ಪ್ರಕೃತಿ ಸೌಂದರ್ಯ ದುಪ್ಪಟ್ಟು ಮಾಡಿದ ಮುತ್ತುಗದ ಮರದ ಹೂವು; ಇಲ್ಲಿದೆ ಝಲಕ್
ಮುತ್ತುಗದ ಮರದ ಹೂವು, ಬಹುತೇಕ ಸುಗ್ಗಿ ಕಾಲದಲ್ಲಿ ಅರಳುತ್ತದೆ. ಈ ಮರದ ತುಂಬ ಹೂ ತುಂಬಿದಾಗ ಇದನ್ನು ಫಾರೆಸ್ಟ್ ಫೈರ್ ಎಂದೂ ಕರೆಯುತ್ತಾರೆ. ಆರ್ಯುವೇದ ಗ್ರಂಥದಲ್ಲಿ ಮುತ್ತುಗದ ಮರದ ಉಪಯೋಗಗಳನ್ನು ಆನೇಕ ವಿಧದಲ್ಲಿ ಉಲ್ಲೇಖಿಸಲಾಗಿದೆ. ಇದು ಒಗರು, ಖಾರ, ಕಹಿ ಮೂರು ರಸಗಳಿಂದ ಕೂಡಿದ್ದು ಕ್ರಿಮಿನಾಶಕವಾಗಿದೆ. ಮುರಿದಿರುವ ಮೂಳೆ ಕೂಡಿಸಲು ಇದು ಹೆಸರುವಾಸಿಯಾಗಿದೆ.
Updated on: Feb 24, 2024 | 7:10 PM

ಬೀದರ್ ಜಿಲ್ಲೆಯ ವಿವಿಧ ಭಾಗದಲ್ಲಿ ಅರಣ್ಯ ಪ್ರದೇಶದಲ್ಲಿ ಮುತ್ತುಗದ ಮರ ಹೂವು ಬಿಟ್ಟು ನಳ ನಳಿಸುತ್ತಿದೆ. ಕಳೆದ ಒಂದೆರಡು ವರ್ಷಕ್ಕೆ ಹೋಲಿಸಿದರೆ ಅಷ್ಟೇನು ಪ್ರಮಾಣದಲ್ಲಿ ಮುತ್ತುಗದ ಮರ ಹೂವು ಬಿಟ್ಟಿರಲಿಲ್ಲ. ಆದರೆ, ಈ ವರ್ಷವಂತೂ ಮುತ್ತುಗದ ಮರಗಳು ಹೂವಿನಿಂದ ತುಂಬಿ ತುಳುಕುತ್ತಿದ್ದು, ಪ್ರಕೃತಿಯ ಸೌಂದರ್ಯವನ್ನು ದುಪ್ಪಟ್ಟು ಮಾಡಿದೆ.

ಮುತ್ತುಗದ ಮರ ಶಿವರಾತ್ರಿ ಹಬ್ಬದ ಸಮಯದಲ್ಲಿ ಹೂ ಬಿಡುತ್ತದೆ. ಇದರ ಸೌಂದರ್ಯಕ್ಕೆ ಮಾರು ಹೋಗಿರುವ ಆಸ್ತಿಕರು, ಶಿವರಾತ್ರಿ ಹಬ್ಬದಂದು ತಮ್ಮ ನೆಚ್ಚಿನ ದೈವ ಶಿವನಿಗೆ ಮುತ್ತುಗದ ಹೂವನ್ನು ಸಮರ್ಪಿಸಿ ಪೂಜೆ ಸಲ್ಲಿಸೋದು ಸಾಮಾನ್ಯ.

ಈ ಮರದ ಚಕ್ಕೆಯನ್ನು ಹೋಮಗಳಲ್ಲೂ ಕೂಡ ಬಳಸುತ್ತಾರೆ. ಹೀಗಾಗಿ ಮುತ್ತುಗದ ಹೂವು ಪ್ರಕೃತಿಯ ಚೆಲುವನ್ನು ಹೆಚ್ಚಿಸಿರುವುದರ ಜೊತೆಗೆ ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿದೆ.

ಈ ಎಲ್ಲ ಕಾರಣಗಳಿಗಾಗಿಯೇ ಶಿವರಾತ್ರಿ ಹಬ್ಬದ ದಿನವಾದ ಇಂದು ಶಿವನ ಪೂಜೆಗೆ ಮುತ್ತುಗದ ಹೂವು ವಿಶೇಷವಾಗಿ ಸಮರ್ಪಣೆಯಾಗುತ್ತಿದೆ. ಜೊತೆಗೆ ಇಂದಿಗೂ ಕೂಡ ಈ ಮುತ್ತುಗ ಹೂವಿನಿಂದ ಬಣ್ಣವನ್ನ ತಯ್ಯಾರಿಸಿ ಮಕ್ಕಳು ಹೂಳಿಯ ಸಮಯದಲ್ಲಿ ಬಣ್ಣವನ್ನ ಎರಚಿಕೊಂಡು ಖುಷಿ ಪಡುತ್ತಾರೆ.

ಈಗ ಮುತ್ತಗ ಹೂವಿನ ಬಣ್ಣವನ್ನ ಮಕ್ಕಳು ಬಳಸುವುದನ್ನ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದು, ಕೆಮಿಕಲ್ ಮಿಶ್ರೀತ ಬಣ್ಣವನ್ನ ಬಳಕೆ ಮಾಡುತ್ತಿದ್ದಾರೆ. ಇನ್ನು ಈ ಹೂವು ಬಯಲು ಪ್ರದೇಶದಲ್ಲಿ ಬೆಳೆಯುವ ಮರವಾಗಿದ್ದು ಬೀದರ್ ಜಿಲ್ಲೆಯಲ್ಲಿ ಹೆಚ್ಚು ಮತ್ತಗ ಮರಗಳು ಕಂಡು ಬರುತ್ತವೆ.

ಆರ್ಯುವೇದ ಗ್ರಂಥದಲ್ಲಿ ಮುತ್ತುಗದ ಮರದ ಉಪಯೋಗಗಳನ್ನು ಆನೇಕ ವಿಧದಲ್ಲಿ ಉಲ್ಲೇಖಿಸಲಾಗಿದೆ. ಇದು ಒಗರು, ಖಾರ, ಕಹಿ ಮೂರು ರಸಗಳಿಂದ ಕೂಡಿದ್ದು ಕ್ರಿಮಿನಾಶಕವಾಗಿದೆ. ಮುರಿದಿರುವ ಮೂಳೆ ಕೂಡಿಸಲು ಇದು ಹೆಸರುವಾಸಿಯಾಗಿದೆ.



















