IPL 2023: ನಮ್ಮದು ಉತ್ತಮ ತಂಡವಾಗಿರಲಿಲ್ಲ: ಫಾಫ್ ಡುಪ್ಲೆಸಿಸ್ ಮನದಾಳದ ಮಾತು

IPL 2023 Kannada: RCB ತಂಡದ ಒಟ್ಟಾರೆ ಪ್ರದರ್ಶನ ನೋಡುವುದಾದರೆ, ಈ ಬಾರಿ ಆರ್​ಸಿಬಿ 14 ಪಂದ್ಯಗಳಲ್ಲಿ ಒಟ್ಟು​ 2502 ರನ್​ಗಳನ್ನು ಕಲೆಹಾಕಿದೆ. ಇದರಲ್ಲಿ ಫಾಫ್ ಡುಪ್ಲೆಸ್ (730), ವಿರಾಟ್ ಕೊಹ್ಲಿ (639) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಕೊಡುಗೆ ಬರೋಬ್ಬರಿ 1,769 ರನ್​ಗಳು.

| Updated By: ಝಾಹಿರ್ ಯೂಸುಫ್

Updated on: May 22, 2023 | 11:07 PM

IPL 2023: 14 ಪಂದ್ಯಗಳು...7 ಸೋಲು...7 ಜಯದೊಂದಿಗೆ ಆರ್​ಸಿಬಿ ತಂಡವು 16ನೇ ಆವೃತ್ತಿಯ ಐಪಿಎಲ್​ ಅಭಿಯಾನವನ್ನು ಅಂತ್ಯಗೊಳಿಸಿದೆ. ಈ ಸೋಲಿನ ಬಗ್ಗೆ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ನಮ್ಮ ತಂಡವು ಉತ್ತಮ ತಂಡವಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

IPL 2023: 14 ಪಂದ್ಯಗಳು...7 ಸೋಲು...7 ಜಯದೊಂದಿಗೆ ಆರ್​ಸಿಬಿ ತಂಡವು 16ನೇ ಆವೃತ್ತಿಯ ಐಪಿಎಲ್​ ಅಭಿಯಾನವನ್ನು ಅಂತ್ಯಗೊಳಿಸಿದೆ. ಈ ಸೋಲಿನ ಬಗ್ಗೆ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್, ನಮ್ಮ ತಂಡವು ಉತ್ತಮ ತಂಡವಾಗಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

1 / 8
ಈ ಬಾರಿಯ ಐಪಿಎಲ್​ನಲ್ಲಿ ಕಣದಲ್ಲಿದ್ದ ಅತ್ಯುತ್ತಮ ತಂಡಗಳನ್ನು ನೋಡಿದರೆ ನಮ್ಮ ತಂಡವು ಉತ್ತಮವಾಗಿರಲಿಲ್ಲ. ಹೀಗಾಗಿಯೇ ಪ್ಲೇಆಫ್ಸ್​ ಹಂತಕ್ಕೇರುವ ಅರ್ಹತೆಯನ್ನು ಕೂಡ ಹೊಂದಿರಲಿಲ್ಲ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ಕಣದಲ್ಲಿದ್ದ ಅತ್ಯುತ್ತಮ ತಂಡಗಳನ್ನು ನೋಡಿದರೆ ನಮ್ಮ ತಂಡವು ಉತ್ತಮವಾಗಿರಲಿಲ್ಲ. ಹೀಗಾಗಿಯೇ ಪ್ಲೇಆಫ್ಸ್​ ಹಂತಕ್ಕೇರುವ ಅರ್ಹತೆಯನ್ನು ಕೂಡ ಹೊಂದಿರಲಿಲ್ಲ ಎಂದು ಡುಪ್ಲೆಸಿಸ್ ಹೇಳಿದ್ದಾರೆ.

2 / 8
ನಮ್ಮ ತಂಡದ ಹೋರಾಟವು ಲೀಗ್​ ಹಂತದಲ್ಲಿ ಕೊನೆಗೊಂಡಿರುವುದು ನಿಜವಾಗಿಯೂ ನಿರಾಸೆ ಮೂಡಿಸಿದೆ. ಆದರೆ ಒಟ್ಟಾರೆ ಪ್ರದರ್ಶನವನ್ನು ಅವಲೋಕಿಸಿದರೆ, ನಮ್ಮ ತಂಡವು ಉತ್ತಮವಾಗಿರಲಿಲ್ಲ ಎಂಬುದೇ ಸತ್ಯ.

ನಮ್ಮ ತಂಡದ ಹೋರಾಟವು ಲೀಗ್​ ಹಂತದಲ್ಲಿ ಕೊನೆಗೊಂಡಿರುವುದು ನಿಜವಾಗಿಯೂ ನಿರಾಸೆ ಮೂಡಿಸಿದೆ. ಆದರೆ ಒಟ್ಟಾರೆ ಪ್ರದರ್ಶನವನ್ನು ಅವಲೋಕಿಸಿದರೆ, ನಮ್ಮ ತಂಡವು ಉತ್ತಮವಾಗಿರಲಿಲ್ಲ ಎಂಬುದೇ ಸತ್ಯ.

3 / 8
ಇದಾಗ್ಯೂ ಈ ಬಾರಿ ಕೆಲ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದು ನಮ್ಮ ಅದೃಷ್ಟ ಎನ್ನಬೇಕು ಅಷ್ಟೇ. ಏಕೆಂದರೆ ಇಲ್ಲಿ ಒಟ್ಟಾರೆ ಪ್ರದರ್ಶನವನ್ನು ಗಮನಿಸಿದರೆ ಯಾವ ಹಂತದಲ್ಲೂ ನಾವು ಪ್ಲೇಆಫ್ಸ್ ಪ್ರವೇಶಿಸುವ ಅರ್ಹತೆಯನ್ನು ಹೊಂದಿರಲಿಲ್ಲ ಎಂದು ಆರ್​ಸಿಬಿ ನಾಯಕ ತಮ್ಮ ಮನದ ಮಾತುಗಳನ್ನಾಡಿದ್ದಾರೆ.

ಇದಾಗ್ಯೂ ಈ ಬಾರಿ ಕೆಲ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದು ನಮ್ಮ ಅದೃಷ್ಟ ಎನ್ನಬೇಕು ಅಷ್ಟೇ. ಏಕೆಂದರೆ ಇಲ್ಲಿ ಒಟ್ಟಾರೆ ಪ್ರದರ್ಶನವನ್ನು ಗಮನಿಸಿದರೆ ಯಾವ ಹಂತದಲ್ಲೂ ನಾವು ಪ್ಲೇಆಫ್ಸ್ ಪ್ರವೇಶಿಸುವ ಅರ್ಹತೆಯನ್ನು ಹೊಂದಿರಲಿಲ್ಲ ಎಂದು ಆರ್​ಸಿಬಿ ನಾಯಕ ತಮ್ಮ ಮನದ ಮಾತುಗಳನ್ನಾಡಿದ್ದಾರೆ.

4 / 8
ಆದರೂ ಈಗಲೂ ಕೊನೆಯ ಪಂದ್ಯದಲ್ಲಿನ ಸೋಲು ಕಾಡುತ್ತಿದೆ ಎಂದಿರುವ ಡುಪ್ಲೆಸಿಸ್, ಗೆಲುವಿಗಾಗಿ ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೆವು. ಆದರೆ ಅಂತಿಮ ಹಂತದಲ್ಲಿ ಎಡವಿದ್ದೇವೆ. ಇದಾಗ್ಯೂ ಈ ಬಾರಿಯ ಟೂರ್ನಿಯ ಸಕಾರಾತ್ಮಕ ವಿಷಯಗಳೆಂದರೆ, ನನ್ನ, ವಿರಾಟ್ ಕೊಹ್ಲಿಯ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಉತ್ತಮ ಜೊತೆಯಾಟಗಳು. ಇನ್ನು ಬೌಲಿಂಗ್​ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ.

ಆದರೂ ಈಗಲೂ ಕೊನೆಯ ಪಂದ್ಯದಲ್ಲಿನ ಸೋಲು ಕಾಡುತ್ತಿದೆ ಎಂದಿರುವ ಡುಪ್ಲೆಸಿಸ್, ಗೆಲುವಿಗಾಗಿ ನಾವು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೆವು. ಆದರೆ ಅಂತಿಮ ಹಂತದಲ್ಲಿ ಎಡವಿದ್ದೇವೆ. ಇದಾಗ್ಯೂ ಈ ಬಾರಿಯ ಟೂರ್ನಿಯ ಸಕಾರಾತ್ಮಕ ವಿಷಯಗಳೆಂದರೆ, ನನ್ನ, ವಿರಾಟ್ ಕೊಹ್ಲಿಯ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಉತ್ತಮ ಜೊತೆಯಾಟಗಳು. ಇನ್ನು ಬೌಲಿಂಗ್​ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದಾರೆ.

5 / 8
ಆದರೆ ಕೆಲವು ವಿಭಾಗಗಳಲ್ಲಿ ನಾವು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದೇವೆ. ಈ ಎಲ್ಲಾ ಕಾರಣಗಳಿಂದಾಗಿ ನಾವು ಪ್ಲೇಆಫ್ಸ್ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಫಾಫ್ ಡುಪ್ಲೆಸಿಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ಕೆಲವು ವಿಭಾಗಗಳಲ್ಲಿ ನಾವು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದೇವೆ. ಈ ಎಲ್ಲಾ ಕಾರಣಗಳಿಂದಾಗಿ ನಾವು ಪ್ಲೇಆಫ್ಸ್ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಫಾಫ್ ಡುಪ್ಲೆಸಿಸ್ ಬೇಸರ ವ್ಯಕ್ತಪಡಿಸಿದ್ದಾರೆ.

6 / 8
ಇನ್ನು ಆರ್​ಸಿಬಿ ತಂಡದ ಒಟ್ಟಾರೆ ಪ್ರದರ್ಶನ ನೋಡುವುದಾದರೆ, ಈ ಬಾರಿ ಆರ್​ಸಿಬಿ 14 ಪಂದ್ಯಗಳಲ್ಲಿ ಒಟ್ಟು​ 2502 ರನ್​ಗಳನ್ನು ಕಲೆಹಾಕಿದೆ. ಇದರಲ್ಲಿ ಫಾಫ್ ಡುಪ್ಲೆಸ್ (730), ವಿರಾಟ್ ಕೊಹ್ಲಿ (639) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಕೊಡುಗೆ ಬರೋಬ್ಬರಿ 1,769 ರನ್​ಗಳು. ಅಂದರೆ ಉಳಿದ ಎಲ್ಲಾ ಬ್ಯಾಟರ್​ಗಳು ಸೇರಿ ಪೇರಿಸಿದ್ದು ಕೇವಲ 733 ರನ್​ಗಳು ಮಾತ್ರ.

ಇನ್ನು ಆರ್​ಸಿಬಿ ತಂಡದ ಒಟ್ಟಾರೆ ಪ್ರದರ್ಶನ ನೋಡುವುದಾದರೆ, ಈ ಬಾರಿ ಆರ್​ಸಿಬಿ 14 ಪಂದ್ಯಗಳಲ್ಲಿ ಒಟ್ಟು​ 2502 ರನ್​ಗಳನ್ನು ಕಲೆಹಾಕಿದೆ. ಇದರಲ್ಲಿ ಫಾಫ್ ಡುಪ್ಲೆಸ್ (730), ವಿರಾಟ್ ಕೊಹ್ಲಿ (639) ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಕೊಡುಗೆ ಬರೋಬ್ಬರಿ 1,769 ರನ್​ಗಳು. ಅಂದರೆ ಉಳಿದ ಎಲ್ಲಾ ಬ್ಯಾಟರ್​ಗಳು ಸೇರಿ ಪೇರಿಸಿದ್ದು ಕೇವಲ 733 ರನ್​ಗಳು ಮಾತ್ರ.

7 / 8
ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ (19) ಅವರನ್ನು ಹೊರತುಪಡಿಸಿದರೆ ಯಾವುದೇ ಬೌಲರ್ 14 ಕ್ಕಿಂತ ಹೆಚ್ಚಿನ ವಿಕೆಟ್ ಪಡೆದಿಲ್ಲ. ಇದೇ ಕಾರಣದಿಂದಾಗಿ ಫಾಫ್ ಡುಪ್ಲೆಸಿಸ್ ಈ ಬಾರಿ ಆರ್​ಸಿಬಿ ಪ್ಲೇಆಫ್ಸ್​ಗೆ ಅರ್ಹತೆಯುವಷ್ಟು ಉತ್ತಮ ತಂಡವಾಗಿರಲಿಲ್ಲ ಎಂದಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ (19) ಅವರನ್ನು ಹೊರತುಪಡಿಸಿದರೆ ಯಾವುದೇ ಬೌಲರ್ 14 ಕ್ಕಿಂತ ಹೆಚ್ಚಿನ ವಿಕೆಟ್ ಪಡೆದಿಲ್ಲ. ಇದೇ ಕಾರಣದಿಂದಾಗಿ ಫಾಫ್ ಡುಪ್ಲೆಸಿಸ್ ಈ ಬಾರಿ ಆರ್​ಸಿಬಿ ಪ್ಲೇಆಫ್ಸ್​ಗೆ ಅರ್ಹತೆಯುವಷ್ಟು ಉತ್ತಮ ತಂಡವಾಗಿರಲಿಲ್ಲ ಎಂದಿದ್ದಾರೆ.

8 / 8
Follow us
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್