AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?

IPL 2024 Auction: ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ನಡೆಯಲಿದೆ. ದುಬೈನಲ್ಲಿ ನಡೆಯಲಿರುವ ಈ ಹರಾಜಿಗಾಗಿ ಒಟ್ಟು 1166 ಆಟಗಾರರು ಹೆಸರು ನೀಡಿದ್ದಾರೆ. ಇತ್ತ 10 ತಂಡಗಳಲ್ಲಿ ಒಟ್ಟು 77 ಸ್ಲಾಟ್​ಗಳು ಮಾತ್ರ ಖಾಲಿಯಿದೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಕೆಲವೇ ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ.

TV9 Web
| Edited By: |

Updated on: Dec 10, 2023 | 9:22 PM

Share
IPL 2024: ಐಪಿಎಲ್​ ಸೀಸನ್ 17 ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ಧತೆಯಲ್ಲಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತ್ತ ಈ ಹರಾಜಿಗಾಗಿ ಆರ್​ಸಿಬಿ (RCB) ಕೂಡ ಭರ್ಜರಿ ಪ್ಲ್ಯಾನ್​ನಲ್ಲಿದೆ.

IPL 2024: ಐಪಿಎಲ್​ ಸೀಸನ್ 17 ಹರಾಜಿಗಾಗಿ ಎಲ್ಲಾ ತಂಡಗಳು ಸಿದ್ಧತೆಯಲ್ಲಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮಿನಿ ಹರಾಜಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಇತ್ತ ಈ ಹರಾಜಿಗಾಗಿ ಆರ್​ಸಿಬಿ (RCB) ಕೂಡ ಭರ್ಜರಿ ಪ್ಲ್ಯಾನ್​ನಲ್ಲಿದೆ.

1 / 8
ಏಕೆಂದರೆ ಈ ಬಾರಿಯ ಹರಾಜಿನ ಮೂಲಕ ಆರ್​ಸಿಬಿ ತಂಡವು ಒಟ್ಟು 6 ಆಟಗಾರರನ್ನು ಖರೀದಿಸಬಹುದು. ಆದರೆ ಈ ಆರು ಆಟಗಾರರಲ್ಲಿ ಮೂವರು ವಿದೇಶಿ ಆಟಗಾರರಿಗೆ ಮಣೆ ಹಾಕಬೇಕಾಗುತ್ತದೆ. ಆದರೆ ಇತ್ತ ಆರ್​ಸಿಬಿ ಬಳಿ ಇರುವುದು 23.25 ಕೋಟಿ ರೂ. ಮಾತ್ರ. ಹೀಗಾಗಿ ಜಾಣತನದೊಂದಿಗೆ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.

ಏಕೆಂದರೆ ಈ ಬಾರಿಯ ಹರಾಜಿನ ಮೂಲಕ ಆರ್​ಸಿಬಿ ತಂಡವು ಒಟ್ಟು 6 ಆಟಗಾರರನ್ನು ಖರೀದಿಸಬಹುದು. ಆದರೆ ಈ ಆರು ಆಟಗಾರರಲ್ಲಿ ಮೂವರು ವಿದೇಶಿ ಆಟಗಾರರಿಗೆ ಮಣೆ ಹಾಕಬೇಕಾಗುತ್ತದೆ. ಆದರೆ ಇತ್ತ ಆರ್​ಸಿಬಿ ಬಳಿ ಇರುವುದು 23.25 ಕೋಟಿ ರೂ. ಮಾತ್ರ. ಹೀಗಾಗಿ ಜಾಣತನದೊಂದಿಗೆ ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.

2 / 8
ಒಂದು ವೇಳೆ ಹರಾಜಿನ ಸಮಯದಲ್ಲಿ ಮೈಮರೆತರೆ ಈ ಹಿಂದಿನಂತೆ ಈ ಬಾರಿ ಕೂಡ ಆರ್​ಸಿಬಿ ತಂಡಕ್ಕೆ ಕಳಪೆ ಆಟಗಾರರು ಸೇರ್ಪಡೆಯಾಗಬಹುದು. ಏಕೆಂದರೆ ಆರ್​ಸಿಬಿ ಕಳೆದ 16 ಸೀಸನ್​ಗಳಲ್ಲಿ ಕೆಲ ಆಟಗಾರರಿಗೆ ದುಬಾರಿ ಮೊತ್ತ ನೀಡಿ ಸಂಕಷ್ಟಕ್ಕೆ ಸಿಲುಕಿದೆ. ಹೀಗೆ ಕಳೆದ ಹದಿನಾರು ಆವೃತ್ತಿಗಳ ಹರಾಜಿನಲ್ಲಿ ಆರ್​ಸಿಬಿ ಮಾಡಿದ ಅತ್ಯಂತ ಕೆಟ್ಟ ಆಯ್ಕೆಗಳು ಯಾವುವು ಎಂದು ನೋಡುವುದಾದರೆ...

ಒಂದು ವೇಳೆ ಹರಾಜಿನ ಸಮಯದಲ್ಲಿ ಮೈಮರೆತರೆ ಈ ಹಿಂದಿನಂತೆ ಈ ಬಾರಿ ಕೂಡ ಆರ್​ಸಿಬಿ ತಂಡಕ್ಕೆ ಕಳಪೆ ಆಟಗಾರರು ಸೇರ್ಪಡೆಯಾಗಬಹುದು. ಏಕೆಂದರೆ ಆರ್​ಸಿಬಿ ಕಳೆದ 16 ಸೀಸನ್​ಗಳಲ್ಲಿ ಕೆಲ ಆಟಗಾರರಿಗೆ ದುಬಾರಿ ಮೊತ್ತ ನೀಡಿ ಸಂಕಷ್ಟಕ್ಕೆ ಸಿಲುಕಿದೆ. ಹೀಗೆ ಕಳೆದ ಹದಿನಾರು ಆವೃತ್ತಿಗಳ ಹರಾಜಿನಲ್ಲಿ ಆರ್​ಸಿಬಿ ಮಾಡಿದ ಅತ್ಯಂತ ಕೆಟ್ಟ ಆಯ್ಕೆಗಳು ಯಾವುವು ಎಂದು ನೋಡುವುದಾದರೆ...

3 / 8
ಟೈಮಲ್ ಮಿಲ್ಸ್: 2017 ರ ಹರಾಜಿನಲ್ಲಿ ಆರ್​ಸಿಬಿ ತಂಡವು ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್​​ರನ್ನು ಬರೋಬ್ಬರಿ 12 ಕೋಟಿ ರೂ.ಗೆ ಖರೀದಿಸಿತ್ತು. ಅಂದು 5 ಪಂದ್ಯಗಳನ್ನಾಡಿದ್ದ ಮಿಲ್ಸ್ 8.5 ಸರಾಸರಿಯಲ್ಲಿ ರನ್ ನೀಡಿ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದರು.

ಟೈಮಲ್ ಮಿಲ್ಸ್: 2017 ರ ಹರಾಜಿನಲ್ಲಿ ಆರ್​ಸಿಬಿ ತಂಡವು ಇಂಗ್ಲೆಂಡ್ ವೇಗಿ ಟೈಮಲ್ ಮಿಲ್ಸ್​​ರನ್ನು ಬರೋಬ್ಬರಿ 12 ಕೋಟಿ ರೂ.ಗೆ ಖರೀದಿಸಿತ್ತು. ಅಂದು 5 ಪಂದ್ಯಗಳನ್ನಾಡಿದ್ದ ಮಿಲ್ಸ್ 8.5 ಸರಾಸರಿಯಲ್ಲಿ ರನ್ ನೀಡಿ ಕೇವಲ 5 ವಿಕೆಟ್ ಮಾತ್ರ ಪಡೆದಿದ್ದರು.

4 / 8
ಕೈಲ್ ಜೇಮಿಸನ್: 2021 ರ ಹರಾಜಿನಲ್ಲಿ ನ್ಯೂಝಿಲೆಂಡ್ ವೇಗಿ ಕೈಲ್ ಜೇಮಿಸನ್ ಅವರನ್ನು ಆರ್​ಸಿಬಿ ಖರೀದಿಸಿದ್ದು ಬರೋಬ್ಬರಿ 15 ಕೋಟಿ ರೂ.ಗೆ. ಆರ್​ಸಿಬಿ ಪರ 9 ಪಂದ್ಯಗಳನ್ನಾಡಿದ್ದ ಜೇಮಿಸನ್ ಕೇವಲ 9 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.

ಕೈಲ್ ಜೇಮಿಸನ್: 2021 ರ ಹರಾಜಿನಲ್ಲಿ ನ್ಯೂಝಿಲೆಂಡ್ ವೇಗಿ ಕೈಲ್ ಜೇಮಿಸನ್ ಅವರನ್ನು ಆರ್​ಸಿಬಿ ಖರೀದಿಸಿದ್ದು ಬರೋಬ್ಬರಿ 15 ಕೋಟಿ ರೂ.ಗೆ. ಆರ್​ಸಿಬಿ ಪರ 9 ಪಂದ್ಯಗಳನ್ನಾಡಿದ್ದ ಜೇಮಿಸನ್ ಕೇವಲ 9 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು.

5 / 8
ಸೌರಭ್ ತಿವಾರಿ: 2011 ರಲ್ಲಿ ಆರ್​ಸಿಬಿ 7.36 ಕೋಟಿ ರೂ.ಗೆ ಎಡಗೈ ದಾಂಡಿಗ ಸೌರಭ್ ತಿವಾರಿಯನ್ನು ಖರೀದಿಸಿತ್ತು. ಆದರೆ ಆರ್​ಸಿಬಿ ಪರ ಮೂರು ಸೀಸನ್​ ಆಡಿದ ತಿವಾರಿ 22.23 ರ ಸರಾಸರಿಯಲ್ಲಿ ಕೇವಲ 578 ರನ್​ ಕಲೆಹಾಕಿದ್ದರು.

ಸೌರಭ್ ತಿವಾರಿ: 2011 ರಲ್ಲಿ ಆರ್​ಸಿಬಿ 7.36 ಕೋಟಿ ರೂ.ಗೆ ಎಡಗೈ ದಾಂಡಿಗ ಸೌರಭ್ ತಿವಾರಿಯನ್ನು ಖರೀದಿಸಿತ್ತು. ಆದರೆ ಆರ್​ಸಿಬಿ ಪರ ಮೂರು ಸೀಸನ್​ ಆಡಿದ ತಿವಾರಿ 22.23 ರ ಸರಾಸರಿಯಲ್ಲಿ ಕೇವಲ 578 ರನ್​ ಕಲೆಹಾಕಿದ್ದರು.

6 / 8
ಚೇತೇಶ್ವರ ಪೂಜಾರ: 2011 ರ ಹರಾಜಿನಲ್ಲಿ ಆರ್​ಸಿಬಿ ಚೇತೇಶ್ವರ ಪೂಜಾರ ಅವರನ್ನು ಬರೋಬ್ಬರಿ 3.22 ಕೋಟಿ ರೂ. ಖರೀದಿಸಿತ್ತು. ಮೂರು ಸೀಸನ್​ಗಳಲ್ಲಿ ಆರ್​ಸಿಬಿ ಪರ 14 ಪಂದ್ಯಗಳನ್ನಾಡಿದ್ದ ಪೂಜಾರ ಕಲೆಹಾಕಿದ್ದು 14.3 ರ ಸರಾರಿಯಲ್ಲಿ ಕೇವಲ 143 ರನ್​ಗಳು ಮಾತ್ರ.

ಚೇತೇಶ್ವರ ಪೂಜಾರ: 2011 ರ ಹರಾಜಿನಲ್ಲಿ ಆರ್​ಸಿಬಿ ಚೇತೇಶ್ವರ ಪೂಜಾರ ಅವರನ್ನು ಬರೋಬ್ಬರಿ 3.22 ಕೋಟಿ ರೂ. ಖರೀದಿಸಿತ್ತು. ಮೂರು ಸೀಸನ್​ಗಳಲ್ಲಿ ಆರ್​ಸಿಬಿ ಪರ 14 ಪಂದ್ಯಗಳನ್ನಾಡಿದ್ದ ಪೂಜಾರ ಕಲೆಹಾಕಿದ್ದು 14.3 ರ ಸರಾರಿಯಲ್ಲಿ ಕೇವಲ 143 ರನ್​ಗಳು ಮಾತ್ರ.

7 / 8
ಕ್ರಿಸ್ ವೋಕ್ಸ್: 2018 ರಲ್ಲಿ ಆರ್​ಸಿಬಿ ಕ್ರಿಸ್ ವೋಕ್ಸ್​ ಅವರನ್ನು 7.4 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಆರ್​ಸಿಬಿ ಪರ 5 ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ವೇಗಿ ಪ್ರತಿ ಓವರ್​ಗೆ 10.36 ಸರಾಸರಿಯಲ್ಲಿ ರನ್ ನೀಡಿ 8 ವಿಕೆಟ್​ಗಳನ್ನಲಷ್ಟೇ ಕಬಳಿಸಿದ್ದರು.

ಕ್ರಿಸ್ ವೋಕ್ಸ್: 2018 ರಲ್ಲಿ ಆರ್​ಸಿಬಿ ಕ್ರಿಸ್ ವೋಕ್ಸ್​ ಅವರನ್ನು 7.4 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಆರ್​ಸಿಬಿ ಪರ 5 ಪಂದ್ಯಗಳನ್ನಾಡಿದ್ದ ಇಂಗ್ಲೆಂಡ್ ವೇಗಿ ಪ್ರತಿ ಓವರ್​ಗೆ 10.36 ಸರಾಸರಿಯಲ್ಲಿ ರನ್ ನೀಡಿ 8 ವಿಕೆಟ್​ಗಳನ್ನಲಷ್ಟೇ ಕಬಳಿಸಿದ್ದರು.

8 / 8
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?