AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಯುವಿ ಗರಡಿ ಹುಡುಗನ ಅಬ್ಬರ: ಗುರುವಿಗೆ ಸ್ಪೆಷಲ್ ಥ್ಯಾಂಕ್ಸ್

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ಆಡುತ್ತಿರುವ ಪಂಜಾಬ್​ನ ಯುವ ಆಟಗಾರರಿಗೆ ಯುವರಾಜ್ ಸಿಂಗ್ ವಿಶೇಷ ತರಬೇತಿ ನೀಡಿದ್ದರು. ಈ ಆಟಗಾರರು ಇದೀಗ ಐಪಿಎಲ್​ನಲ್ಲಿ ಅಬ್ಬರಿಸುತ್ತಿರುವುದು ವಿಶೇಷ. ಹೀಗಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಎಸ್​ಆರ್​ಹೆಚ್ ತಂಡದ ಯುವ ದಾಂಡಿಗ ಅಭಿಷೇಕ್ ಶರ್ಮಾ ಯುವರಾಜ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿದ್ದರು.

TV9 Web
| Edited By: |

Updated on: Apr 06, 2024 | 8:53 AM

Share
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 17ನೇ ಆವೃತ್ತಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಯುವ ದಾಂಡಿಗ ಅಭಿಷೇಕ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರೆಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 23 ಎಸೆತಗಳಲ್ಲಿ 63 ರನ್ ಬಾರಿಸಿ ಅಬ್ಬರಿಸಿದ್ದ ಅಭಿ, ಇದೀಗ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ 37 ರನ್​ ಚಚ್ಚಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 17ನೇ ಆವೃತ್ತಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಯುವ ದಾಂಡಿಗ ಅಭಿಷೇಕ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಅನ್ನು ಮುಂದುವರೆಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 23 ಎಸೆತಗಳಲ್ಲಿ 63 ರನ್ ಬಾರಿಸಿ ಅಬ್ಬರಿಸಿದ್ದ ಅಭಿ, ಇದೀಗ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ 37 ರನ್​ ಚಚ್ಚಿದ್ದಾರೆ.

1 / 6
ಈ ಮೂಲಕ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿರುವ ಅಭಿಷೇಕ್ 4 ಪಂದ್ಯಗಳಿಂದ ಒಟ್ಟು 161 ರನ್ ಕಲೆಹಾಕಿದ್ದಾರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರದರ್ಶಿಸಿದ ವಿಸ್ಪೋಟಕ ಬ್ಯಾಟಿಂಗ್ ಪರಿಣಾಮ ಯುವ ಎಡಗೈ ದಾಂಡಿಗನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

ಈ ಮೂಲಕ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿರುವ ಅಭಿಷೇಕ್ 4 ಪಂದ್ಯಗಳಿಂದ ಒಟ್ಟು 161 ರನ್ ಕಲೆಹಾಕಿದ್ದಾರೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರದರ್ಶಿಸಿದ ವಿಸ್ಪೋಟಕ ಬ್ಯಾಟಿಂಗ್ ಪರಿಣಾಮ ಯುವ ಎಡಗೈ ದಾಂಡಿಗನಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.

2 / 6
ಈ ಪ್ರಶಸ್ತಿಯನ್ನು ಪಡೆದ ಬಳಿಕ ಮಾತನಾಡಿದ ಅಭಿಷೇಕ್, ಈ ಸಂತಸದ ಸಮಯದಲ್ಲಿ ನಾನು ಯುವರಾಜ್ ಸಿಂಗ್, ಬ್ರಿಯಾನ್ ಲಾರಾ ಹಾಗೂ ನಮ್ಮ ತಂದೆಗೆ ಧನ್ಯವಾದಗಳು ಹೇಳಲು ಬಯಸುತ್ತೇನೆ. ನನ್ನ ಬ್ಯಾಟಿಂಗ್​ನಲ್ಲಿ ಇವರ ಕೊಡುಗೆ ತುಂಬಾ ಇದೆ ಎಂದಿದ್ದರು. ಇಲ್ಲಿ ಬ್ರಿಯಾನ್ ಲಾರಾ ಈ ಹಿಂದೆ ಎಸ್​ಆರ್​ಹೆಚ್ ತಂಡದ ಕೋಚ್ ಆಗಿದ್ದರು. ಹೀಗಾಗಿ ಅಭಿಷೇಕ್ ಮಾಜಿ ಕೋಚ್​ಗೆ ಧನ್ಯವಾದ ತಿಳಿಸಿದ್ದರು.

ಈ ಪ್ರಶಸ್ತಿಯನ್ನು ಪಡೆದ ಬಳಿಕ ಮಾತನಾಡಿದ ಅಭಿಷೇಕ್, ಈ ಸಂತಸದ ಸಮಯದಲ್ಲಿ ನಾನು ಯುವರಾಜ್ ಸಿಂಗ್, ಬ್ರಿಯಾನ್ ಲಾರಾ ಹಾಗೂ ನಮ್ಮ ತಂದೆಗೆ ಧನ್ಯವಾದಗಳು ಹೇಳಲು ಬಯಸುತ್ತೇನೆ. ನನ್ನ ಬ್ಯಾಟಿಂಗ್​ನಲ್ಲಿ ಇವರ ಕೊಡುಗೆ ತುಂಬಾ ಇದೆ ಎಂದಿದ್ದರು. ಇಲ್ಲಿ ಬ್ರಿಯಾನ್ ಲಾರಾ ಈ ಹಿಂದೆ ಎಸ್​ಆರ್​ಹೆಚ್ ತಂಡದ ಕೋಚ್ ಆಗಿದ್ದರು. ಹೀಗಾಗಿ ಅಭಿಷೇಕ್ ಮಾಜಿ ಕೋಚ್​ಗೆ ಧನ್ಯವಾದ ತಿಳಿಸಿದ್ದರು.

3 / 6
ಆದರೆ ಯುವರಾಜ್ ಸಿಂಗ್ ಹೆಸರನ್ನು ಪ್ರಸ್ತಾಪಿಸುವ ಮೂಲಕ ಅಭಿಷೇಕ್ ಎಲ್ಲರ ಗಮನ ಸೆಳೆದರು. ಇದಕ್ಕೆ ಮುಖ್ಯ ಕಾರಣ ಅಭಿಷೇಕ್ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಹುಡುಗ. ಈ ಹಿಂದೆ ಪಂಜಾಬ್​ನ ಹಲವು ಯುವ ಆಟಗಾರರಿಗೆ ಯುವರಾಜ್ ಸಿಂಗ್ ತರಬೇತಿ ನೀಡಿದ್ದಾರೆ.

ಆದರೆ ಯುವರಾಜ್ ಸಿಂಗ್ ಹೆಸರನ್ನು ಪ್ರಸ್ತಾಪಿಸುವ ಮೂಲಕ ಅಭಿಷೇಕ್ ಎಲ್ಲರ ಗಮನ ಸೆಳೆದರು. ಇದಕ್ಕೆ ಮುಖ್ಯ ಕಾರಣ ಅಭಿಷೇಕ್ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಹುಡುಗ. ಈ ಹಿಂದೆ ಪಂಜಾಬ್​ನ ಹಲವು ಯುವ ಆಟಗಾರರಿಗೆ ಯುವರಾಜ್ ಸಿಂಗ್ ತರಬೇತಿ ನೀಡಿದ್ದಾರೆ.

4 / 6
ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಪ್ರಭ್​ ಸಿಮ್ರಾನ್ ಸಿಂಗ್ ಸೇರಿದಂತೆ ಪಂಜಾಬ್​ನ ಯುವ​ ಆಟಗಾರರಿಗೆ ಯುವರಾಜ್ ಸಿಂಗ್ ವಿಶೇಷ ಟ್ರೈನಿಂಗ್ ನೀಡಿದ್ದರು. ಇದೇ ವೇಳೆ ಯುವ ದಾಂಡಿಗರ ಬ್ಯಾಟಿಂಗ್​ನಲ್ಲಿನ ತಪ್ಪುಗಳನ್ನು ತಿದ್ದುವಂತಹ ಕೆಲಸವನ್ನು ಮಾಡಿದ್ದಾರೆ. ಅಲ್ಲದೆ ಪಂಜಾಬ್​ನ ಯುವ ಆಟಗಾರರಿಗೆ ಆತ್ಮವಿಶ್ವಾಸ ತುಂಬುವಲ್ಲಿ ಯುವಿ ಪಾತ್ರ ಬಹಳ ದೊಡ್ಡದು.

ಅಭಿಷೇಕ್ ಶರ್ಮಾ, ಶುಭ್​ಮನ್ ಗಿಲ್, ಪ್ರಭ್​ ಸಿಮ್ರಾನ್ ಸಿಂಗ್ ಸೇರಿದಂತೆ ಪಂಜಾಬ್​ನ ಯುವ​ ಆಟಗಾರರಿಗೆ ಯುವರಾಜ್ ಸಿಂಗ್ ವಿಶೇಷ ಟ್ರೈನಿಂಗ್ ನೀಡಿದ್ದರು. ಇದೇ ವೇಳೆ ಯುವ ದಾಂಡಿಗರ ಬ್ಯಾಟಿಂಗ್​ನಲ್ಲಿನ ತಪ್ಪುಗಳನ್ನು ತಿದ್ದುವಂತಹ ಕೆಲಸವನ್ನು ಮಾಡಿದ್ದಾರೆ. ಅಲ್ಲದೆ ಪಂಜಾಬ್​ನ ಯುವ ಆಟಗಾರರಿಗೆ ಆತ್ಮವಿಶ್ವಾಸ ತುಂಬುವಲ್ಲಿ ಯುವಿ ಪಾತ್ರ ಬಹಳ ದೊಡ್ಡದು.

5 / 6
ಹೀಗಾಗಿಯೇ ಎಡಗೈ ದಾಂಡಿಗನಾಗಿರುವ ಅಭಿಷೇಕ್ ಶರ್ಮಾ ಯುವರಾಜ್ ಸಿಂಗ್ ಅವರನ್ನು ರೋಲ್ ಮಾಡೆಲ್ ಆಗಿ ಇರಿಸಿದ್ದಾರೆ. ಇದೀಗ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತನ್ನ ಗುರುವಿಗೆ ಧನ್ಯವಾದ ತಿಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೀಗಾಗಿಯೇ ಎಡಗೈ ದಾಂಡಿಗನಾಗಿರುವ ಅಭಿಷೇಕ್ ಶರ್ಮಾ ಯುವರಾಜ್ ಸಿಂಗ್ ಅವರನ್ನು ರೋಲ್ ಮಾಡೆಲ್ ಆಗಿ ಇರಿಸಿದ್ದಾರೆ. ಇದೀಗ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತನ್ನ ಗುರುವಿಗೆ ಧನ್ಯವಾದ ತಿಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

6 / 6
Web contact
Web contact

TV9 Kannada

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!