IPL 2023: ಪಂದ್ಯದ ನಡುವೆ ಮೈದಾನದಲ್ಲೇ ಜಗಳಕ್ಕಿಳಿದ ಡೆಲ್ಲಿ ಬಾಯ್ಸ್​..!

| Updated By: ಝಾಹಿರ್ ಯೂಸುಫ್

Updated on: Apr 16, 2023 | 11:30 PM

IPL 2023 Kannada: ಐಪಿಎಲ್​ನ 22ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿತ್ತು.

1 / 7
IPL 2023: ಐಪಿಎಲ್​ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇತ್ತ ಆಟಗಾರರ ನಡುವೆ ಕೂಡ ಪೈಪೋಟಿ ಜೋರಾಗುತ್ತಿದೆ. ಅಂತಹದೊಂದು ಪೈಪೋಟಿ ನಡುವೆ ಇಬ್ಬರು ಆಟಗಾರರು ಮೈದಾನದಲ್ಲೇ ಜಗಳಕ್ಕಿಳಿದ ಘಟನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದೆ.

IPL 2023: ಐಪಿಎಲ್​ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇತ್ತ ಆಟಗಾರರ ನಡುವೆ ಕೂಡ ಪೈಪೋಟಿ ಜೋರಾಗುತ್ತಿದೆ. ಅಂತಹದೊಂದು ಪೈಪೋಟಿ ನಡುವೆ ಇಬ್ಬರು ಆಟಗಾರರು ಮೈದಾನದಲ್ಲೇ ಜಗಳಕ್ಕಿಳಿದ ಘಟನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದೆ.

2 / 7
ಐಪಿಎಲ್​ನ 22ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ವೆಂಕಟೇಶ್ ಅಯ್ಯರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೇತರಿಸಿಕೊಂಡಿತು.

ಐಪಿಎಲ್​ನ 22ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಇದಾಗ್ಯೂ ವೆಂಕಟೇಶ್ ಅಯ್ಯರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಚೇತರಿಸಿಕೊಂಡಿತು.

3 / 7
ಆದರೆ 2ನೇ ವಿಕೆಟ್ ಬೀಳುತ್ತಿದ್ದಂತೆ ಕೆಕೆಆರ್ ನಾಯಕ ನಿತೀಶ್ ರಾಣಾ ಕ್ರೀಸ್​ಗೆ ಆಗಮಿಸಿದ್ದರು. ಆದರೆ 5 ರನ್​ಗಳಿಸಿದ ರಾಣಾ ಸ್ಪಿನ್ನರ್ ಹೃತಿಕ್ ಶೋಕೀನ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಇತ್ತ ವಿಕೆಟ್ ಸಿಗುತ್ತಿದ್ದಂತೆ ಹೃತಿಕ್ ರಾಣಾರನ್ನು ಕೆಣಕಿದ್ದಾರೆ.

ಆದರೆ 2ನೇ ವಿಕೆಟ್ ಬೀಳುತ್ತಿದ್ದಂತೆ ಕೆಕೆಆರ್ ನಾಯಕ ನಿತೀಶ್ ರಾಣಾ ಕ್ರೀಸ್​ಗೆ ಆಗಮಿಸಿದ್ದರು. ಆದರೆ 5 ರನ್​ಗಳಿಸಿದ ರಾಣಾ ಸ್ಪಿನ್ನರ್ ಹೃತಿಕ್ ಶೋಕೀನ್ ಎಸೆತದಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಇತ್ತ ವಿಕೆಟ್ ಸಿಗುತ್ತಿದ್ದಂತೆ ಹೃತಿಕ್ ರಾಣಾರನ್ನು ಕೆಣಕಿದ್ದಾರೆ.

4 / 7
ಇದರಿಂದ ಕೆರಳಿದ ನಿತೀಶ್ ರಾಣಾ ಹೃತಿಕ್ ಶೋಕೀನ್​ರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಇದರಿಂದ ಮತ್ತಷ್ಟು ಕೆರಳಿದ ನಿತೀಶ್ ರಾಣಾ ಜಗಳಕ್ಕಿಳಿದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ನಿತೀಶ್ ರಾಣಾ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದಾರೆ.

ಇದರಿಂದ ಕೆರಳಿದ ನಿತೀಶ್ ರಾಣಾ ಹೃತಿಕ್ ಶೋಕೀನ್​ರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಇದರಿಂದ ಮತ್ತಷ್ಟು ಕೆರಳಿದ ನಿತೀಶ್ ರಾಣಾ ಜಗಳಕ್ಕಿಳಿದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ನಿತೀಶ್ ರಾಣಾ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದಾರೆ.

5 / 7
ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ನಿತೀಶ್ ರಾಣಾ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದಾರೆ.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ನಿತೀಶ್ ರಾಣಾ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದಾರೆ.

6 / 7
ವಿಶೇಷ ಎಂದರೆ ನಿತೀಶ್ ರಾಣಾ ಹಾಗೂ ಹೃತಿಕ್ ಶೋಕೀನ್ ಇಬ್ಬರು ದೆಹಲಿ ಮೂಲದ ಆಟಗಾರರು. ಇಬ್ಬರು ದೆಹಲಿ ಪರ ರಣಜಿ ಆಡುತ್ತಿದ್ದಾರೆ. ಇದಾಗ್ಯೂ ಐಪಿಎಲ್ ಪಂದ್ಯದ ಮೂಲಕ ಒಂದೇ ತಂಡದ ಆಟಗಾರರು ಕಿರಿಕ್​ಗೆ ಇಳಿದಿರುವುದು ಅಚ್ಚರಿ ಮೂಡಿಸಿದೆ.

ವಿಶೇಷ ಎಂದರೆ ನಿತೀಶ್ ರಾಣಾ ಹಾಗೂ ಹೃತಿಕ್ ಶೋಕೀನ್ ಇಬ್ಬರು ದೆಹಲಿ ಮೂಲದ ಆಟಗಾರರು. ಇಬ್ಬರು ದೆಹಲಿ ಪರ ರಣಜಿ ಆಡುತ್ತಿದ್ದಾರೆ. ಇದಾಗ್ಯೂ ಐಪಿಎಲ್ ಪಂದ್ಯದ ಮೂಲಕ ಒಂದೇ ತಂಡದ ಆಟಗಾರರು ಕಿರಿಕ್​ಗೆ ಇಳಿದಿರುವುದು ಅಚ್ಚರಿ ಮೂಡಿಸಿದೆ.

7 / 7
ಅಂದಹಾಗೆ ಡೆಲ್ಲಿ ಬಾಯ್ಸ್ ಐಪಿಎಲ್​ನಲ್ಲಿ ಜಗಳಕ್ಕಿಳಿಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2013 ರಲ್ಲಿ ದೆಹಲಿ ಮೂಲದ ಆಟಗಾರರಾದ ಗೌತಮ್ ಗಂಭೀರ್ (ಕೆಕೆಆರ್​) ವಿರಾಟ್ ಕೊಹ್ಲಿ (ಆರ್​ಸಿಬಿ) ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. ಇದೀಗ ದೆಹಲಿ ಮೂಲದ ಹೃತಿಕ್ ಶೋಕೀನ್ ಹಾಗೂ ನಿತೀಶ್ ರಾಣಾ ಅದನ್ನು ಪುನರಾವರ್ತಿಸಿದ್ದಾರೆ.

ಅಂದಹಾಗೆ ಡೆಲ್ಲಿ ಬಾಯ್ಸ್ ಐಪಿಎಲ್​ನಲ್ಲಿ ಜಗಳಕ್ಕಿಳಿಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2013 ರಲ್ಲಿ ದೆಹಲಿ ಮೂಲದ ಆಟಗಾರರಾದ ಗೌತಮ್ ಗಂಭೀರ್ (ಕೆಕೆಆರ್​) ವಿರಾಟ್ ಕೊಹ್ಲಿ (ಆರ್​ಸಿಬಿ) ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು. ಇದೀಗ ದೆಹಲಿ ಮೂಲದ ಹೃತಿಕ್ ಶೋಕೀನ್ ಹಾಗೂ ನಿತೀಶ್ ರಾಣಾ ಅದನ್ನು ಪುನರಾವರ್ತಿಸಿದ್ದಾರೆ.