‘ಮರಳಿ‌ ಮತ್ತದೇ ಗೂಡಿಗೆ ಬಂದು ಸೇರಿದೆ, ಅಜ್ಜಿಯಾಗಿ’; ಗಮನ ಸೆಳೆದ ಚಿತ್ಕಲಾ ಬೀರಾದಾರ್ ಪೋಸ್ಟ್

Updated on: Sep 24, 2023 | 6:30 AM

ರಾಮ್ ಜಿ ನಿರ್ದೇಶನ ಮಾಡುತ್ತಿರುವ ‘ಬೃಂದಾವನ’ ಧಾರಾವಾಹಿಯಲ್ಲಿ ಚಿತ್ಕಲಾ ನಟಿಸುತ್ತಿದ್ದಾರೆ. 36 ಜನರು ಇರುವ ಮನೆಗೆ ಸುಧಾ ಮೂರ್ತಿಯದ್ದೇ (ಚಿತ್ಕಲಾ) ನೇತೃತ್ವ. ಸದ್ಯ ಪ್ರೋಮೋ ಗಮನ ಸೆಳೆಯುತ್ತಿದೆ.

1 / 6
ಚಿತ್ಕಲಾ ಬೀರಾದಾರ್ ಅವರು ‘ಕನ್ನಡತಿ’ ಧಾರಾವಾಹಿಯಲ್ಲಿ ಅಮ್ಮಮ್ಮನ ಪಾತ್ರ ಮಾಡಿದ್ದರು. ಅವರ ಪಾತ್ರದ ನಿಜವಾದ ಹೆಸರು ರತ್ನಮಾಲಾ ಆಗಿತ್ತು. ಈ ಧಾರಾವಾಹಿ ಪೂರ್ಣಗೊಂಡ ಬಳಿಕ ಅವರನ್ನು ಅನೇಕರು ಮಿಸ್ ಮಾಡಿಕೊಂಡಿದ್ದರು. ಈಗ ಅವರು ಮತ್ತೆ ಮರಳಿ ಗೂಡಿಗೆ ಬಂದಿದ್ದಾರೆ.

ಚಿತ್ಕಲಾ ಬೀರಾದಾರ್ ಅವರು ‘ಕನ್ನಡತಿ’ ಧಾರಾವಾಹಿಯಲ್ಲಿ ಅಮ್ಮಮ್ಮನ ಪಾತ್ರ ಮಾಡಿದ್ದರು. ಅವರ ಪಾತ್ರದ ನಿಜವಾದ ಹೆಸರು ರತ್ನಮಾಲಾ ಆಗಿತ್ತು. ಈ ಧಾರಾವಾಹಿ ಪೂರ್ಣಗೊಂಡ ಬಳಿಕ ಅವರನ್ನು ಅನೇಕರು ಮಿಸ್ ಮಾಡಿಕೊಂಡಿದ್ದರು. ಈಗ ಅವರು ಮತ್ತೆ ಮರಳಿ ಗೂಡಿಗೆ ಬಂದಿದ್ದಾರೆ.

2 / 6

ರಾಮ್ ಜಿ ನಿರ್ದೇಶನ ಮಾಡುತ್ತಿರುವ ‘ಬೃಂದಾವನ’ ಧಾರಾವಾಹಿಯಲ್ಲಿ ಚಿತ್ಕಲಾ ನಟಿಸುತ್ತಿದ್ದಾರೆ. 36 ಜನರು ಇರುವ ಮನೆಗೆ ಸುಧಾ ಮೂರ್ತಿಯದ್ದೇ (ಚಿತ್ಕಲಾ) ನೇತೃತ್ವ. ಸದ್ಯ ಪ್ರೋಮೋ ಗಮನ ಸೆಳೆಯುತ್ತಿದೆ.

3 / 6

ಚಿತ್ಕಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಧಾರಾವಾಹಿ ಬಗ್ಗೆ, ಪಾತ್ರದ ಬಗ್ಗೆ, ಕಲರ್ಸ್ ಕನ್ನಡ ವೀಕ್ಷಕರನ್ನು ಮತ್ತೆ ಎದುರುಗೊಳ್ಳುತ್ತಿರುವುದಕ್ಕೆ ಅವರು ಎಗ್ಸೈಟ್ ಆಗಿದ್ದಾರೆ.

4 / 6

‘ಹೌದು, ಮರಳಿ‌ ಮತ್ತೆ ಅದೇ ಗೂಡಿಗೆ ಬಂದು ಸೇರಿದೆ. ಈ ಸಾರಿ ನಿಜವಾಗಿಯೂ ಅಮ್ಮಮ್ಮನಾಗಿ ( ಅಜ್ಜಿಯಾಗಿ). ಇದು ಮೊದಮೊದಲ ಲುಕ್, ಆದರೆ ಇದಲ್ಲಾ ಅಸಲಿ ಲುಕ್’ ಎಂದು ಅವರು ಬರಹ ಆರಂಭಿಸಿದ್ದಾರೆ.

5 / 6

‘ಮತ್ತೊಂದು ಹೊಸ ಪ್ರಯಾಣದ ಚಾಲನೆಯಾಯ್ತು. ಮತ್ತೊಮ್ಮೆ ನಿಮ್ಮ ಹರಕೆ, ಹಾರೈಕೆ ಎರಡೂ ಬೇಕಾಗಿದೆ. ‘ಬೃಂದಾವನ' ಹೊಸ ಕನಸು ಹೊತ್ತು ಬಂದಿದೆ. ಅದು ನನಸಾಗಿ ನಿಮ್ಮೆಲ್ಲರ ಮನಸ್ಸು ಸೊರೆಗೊಂಡರಷ್ಟೇ ಸಾಕು’ ಎಂದು ಚಿತ್ಕಲಾ ಬರೆದುಕೊಂಡಿದ್ದಾರೆ..

6 / 6

ಕಲರ್ಸ್ ಕನ್ನಡದಲ್ಲಿ ‘ಗೀತಾ’ ಧಾರಾವಾಹಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಈ ಧಾರಾವಾಹಿ ಕೊನೆಗೊಂಡ ಬಳಿಕ ‘ಬೃಂದಾವನ’ ಧಾರಾವಾಹಿ ಆರಂಭ ಆಗಬಹುದು ಎಂದು ಅನೇಕರು ಭಾವಿಸಿದ್ದಾರೆ.

Loading...
Unable to load recommendations.
Follow Us