AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ‘ನೀರು ಕೊಡಲು ಮಾತ್ರ ಸೀಮಿತನಾಗಿದ್ದೆ’; ದಾಖಲೆಯ ಶತಕದ ಬಳಿಕ ಖವಾಜಾ ಭಾವುಕ ನುಡಿ

IND vs AUS: ಈ ಪ್ರವಾಸಕ್ಕೂ ಮುನ್ನ ನಾನು ಎರಡು ಬಾರಿ ತಂಡದೊಂದಿಗೆ ಭಾರತಕ್ಕೆ ಬಂದಿದ್ದೆ. ಆದರೆ ಆಗ ಆಡಿದ ಎಲ್ಲಾ 8 ಟೆಸ್ಟ್ ಪಂದ್ಯಗಳಲ್ಲಿ ನಾನು ತಂಡದ ಆಟಗಾರರಿಗೆ ನೀರು ಕೊಡುವುದಕ್ಕೆ ಸೀಮಿತನಾಗಿದ್ದೆ ಎಂದಿದ್ದಾರೆ.

ಪೃಥ್ವಿಶಂಕರ
|

Updated on: Mar 10, 2023 | 11:02 AM

ಭಾರತವಾಗಲಿ ಅಥವಾ ಆಸ್ಟ್ರೇಲಿಯಾವಾಗಲಿ ಈ ಎರಡೂ ಕ್ರಿಕೆಟ್ ತಂಡಗಳಲ್ಲಿ ಸ್ಥಾನ ಪಡೆಯುವುದು ಸುಲಭದ ಮಾತಲ್ಲ. ಅದೇಷ್ಟೋ ಆಟಗಾರರಿಗೆ ಈ ಎರಡೂ ತಂಡಗಳಲ್ಲಿ ಅವಕಾಶ ಪಡೆಯಬೇಕು ಎಂಬ ಕನಸು ಇನ್ನು ಕನಸಾಗಿಯೇ ಉಳಿದಿದೆ. ಆದರೆ ಇನ್ನು ಕೆಲವು ಆಟಗಾರರು ತಂಡಕ್ಕೆ ಆಯ್ಕೆಯಾದರು, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗುತ್ತಾರೆ. ಅಂತಹ ಆಟಗಾರರಲ್ಲಿ ಆಸೀಸ್ ಆರಂಭಿಕ ಉಸ್ಮಾನ್ ಖವಾಜಾ ಕೂಡ ಒಬ್ಬರು. ಆದರೆ ಇದೀಗ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಖವಾಜಾ ದಾಖಲೆಯ ಶತಕ ಸಿಡಿಸಿ ಮಿಂಚಿದ್ದಾರೆ.

ಭಾರತವಾಗಲಿ ಅಥವಾ ಆಸ್ಟ್ರೇಲಿಯಾವಾಗಲಿ ಈ ಎರಡೂ ಕ್ರಿಕೆಟ್ ತಂಡಗಳಲ್ಲಿ ಸ್ಥಾನ ಪಡೆಯುವುದು ಸುಲಭದ ಮಾತಲ್ಲ. ಅದೇಷ್ಟೋ ಆಟಗಾರರಿಗೆ ಈ ಎರಡೂ ತಂಡಗಳಲ್ಲಿ ಅವಕಾಶ ಪಡೆಯಬೇಕು ಎಂಬ ಕನಸು ಇನ್ನು ಕನಸಾಗಿಯೇ ಉಳಿದಿದೆ. ಆದರೆ ಇನ್ನು ಕೆಲವು ಆಟಗಾರರು ತಂಡಕ್ಕೆ ಆಯ್ಕೆಯಾದರು, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗುತ್ತಾರೆ. ಅಂತಹ ಆಟಗಾರರಲ್ಲಿ ಆಸೀಸ್ ಆರಂಭಿಕ ಉಸ್ಮಾನ್ ಖವಾಜಾ ಕೂಡ ಒಬ್ಬರು. ಆದರೆ ಇದೀಗ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ಖವಾಜಾ ದಾಖಲೆಯ ಶತಕ ಸಿಡಿಸಿ ಮಿಂಚಿದ್ದಾರೆ.

1 / 5
ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ನ ಮೊದಲ ದಿನದಂದು, ಉಸ್ಮಾನ್ ಖವಾಜಾ ಅದ್ಭುತ ಇನ್ನಿಂಗ್ಸ್ ಆಡಿ, ತಮ್ಮ ಟೆಸ್ಟ್ ವೃತ್ತಿಜೀವನದ 14 ನೇ ಶತಕ ಬಾರಿಸಿದರು. ಇದು ಭಾರತದ ವಿರುದ್ಧ ಅವರ ವೃತ್ತಿ ಜೀವನದ ಮೊದಲ ಶತಕವಾಗಿರುವುದು ಮತ್ತಷ್ಟು ವಿಶೇಷವಾಗಿತ್ತು. ಸತತ ನಿರ್ಲಕ್ಷ್ಯದ ನಂತರ ಭಾರತದಲ್ಲಿ ಆಡುವ ಅವಕಾಶ ಸಿಕ್ಕಿದ್ದರಿಂದ ಖವಾಜಾಗೂ ಕುಡ ಈ ಶತಕ ಬಹಳ ವಿಶೇಷವಾಗಿತ್ತು.

ಬಾರ್ಡರ್-ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ನ ಮೊದಲ ದಿನದಂದು, ಉಸ್ಮಾನ್ ಖವಾಜಾ ಅದ್ಭುತ ಇನ್ನಿಂಗ್ಸ್ ಆಡಿ, ತಮ್ಮ ಟೆಸ್ಟ್ ವೃತ್ತಿಜೀವನದ 14 ನೇ ಶತಕ ಬಾರಿಸಿದರು. ಇದು ಭಾರತದ ವಿರುದ್ಧ ಅವರ ವೃತ್ತಿ ಜೀವನದ ಮೊದಲ ಶತಕವಾಗಿರುವುದು ಮತ್ತಷ್ಟು ವಿಶೇಷವಾಗಿತ್ತು. ಸತತ ನಿರ್ಲಕ್ಷ್ಯದ ನಂತರ ಭಾರತದಲ್ಲಿ ಆಡುವ ಅವಕಾಶ ಸಿಕ್ಕಿದ್ದರಿಂದ ಖವಾಜಾಗೂ ಕುಡ ಈ ಶತಕ ಬಹಳ ವಿಶೇಷವಾಗಿತ್ತು.

2 / 5
ಮೊದಲ ದಿನ 104 ರನ್ ಗಳಿಸಿ ಅಜೇಯರಾಗಿ ವಾಪಸಾದ ಖವಾಜಾ ಕೂಡ ತಮ್ಮ ಶತಕದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದು, ಈ ಪ್ರವಾಸಕ್ಕೂ ಮುನ್ನ ನಾನು ಎರಡು ಬಾರಿ ತಂಡದೊಂದಿಗೆ ಭಾರತಕ್ಕೆ ಬಂದಿದ್ದೆ. ಆದರೆ ಆಗ ಆಡಿದ ಎಲ್ಲಾ 8 ಟೆಸ್ಟ್ ಪಂದ್ಯಗಳಲ್ಲಿ ನಾನು ತಂಡದ ಆಟಗಾರರಿಗೆ ನೀರು ಕೊಡುವುದಕ್ಕೆ ಸೀಮಿತನಾಗಿದ್ದೆ ಎಂದಿದ್ದಾರೆ.

ಮೊದಲ ದಿನ 104 ರನ್ ಗಳಿಸಿ ಅಜೇಯರಾಗಿ ವಾಪಸಾದ ಖವಾಜಾ ಕೂಡ ತಮ್ಮ ಶತಕದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದು, ಈ ಪ್ರವಾಸಕ್ಕೂ ಮುನ್ನ ನಾನು ಎರಡು ಬಾರಿ ತಂಡದೊಂದಿಗೆ ಭಾರತಕ್ಕೆ ಬಂದಿದ್ದೆ. ಆದರೆ ಆಗ ಆಡಿದ ಎಲ್ಲಾ 8 ಟೆಸ್ಟ್ ಪಂದ್ಯಗಳಲ್ಲಿ ನಾನು ತಂಡದ ಆಟಗಾರರಿಗೆ ನೀರು ಕೊಡುವುದಕ್ಕೆ ಸೀಮಿತನಾಗಿದ್ದೆ ಎಂದಿದ್ದಾರೆ.

3 / 5
ವಾಸ್ತವವಾಗಿ ಖವಾಜಾ ಅವರ ಈ ಶತಕ ಹಲವು ರೀತಿಯಲ್ಲಿ ವಿಶೇಷವಾಗಿದೆ. ಇದು ಏಷ್ಯಾದಲ್ಲಿ ಖವಾಜಾ ಅವರ ನಾಲ್ಕನೇ ಟೆಸ್ಟ್ ಶತಕವಾಗಿದೆ. ಇಷ್ಟೇ ಅಲ್ಲ, 2010-11ರ ಪ್ರವಾಸದ ನಂತರ ಭಾರತದಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಮೊದಲ ಎಡಗೈ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಖವಾಜಾ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮಾರ್ಕಸ್ ನಾರ್ತ್ ಬೆಂಗಳೂರು ಟೆಸ್ಟ್​ನಲ್ಲಿ ಶತಕ ಬಾರಿಸಿದ್ದರು.

ವಾಸ್ತವವಾಗಿ ಖವಾಜಾ ಅವರ ಈ ಶತಕ ಹಲವು ರೀತಿಯಲ್ಲಿ ವಿಶೇಷವಾಗಿದೆ. ಇದು ಏಷ್ಯಾದಲ್ಲಿ ಖವಾಜಾ ಅವರ ನಾಲ್ಕನೇ ಟೆಸ್ಟ್ ಶತಕವಾಗಿದೆ. ಇಷ್ಟೇ ಅಲ್ಲ, 2010-11ರ ಪ್ರವಾಸದ ನಂತರ ಭಾರತದಲ್ಲಿ ಶತಕ ಬಾರಿಸಿದ ಆಸ್ಟ್ರೇಲಿಯಾದ ಮೊದಲ ಎಡಗೈ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಖವಾಜಾ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮಾರ್ಕಸ್ ನಾರ್ತ್ ಬೆಂಗಳೂರು ಟೆಸ್ಟ್​ನಲ್ಲಿ ಶತಕ ಬಾರಿಸಿದ್ದರು.

4 / 5
36 ವರ್ಷದ ಖವಾಜಾ ಕಳೆದ 14 ತಿಂಗಳುಗಳಿಂದ ಉತ್ತಮ ಫಾರ್ಮ್​ನಲ್ಲಿದ್ದಾರೆ. 2022 ರ ಜನವರಿಯಲ್ಲಿ ಸಿಡ್ನಿ ಟೆಸ್ಟ್‌ನಿಂದ ತಂಡಕ್ಕೆ ಎಂಟ್ರಿಕೊಟ್ಟ ಖವಾಜಾ, ಈ ಅವಧಿಯಲ್ಲಿ 28 ಇನ್ನಿಂಗ್ಸ್‌ಗಳನ್ನು ಆಡಿದ್ದು ಅದರಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ, ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 257 ರನ್ ಬಾರಿಸಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

36 ವರ್ಷದ ಖವಾಜಾ ಕಳೆದ 14 ತಿಂಗಳುಗಳಿಂದ ಉತ್ತಮ ಫಾರ್ಮ್​ನಲ್ಲಿದ್ದಾರೆ. 2022 ರ ಜನವರಿಯಲ್ಲಿ ಸಿಡ್ನಿ ಟೆಸ್ಟ್‌ನಿಂದ ತಂಡಕ್ಕೆ ಎಂಟ್ರಿಕೊಟ್ಟ ಖವಾಜಾ, ಈ ಅವಧಿಯಲ್ಲಿ 28 ಇನ್ನಿಂಗ್ಸ್‌ಗಳನ್ನು ಆಡಿದ್ದು ಅದರಲ್ಲಿ 6 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ, ಪ್ರಸ್ತುತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 7 ಇನ್ನಿಂಗ್ಸ್‌ಗಳಲ್ಲಿ 257 ರನ್ ಬಾರಿಸಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

5 / 5
Follow us
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!