- Kannada News Photo gallery Chia Seeds Health Benefits digestion to diabetes why this superfood is Important in your diet
Chia Seeds: ಬೀಜ ಚಿಕ್ಕದಾದರೂ ಪ್ರಯೋಜನ ಅದ್ಭುತ; ನಿಮ್ಮ ಡಯೆಟ್ನಲ್ಲಿರಲಿ ಚಿಯಾ ಸೀಡ್ಸ್
ಚಿಯಾ ಬೀಜಗಳಲ್ಲಿ ಇರುವ ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಮೆಗ್ನೀಸಿಯಮ್ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಚಿಯಾ ಬೀಜಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಚಿಯಾ ಸೀಡ್ ಅನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ.
Updated on: Sep 13, 2023 | 11:51 AM
![ಕೆಲವರು ದೇಹದ ಕೊಬ್ಬು ಕರಗಿಸಲು ಸಾವಿರಾರು ರೂ. ಕೊಟ್ಟು ಜಿಮ್, ಡಯೆಟ್ ಕೋರ್ಸ್ ಎಂದೆಲ್ಲ ಮಾಡುತ್ತಾರೆ. ಆದರೆ, ನಮ್ಮ ಮನೆಯಲ್ಲೇ ಇರುವ ಕೆಲವು ಆಹಾರ ಪದಾರ್ಥಗಳಿಂದ ದೇಹದ ಕೊಬ್ಬು ಕರಗಿಸಬಹುದು.](https://images.tv9kannada.com/wp-content/uploads/2023/09/chia-seeds-benefits-3.jpg?w=1280&enlarge=true)
ಕೆಲವರು ದೇಹದ ಕೊಬ್ಬು ಕರಗಿಸಲು ಸಾವಿರಾರು ರೂ. ಕೊಟ್ಟು ಜಿಮ್, ಡಯೆಟ್ ಕೋರ್ಸ್ ಎಂದೆಲ್ಲ ಮಾಡುತ್ತಾರೆ. ಆದರೆ, ನಮ್ಮ ಮನೆಯಲ್ಲೇ ಇರುವ ಕೆಲವು ಆಹಾರ ಪದಾರ್ಥಗಳಿಂದ ದೇಹದ ಕೊಬ್ಬು ಕರಗಿಸಬಹುದು.
![ಚಿಯಾ ಸೀಡ್ಸ್ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಎಳ್ಳು ಕಾಳಿನಂತೆ ಕಪ್ಪಗೆ, ಸಣ್ಣಗಿರುವ ಈ ಚಿಯಾ ಬೀಜಗಳು ನಮ್ಮ ದೇಹಕ್ಕೆ ಅದ್ಭುತ ಕೊಡುಗೆ ನೀಡಬಲ್ಲವು.](https://images.tv9kannada.com/wp-content/uploads/2023/09/chia-seeds-4.jpg)
ಚಿಯಾ ಸೀಡ್ಸ್ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಎಳ್ಳು ಕಾಳಿನಂತೆ ಕಪ್ಪಗೆ, ಸಣ್ಣಗಿರುವ ಈ ಚಿಯಾ ಬೀಜಗಳು ನಮ್ಮ ದೇಹಕ್ಕೆ ಅದ್ಭುತ ಕೊಡುಗೆ ನೀಡಬಲ್ಲವು.
![ಇದರಲ್ಲಿರುವ ಫೈಬರ್, ಪ್ರೋಟೀನ್ ಅಂಶಗಳು ತೂಕ ಇಳಿಸಲು ಸಹಾಯ ಮಾಡುತ್ತವೆ. ಚಿಯಾ ಬೀಜಗಳಲ್ಲಿ ಎಲ್ಲಾ ಪೋಷಕಾಂಶಗಳೂ ಸಮೃದ್ಧವಾಗಿದೆ.](https://images.tv9kannada.com/wp-content/uploads/2023/09/chia-seeds-.jpg)
ಇದರಲ್ಲಿರುವ ಫೈಬರ್, ಪ್ರೋಟೀನ್ ಅಂಶಗಳು ತೂಕ ಇಳಿಸಲು ಸಹಾಯ ಮಾಡುತ್ತವೆ. ಚಿಯಾ ಬೀಜಗಳಲ್ಲಿ ಎಲ್ಲಾ ಪೋಷಕಾಂಶಗಳೂ ಸಮೃದ್ಧವಾಗಿದೆ.
![ಚಿಯಾ ಬೀಜಗಳನ್ನು ಸ್ಮೂಥಿಯಾಗಿ, ಕೆಲವು ಹಣ್ಣಿನ ಜ್ಯೂಸ್ಗಳಲ್ಲಿ, ಏನೂ ಬೇಡವೆಂದರೆ ನೀರಿಗೆ ಹಾಕಿಕೊಂಡು ಕೂಡ ಸೇವಿಸಬಹುದು. ಸುಮಾರು ಎರಡು ಚಮಚ ಚಿಯಾ ಬೀಜಗಳಲ್ಲಿ 9.7 ಗ್ರಾಂ ಫೈಬರ್ ಮತ್ತು 4.6 ಗ್ರಾಂ ಪ್ರೋಟೀನ್ ಇರುತ್ತದೆ.](https://images.tv9kannada.com/wp-content/uploads/2023/09/chia-seeds-benefits-5.jpg)
ಚಿಯಾ ಬೀಜಗಳನ್ನು ಸ್ಮೂಥಿಯಾಗಿ, ಕೆಲವು ಹಣ್ಣಿನ ಜ್ಯೂಸ್ಗಳಲ್ಲಿ, ಏನೂ ಬೇಡವೆಂದರೆ ನೀರಿಗೆ ಹಾಕಿಕೊಂಡು ಕೂಡ ಸೇವಿಸಬಹುದು. ಸುಮಾರು ಎರಡು ಚಮಚ ಚಿಯಾ ಬೀಜಗಳಲ್ಲಿ 9.7 ಗ್ರಾಂ ಫೈಬರ್ ಮತ್ತು 4.6 ಗ್ರಾಂ ಪ್ರೋಟೀನ್ ಇರುತ್ತದೆ.
![ಡಯಟ್ ಮಾಡುತ್ತಿರುವವರು ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರು ಮೊಸರಿನ ಜೊತೆ ಚಿಯಾ ಸೀಡ್ಸ್ ಹಾಕಿಕೊಂಡು ಸೇವಿಸಬಹುದು.](https://images.tv9kannada.com/wp-content/uploads/2023/09/chia-seeds-benefits-4.jpg)
ಡಯಟ್ ಮಾಡುತ್ತಿರುವವರು ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರು ಮೊಸರಿನ ಜೊತೆ ಚಿಯಾ ಸೀಡ್ಸ್ ಹಾಕಿಕೊಂಡು ಸೇವಿಸಬಹುದು.
![ಪೌಷ್ಟಿಕಾಂಶದ ಶಕ್ತಿ ಕೇಂದ್ರವಾದ ಚಿಯಾ ಬೀಜಗಳನ್ನು ಈಗ ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಮಧುಮೇಹ ಮತ್ತು ಬೊಜ್ಜು ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ರೋಗನಿರೋಧಕ ಕ್ರಮವಾಗಿ ಕಂಡುಹಿಡಿಯಲಾಗುತ್ತಿದೆ.](https://images.tv9kannada.com/wp-content/uploads/2023/09/chia-seeds-1.jpg)
ಪೌಷ್ಟಿಕಾಂಶದ ಶಕ್ತಿ ಕೇಂದ್ರವಾದ ಚಿಯಾ ಬೀಜಗಳನ್ನು ಈಗ ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಮಧುಮೇಹ ಮತ್ತು ಬೊಜ್ಜು ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ರೋಗನಿರೋಧಕ ಕ್ರಮವಾಗಿ ಕಂಡುಹಿಡಿಯಲಾಗುತ್ತಿದೆ.
![ಚಿಯಾ ಬೀಜಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಚಿಯಾ ಸೀಡ್ ಅನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ.](https://images.tv9kannada.com/wp-content/uploads/2023/09/chia-seeds-5.jpg)
ಚಿಯಾ ಬೀಜಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಚಿಯಾ ಸೀಡ್ ಅನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ.
![ಚಿಯಾ ಸೀಡ್ಸ್ ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಚಿಯಾ ಬೀಜಗಳು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳನ್ನು ಸಹ ಒಳಗೊಂಡಿರುತ್ತವೆ. ಇದು ಮೂಳೆ ಸಾಂದ್ರತೆಯನ್ನು ಸುಧಾರಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.](https://images.tv9kannada.com/wp-content/uploads/2023/09/chia-seeds-2.jpg)
ಚಿಯಾ ಸೀಡ್ಸ್ ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಚಿಯಾ ಬೀಜಗಳು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ರಂಜಕದಂತಹ ಖನಿಜಗಳನ್ನು ಸಹ ಒಳಗೊಂಡಿರುತ್ತವೆ. ಇದು ಮೂಳೆ ಸಾಂದ್ರತೆಯನ್ನು ಸುಧಾರಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.
![ಚಿಯಾ ಬೀಜಗಳಲ್ಲಿ ಇರುವ ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಮೆಗ್ನೀಸಿಯಮ್ ಮಧುಮೇಹದ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.](https://images.tv9kannada.com/wp-content/uploads/2023/09/chia-seeds-6.jpg)
ಚಿಯಾ ಬೀಜಗಳಲ್ಲಿ ಇರುವ ಒಮೆಗಾ -3 ಕೊಬ್ಬಿನಾಮ್ಲಗಳು, ಫೈಬರ್ ಮತ್ತು ಮೆಗ್ನೀಸಿಯಮ್ ಮಧುಮೇಹದ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
![ಒಂದು ಬಾಟಲ್ ನೀರಿಗೆ ಒಂದು ಚಮಚ ಚಿಯಾ ಬೀಜಗಳನ್ನು ಸೇರಿಸಬೇಕು. 1 ಗಂಟೆಯ ಬಳಿಕ ಇದನ್ನು ಸೇವಿಸಬೇಕು. ಇದಕ್ಕೆ ಲಿಂಬೆ ರಸವನ್ನು ಕೂಡ ಸೇರಿಸಬಹುದು.](https://images.tv9kannada.com/wp-content/uploads/2023/09/chia-seeds-benefits-2.jpg)
ಒಂದು ಬಾಟಲ್ ನೀರಿಗೆ ಒಂದು ಚಮಚ ಚಿಯಾ ಬೀಜಗಳನ್ನು ಸೇರಿಸಬೇಕು. 1 ಗಂಟೆಯ ಬಳಿಕ ಇದನ್ನು ಸೇವಿಸಬೇಕು. ಇದಕ್ಕೆ ಲಿಂಬೆ ರಸವನ್ನು ಕೂಡ ಸೇರಿಸಬಹುದು.
![ಚಿಯಾ ಬೀಜಗಳು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಈ ಬೀಜಗಳಲ್ಲಿರುವ ಕರಗುವ ಮತ್ತು ಕರಗದ ನಾರುಗಳು ಮಲಬದ್ಧತೆಯ ಸಮಸ್ಯೆಯನ್ನು ತೊಡೆದುಹಾಕಬಲ್ಲದು. ಮೂತ್ರಪಿಂಡದ ಕಲ್ಲುಗಳು ಮತ್ತು ಚಯಾಪಚಯ ಕ್ರಿಯೆಯ ಅಸ್ವಸ್ಥತೆಗಳನ್ನು ನಿರ್ವಹಿಸುವಲ್ಲಿ ಇದರ ಪಾತ್ರ ಮುಖ್ಯವಾದುದು.](https://images.tv9kannada.com/wp-content/uploads/2023/09/chia-seeds-8.jpg)
ಚಿಯಾ ಬೀಜಗಳು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಈ ಬೀಜಗಳಲ್ಲಿರುವ ಕರಗುವ ಮತ್ತು ಕರಗದ ನಾರುಗಳು ಮಲಬದ್ಧತೆಯ ಸಮಸ್ಯೆಯನ್ನು ತೊಡೆದುಹಾಕಬಲ್ಲದು. ಮೂತ್ರಪಿಂಡದ ಕಲ್ಲುಗಳು ಮತ್ತು ಚಯಾಪಚಯ ಕ್ರಿಯೆಯ ಅಸ್ವಸ್ಥತೆಗಳನ್ನು ನಿರ್ವಹಿಸುವಲ್ಲಿ ಇದರ ಪಾತ್ರ ಮುಖ್ಯವಾದುದು.
![ಸಲಾಡ್ಗಳು ಮತ್ತು ಸ್ಮೂಥಿಗಳ ಮೇಲೆ ಚಿಯಾ ಬೀಜಗಳನ್ನು ಹಾಕುವುದರಿಂದ ರುಚಿಕರವಾದ ಆಹಾರಗಳು ಇನ್ನಷ್ಟು ಆರೋಗ್ಯಕರವಾಗುತ್ತದೆ.](https://images.tv9kannada.com/wp-content/uploads/2023/09/chia-seeds-9.jpg)
ಸಲಾಡ್ಗಳು ಮತ್ತು ಸ್ಮೂಥಿಗಳ ಮೇಲೆ ಚಿಯಾ ಬೀಜಗಳನ್ನು ಹಾಕುವುದರಿಂದ ರುಚಿಕರವಾದ ಆಹಾರಗಳು ಇನ್ನಷ್ಟು ಆರೋಗ್ಯಕರವಾಗುತ್ತದೆ.
![ಇದರಲ್ಲಿರುವ ಹೆಚ್ಚಿನ ಫೈಬರ್ ತೂಕ ಕಳೆದುಕೊಳ್ಳಲು ಪ್ರಯತ್ನ ಮಾಡುತ್ತಿರುವವರಿಗೆ ಬೆಸ್ಟ್ ಎಂದೇ ಹೇಳಬಹುದು. ಚಿಯಾ ಬೀಜಗಳು ಥಯಾಮಿನ್ ಮತ್ತು ರೈಬೋಫ್ಲಾವಿನ್ನಂತಹ ಬಿ ವಿಟಮಿನ್ಗಳ ಸಮೃದ್ಧ ಮೂಲವಾಗಿದೆ. ಆದ್ದರಿಂದ, ಅವುಗಳ ಸೇವನೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.](https://images.tv9kannada.com/wp-content/uploads/2023/09/chia-seeds-3.jpg)
ಇದರಲ್ಲಿರುವ ಹೆಚ್ಚಿನ ಫೈಬರ್ ತೂಕ ಕಳೆದುಕೊಳ್ಳಲು ಪ್ರಯತ್ನ ಮಾಡುತ್ತಿರುವವರಿಗೆ ಬೆಸ್ಟ್ ಎಂದೇ ಹೇಳಬಹುದು. ಚಿಯಾ ಬೀಜಗಳು ಥಯಾಮಿನ್ ಮತ್ತು ರೈಬೋಫ್ಲಾವಿನ್ನಂತಹ ಬಿ ವಿಟಮಿನ್ಗಳ ಸಮೃದ್ಧ ಮೂಲವಾಗಿದೆ. ಆದ್ದರಿಂದ, ಅವುಗಳ ಸೇವನೆಯು ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.
![ಚಿಯಾ ಬೀಜಗಳು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು ಅದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ಸ್ವತಂತ್ರ ರಾಡಿಕಲ್ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಮತ್ತು ವಯಸ್ಸಾದ, ಆಲ್ಝೈಮರ್, ಪಾರ್ಕಿನ್ಸನ್ ಕಾಯಿಲೆ ಮತ್ತು ಉರಿಯೂತಗಳಿಗೆ ಕಾರಣವಾಗುತ್ತದೆ. ಈ ಬೀಜಗಳನ್ನು ಸೇವಿಸುವುದರಿಂದ ಅವೆಲ್ಲ ಸಮಸ್ಯೆಗಳಿಂದ ಕೊಂಚ ಮಟ್ಟಿಗಿನ ಪರಿಹಾರ ಕಂಡುಕೊಳ್ಳಬಹುದು.](https://images.tv9kannada.com/wp-content/uploads/2023/09/chia-seeds-7.jpg)
ಚಿಯಾ ಬೀಜಗಳು ಆಂಟಿಆಕ್ಸಿಡೆಂಟ್ಗಳನ್ನು ಹೊಂದಿದ್ದು ಅದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ಸ್ವತಂತ್ರ ರಾಡಿಕಲ್ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಮತ್ತು ವಯಸ್ಸಾದ, ಆಲ್ಝೈಮರ್, ಪಾರ್ಕಿನ್ಸನ್ ಕಾಯಿಲೆ ಮತ್ತು ಉರಿಯೂತಗಳಿಗೆ ಕಾರಣವಾಗುತ್ತದೆ. ಈ ಬೀಜಗಳನ್ನು ಸೇವಿಸುವುದರಿಂದ ಅವೆಲ್ಲ ಸಮಸ್ಯೆಗಳಿಂದ ಕೊಂಚ ಮಟ್ಟಿಗಿನ ಪರಿಹಾರ ಕಂಡುಕೊಳ್ಳಬಹುದು.
![ತೂಕ ಇಳಿಕೆಯ ಜೊತೆಗೆ ಖಿನ್ನತೆ, ಉರಿಯೂತ, ಅಲರ್ಜಿ ಸಮಸ್ಯೆ, ಹೃದ್ರೋಗದ ಅಪಾಯವನ್ನು ಚಿಯಾ ಸೀಡ್ಸ್ ಕಡಿಮೆ ಮಾಡುತ್ತವೆ. ಚಿಯಾ ಸೀಡ್ಸ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.](https://images.tv9kannada.com/wp-content/uploads/2023/09/chia-seeds-benefits-1.jpg)
ತೂಕ ಇಳಿಕೆಯ ಜೊತೆಗೆ ಖಿನ್ನತೆ, ಉರಿಯೂತ, ಅಲರ್ಜಿ ಸಮಸ್ಯೆ, ಹೃದ್ರೋಗದ ಅಪಾಯವನ್ನು ಚಿಯಾ ಸೀಡ್ಸ್ ಕಡಿಮೆ ಮಾಡುತ್ತವೆ. ಚಿಯಾ ಸೀಡ್ಸ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.
![ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು? ಮಧುಮೇಹದ ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಿಸಬೇಕು?](https://images.tv9kannada.com/wp-content/uploads/2024/07/right-time-to-monitor-sugar-level-in-diabetes-patients-1.jpg?w=280&ar=16:9)
![ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ ಭಾರತ- ಶ್ರೀಲಂಕಾ ಮೊದಲ ಟಿ20 ಪಂದ್ಯಕ್ಕೆ ಮಳೆಯ ಆತಂಕ](https://images.tv9kannada.com/wp-content/uploads/2024/07/ind-vs-sl-5.jpg?w=280&ar=16:9)
![ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ ಟಿ20ಯಲ್ಲಿ ಅತ್ಯಧಿಕ ರನ್; ನಂ.1 ಸ್ಥಾನಕ್ಕೇರಿದ ಸ್ಮೃತಿ ಮಂಧಾನ](https://images.tv9kannada.com/wp-content/uploads/2024/07/smriti-mandhana-1.jpg?w=280&ar=16:9)
![ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು ಚಿನ್ನದ ಬೆಲೆ 18,000 ರೂನಷ್ಟು ಏರುತ್ತಾ? ತಜ್ಞರು ಹೇಳಿದ್ದಿದು](https://images.tv9kannada.com/wp-content/uploads/2024/07/gold-items-7.jpg?w=280&ar=16:9)
![KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ? KRS ಬೃಂದಾವನ ಅಭಿವೃದ್ದಿಗೆ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ?](https://images.tv9kannada.com/wp-content/uploads/2024/07/cabinet-approves-upgradation-of-krs-brindavan-do-you-know-what-features-it-will-have-1.jpg?w=280&ar=16:9)
![ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಮೊಯ್ದಾಮ್](https://images.tv9kannada.com/wp-content/uploads/2024/07/charaideo.jpg?w=280&ar=16:9)
![‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ ‘ಸ್ತ್ರೀ 2’ ವಿಶೇಷ ಹಾಡಿನ ಮೂಲಕ ಹೆಚ್ಚಿತು ತಮನ್ನಾ ಹವಾ](https://images.tv9kannada.com/wp-content/uploads/2024/07/tamanna.jpg?w=280&ar=16:9)
![ಕೆಆರ್ಎಸ್ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಪ್ರವಾಹ ಭೀತಿ ಕೆಆರ್ಎಸ್ ಡ್ಯಾಂನಿಂದ 90 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಪ್ರವಾಹ ಭೀತಿ](https://images.tv9kannada.com/wp-content/uploads/2024/07/krs-dam1.jpg?w=280&ar=16:9)
![ತಂಪುಪಾನೀಯ ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಬಳಸುತ್ತಿದ್ದೀರಾ? ಯೋಚಿಸಿ ನೋಡಿ ತಂಪುಪಾನೀಯ ಕುಡಿಯಲು ಪ್ಲಾಸ್ಟಿಕ್ ಸ್ಟ್ರಾ ಬಳಸುತ್ತಿದ್ದೀರಾ? ಯೋಚಿಸಿ ನೋಡಿ](https://images.tv9kannada.com/wp-content/uploads/2024/07/using-plastic-straw-is-harmful-to-health-know-straw-side-effects-in-kannada-2.jpg?w=280&ar=16:9)
![ಮಳೆಯ ಮಧ್ಯೆಯೇ ದೇವರಿಗೆ ವಿಜಯಲಕ್ಷ್ಮೀ ವಿಶೇಷ ಪೂಜೆ; ಇಲ್ಲಿವೆ ಫೋಟೋಸ್ ಮಳೆಯ ಮಧ್ಯೆಯೇ ದೇವರಿಗೆ ವಿಜಯಲಕ್ಷ್ಮೀ ವಿಶೇಷ ಪೂಜೆ; ಇಲ್ಲಿವೆ ಫೋಟೋಸ್](https://images.tv9kannada.com/wp-content/uploads/2024/07/vijayalkashmi-6.jpg?w=280&ar=16:9)
![ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರೇ ಹುಷಾರ್! ಬಂದಿದೆ ಉನ್ನತ ತಂತ್ರಜ್ಞಾನ](https://images.tv9kannada.com/wp-content/uploads/2024/07/bng_param-on-traffic-office_av.jpg?w=280&ar=16:9)
![ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ](https://images.tv9kannada.com/wp-content/uploads/2024/07/in-surathkal-electric-pole-and-tree-uprooted-by-tornado-1.jpg?w=280&ar=16:9)
![ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು](https://images.tv9kannada.com/wp-content/uploads/2024/07/dinakar-chikkanna.jpg?w=280&ar=16:9)
![‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ ‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ](https://images.tv9kannada.com/wp-content/uploads/2024/07/ap-arjun-1.jpg?w=280&ar=16:9)
![ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್ ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್](https://images.tv9kannada.com/wp-content/uploads/2024/07/iqbal-hussain-3.jpg?w=280&ar=16:9)
![ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ](https://images.tv9kannada.com/wp-content/uploads/2024/07/hdk-75.jpg?w=280&ar=16:9)
![ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ! ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!](https://images.tv9kannada.com/wp-content/uploads/2024/07/ramanagara-2.jpg?w=280&ar=16:9)
![ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ! ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!](https://images.tv9kannada.com/wp-content/uploads/2024/07/in-a-trending-video-woman-catches-snake-behind-computers-in-a-office.jpg?w=280&ar=16:9)
![ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್ ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್](https://images.tv9kannada.com/wp-content/uploads/2024/07/nethravati-cow-save.jpg?w=280&ar=16:9)
![ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ](https://images.tv9kannada.com/wp-content/uploads/2024/07/suraj-3.jpg?w=280&ar=16:9)