಘಟ್ಟದ ಕಥೆಯನ್ನು ಈ ಸಿನಿಮಾ ಹೊಂದಿದೆ. ಇತ್ತೀಚೆಗೆ ಹಾಡುಗಳು ಮತ್ತು ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಆ ಮೂಲಕ ‘ಮನಸ್ಮಿತ’ ಸಿನಿಮಾ ಗಮನ ಸೆಳೆಯುತ್ತಿದೆ. ಗಾಯಕನ ಪಾತ್ರದಲ್ಲಿ ಅತುಕ್​ ಕುಲಕರ್ಣಿ ನಟಿಸಿದ್ದಾರೆ.

‘ಮನಸ್ಮಿತ’ ಚಿತ್ರಕ್ಕೆ ಅಪ್ಪಣ್ಣ ಸಂತೋಷ್​ ನಿರ್ದೇಶನ ಮಾಡಿದ್ದಾರೆ. ಎರಡು ಕಾಲಘಟ್ಟದ ಕಥೆಯನ್ನು ಈ ಸಿನಿಮಾ ಹೊಂದಿದೆ. ಇತ್ತೀಚೆಗೆ ಹಾಡುಗಳು ಮತ್ತು ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಆ ಮೂಲಕ ‘ಮನಸ್ಮಿತ’ ಸಿನಿಮಾ ಗಮನ ಸೆಳೆಯುತ್ತಿದೆ. ಗಾಯಕನ ಪಾತ್ರದಲ್ಲಿ ಅತುಕ್​ ಕುಲಕರ್ಣಿ ನಟಿಸಿದ್ದಾರೆ.

4 / 5
ಕೆ. ಕಲ್ಯಾಣ್ ಬರೆದಿರುವ ನಾಲ್ಕು ಹಾಡುಗಳಿಗೆ ಹರಿಕಾವ್ಯ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ದೇವರ ಹಾಡಿಗೆ ಶಂಕರ್‌ ಮಹದೇವನ್ ಧ್ವನಿ ನೀಡಿರುವುದು ವಿಶೇಷ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ.

ಕೆ. ಕಲ್ಯಾಣ್ ಬರೆದಿರುವ ನಾಲ್ಕು ಹಾಡುಗಳಿಗೆ ಹರಿಕಾವ್ಯ ಅವರು ಸಂಗೀತ ಸಂಯೋಜಿಸಿದ್ದಾರೆ. ಈ ಪೈಕಿ ದೇವರ ಹಾಡಿಗೆ ಶಂಕರ್‌ ಮಹದೇವನ್ ಧ್ವನಿ ನೀಡಿರುವುದು ವಿಶೇಷ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ.

5 / 5
ಜೂನ್​ 3ರಂದು ‘ಮನಸ್ಮಿತ’ ಸಿನಿಮಾ ಬಿಡುಗಡೆ ಆಗಲಿದೆ. ‘ಜಮುನಾ ಪ್ರೊಡಕ್ಷನ್ಸ್​’ ಮೂಲಕ ಸೀತಮ್ಮ ವಿ.ಟಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದೀಪಿಕಾ ವಿ.ಎಸ್​. ಸಹ-ನಿರ್ಮಾಪಕಿ ಆಗಿದ್ದಾರೆ. ನಟ ಚರಣ್​ ಅವರು ಈ ಸಿನಿಮಾದಲ್ಲಿ ಹಲವು ಶೇಡ್​ನ ಪಾತ್ರ ನಿಭಾಯಿಸಿದ್ದಾರೆ.

ಜೂನ್​ 3ರಂದು ‘ಮನಸ್ಮಿತ’ ಸಿನಿಮಾ ಬಿಡುಗಡೆ ಆಗಲಿದೆ. ‘ಜಮುನಾ ಪ್ರೊಡಕ್ಷನ್ಸ್​’ ಮೂಲಕ ಸೀತಮ್ಮ ವಿ.ಟಿ. ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದೀಪಿಕಾ ವಿ.ಎಸ್​. ಸಹ-ನಿರ್ಮಾಪಕಿ ಆಗಿದ್ದಾರೆ. ನಟ ಚರಣ್​ ಅವರು ಈ ಸಿನಿಮಾದಲ್ಲಿ ಹಲವು ಶೇಡ್​ನ ಪಾತ್ರ ನಿಭಾಯಿಸಿದ್ದಾರೆ.