ಉಡುಪಿ ಶ್ರೀಕೃಷ್ಣ, ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್; ಫೋಟೋಗಳು ಇಲ್ಲಿವೆ
ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಉಡುಪಿ ಕುಕ್ಕಿಕಟ್ಟೆ ಬಾಲನಿಕೇತನದ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿಯಾಗಿದ್ದರು.
May 14, 2022 | 4:16 PM
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಉಡುಪಿಗೆ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು.
ಪೂರ್ಣಕುಂಭದೊಂದಿಗೆ ಆಡಳಿತ ಮಂಡಳಿ ವಿತ್ತ ಸಚಿವೆ ನಿರ್ಮಲಾಗೆ ಸ್ವಾಗತ ಕೋರಿದರು.
ವಿತ್ತ ಸಚಿವೆ ನಿರ್ಮಲಾಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಥ್ ನೀಡಿದರು.
ನವಗ್ರಹ ಕಿಂಡಿ ಮೂಲಕ ಕೃಷ್ಣದರ್ಶನ ಮಾಡಿದ ನಿರ್ಮಲಾ ಸೀತಾರಾಮನ್.
ಕೊಲ್ಲೂರು ಮೂಕಾಂಬಿಕೆ ಭೇಟಿ ನೀಡಿದಾಗ ದೇವಳದ ಪ್ರಧಾನ ಅರ್ಚಕರ ನೇತ್ರತ್ವದಲ್ಲಿ ವಿಶೇಷ ಪೂಜೆ ನಡೆಯಿತು.