AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ 2nd ODI: ಮಳೆಯ ಮುಂದೆ ನಡೆಯಲಿಲ್ಲ 29 ಓವರ್​ಗಳ ಪಂದ್ಯ: 2ನೇ ಏಕದಿನ ರದ್ದು: ಇಲ್ಲಿದೆ ನೋಡಿ ಫೋಟೋಗಳು

India vs New Zealand 2nd ODI: ಹ್ಯಾಮಿಲ್ಟನ್​ನ ಸೀಡನ್ ಪಾರ್ಕ್​ನಲ್ಲಿ ನಡೆಯುತ್ತಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಓವರ್ ಕಡಿತಗೊಳಿಸಿ 29 ಓವರ್​ಗಳ ಪಂದ್ಯವನ್ನು ನಿಗದಿ ಪಡಿಸಿದರೂ ಒಂದು ಇನ್ನಿಂಗ್ಸ್ ಕೂಡ ಪೂರ್ಣಗೊಳ್ಳದೆ ಪಂದ್ಯವನ್ನು ಸ್ಥಗಿತ ಮಾಡಲಾಯಿತು.

TV9 Web
| Edited By: |

Updated on: Nov 27, 2022 | 1:10 PM

Share
ಹ್ಯಾಮಿಲ್ಟನ್​ನ ಸೀಡನ್ ಪಾರ್ಕ್​ನಲ್ಲಿ ನಡೆಯುತ್ತಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಓವರ್ ಕಡಿತಗೊಳಿಸಿ 29 ಓವರ್​ಗಳ ಪಂದ್ಯವನ್ನು ನಿಗದಿ ಪಡಿಸಿದರೂ ಒಂದು ಇನ್ನಿಂಗ್ಸ್ ಕೂಡ ಪೂರ್ಣಗೊಳ್ಳದೆ ಪಂದ್ಯವನ್ನು ಸ್ಥಗಿತ ಮಾಡಲಾಯಿತು.

ಹ್ಯಾಮಿಲ್ಟನ್​ನ ಸೀಡನ್ ಪಾರ್ಕ್​ನಲ್ಲಿ ನಡೆಯುತ್ತಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ದ್ವಿತೀಯ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಓವರ್ ಕಡಿತಗೊಳಿಸಿ 29 ಓವರ್​ಗಳ ಪಂದ್ಯವನ್ನು ನಿಗದಿ ಪಡಿಸಿದರೂ ಒಂದು ಇನ್ನಿಂಗ್ಸ್ ಕೂಡ ಪೂರ್ಣಗೊಳ್ಳದೆ ಪಂದ್ಯವನ್ನು ಸ್ಥಗಿತ ಮಾಡಲಾಯಿತು.

1 / 8
ಪಂದ್ಯ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆಗೇ ವರುಣ ಅಡ್ಡಿ ಪಡಿಸಿದ. ಬಳಿಕ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​​ಗೆ ಇಳಿದ ಟೀಮ್ ಇಂಡಿಯಾ ಪರ ಓಪನರ್​ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು.

ಪಂದ್ಯ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆಗೇ ವರುಣ ಅಡ್ಡಿ ಪಡಿಸಿದ. ಬಳಿಕ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್​​ಗೆ ಇಳಿದ ಟೀಮ್ ಇಂಡಿಯಾ ಪರ ಓಪನರ್​ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್​ಮನ್ ಗಿಲ್ ಉತ್ತಮ ಆರಂಭ ಒದಗಿಸಿದರು.

2 / 8
ಆದರೆ, 4.5 ಓವರ್​ಗೆ ಭಾರತ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದ್ದಾಗ ಮಳೆ ಪುನಃ ಶುರುವಾಯಿತು. ಕೆಲ ಸಮಯ ಕಾದರೂ ಮಳೆ ಕಡಿಮೆ ಆಗಲಿಲ್ಲ. ಬಳಿಕ ಓವರ್ ಕಡಿತದ ಪ್ರಕ್ರಿಯೆ ಶುರುವಾಯಿತು. ಹೀಗಾಗಿ 29 ಓವರ್​ಗಳ ಪಂದ್ಯವನ್ನ ಆಡಿಸಲು ನಿರ್ಧಾರ ಮಾಡಲಾಯಿತು.

ಆದರೆ, 4.5 ಓವರ್​ಗೆ ಭಾರತ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿದ್ದಾಗ ಮಳೆ ಪುನಃ ಶುರುವಾಯಿತು. ಕೆಲ ಸಮಯ ಕಾದರೂ ಮಳೆ ಕಡಿಮೆ ಆಗಲಿಲ್ಲ. ಬಳಿಕ ಓವರ್ ಕಡಿತದ ಪ್ರಕ್ರಿಯೆ ಶುರುವಾಯಿತು. ಹೀಗಾಗಿ 29 ಓವರ್​ಗಳ ಪಂದ್ಯವನ್ನ ಆಡಿಸಲು ನಿರ್ಧಾರ ಮಾಡಲಾಯಿತು.

3 / 8
ಮಳೆ ನಿತ್ತ ಬಳಿಕ ಬ್ಯಾಟಿಂಗ್ ಮುಂಂದುವರೆಸಲು ಬಂದ ಭಾರತ 6ನೇ ಓವರ್​ನ ಮ್ಯಾಟ್ ಹೆನ್ರಿ ಅವರ ಮೊದಲ ಎಸೆತದಲ್ಲೇ ಶಿಖರ್ ಧವನ್ (3) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಶುಭ್​ಮನ್ ಗಿಲ್ ಬಿರುಸಿನ ಆಟ ಆಡಿದರು.

ಮಳೆ ನಿತ್ತ ಬಳಿಕ ಬ್ಯಾಟಿಂಗ್ ಮುಂಂದುವರೆಸಲು ಬಂದ ಭಾರತ 6ನೇ ಓವರ್​ನ ಮ್ಯಾಟ್ ಹೆನ್ರಿ ಅವರ ಮೊದಲ ಎಸೆತದಲ್ಲೇ ಶಿಖರ್ ಧವನ್ (3) ವಿಕೆಟ್ ಕಳೆದುಕೊಂಡಿತು. ನಂತರ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಶುಭ್​ಮನ್ ಗಿಲ್ ಬಿರುಸಿನ ಆಟ ಆಡಿದರು.

4 / 8
ಆದರೆ, ಮಳೆಯ ಆಟದ ಮುಂದೆ ಸೂರ್ಯನ ಸ್ಫೋಟಕ ಆಟ ನಿಂತು ಹೋಯಿತು. 13ನೇ ಓವರ್ ಆಗುವಾಗ ಮತ್ತೆ ಜೋರಾಗಿ ಮಳೆ ಸುರಿದ ಪರಿಣಾಮ ಆಟಗಾರರೆಲ್ಲ ಪೆವಿಲಿಯನ್​ಗೆ ತೆರಳಿದರು. ಈ ಸಂದರ್ಭ ಭಾರತ 12.5 ಓವರ್​ಗೆ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಸೂರ್ಯ 25 ಎಸೆತಗಳಲ್ಲಿ 3 ಸಿಕ್ಸರ್, 2 ಫೋರ್​​ನೊಂದಿಗೆ ಅಜೇಯ 34 ಮತ್ತು ಗಿಲ್ 42 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸಿದ್ದರು.

ಆದರೆ, ಮಳೆಯ ಆಟದ ಮುಂದೆ ಸೂರ್ಯನ ಸ್ಫೋಟಕ ಆಟ ನಿಂತು ಹೋಯಿತು. 13ನೇ ಓವರ್ ಆಗುವಾಗ ಮತ್ತೆ ಜೋರಾಗಿ ಮಳೆ ಸುರಿದ ಪರಿಣಾಮ ಆಟಗಾರರೆಲ್ಲ ಪೆವಿಲಿಯನ್​ಗೆ ತೆರಳಿದರು. ಈ ಸಂದರ್ಭ ಭಾರತ 12.5 ಓವರ್​ಗೆ 1 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಸೂರ್ಯ 25 ಎಸೆತಗಳಲ್ಲಿ 3 ಸಿಕ್ಸರ್, 2 ಫೋರ್​​ನೊಂದಿಗೆ ಅಜೇಯ 34 ಮತ್ತು ಗಿಲ್ 42 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸಿದ್ದರು.

5 / 8
ನಂತರ ಕೆಲಹೊತ್ತು ಕಾದರೂ ಮಳೆ ಕಡಿಮೆ ಆಗಲಿಲ್ಲ. ಅಂತಿಮವಾಗಿ ಉಭಯ ತಂಡಗಳ ನಾಯಕ ಹಾಗೂ ಕೋಚ್ ಜೊತೆ ಚರ್ಚಿಸಿ ಅಂಪೈರ್​ಗಳು ಪಂದ್ಯವನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದರು. ಈ ಮೂಲಕ ಭಾರತ ಏಕದಿನ ಸರಣಿ ಗೆಲ್ಲುವ ಕನಸು ನುಚ್ಚುನೂರಾಗಿದೆ.

ನಂತರ ಕೆಲಹೊತ್ತು ಕಾದರೂ ಮಳೆ ಕಡಿಮೆ ಆಗಲಿಲ್ಲ. ಅಂತಿಮವಾಗಿ ಉಭಯ ತಂಡಗಳ ನಾಯಕ ಹಾಗೂ ಕೋಚ್ ಜೊತೆ ಚರ್ಚಿಸಿ ಅಂಪೈರ್​ಗಳು ಪಂದ್ಯವನ್ನು ಸ್ಥಗಿತಗೊಳಿಸುವ ತೀರ್ಮಾನಕ್ಕೆ ಬಂದರು. ಈ ಮೂಲಕ ಭಾರತ ಏಕದಿನ ಸರಣಿ ಗೆಲ್ಲುವ ಕನಸು ನುಚ್ಚುನೂರಾಗಿದೆ.

6 / 8
ಮಳೆಯ ನಡುವೆಯೇ ಪಂದ್ಯದ ಆರಂಭಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ಫೊಟೋ.

ಮಳೆಯ ನಡುವೆಯೇ ಪಂದ್ಯದ ಆರಂಭಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳ ಫೊಟೋ.

7 / 8
ಮಳೆ ಬಂದ ಕಾರಣ ಪಿಚ್ ಅನ್ನು ಕವರ್ ಮಾಡುತ್ತಿರುವ ಗ್ರೌಂಡ್ಸ್​ ಮೆನ್​ಗಳು.

ಮಳೆ ಬಂದ ಕಾರಣ ಪಿಚ್ ಅನ್ನು ಕವರ್ ಮಾಡುತ್ತಿರುವ ಗ್ರೌಂಡ್ಸ್​ ಮೆನ್​ಗಳು.

8 / 8
Follow Us
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ