IPL 2024: ಈ ಬಾರಿಯ ಐಪಿಎಲ್‌ನಲ್ಲಿ ಕನ್ನಡಿಗರ ಪ್ರದರ್ಶನ ಹೇಗಿತ್ತು?

|

Updated on: May 29, 2024 | 4:51 PM

IPL 2024: 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟು 11 ಕರ್ನಾಟಕದ ಆಟಗಾರರು ವಿವಿದ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಅವರಲ್ಲಿ 9 ಆಟಗಾರರಿಗೆ ಮಾತ್ರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ 9 ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ..

1 / 11
17ನೇ ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟು 11 ಕರ್ನಾಟಕದ ಆಟಗಾರರು ವಿವಿದ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಅವರಲ್ಲಿ 9 ಆಟಗಾರರಿಗೆ ಮಾತ್ರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ 9 ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ..

17ನೇ ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟು 11 ಕರ್ನಾಟಕದ ಆಟಗಾರರು ವಿವಿದ ತಂಡಗಳಲ್ಲಿ ಸ್ಥಾನ ಪಡೆದಿದ್ದರು. ಅವರಲ್ಲಿ 9 ಆಟಗಾರರಿಗೆ ಮಾತ್ರ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈ 9 ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ..

2 / 11
ಲಕ್ನೋ ಸೂಪರ್​ಜೈಂಟ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದ ಕನ್ನಡಿಗ ರಾಹುಲ್, ಆಡಿದ 14 ಪಂದ್ಯಗಳಲ್ಲಿ 37.14 ರ ಸರಾಸರಿಯಲ್ಲಿ 520 ರನ್ ಕಲೆಹಾಕಿದರು. ಆದರೆ ತಂಡವನ್ನು ಪ್ಲೇಆಫ್​ಗೆ ಕೊಂಡೊಯ್ಯವಲ್ಲಿ ವಿಫಲರಾದರು.

ಲಕ್ನೋ ಸೂಪರ್​ಜೈಂಟ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದ ಕನ್ನಡಿಗ ರಾಹುಲ್, ಆಡಿದ 14 ಪಂದ್ಯಗಳಲ್ಲಿ 37.14 ರ ಸರಾಸರಿಯಲ್ಲಿ 520 ರನ್ ಕಲೆಹಾಕಿದರು. ಆದರೆ ತಂಡವನ್ನು ಪ್ಲೇಆಫ್​ಗೆ ಕೊಂಡೊಯ್ಯವಲ್ಲಿ ವಿಫಲರಾದರು.

3 / 11
ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್​ಗೆ ಈ ಬಾರಿಯ ಐಪಿಎಲ್‌ನಲ್ಲಿ ತಂಡದಲ್ಲಿ ಆಡಲು ಹೆಚ್ಚು ಅವಕಾಶ ಸಿಗಲಿಲ್ಲ. ಆರಂಭದಲ್ಲಿ ಅವಕಾಶ ಪಡೆದ ಮಯಾಂಕ್ ಆಡಿದ 4 ಪಂದ್ಯಗಳಲ್ಲಿ ಕೇವಲ 64 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಫ್ರಾಂಚೈಸಿ ಮಯಾಂಕ್​ರನ್ನು ತಂಡದಿಂದ ಹೊರಗಿಟ್ಟು ಅವರ ಜಾಗದಲ್ಲಿ ಟ್ರಾವಿಸ್ ಹೆಡ್​ರನ್ನು ಕಣಕ್ಕಿಳಿಸಿತ್ತು.

ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದ ಮಯಾಂಕ್ ಅಗರ್ವಾಲ್​ಗೆ ಈ ಬಾರಿಯ ಐಪಿಎಲ್‌ನಲ್ಲಿ ತಂಡದಲ್ಲಿ ಆಡಲು ಹೆಚ್ಚು ಅವಕಾಶ ಸಿಗಲಿಲ್ಲ. ಆರಂಭದಲ್ಲಿ ಅವಕಾಶ ಪಡೆದ ಮಯಾಂಕ್ ಆಡಿದ 4 ಪಂದ್ಯಗಳಲ್ಲಿ ಕೇವಲ 64 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಫ್ರಾಂಚೈಸಿ ಮಯಾಂಕ್​ರನ್ನು ತಂಡದಿಂದ ಹೊರಗಿಟ್ಟು ಅವರ ಜಾಗದಲ್ಲಿ ಟ್ರಾವಿಸ್ ಹೆಡ್​ರನ್ನು ಕಣಕ್ಕಿಳಿಸಿತ್ತು.

4 / 11
ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದು ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನು ಸೇರಿದ್ದ ದೇವದತ್ ಪಡಿಕ್ಕಲ್ ಸುವರ್ಣಾವಕಾಶವನ್ನು ಕೈಚೆಲ್ಲಿದರು. ಆಡಿದ 7 ಪಂದ್ಯಗಳಲ್ಲಿ ಪಡಿಕ್ಕಲ್ ಬ್ಯಾಟ್​ನಿಂದ ಬಂದಿದ್ದು, ಕೇವಲ 38 ರನ್. ಹೀಗಾಗಿ ನಾಯಕ ರಾಹುಲ್ ನಂಬಿಕೆ ಸಂಪಾದಿಸುವಲ್ಲಿ ಪಡಿಕಲ್ ಯಶಸ್ವಿಯಾಗಲಿಲ್ಲ.

ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆದು ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನು ಸೇರಿದ್ದ ದೇವದತ್ ಪಡಿಕ್ಕಲ್ ಸುವರ್ಣಾವಕಾಶವನ್ನು ಕೈಚೆಲ್ಲಿದರು. ಆಡಿದ 7 ಪಂದ್ಯಗಳಲ್ಲಿ ಪಡಿಕ್ಕಲ್ ಬ್ಯಾಟ್​ನಿಂದ ಬಂದಿದ್ದು, ಕೇವಲ 38 ರನ್. ಹೀಗಾಗಿ ನಾಯಕ ರಾಹುಲ್ ನಂಬಿಕೆ ಸಂಪಾದಿಸುವಲ್ಲಿ ಪಡಿಕಲ್ ಯಶಸ್ವಿಯಾಗಲಿಲ್ಲ.

5 / 11
ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದಲ್ಲಿದ್ದ ಮನೀಶ್ ಪಾಂಡೆ ಈ ಸೀಸನ್‌ನಲ್ಲಿ ಆಡಿದ್ದು, ಕೇವಲ 1 ಪಂದ್ಯ ಮಾತ್ರ. ಆದರೆ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದ ಮನೀಶ್ 42 ರನ್​​ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಉಳಿದಂತೆ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್​ ತಂಡದಲ್ಲಿದ್ದ ಮನೀಶ್ ಪಾಂಡೆ ಈ ಸೀಸನ್‌ನಲ್ಲಿ ಆಡಿದ್ದು, ಕೇವಲ 1 ಪಂದ್ಯ ಮಾತ್ರ. ಆದರೆ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದ ಮನೀಶ್ 42 ರನ್​​ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಉಳಿದಂತೆ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ.

6 / 11
ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಳೆದ ಬಾರಿ ಗೇಮ್ ಫಿನಿಶರ್ ಆಗಿ ಕಾಣಿಸಿಕೊಂಡಿದ್ದ ಅಭಿನವ್ ಮನೋಹರ್​ಗೆ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆಡಿದ 2 ಪಂದ್ಯಗಳಲ್ಲಿ ಅಭಿನವ್ ಕೇವಲ 9 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಅವರನ್ನು ಪ್ಲೇಯಿಂಗ್ 11 ನಿಂದ ಫ್ರಾಂಚೈಸಿ ಕೈಬಿಟ್ಟಿತ್ತು.

ಗುಜರಾತ್ ಟೈಟಾನ್ಸ್ ತಂಡದಲ್ಲಿ ಕಳೆದ ಬಾರಿ ಗೇಮ್ ಫಿನಿಶರ್ ಆಗಿ ಕಾಣಿಸಿಕೊಂಡಿದ್ದ ಅಭಿನವ್ ಮನೋಹರ್​ಗೆ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆಡಿದ 2 ಪಂದ್ಯಗಳಲ್ಲಿ ಅಭಿನವ್ ಕೇವಲ 9 ರನ್ ಮಾತ್ರ ಕಲೆಹಾಕಿದರು. ಹೀಗಾಗಿ ಅವರನ್ನು ಪ್ಲೇಯಿಂಗ್ 11 ನಿಂದ ಫ್ರಾಂಚೈಸಿ ಕೈಬಿಟ್ಟಿತ್ತು.

7 / 11
ಗುಜರಾತ್ ತಂಡದ ಪರ ಆಡಿದ್ದ ಮತ್ತೊಬ್ಬ ಕನ್ನಡಿಗ ಬಿ. ಆರ್ ಶರತ್​ಗೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ ಶರತ್ 1 ರನ್ ಮಾತ್ರ ಕಲೆಹಾಕಿದ್ದರು.

ಗುಜರಾತ್ ತಂಡದ ಪರ ಆಡಿದ್ದ ಮತ್ತೊಬ್ಬ ಕನ್ನಡಿಗ ಬಿ. ಆರ್ ಶರತ್​ಗೂ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ ಶರತ್ 1 ರನ್ ಮಾತ್ರ ಕಲೆಹಾಕಿದ್ದರು.

8 / 11
ಲಕ್ನೋ ತಂಡದಲ್ಲಿದ್ದ ಸ್ಪಿನ್ ಆಲ್​ರೌಂಡರ್ ಕೃಷ್ಣಪ್ಪ ಗೌತಮ್​ಗೂ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ 14.50 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾದರು.

ಲಕ್ನೋ ತಂಡದಲ್ಲಿದ್ದ ಸ್ಪಿನ್ ಆಲ್​ರೌಂಡರ್ ಕೃಷ್ಣಪ್ಪ ಗೌತಮ್​ಗೂ ಈ ಆವೃತ್ತಿಯಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಆಡಿದ ಏಕೈಕ ಪಂದ್ಯದಲ್ಲಿ 14.50 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾದರು.

9 / 11
ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ವೇಗಿ ವಿಧ್ವತ್ ಕಾವೇರಪ್ಪ, ಆರ್​ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದ ಕಾವೇರಪ್ಪ ಆರ್​ಸಿಬಿ ವಿರುದ್ಧ ಪ್ರಮುಖ 2 ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಆ ಪಂದ್ಯದ ಬಳಿಕ ಇವರಿಗೆ ಪಂಜಾಬ್ ಪ್ಲೇಯಿಂಗ್ 11 ಅವಕಾಶವೇ ಸಿಗಲಿಲ್ಲ.

ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ವೇಗಿ ವಿಧ್ವತ್ ಕಾವೇರಪ್ಪ, ಆರ್​ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದ ಕಾವೇರಪ್ಪ ಆರ್​ಸಿಬಿ ವಿರುದ್ಧ ಪ್ರಮುಖ 2 ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಆ ಪಂದ್ಯದ ಬಳಿಕ ಇವರಿಗೆ ಪಂಜಾಬ್ ಪ್ಲೇಯಿಂಗ್ 11 ಅವಕಾಶವೇ ಸಿಗಲಿಲ್ಲ.

10 / 11
ಆರ್​ಸಿಬಿ ತಂಡದಲ್ಲಿದ್ದ ವೈಶಾಕ್ ವಿಜಯ್​ಕುಮಾರ್​ಗೆ ಈ ಆವೃತ್ತಿಯಲ್ಲಿ 4 ಪಂದ್ಯಗಳನ್ನಾಡುವ ಅವಕಾಶ ನೀಡಲಾಯಿತು. ಆದರೆ ವೈಶಾಕ್ ತಮ್ಮ ಬೌಲಿಂಗ್ ಮ್ಯಾಜಿಕ್ ತೊರಿಸುವಲ್ಲಿ ವಿಫಲರಾದರು. ಈ 4 ಪಂದ್ಯಗಳಲ್ಲಿ ಅವರು 4 ವಿಕೆಟ್ ಉರುಳಿಸಲಷ್ಟೇ ಶಕ್ತರಾದರು.

ಆರ್​ಸಿಬಿ ತಂಡದಲ್ಲಿದ್ದ ವೈಶಾಕ್ ವಿಜಯ್​ಕುಮಾರ್​ಗೆ ಈ ಆವೃತ್ತಿಯಲ್ಲಿ 4 ಪಂದ್ಯಗಳನ್ನಾಡುವ ಅವಕಾಶ ನೀಡಲಾಯಿತು. ಆದರೆ ವೈಶಾಕ್ ತಮ್ಮ ಬೌಲಿಂಗ್ ಮ್ಯಾಜಿಕ್ ತೊರಿಸುವಲ್ಲಿ ವಿಫಲರಾದರು. ಈ 4 ಪಂದ್ಯಗಳಲ್ಲಿ ಅವರು 4 ವಿಕೆಟ್ ಉರುಳಿಸಲಷ್ಟೇ ಶಕ್ತರಾದರು.

11 / 11
ಉಳಿದಂತೆ ಆರ್​ಸಿಬಿ ತಂಡದಲ್ಲಿದ್ದ ಮತ್ತೊಬ್ಬ ಕನ್ನಡಿಗ ಮನೋಜ್ ಬಾಂಡಗೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದ ಪ್ರವೀಣ್ ದುಬೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಇವರಿಬ್ಬರು ಲೀಗ್ ಉದ್ದಕ್ಕೂ ಬೆಂಚ್ ಕಾದಿದ್ದೆ ಬಂತು.

ಉಳಿದಂತೆ ಆರ್​ಸಿಬಿ ತಂಡದಲ್ಲಿದ್ದ ಮತ್ತೊಬ್ಬ ಕನ್ನಡಿಗ ಮನೋಜ್ ಬಾಂಡಗೆ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿದ್ದ ಪ್ರವೀಣ್ ದುಬೆಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗಲಿಲ್ಲ. ಹೀಗಾಗಿ ಇವರಿಬ್ಬರು ಲೀಗ್ ಉದ್ದಕ್ಕೂ ಬೆಂಚ್ ಕಾದಿದ್ದೆ ಬಂತು.

Published On - 4:51 pm, Wed, 29 May 24