2022ರ ಫೆಬ್ರವರಿ 2ರಿಂದ ಶ್ರೀರಾಮಾನುಜಾಚಾರ್ಯರ 1000ನೇ ಜಯಂತ್ಯುತ್ಸವ; ಸಮಾನತೆಯ ಮೂರ್ತಿ ಅನಾವರಣಕ್ಕೆ ಗೃಹ ಸಚಿವ ಅಮಿತ್ ಶಾಗೆ ಆಹ್ವಾನ

Edited By:

Updated on: Sep 16, 2021 | 9:40 PM

Statue of Equality: 2022ಫೆಬ್ರವರಿ 2ರಿಂದ 14 ವರೆಗೆ ಅನಾವರಣ ಕಾರ್ಯಕ್ರಮಗಳು ನಡೆಯಲಿವೆ. ಸಮಾಜದ ಒಳಿತಿಗಾಗಿ ಸಹಸ್ರಹುಂಡಾತ್ಮಕ ಲಕ್ಷ್ಮೀ ಯಾಗ ನಡೆಯಲಿದೆ. ಅದಕ್ಕಾಗಿ 1,035 ಹೋಮ ಕುಂಡಗಳನ್ನು ನಿರ್ಮಿಸಲಾಗ್ತಿದೆ.

1 / 7
ಇದೀಗ ಅನಾವರಣಗೊಳ್ಳಲಿರುವ ಶ್ರೀರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ ವಿಶ್ವದ ಎರಡನೇ ಅತ್ಯಂತ ಎತ್ತರದ ಪ್ರತಿಮೆ ಎಂದು ಗುರುತಿಸಿಕೊಳ್ಳಲಿದೆ. ಹೈದರಾಬಾದ್‌ನ ಶಂಶಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಮುಂಚಿಂತಾಲ್‌ ಗ್ರಾಮದ ಬಳಿಯೇ ಇದು ನಿರ್ಮಾಣವಾಗಿದೆ. ನಿನ್ನೆ ತ್ರಿದಂಡಿ ಸ್ವಾಮೀಜಿಗಳು ಗೃಹ ಸಚಿವ ಅಮಿತ್ ಶಾ ಅವರಿಗೆ ಆಹ್ವಾನ ನೀಡಿದ್ದಾರೆ.

ಇದೀಗ ಅನಾವರಣಗೊಳ್ಳಲಿರುವ ಶ್ರೀರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ ವಿಶ್ವದ ಎರಡನೇ ಅತ್ಯಂತ ಎತ್ತರದ ಪ್ರತಿಮೆ ಎಂದು ಗುರುತಿಸಿಕೊಳ್ಳಲಿದೆ. ಹೈದರಾಬಾದ್‌ನ ಶಂಶಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಮುಂಚಿಂತಾಲ್‌ ಗ್ರಾಮದ ಬಳಿಯೇ ಇದು ನಿರ್ಮಾಣವಾಗಿದೆ. ನಿನ್ನೆ ತ್ರಿದಂಡಿ ಸ್ವಾಮೀಜಿಗಳು ಗೃಹ ಸಚಿವ ಅಮಿತ್ ಶಾ ಅವರಿಗೆ ಆಹ್ವಾನ ನೀಡಿದ್ದಾರೆ.

2 / 7

ಹೈದರಾಬಾದ್​ನ ಹೊರವಲಯದಲ್ಲಿರುವ ಮುಚ್ಚಿಂಟಾಲ್ ಗ್ರಾಮದಲ್ಲಿ 2022ರ ಫೆಬ್ರವರಿ 2ರಿಂದ 14ನೇ ತಾರೀಖಿನವರೆಗೆ ನಡೆಯಲಿರುವ ಶ್ರೀರಾಮಾನುಜಾಚಾರ್ಯರ 1000ನೇ ಜನ್ಮಜಯಂತ್ಯುತ್ಸವ ಮತ್ತು ರಾಮಾನುಜಾಚಾರ್ಯರ ‘ಸಮಾನತೆಯ ಮೂರ್ತಿ’ ಉದ್ಘಾಟನಾ ಕಾರ್ಯಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ್​​ ಸಿಂಗ್​​ರಿಗೆ ತ್ರಿದಂಡಿ ಚಿನ್ನ ಜಯೀರ ಸ್ವಾಮೀಜಿ ಆಹ್ವಾನ ನೀಡಿದರು. ಮೈ ಹೋಂ ಗ್ರೂಪ್​ ಆಫ್​ ಕಂಪನಿಗಳ ಮುಖ್ಯಸ್ಥ ಜೂಪಲ್ಲಿ ರಾಮೇಶ್ವರ ರಾವ್ ಕೂಡ ಇದ್ದಾರೆ.

3 / 7

11ನೇ ಶತಮಾನದ ಸಂತರಾಗಿದ್ದ ಶ್ರೀರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಸುಮಾರು 200 ಎಕರೆ ವಿಸ್ತೀರ್ಣದ ಜಾಗದಲ್ಲಿ 65.8 ಮೀಟರ್​ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಅದರ ಉದ್ಘಾಟನೆ ಫೆ.2-12ರವರೆಗೆ ನಡೆಯಲಿರುವ ಸಮಾರಂಭದ ಅವಧಿಯಲ್ಲೇ ಆಗಲಿದೆ. ಈ ನಿಮಿತ್ತ ಶ್ರೀರಾಮಾನುಜ ಸಂಸ್ಥಾನದ ತ್ರಿದಂಡಿ ಸ್ವಾಮೀಜಿ ಹಲವು ಗಣ್ಯರಿಗೆ ಆಹ್ವಾನ ನೀಡುತ್ತಿದ್ದಾರೆ.

4 / 7

ಸುಮಾರು 10 ದಿನಗಳ ಕಾಲ ನಡೆಯಲಿರುವ ಸಮಾರಂಭಕ್ಕೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಅವರಿಗೂ ಚಿನ್ನ ಜೀಯರ ಸ್ವಾಮೀಜಿ ಆಮಂತ್ರಣ ನೀಡಿದ್ದಾರೆ. ಹಿಂದುತತ್ವಶಾಸ್ತ್ರ ಪ್ರತಿಪಾದಕಾರಿದ್ದ ರಾಮಾನುಜಾಚಾರ್ಯರು ಎಲ್ಲರೂ ಒಂದೇ ಎಂದು ಸಾರಿದ್ದರು. ಜಾತಿ-ಬೇಧ ವಿರೋಧಿಸಿದ್ದರು. ಅವರ ನೆನಪಿಗಾಗಿ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ.

5 / 7

ಇದೀಗ ಅನಾವರಣಗೊಳ್ಳಲಿರುವ ಶ್ರೀರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆ ವಿಶ್ವದ ಎರಡನೇ ಅತ್ಯಂತ ಎತ್ತರದ ಪ್ರತಿಮೆ ಎಂದು ಗುರುತಿಸಿಕೊಳ್ಳಲಿದೆ. ಹೈದರಾಬಾದ್‌ನ ಶಂಶಾಬಾದ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಮುಂಚಿಂತಾಲ್‌ ಗ್ರಾಮದ ಬಳಿಯೇ ಇದು ನಿರ್ಮಾಣವಾಗಿದೆ. ನಿನ್ನೆ ತ್ರಿದಂಡಿ ಸ್ವಾಮೀಜಿಗಳು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಗೆ ಆಹ್ವಾನ ನೀಡಿದ್ದಾರೆ.

6 / 7

ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಅನಾವರಣಗೊಳ್ಳುತ್ತಿರುವ ಸ್ಥಳವು ವಿಶ್ವದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಈ ಸ್ಥಳದಲ್ಲಿ 108 ವೈಷ್ಣವ ದಿವ್ಯ ಕ್ಷೇತ್ರಗಳ ಪ್ರತಿಕೃತಿಗಳು ರಚನೆಯಾಗಲಿವೆ. ಇದಲ್ಲದೇ ತಿರುಗುವ ರಾಮಾನುಜಾಚಾರ್ಯರ ಮೂರ್ತಿ ಹಾಗೂ ಬಣ್ಣದ ಕಾರಂಜಿ, ಆಚಾರ‍್ಯರ ಜನ್ಮದ 120 ವರ್ಷಗಳನ್ನು ಸೂಚಿಸುವ 120 ಕಿಲೋ ತೂಕದ ಚಿನ್ನದ ಪ್ರತಿಮೆ ಕೂಡ ಸ್ಥಳದಲ್ಲಿರಲಿದೆ. (ಸಚಿವ ನಿತಿನ್​ ಗಡ್ಕರಿಗೆಯವರಿಗೆ ಆಹ್ವಾನ)

7 / 7

2022ಫೆಬ್ರವರಿ 2ರಿಂದ 14 ವರೆಗೆ ಅನಾವರಣ ಕಾರ್ಯಕ್ರಮಗಳು ನಡೆಯಲಿವೆ. ಇನ್ನು ಸಮಾಜದ ಒಳಿತಿಗಾಗಿ ಸಹಸ್ರಹುಂಡಾತ್ಮಕ ಲಕ್ಷ್ಮೀ ಯಾಗ ನಡೆಯಲಿದೆ. ಅದಕ್ಕಾಗಿ 1,035 ಹೋಮ ಕುಂಡಗಳನ್ನು ನಿರ್ಮಿಸಲಾಗ್ತಿದೆ. (ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಆಹ್ವಾನ)

Published On - 3:55 pm, Thu, 16 September 21

Loading...
Unable to load recommendations.
Follow Us