AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: RCB ವಿರುದ್ಧ ಅತೀ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ ಯಾರು ಗೊತ್ತಾ?

IPL 2023 RCB Kannada: ಆರ್​ಸಿಬಿ ತಂಡದ ಪ್ಲೇಆಫ್ ಹಾದಿ ಸುಗಮವಲ್ಲ. ಏಕೆಂದರೆ ಆರ್​ಸಿಬಿ ಗೆದ್ದಿರುವುದು ಹೋಮ್​ ಗ್ರೌಂಡ್​ನಲ್ಲಿ. ಅಂದರೆ ಏಳು ಪಂದ್ಯಗಳನ್ನು ವಿವಿಧ ತಂಡಗಳ ತವರು ಮೈದಾನದಲ್ಲಿ ಆಡಬೇಕಿದೆ.

TV9 Web
| Edited By: |

Updated on: May 07, 2023 | 6:33 PM

Share
IPL 2023: ಐಪಿಎಲ್ ಶುರುವಾಗಿ 15 ವರ್ಷಗಳೇ ಕಳೆದಿವೆ. ಆದರೆ ಆರ್​ಸಿಬಿ ತಂಡದ ಕಪ್ ಗೆಲ್ಲುವ ಕನಸು ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಇದೀಗ 16ನೇ ಸೀಸನ್ ಆಡುತ್ತಿರುವ ಆರ್​ಸಿಬಿ 10 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿದೆ. ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್​ಗೆ ನೇರ ಎಂಟ್ರಿ ಕೊಡಬಹುದು.

IPL 2023: ಐಪಿಎಲ್ ಶುರುವಾಗಿ 15 ವರ್ಷಗಳೇ ಕಳೆದಿವೆ. ಆದರೆ ಆರ್​ಸಿಬಿ ತಂಡದ ಕಪ್ ಗೆಲ್ಲುವ ಕನಸು ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಇದೀಗ 16ನೇ ಸೀಸನ್ ಆಡುತ್ತಿರುವ ಆರ್​ಸಿಬಿ 10 ಪಂದ್ಯಗಳಲ್ಲಿ 5 ರಲ್ಲಿ ಜಯ ಸಾಧಿಸಿದೆ. ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಮಾತ್ರ ಪ್ಲೇಆಫ್​ಗೆ ನೇರ ಎಂಟ್ರಿ ಕೊಡಬಹುದು.

1 / 10
ಆದರೆ ಆರ್​ಸಿಬಿ ತಂಡದ ಪ್ಲೇಆಫ್ ಹಾದಿ ಸುಗಮವಲ್ಲ. ಏಕೆಂದರೆ ಆರ್​ಸಿಬಿ 5 ರಲ್ಲಿ 3 ಪಂದ್ಯ ಗೆದ್ದಿರುವುದು ಹೋಮ್​ ಗ್ರೌಂಡ್​ನಲ್ಲಿ. ಅಂದರೆ ಇನ್ನುಳಿದ 4 ರಲ್ಲಿ 3 ಪಂದ್ಯಗಳನ್ನು ವಿವಿಧ ತಂಡಗಳ ತವರು ಮೈದಾನದಲ್ಲಿ ಆಡಬೇಕಿದೆ. ಆದರೆ ಆ ಪಂದ್ಯಗಳಲ್ಲಿ ಗೆಲ್ಲಲು ಆರ್​ಸಿಬಿ ತಂಡವು ಕೆಲ ಆಟಗಾರರ ವಿರುದ್ಧ ಪ್ರತಿತಂತ್ರಗಳನ್ನು ರೂಪಿಸಲೇಬೇಕು.

ಆದರೆ ಆರ್​ಸಿಬಿ ತಂಡದ ಪ್ಲೇಆಫ್ ಹಾದಿ ಸುಗಮವಲ್ಲ. ಏಕೆಂದರೆ ಆರ್​ಸಿಬಿ 5 ರಲ್ಲಿ 3 ಪಂದ್ಯ ಗೆದ್ದಿರುವುದು ಹೋಮ್​ ಗ್ರೌಂಡ್​ನಲ್ಲಿ. ಅಂದರೆ ಇನ್ನುಳಿದ 4 ರಲ್ಲಿ 3 ಪಂದ್ಯಗಳನ್ನು ವಿವಿಧ ತಂಡಗಳ ತವರು ಮೈದಾನದಲ್ಲಿ ಆಡಬೇಕಿದೆ. ಆದರೆ ಆ ಪಂದ್ಯಗಳಲ್ಲಿ ಗೆಲ್ಲಲು ಆರ್​ಸಿಬಿ ತಂಡವು ಕೆಲ ಆಟಗಾರರ ವಿರುದ್ಧ ಪ್ರತಿತಂತ್ರಗಳನ್ನು ರೂಪಿಸಲೇಬೇಕು.

2 / 10
ಇನ್ನು ಪ್ಲೇಆಫ್ ಪ್ರವೇಶಿಸಿದರೂ ಆರ್​ಸಿಬಿ ಕೆಲ ಆಟಗಾರರ ಬಗ್ಗೆ ಎಚ್ಚರಿಕೆಯಿಂದರಬೇಕಾಗುತ್ತದೆ. ಏಕೆಂದರೆ ಐಪಿಎಲ್ ಆರಂಭದಿಂದಲೂ 6 ಆಟಗಾರರು ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇವರಲ್ಲಿ ಐವರು ಆಟಗಾರರು ಈಗಲೂ ಐಪಿಎಲ್​ನ ಭಾಗವಾಗಿದ್ದಾರೆ. ಹಾಗಿದ್ರೆ ಆರ್​ಸಿಬಿ ವಿರುದ್ಧ ಅತೀ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ಗಳು ಯಾರೆಲ್ಲಾ ಎಂದು ನೋಡೋಣ...

ಇನ್ನು ಪ್ಲೇಆಫ್ ಪ್ರವೇಶಿಸಿದರೂ ಆರ್​ಸಿಬಿ ಕೆಲ ಆಟಗಾರರ ಬಗ್ಗೆ ಎಚ್ಚರಿಕೆಯಿಂದರಬೇಕಾಗುತ್ತದೆ. ಏಕೆಂದರೆ ಐಪಿಎಲ್ ಆರಂಭದಿಂದಲೂ 6 ಆಟಗಾರರು ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇವರಲ್ಲಿ ಐವರು ಆಟಗಾರರು ಈಗಲೂ ಐಪಿಎಲ್​ನ ಭಾಗವಾಗಿದ್ದಾರೆ. ಹಾಗಿದ್ರೆ ಆರ್​ಸಿಬಿ ವಿರುದ್ಧ ಅತೀ ಹೆಚ್ಚು ರನ್​ ಕಲೆಹಾಕಿದ ಬ್ಯಾಟರ್​ಗಳು ಯಾರೆಲ್ಲಾ ಎಂದು ನೋಡೋಣ...

3 / 10
1- ಡೇವಿಡ್ ವಾರ್ನರ್: ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಆರ್​ಸಿಬಿ ಪಾಲಿನ ಸಿಂಹಸ್ವಪ್ನ ಎಂದರೆ ತಪ್ಪಾಗಲಾರದು. ಏಕೆಂದರೆ ಆರ್​ಸಿಬಿ ವಿರುದ್ಧ 23 ಇನಿಂಗ್ಸ್ ಆಡಿರುವ ವಾರ್ನರ್ 2 ಭರ್ಜರಿ ಶತಕ ಹಾಗೂ 9 ಅರ್ಧಶತಕಗಳೊಂದಿಗೆ ಒಟ್ಟು 984 ರನ್​ ಕಲೆಹಾಕಿದ್ದಾರೆ. ಹೀಗಾಗಿಯೇ ಆರ್​ಸಿಬಿ ಪಾಲಿಗೆ ಡೇವಿಡ್ ವಾರ್ನರ್ ಡೇಂಜರಸ್ ಆಟಗಾರ.

1- ಡೇವಿಡ್ ವಾರ್ನರ್: ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಆರ್​ಸಿಬಿ ಪಾಲಿನ ಸಿಂಹಸ್ವಪ್ನ ಎಂದರೆ ತಪ್ಪಾಗಲಾರದು. ಏಕೆಂದರೆ ಆರ್​ಸಿಬಿ ವಿರುದ್ಧ 23 ಇನಿಂಗ್ಸ್ ಆಡಿರುವ ವಾರ್ನರ್ 2 ಭರ್ಜರಿ ಶತಕ ಹಾಗೂ 9 ಅರ್ಧಶತಕಗಳೊಂದಿಗೆ ಒಟ್ಟು 984 ರನ್​ ಕಲೆಹಾಕಿದ್ದಾರೆ. ಹೀಗಾಗಿಯೇ ಆರ್​ಸಿಬಿ ಪಾಲಿಗೆ ಡೇವಿಡ್ ವಾರ್ನರ್ ಡೇಂಜರಸ್ ಆಟಗಾರ.

4 / 10
2- ಎಂಎಸ್ ಧೋನಿ: ಸಿಎಸ್​ಕೆ ತಂಡದ ನಾಯಕ ಧೋನಿ ಕೂಡ ಆರ್​ಸಿಬಿ ವಿರುದ್ಧ ಅಬ್ಬರಿಸುತ್ತಾ ಬಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಇದುವರೆಗೆ 33 ಇನಿಂಗ್ಸ್ ಆಡಿರುವ ಧೋನಿ 4 ಅರ್ಧಶತಕಗಳೊಂದಿಗೆ ಒಟ್ಟು 850 ರನ್​ ಕಲೆಹಾಕಿದ್ದಾರೆ.

2- ಎಂಎಸ್ ಧೋನಿ: ಸಿಎಸ್​ಕೆ ತಂಡದ ನಾಯಕ ಧೋನಿ ಕೂಡ ಆರ್​ಸಿಬಿ ವಿರುದ್ಧ ಅಬ್ಬರಿಸುತ್ತಾ ಬಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಇದುವರೆಗೆ 33 ಇನಿಂಗ್ಸ್ ಆಡಿರುವ ಧೋನಿ 4 ಅರ್ಧಶತಕಗಳೊಂದಿಗೆ ಒಟ್ಟು 850 ರನ್​ ಕಲೆಹಾಕಿದ್ದಾರೆ.

5 / 10
3- ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಆರ್​ಸಿಬಿ ವಿರುದ್ಧ 30 ಇನಿಂಗ್ಸ್​ಗಳಲ್ಲಿ 786 ರನ್​ ಕಲೆಹಾಕಿದ್ದಾರೆ. ಈ ವೇಳೆ 7 ಅರ್ಧಶತಕಗಳನ್ನು ಬಾರಿಸಿದ್ದರು.

3- ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಆರ್​ಸಿಬಿ ವಿರುದ್ಧ 30 ಇನಿಂಗ್ಸ್​ಗಳಲ್ಲಿ 786 ರನ್​ ಕಲೆಹಾಕಿದ್ದಾರೆ. ಈ ವೇಳೆ 7 ಅರ್ಧಶತಕಗಳನ್ನು ಬಾರಿಸಿದ್ದರು.

6 / 10
4- ಅಂಬಾಟಿ ರಾಯುಡು: ಸಿಎಸ್​ಕೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಬಾಟಿ ರಾಯುಡು ಕೂಡ ಆರ್​ಸಿಬಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಾ ಬಂದಿದ್ದಾರೆ. ಆರ್​ಸಿಬಿ ವಿರುದ್ಧ ಇದುವರೆಗೆ 27 ಇನಿಂಗ್ಸ್ ಆಡಿರುವ ರಾಯುಡು ಒಟ್ಟು 753 ರನ್​ ಕಲೆಹಾಕಿದ್ದಾರೆ.

4- ಅಂಬಾಟಿ ರಾಯುಡು: ಸಿಎಸ್​ಕೆ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಬಾಟಿ ರಾಯುಡು ಕೂಡ ಆರ್​ಸಿಬಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಾ ಬಂದಿದ್ದಾರೆ. ಆರ್​ಸಿಬಿ ವಿರುದ್ಧ ಇದುವರೆಗೆ 27 ಇನಿಂಗ್ಸ್ ಆಡಿರುವ ರಾಯುಡು ಒಟ್ಟು 753 ರನ್​ ಕಲೆಹಾಕಿದ್ದಾರೆ.

7 / 10
5- ಶಿಖರ್ ಧವನ್: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಕೂಡ ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆ ಹೊಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 26 ಇನಿಂಗ್ಸ್ ಆಡಿರುವ ಧವನ್ 6 ಅರ್ಧಶತಕಗಳೊಂದಿಗೆ ಒಟ್ಟು 753 ರನ್​ ಕಲೆಹಾಕಿದ್ದಾರೆ. ಹೀಗಾಗಿ ಆರ್​ಸಿಬಿ ಪಾಲಿಗೆ ಧವನ್ ಕೂಡ ಮುಳುವಾಗಬಹುದು.

5- ಶಿಖರ್ ಧವನ್: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಕೂಡ ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆ ಹೊಂದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 26 ಇನಿಂಗ್ಸ್ ಆಡಿರುವ ಧವನ್ 6 ಅರ್ಧಶತಕಗಳೊಂದಿಗೆ ಒಟ್ಟು 753 ರನ್​ ಕಲೆಹಾಕಿದ್ದಾರೆ. ಹೀಗಾಗಿ ಆರ್​ಸಿಬಿ ಪಾಲಿಗೆ ಧವನ್ ಕೂಡ ಮುಳುವಾಗಬಹುದು.

8 / 10
ಸುರೇಶ್ ರೈನಾ- ಇನ್ನು ಈ ಪಟ್ಟಿಯಲ್ಲಿ ಸಿಎಸ್​ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಇದ್ದು, ಅವರು 30 ಇನಿಂಗ್ಸ್​ಗಳಲ್ಲಿ 796 ರನ್ ಬಾರಿಸಿದ್ದಾರೆ. ಇದಾಗ್ಯೂ ರೈನಾ ಐಪಿಎಲ್​ಗೆ ವಿದಾಯ ಹೇಳಿರುವ ಕಾರಣ ಆರ್​ಸಿಬಿಗೆ ಎಡಗೈ ದಾಂಡಿಗನ ಚಿಂತೆಯಿಲ್ಲ ಎನ್ನಬಹುದು.

ಸುರೇಶ್ ರೈನಾ- ಇನ್ನು ಈ ಪಟ್ಟಿಯಲ್ಲಿ ಸಿಎಸ್​ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಇದ್ದು, ಅವರು 30 ಇನಿಂಗ್ಸ್​ಗಳಲ್ಲಿ 796 ರನ್ ಬಾರಿಸಿದ್ದಾರೆ. ಇದಾಗ್ಯೂ ರೈನಾ ಐಪಿಎಲ್​ಗೆ ವಿದಾಯ ಹೇಳಿರುವ ಕಾರಣ ಆರ್​ಸಿಬಿಗೆ ಎಡಗೈ ದಾಂಡಿಗನ ಚಿಂತೆಯಿಲ್ಲ ಎನ್ನಬಹುದು.

9 / 10
ಅಂದರೆ ಇಲ್ಲಿ ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ಹೊಂದಿರುವ ತಂಡಗಳಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ಇತ್ತ ಆರ್​ಸಿಬಿ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ ರೋಹಿತ್ ಶರ್ಮಾ ತಂಡದಲ್ಲಿದ್ದಾರೆ. ಹೀಗಾಗಿ ಹಿಟ್​ಮ್ಯಾನ್​ನ ನಿಯಂತ್ರಿಸಲು ಆರ್​ಸಿಬಿ ವಿಶೇಷ ರಣತಂತ್ರ ರೂಪಿಸಬೇಕಾದ ಅನಿವಾರ್ಯತೆ ಇದೆ.

ಅಂದರೆ ಇಲ್ಲಿ ಆರ್​ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ಹೊಂದಿರುವ ತಂಡಗಳಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯವು ಉಭಯ ತಂಡಗಳಿಗೂ ನಿರ್ಣಾಯಕ. ಇತ್ತ ಆರ್​ಸಿಬಿ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ ರೋಹಿತ್ ಶರ್ಮಾ ತಂಡದಲ್ಲಿದ್ದಾರೆ. ಹೀಗಾಗಿ ಹಿಟ್​ಮ್ಯಾನ್​ನ ನಿಯಂತ್ರಿಸಲು ಆರ್​ಸಿಬಿ ವಿಶೇಷ ರಣತಂತ್ರ ರೂಪಿಸಬೇಕಾದ ಅನಿವಾರ್ಯತೆ ಇದೆ.

10 / 10
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ