Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?

IPL 2024 Auction: ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಈ ಹರಾಜಿಗಾಗಿ ಒಟ್ಟು 1166 ಆಟಗಾರರು ಹೆಸರು ನೀಡಿದ್ದಾರೆ. ಇತ್ತ 10 ತಂಡಗಳಲ್ಲಿ ಒಟ್ಟು 77 ಸ್ಲಾಟ್​ಗಳು ಮಾತ್ರ ಖಾಲಿಯಿದೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಕೆಲವೇ ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Dec 10, 2023 | 9:22 PM

IPL 2024: ಐಪಿಎಲ್​ ಸೀಸನ್ 17 ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ಧತೆಯಲ್ಲಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತ್ತ ಈ ಹರಾಜಿಗಾಗಿ ಆರ್​ಸಿಬಿ (RCB) ಕೂಡ ಭರ್ಜರಿ ಪ್ಲ್ಯಾನ್​ನಲ್ಲಿದೆ.

IPL 2024: ಐಪಿಎಲ್​ ಸೀಸನ್ 17 ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ಧತೆಯಲ್ಲಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತ್ತ ಈ ಹರಾಜಿಗಾಗಿ ಆರ್​ಸಿಬಿ (RCB) ಕೂಡ ಭರ್ಜರಿ ಪ್ಲ್ಯಾನ್​ನಲ್ಲಿದೆ.

1 / 8
ಏಕೆಂದರೆ ಈ ಬಾರಿಯ ಹರಾಜಿನ ಮೂಲಕ ಆರ್​ಸಿಬಿ ತಂಡವು ಒಟ್ಟು 6 ಆಟಗಾರರನ್ನು ಖರೀದಿಸಬಹುದು. ಆದರೆ ಈ ಆರು ಆಟಗಾರರಲ್ಲಿ ಮೂವರು ವಿದೇಶಿ ಆಟಗಾರರಿಗೆ ಮಣೆ ಹಾಕಬೇಕಾಗುತ್ತದೆ. ಆದರೆ ಇತ್ತ ಆರ್​ಸಿಬಿ ಬಳಿ ಇರುವುದು 23.25 ಕೋಟಿ ರೂ. ಮಾತ್ರ. ಹೀಗಾಗಿ ಜಾಣತನದೊಂದಿಗೆ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.

ಏಕೆಂದರೆ ಈ ಬಾರಿಯ ಹರಾಜಿನ ಮೂಲಕ ಆರ್​ಸಿಬಿ ತಂಡವು ಒಟ್ಟು 6 ಆಟಗಾರರನ್ನು ಖರೀದಿಸಬಹುದು. ಆದರೆ ಈ ಆರು ಆಟಗಾರರಲ್ಲಿ ಮೂವರು ವಿದೇಶಿ ಆಟಗಾರರಿಗೆ ಮಣೆ ಹಾಕಬೇಕಾಗುತ್ತದೆ. ಆದರೆ ಇತ್ತ ಆರ್​ಸಿಬಿ ಬಳಿ ಇರುವುದು 23.25 ಕೋಟಿ ರೂ. ಮಾತ್ರ. ಹೀಗಾಗಿ ಜಾಣತನದೊಂದಿಗೆ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.

2 / 8
ಒಂದು ವೇಳೆ ಹರಾಜಿನ ಸಮಯದಲ್ಲಿ ಮೈಮರೆತರೆ ಈ ಹಿಂದಿನಂತೆ ಈ ಬಾರಿ ಕೂಡ ಆರ್​ಸಿಬಿ ತಂಡಕ್ಕೆ ಕಳಪೆ ಆಟಗಾರರು ಸೇರ್ಪಡೆಯಾಗಬಹುದು. ಏಕೆಂದರೆ ಆರ್​ಸಿಬಿ ಕಳೆದ 16 ಸೀಸನ್​ಗಳಲ್ಲಿ ಕೆಲ ಆಟಗಾರರಿಗೆ ದುಬಾರಿ ಮೊತ್ತ ನೀಡಿ ಸಂಕಷ್ಟಕ್ಕೆ ಸಿಲುಕಿದೆ. ಹೀಗೆ ಕಳೆದ ಹದಿನಾರು ಆವೃತ್ತಿಗಳ ಹರಾಜಿನಲ್ಲಿ ಆರ್​ಸಿಬಿ ಮಾಡಿದ ಅತ್ಯಂತ ಕೆಟ್ಟ ಆಯ್ಕೆಗಳು ಯಾವುವು ಎಂದು ನೋಡುವುದಾದರೆ...

ಒಂದು ವೇಳೆ ಹರಾಜಿನ ಸಮಯದಲ್ಲಿ ಮೈಮರೆತರೆ ಈ ಹಿಂದಿನಂತೆ ಈ ಬಾರಿ ಕೂಡ ಆರ್​ಸಿಬಿ ತಂಡಕ್ಕೆ ಕಳಪೆ ಆಟಗಾರರು ಸೇರ್ಪಡೆಯಾಗಬಹುದು. ಏಕೆಂದರೆ ಆರ್​ಸಿಬಿ ಕಳೆದ 16 ಸೀಸನ್​ಗಳಲ್ಲಿ ಕೆಲ ಆಟಗಾರರಿಗೆ ದುಬಾರಿ ಮೊತ್ತ ನೀಡಿ ಸಂಕಷ್ಟಕ್ಕೆ ಸಿಲುಕಿದೆ. ಹೀಗೆ ಕಳೆದ ಹದಿನಾರು ಆವೃತ್ತಿಗಳ ಹರಾಜಿನಲ್ಲಿ ಆರ್​ಸಿಬಿ ಮಾಡಿದ ಅತ್ಯಂತ ಕೆಟ್ಟ ಆಯ್ಕೆಗಳು ಯಾವುವು ಎಂದು ನೋಡುವುದಾದರೆ...

3 / 8
ಟೈಮಲ್ ಮಿಲ್ಸ್: 2017 ರ ಹರಾಜಿನಲ್ಲಿ ಆರ್​ಸಿಬಿ ತಂಡವು ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್​​ರನ್ನು ಬರೋಬ್ಬರಿ 12 ಕೋಟಿ ರೂ.ಗೆ ಖರೀದಿಸಿತ್ತು. ಅಂದು 5 ಪಂದ್ಯಗಳನ್ನಾಡಿದ್ದ ಮಿಲ್ಸ್ 8.5 ಸರಾಸರಿಯಲ್ಲಿ ರನ್ ನೀಡಿ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದರು.

ಟೈಮಲ್ ಮಿಲ್ಸ್: 2017 ರ ಹರಾಜಿನಲ್ಲಿ ಆರ್​ಸಿಬಿ ತಂಡವು ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್​​ರನ್ನು ಬರೋಬ್ಬರಿ 12 ಕೋಟಿ ರೂ.ಗೆ ಖರೀದಿಸಿತ್ತು. ಅಂದು 5 ಪಂದ್ಯಗಳನ್ನಾಡಿದ್ದ ಮಿಲ್ಸ್ 8.5 ಸರಾಸರಿಯಲ್ಲಿ ರನ್ ನೀಡಿ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದರು.

4 / 8
ಕೈಲ್ ಜೇಮಿಸನ್: 2021 ರ ಹರಾಜಿನಲ್ಲಿ ನ್ಯೂಝಿಲೆಂಡ್ ವೇಗಿ ಕೈಲ್ ಜೇಮಿಸನ್ ಅವರನ್ನು ಆರ್​ಸಿಬಿ ಖರೀದಿಸಿದ್ದು ಬರೋಬ್ಬರಿ 15 ಕೋಟಿ ರೂ.ಗೆ. ಆರ್​ಸಿಬಿ ಪರ 9 ಪಂದ್ಯಗಳನ್ನಾಡಿದ್ದ ಜೇಮಿಸನ್ ಕೇವಲ 9 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.

ಕೈಲ್ ಜೇಮಿಸನ್: 2021 ರ ಹರಾಜಿನಲ್ಲಿ ನ್ಯೂಝಿಲೆಂಡ್ ವೇಗಿ ಕೈಲ್ ಜೇಮಿಸನ್ ಅವರನ್ನು ಆರ್​ಸಿಬಿ ಖರೀದಿಸಿದ್ದು ಬರೋಬ್ಬರಿ 15 ಕೋಟಿ ರೂ.ಗೆ. ಆರ್​ಸಿಬಿ ಪರ 9 ಪಂದ್ಯಗಳನ್ನಾಡಿದ್ದ ಜೇಮಿಸನ್ ಕೇವಲ 9 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.

5 / 8
ಸೌರಭ್ ತಿವಾರಿ: 2011 ರಲ್ಲಿ ಆರ್​ಸಿಬಿ 7.36 ಕೋಟಿ ರೂ.ಗೆ ಎಡಗೈ ದಾಂಡಿಗ ಸೌರಭ್ ತಿವಾರಿಯನ್ನು ಖರೀದಿಸಿತ್ತು. ಆದರೆ ಆರ್​ಸಿಬಿ ಪರ ಮೂರು ಸೀಸನ್​ ಆಡಿದ ತಿವಾರಿ 22.23 ರ ಸರಾಸರಿಯಲ್ಲಿ ಕೇವಲ 578 ರನ್​ ಕಲೆಹಾಕಿದ್ದರು.

ಸೌರಭ್ ತಿವಾರಿ: 2011 ರಲ್ಲಿ ಆರ್​ಸಿಬಿ 7.36 ಕೋಟಿ ರೂ.ಗೆ ಎಡಗೈ ದಾಂಡಿಗ ಸೌರಭ್ ತಿವಾರಿಯನ್ನು ಖರೀದಿಸಿತ್ತು. ಆದರೆ ಆರ್​ಸಿಬಿ ಪರ ಮೂರು ಸೀಸನ್​ ಆಡಿದ ತಿವಾರಿ 22.23 ರ ಸರಾಸರಿಯಲ್ಲಿ ಕೇವಲ 578 ರನ್​ ಕಲೆಹಾಕಿದ್ದರು.

6 / 8
ಚೇತೇಶ್ವರ ಪೂಜಾರ: 2011 ರ ಹರಾಜಿನಲ್ಲಿ ಆರ್​ಸಿಬಿ ಚೇತೇಶ್ವರ ಪೂಜಾರ ಅವರನ್ನು ಬರೋಬ್ಬರಿ 3.22 ಕೋಟಿ ರೂ. ಖರೀದಿಸಿತ್ತು. ಮೂರು ಸೀಸನ್​ಗಳಲ್ಲಿ ಆರ್​ಸಿಬಿ ಪರ 14 ಪಂದ್ಯಗಳನ್ನಾಡಿದ್ದ ಪೂಜಾರ ಕಲೆಹಾಕಿದ್ದು 14.3 ರ ಸರಾರಿಯಲ್ಲಿ ಕೇವಲ 143 ರನ್​ಗಳು ಮಾತ್ರ.

ಚೇತೇಶ್ವರ ಪೂಜಾರ: 2011 ರ ಹರಾಜಿನಲ್ಲಿ ಆರ್​ಸಿಬಿ ಚೇತೇಶ್ವರ ಪೂಜಾರ ಅವರನ್ನು ಬರೋಬ್ಬರಿ 3.22 ಕೋಟಿ ರೂ. ಖರೀದಿಸಿತ್ತು. ಮೂರು ಸೀಸನ್​ಗಳಲ್ಲಿ ಆರ್​ಸಿಬಿ ಪರ 14 ಪಂದ್ಯಗಳನ್ನಾಡಿದ್ದ ಪೂಜಾರ ಕಲೆಹಾಕಿದ್ದು 14.3 ರ ಸರಾರಿಯಲ್ಲಿ ಕೇವಲ 143 ರನ್​ಗಳು ಮಾತ್ರ.

7 / 8
ಕ್ರಿಸ್ ವೋಕ್ಸ್: 2018 ರಲ್ಲಿ ಆರ್​ಸಿಬಿ ಕ್ರಿಸ್ ವೋಕ್ಸ್​ ಅವರನ್ನು 7.4 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಆರ್​ಸಿಬಿ ಪರ 5 ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ವೇಗಿ ಪ್ರತಿ ಓವರ್​ಗೆ 10.36 ಸರಾಸರಿಯಲ್ಲಿ ರನ್ ನೀಡಿ 8 ವಿಕೆಟ್​ಗಳನ್ನಲಷ್ಟೇ ಕಬಳಿಸಿದ್ದರು.

ಕ್ರಿಸ್ ವೋಕ್ಸ್: 2018 ರಲ್ಲಿ ಆರ್​ಸಿಬಿ ಕ್ರಿಸ್ ವೋಕ್ಸ್​ ಅವರನ್ನು 7.4 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಆರ್​ಸಿಬಿ ಪರ 5 ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ವೇಗಿ ಪ್ರತಿ ಓವರ್​ಗೆ 10.36 ಸರಾಸರಿಯಲ್ಲಿ ರನ್ ನೀಡಿ 8 ವಿಕೆಟ್​ಗಳನ್ನಲಷ್ಟೇ ಕಬಳಿಸಿದ್ದರು.

8 / 8
Follow us
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ