- Kannada News Photo gallery Cricket photos Kannada News | IPL 2023: BCCI to plant 500 trees for each dot ball
IPL 2023: ಏನಿದು ಗ್ರೀನ್ ಟ್ರೀ: ಹೊಸ ಅಭಿಯಾನಕ್ಕೆ ಚಾಲನೆ ನೀಡಿದ BCCI
IPL 2023 Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು ರುತುರಾಜ್ ಗಾಯಕ್ವಾಡ್ (60) ಅವರ ಅರ್ಧಶತಕದ ನೆರವಿನಿಂದ 172 ರನ್ ಕಲೆಹಾಕಿತು.
Updated on:May 24, 2023 | 6:03 PM

IPL 2023 GT vs CSK: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದಿದ್ದು ಸ್ಕೋರ್ ಬೋರ್ಡ್ನಲ್ಲಿ ಕಾಣಿಸಿಕೊಂಡ ವಿಶೇಷ ಗ್ರಾಫಿಕ್ಸ್.

ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಈ ಪಂದ್ಯದ ಓವರ್ಗಳ ವೇಳೆ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಗ್ರಾಫಿಕ್ಸ್ ಚಿತ್ರವನ್ನು ನೀಡಲಾಗಿತ್ತು. ಇಂತಹದೊಂದು ಚಿತ್ರ ನೀಡಲು ಮುಖ್ಯ ಕಾರಣ ಬಿಸಿಸಿಐ ಕೈಗೊಂಡಿರುವ ಹೊಸ ಅಭಿಯಾನ.

ಹೌದು, ಐಪಿಎಲ್ ಪ್ಲೇಆಫ್ಸ್ ಪಂದ್ಯಗಳ ವೇಳೆ ಬೌಲ್ ಮಾಡುವ ಪ್ರತಿ ಡಾಟ್ ಬಾಲ್ಗೆ 500 ಗಿಡಗಳನ್ನು ನೆಡುವುದಾಗಿ ಬಿಸಿಸಿಐ ಘೋಷಿಸಿದೆ. ಹೀಗಾಗಿ ಡಾಟ್ ಬಾಲ್ ಸ್ಥಾನದಲ್ಲಿ ಹಸಿರು ಮರದ ಚಿತ್ರವನ್ನು ಬಳಸಲಾಗಿದೆ.

ಇದೀಗ ಬಿಸಿಸಿಐ ಕೈಗೊಂಡಿರುವ ಹೊಸ ಅಭಿಯಾನದ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಇದರಿಂದ ಭಾರತವು ಮತ್ತಷ್ಟು ಹಸಿರುಮಯವಾಗಲಿದೆ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು ರುತುರಾಜ್ ಗಾಯಕ್ವಾಡ್ (60) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಕಲೆಹಾಕಿತು.

173 ರನ್ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 157 ರನ್ಗಳಿಗೆ ಆಲೌಟ್ ಆಗುವ ಮೂಲಕ 15 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಸಿಎಸ್ಕೆ ಫೈನಲ್ ಪ್ರವೇಶಿಸಿದೆ.
Published On - 11:31 pm, Tue, 23 May 23
























